Sunday 16 December 2018

ಬ್ರಾಹ್ಮಣರು

ಬ್ರಾಹ್ಮಣ ಸಮುದಾಯದ ಮುಂದಿರುವ ಸವಾಲುಗಳು  

೧) ಎಲ್ಲರೂ ವೋಟ್ ಮಾಡಬೇಕು. ಮತದಾನದ ದಿನ ಪಿಕ್ನಿಕ್ ಹೋಗುವರಲ್ಲಿ ನಮ್ಮವರೇ ಜಾಸ್ತ್ತಿ .

 ಮೊನ್ನೆ ಜಯನಗರದ ಉಪಚುನಾವಣೆಯಲ್ಲಿ  ಏನಾಯಿತು ? ಬ್ರಾಹ್ಮಣ  ಶಾಸಕ (ಎರಡು ಬಾರಿ ) ವಿಜಯಕುಮಾರರು ನಿಧನರಾದ ಬಳಿಕ ಅವರ ತಮ್ಮನಿಗೆ ಬಿಜೆಪಿ ಟಿಕೆಟ್ ನೀಡಲಾಯ್ತು. ಅವರು ೩೦೦೦ಮತಗಳ ಅಂತರದಲ್ಲಿ ಸೋತರು .  ಪ್ರಜ್ಞಾವಂತ ಯುವ ಬ್ರಾಹ್ಮಣ ಮತದಾರರೆಲ್ಲಾ ಅಂದು ವೋಟ್ ಮಾಡದೆ ಕೆಲಸಕ್ಕೆ ತೆರಳಿದ್ದರು ಎಂದು ಮಾಹಿತಿ. ಅಂತಹ ವರ ಸಂಖ್ಯೆ ಸುಮಾರು ೧೦,೦೦೦ ಎಂದು ಅಂದಾಜಿಸಲಾಗಿದೆ .

ಎಲ್ಲರೂ ಈಗಲೇ ೨೦೧೯ರ ಚುನಾವಣೆಗೆ  ತಮ್ಮ ವೋಟನ್ನು ಇಂದೇ ನೊಂದಾಯಿಸಿಕೊಳ್ಳಿ . ನೊಂದಾಯಿಸಿದ್ದರೂ ಅದು ಚಾಲ್ತಿಯಲ್ಲಿದೆಯಾ ಇಂದೇ ಎಂದು ಖಾತರಿಪಡಿಸಿದೊಳ್ಳಿ.  ತಪ್ಪದೆ ಮತದಾನ ಮಾಡಿ .

ನಿಮ್ಮ ಮತವನ್ನು ನಿಮ್ಮ ಸಹಾಯಕ್ಕೆ ಬರುವಂಥವರಿಗೆ ನೀಡಿ .  NOTA ಬೇಡ.  NOTA ಆಯ್ಕೆಯು ಅಧಿಕಪ್ರಸಂಗ ನಮಗೆ ತಿರುಗುಬಾಣವಾದೀತು.  NOTAದ ಪ್ರಯೋಗ ಮಾಡುವರಲ್ಲಿ ನಮ್ಮರೆ ಹೆಚ್ಚು.    ಮೊನ್ನೆ ರಾಜಸ್ಥಾನ , ಮಧ್ಯಪ್ರದೇಶಗಳಲ್ಲಿ ಏನಾಯ್ತು, ಜ್ಞಾಪಿಸಿಕೊಳ್ಳಿ.

೨) ೨-೩ ಪರ್ಸೆಂಟ್ ಮಾತ್ರ ಬ್ರಾಹ್ಮಣರಿರಬಹದು. ಅವರುಗಳು ಮತದಾನ ಮಾಡುವಾಗ ಒಂದು ವೋಟ್ ಬ್ಯಾಂಕ್ ಆಗಬೇಕು .  ನಮ್ಮ ಬ್ರಾಹ್ಮಣ ಸಂಘಗಳು ಒಟ್ಟಾಗಿ ಕೆಲಸ ಮಾಡಬೇಕು.  ಬ್ರಾಹ್ಮಣರ ವಿರುದ್ಧ ಹೀನಾಯ ಹೇಳಿಕೆಗಳನ್ನು ಕೊಡುವ ಅಥವ ಕೆಲಸಮಾಡುವ ಯಾವುದೇ ಪಕ್ಷ ಅಥವ ಅಭ್ಯರ್ಥಿಗೆ ಮತನೀಡಬಾರದು.  ಕೂದಲೆಳೆಯ ಅಂತರದಲ್ಲಿ ಅಭ್ಯರ್ಥಿಗಳ ಗೆಲುವು-ಸೋಲು ನಿರ್ಧಾರವಾಗುತ್ತಿರುವಾಗ, ಒಂದು ಪರ್ಸೆಂಟ್ ವೋಟ್ಗೂ ಬೆಲೆ ಇರುತ್ತದೆ .  ನಮ್ಮವರ ಮತಗಳು ಹರಿದು ಹಂಚಿಹೋಗಬಾರದು.

