Monday 19 April 2021

ವಿದಾಯ

    ವಿದಾಯ
***

'ಇಗೋ ಕನ್ನಡ' ಎಂದು 

ನಮ್ಮೆಲ್ಲರ ಬಡಿದೆಬ್ಬಿಸಿದಾತ 

ಬರೆದಿಟ್ಟು ನಮಗೊಂದು ನಿಘಂಟ 

ಹೊರಟು ನಿಂತ ಧೀಮಂತ 


ಇಗೋ 'ಜೀವಿ' ಈತ 

ಪಂಪ'ರನ್ನರ' ನಮಗೆ ತೋರಿಸಿದಾತ 

ಕೆಟಲರ ಕಾರ್ಯ ಮುಂದುವರೆಸಿದಾತ 

'ಶಬ್ದಸಾಗರ'ಕೆ  ಸೇತು ನಿರ್ಮಿಸಿದಾತ 


ಎರಡು ಮಹಾಮಾರಿಗಳ ಜಯಿಸಿದಾತ 

ಎರಡು ಮಹಾಯುದ್ಧಗಳ ಗೆದ್ದು ನಿಂತಾತ 

ಕನ್ನಡದುಳಿವೆಗೆ ಯುವಸೈನ್ಯ ಕಟ್ಟಿದಾತ 

'ಸಾರ್