೩) ನಮ್ಮವರ ಸಂಖ್ಯೆ ಕ್ಷೀಣಿಸುತ್ತಿದೆ. ಪಾರ್ಸಿಗಳಂತೆ  ಬ್ರಾಹ್ಮಣರು ಇಲ್ಲದಂತಾಗಬಹುದು . ಯಾರು ಹೊಣೆ? ನಮ್ಮ ಯುವ ದಂಪತಿಗಳಿಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟವಿಲ್ಲ .  ನಮ್ಮಗಳಿಗೇನು ಹಣಕಾಸಿನ ಕೊರತೆ ಇಲ್ಲ. ನಮ್ಮವರ ಸಂಖ್ಯೆ ಕ್ಷೀಣಿಸದೆ ಮತ್ತೇನಾಗುವುದು ? ಈ ಮನ್ಹಸ್ಥಿಥಿ ಬದಲಾಗಬೇಕು.  ನಮ್ಮವರ ಸಂಖ್ಯೆ ವೃದ್ಧಿಸಬೇಕು.


೪) ನಮ್ಮವರೇ ನಮ್ಮ ಶತ್ರುಗಳು .  ಟಿ ಮ್ ಕೃಷ್ಣ, ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಇತ್ಯಾದಿ.
ಬ್ರಾಹ್ಮಣ್ಯವನ್ನು  ವಿನಾಕಾರಣ  ಹೀಯಾಳಿಸುವುದನ್ನು ಖಂಡಿಸಿ.  ಅಂಥವರನ್ನು ದೂರವಿಡಿ


೫) ಬಡ ಬ್ರಾಹ್ಮಣರ  ಕೈ ಹಿಡಿಯಿರಿ.  ಮಾರ್ವಾಡಿಗಳಿಂದ ಕಲಿಯಿರಿ.  ವಿಧ್ಯಾಭ್ಯಾಸಕ್ಕೆ, ವ್ಯಾಪಾರಕ್ಕೆ ಮುಂದೆಬರುವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಾಯ ಮಾಡಿ .

೬) ಎಲ್ಲಾ ಬ್ರಾಹ್ಮಣ ಪಂಗಡಗಳು ಒಂದಾಗಿ .  ನಮ್ಮ-ನಮ್ಮಲ್ಲೇ ಕಿತ್ತಾಟ ಬೇಡ. ಬ್ರಾಹ್ಮಣ ಸಂಘಗಳನ್ನು ಬಲಪಡಿಸಿ.

೭) ಬ್ರಾಹ್ಮಣರ ಕೊಡಿಗೆಗಳಿಗೆ ಪ್ರಚಾರ ದೊರಕಲಿ . ಅಂಬೇಡ್ಕರರನ್ನು ಬೆಳಸಿ ಪೋಷಿಸಿದ್ದು ಬ್ರಾಹ್ಮಣ ಮೇಸ್ಟ್ರು. ಬ್ರಾಹ್ಮಣ ಮಹಿಳೆಯೊಬ್ಬಳು ಅವರನ್ನು ಮದುವೆಯಾಗಿ (ಎರಡನೇ ಮದುವೆ,  ಆಕೆ ಡಾಕ್ಟರ್ ಕೂಡ  ) ಕಡೆತನಕ ನೋಡಿಕೊಂಡಳು. ಅಂಬೇಡ್ಕರ್ ಸಂವಿಧಾನ ಬರೆಯುವುದಕ್ಕೆ ನೆರವು ನೀಡಿದವರು ಬ್ರಾಹ್ಮಣ ಸಂವಿಧಾನ ತಜ್ಞರೇ. (Alladi Krishnaswami Ayyar, N. Gopalaswami Ayengar).  ಇವರೆಲ್ಲಾ ರಚನ ಸಮಿತಿಯಲ್ಲಿದ್ದರು. 

ಯೇಸುದಾಸ್  ಸಂಗೀತ ಗುರುಗಳು ಚೆಮ್ಬೈ ವೈದ್ಯನಾಥ ಭಾಗವತರ್.

ಪಿಟೀಲು ವಿದ್ವಾನ್ ಚೌಡಯ್ಯನವರ ಗುರುಗಳು ಬ್ರಾಹ್ಮಣರಾದ ಬಿಡಾರಂ ಕೃಷ್ಣಪ್ಪನವರು .

ರಾಮಾಯಣ ಬರೆದದ್ದು ವಾಲ್ಮೀಕಿಗಳು (ಪ . ವರ್ಗ -ಬೇಡರು ).  ಮಹಾಭಾರತ ಬರೆದವರು ವ್ಯಾಸರು (ಮೀನುಗಾರ್ತಿಯ ಮಗ). ಕಾಳಿದಾಸರು ಕುರಬರು. ಕೃಷ್ಣ ಯಾದವ ಕುಲದವನು .  ಅವರೆಲ್ಲ ಬ್ರಾಹ್ಮಣರಿಗೆ ಪರಮಪೂಜ್ಯರು.

ದೂರದರ್ಶಿ ಸಮಾಜ ಸುಧಾರಣೆಗಳನ್ನು ಮಾಡಿ, ಹಿಂದುಳಿದವರಿಗೆ ಅವಕಾಶ ಮಾಡಿಕೊಟ್ಟವರು  ರಾಜಾರಾಮ್ ಮೋಹನ್ ರೈರಂಥ ಬ್ರಾಹ್ಮಣ ನಾಯಕರು .

ಕೇಂದ್ರದ ಬ್ರಾಹ್ಮಣ ಮಂತ್ರಿಗಳು
ನಿರ್ಮಲ ಸೀತಾರಾಮನ್  ಡಿಫೆನ್ಸ್
ಸುಷ್ಮಾ ಸ್ವರಾಜ್ - ಫಾರಿನ್ ಅಫ್ಫೇರ್ಸ್
ನಿತಿನ್ ಗಡ್ಕರಿ - ಸರ್ಫೇಸ್ ಟ್ರಾನ್ಸ್ಪೋರ್ಟ್
 ಜೈಟ್ಲೇಯ್ - ಫೈನಾನ್ಸ್
ಸುರೇಶ ಪ್ರಭು -
ಸುಮಿತ್ರಾ ಮಹಾಜನ್ (ಸ್ಪೀಕರ್ ಲೋಕಸಭಾ)

ಪ್ರಕಾಶ್ ಜಾವಡೇಕರ್

ಅನಂತ ಕುಮಾರ್ - (ದಿವಂಗತರು)
ಅಶ್ವಿನಿ ಚೌಬೆಯ್

ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ ಸಿಎಂ )
ಮನೋಹರ್ ಪರ್ರಿಕರ್
ಮಮತಾ  ಬಾನೆರ್ಜಿ
ಜಯಲಲಿತಾ
ಗುಂಡೂರಾವ್
ರಾಮಕೃಷ್ಣ ಹೆಗ್ಡೆ


೮) ಬ್ರಾಹ್ಮಣರ ಮುಖ್ಯ ಸೊತ್ತುಗಳು ಎಂದರೆ  ಉತ್ತಮ್ಮ ವಿದ್ಯಾಬ್ಯಾಸ, ಕಾರ್ಯಕ್ಷಮತೆ, ಅವಿರತ ದುಡಿಮೆ, ಪ್ರಾಮಾಣಿಕತೆ.  ಇವುಗಳನ್ನು ಮುಂದುವರೆಸಿಕೊಂಡು ಮುನ್ನೆಡಯಬೇಕು.

ಉದ್ಯಮ ಶೀಲತೆಯನ್ನೂ ಬೆಳಸಿಕೊಳ್ಳಬೇಕು . ಈಚಿನ ದಿನಗಳಲ್ಲಿ ಬ್ರಾಹ್ಮಣರು ಬೇರೆ ಬೇರೆ ಉದ್ದಿಮೆಗಳಲ್ಲಿ ಯಶಸ್ಸು ಕಾಣುತ್ತಿರುವುದು ಸಂತೋಷದ ವಿಷಯ.

 ಸ್ವದೇಶೇ ಪೂಜ್ಯತೆ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬ ಮಾತು ನೆನಪಿರಲಿ .  ವಿದ್ಯೆ ಇದ್ದರೆ ಎಲ್ಲಾದರೂ ಬದುಕಬಹುದು. ಜೊತೆಗೆ  ವಿವಿಧ  ಕೌಶಲ್ಯ (ಸ್ಕಿಲ್ ) ಗಳನ್ನೂ ಮೈಗೂಡಿಸಕೊಳ್ಳಬೇಕು.

೯) ಅನಿವಾಸಿ ಬ್ರಾಹ್ಮಣರು ಭಾರತದಲ್ಲಿ ಆಸ್ತಿಗಳನ್ನು ಮಾಡಿಡಬೇಕು .  ಉಳಿತಾಯವನ್ನು ಭಾರತದಲ್ಲೇ ಇಡಬೇಕು. ಬೇರೇ ದೇಶಗಳಲ್ಲಿ ಅತಂತ್ರ ಸ್ಥಿತಿ ಉಂಟಾದಾಗ ನಮ್ಮ ದೇಶವೇ ನಮಗೆ ಗತಿ.

೧೦) ತಂದೆ ತಾಯಿಗಳು ಮತ್ತು ಗುರುಹಿರಿಯರ ಬಗ್ಗೆ ಕಾಳಜಿ ಇರಲಿ. ನಮ್ಮ ಬೇರುಗಳನ್ನು ಮರೆಯುವುದು ಬೇಡ .

೧೧) ಬೇರೆ ಜಾತಿ-ಧರ್ಮಗಳೊಂದಿಗೆ ಘರ್ಷಣೆ ಬೇಡ. ನಮ್ಮ ಇತಿ-ಮಿತಿಗಳ ಅರಿವಿರಲಿ.   ಹೊಂದಿಕೊಂಡು ನಡೆಯಿರಿ.  ಬೇರೆಯವರಿಂದಲೂ ಸಹಾಯಗಳಿಸುತ್ತ ಮುಂದುವರಿಯಿರಿ .

೧೨) ಪೌರೋಹಿತ್ಯ, ಅಡುಗೆ ಕೆಲಸ, ಭವಿಷ್ಯ ಹೇಳುವುದು, ಸಂಗೀತ ಪಾಠ, ಸಾಹಿತ್ಯ-ಕಲೆ ಸೃಷ್ಟಿ, ಉಪಾಧ್ಯಾಯ ವೃತ್ತಿ ಮುಂತಾದವುಗಳು ಬ್ರಾಹ್ಮಣರಿಗೆ ವಂಶಪಾರಂಪರ್ಯವಾಗಿ ಬಂದಿವೆ.  ಅವುಗಳನ್ನು ನಾವುಗಳು ಹೆಚ್ಚು ರೂಡಿಸಿಕೊಂಡು ಸಂಪಾದಿಸಬೇಕು.

೧೩) ಸರ್ಕಾರಿ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಲ್ಲಿ ನಮ್ಮ ಜನ ಹಿಂದು.

ಕ) ಸ್ವಯಂ ಉದ್ಯೋಗ ಶುರುಮಾಡಲು ರೂ. ೧೦ ಲಕ್ಷಗಳ ವರೆಗಿನ ಬ್ಯಾಂಕ್ ಸಾಲ, ಆಧಾರ ರಹಿತವಾಗಿ ಮತ್ತು ಯಾವುದೇ ಜಾಮೀನಿನ ಅವಶ್ಯಕತೆಯಿಲ್ಲದೆ ಮುದ್ರಾ ಯೋಜನೆಯಡಿ ದೊರೆತ್ತದೆ . 
ಖ) ದೊಡ್ಡ ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಸ್ಥಾಪಿಸಲು ರೂ. ೧ ಕೋಟಿವರೆಗಿನ ಸಾಲ (೫೯ ನಿಮಿಷಗಳೊಳಗಿನ ಮಂಜೂರಿ)  ಆಧಾರ ರಹಿತವಾಗಿ ಮತ್ತು ಯಾವುದೇ ಜಾಮೀನಿನ ಅವಶ್ಯಕತೆ ಇಲ್ಲದೆ ಕೇಂದ್ರ ಸರ್ಕಾರದ ಯೋಜನೆಯಡಿ ಬ್ಯಾಂಕ್ಗಳಿಂದ ದೊರೆಯುತ್ತದೆ. 
ಗ) ಆಯ್ಶ್ಮಾನ್ ಭಾರತಡಿ ರೂ. ೫ ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಎಲ್ಲಾ ಬಡವರಿಗೆ ಉಚಿತವಾಗಿ ದೊರೆಯುತ್ತದೆ. 

ಈ ರೀತಿಯ ಇನ್ನೂ ಹತ್ತು-ಹಲವಾರು ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳವತಿಯಿಂದ ಲಭ್ಯವಿದೆ.  ಇವುಗಳು ಪ್ರಯೋಜನ ಪಡೆಯಲು ನಮ್ಮವರು ಮುಂದೆಬರಬೇಕು.

೧೪) ವಿತಂಡವಾದಿಗಳು ನಮ್ಮಲ್ಲೇ ಹೆಚ್ಚು. ಅವರುಗಳು ನಮ್ಮವರನ್ನೇ ಮತ್ತು ನಮ್ಮ ಪರಂಪರೆಯನ್ನೇ ಜರೆಯುತ್ತಾರೆ. ಅವರುಗಳು ವೋಟ್ ಮಾಡುವುದಿಲ್ಲ, ಮಾಡಿದರೆ  ನಮ್ಮ ವಿರೋಧಿಗಳಿಗೆ ವೋಟ್ ಮಾಡುತ್ತಾರೆ ಅಥವಾ 'ನೋಟಾ' ಅಂತ ವೋಟ್ ಮಾಡುತ್ತಾರೆ!

೧೪) ಹೆಮ್ಮೆಯಿಂದ  ಹೇಳಿ, ನಾನೊಬ್ಬ ಬ್ರಾಹ್ಮಣ. 










6 comments:

  1. Thanks KLN a timely reminder that could inspire all of us. But unfortunately some of us do not think on these lines. As it stands individual think of his nuclear family and donot even think of their own near and dear all that they want their wards to get good education and settle abroad since the system has rotted here. But many remain neglected and are of no consequence to others or Govt. A better way is to unite all Brahmins into one, let them practice their own way of worship inside their home but unite as solid rock outside. We will not be vote Bank but king makers.

    ReplyDelete
  2. ಧನ್ಯವಾದಗಳು

    ReplyDelete
  3. I totally endorse your view. The gentleman above has commented nicely. But y not disclosed his name. This is the weekends of Brahmins. Name should never come out.

    Jayasheela

    ReplyDelete
    Replies
    1. You have rightly pointed out the weakness of Brahmins. Unless we muster courage we can't survive.

      Delete
  4. Very true and our community should understand the gravity of the situation and act. And further in our community only some people are vithandavadigalu,and they act as if they are the changers .

    ReplyDelete
  5. ವಿತಂಡವಾದಿಗಳು ನಮ್ಮಲ್ಲೇ ಹೆಚ್ಚು. ಅವರುಗಳು ನಮ್ಮವರನ್ನೇ ಮತ್ತು ನಮ್ಮ ಪರಂಪರೆಯನ್ನೇ ಜರೆಯುತ್ತಾರೆ. ಅವರುಗಳು ವೋಟ್ ಮಾಡುವುದಿಲ್ಲ, ಮಾಡಿದರೆ ನಮ್ಮ ವಿರೋಧಿಗಳಿಗೆ ವೋಟ್ ಮಾಡುತ್ತಾರೆ ಅಥವಾ 'ನೋಟಾ' ಅಂತ ವೋಟ್ ಮಾಡುತ್ತಾರೆ!

    ReplyDelete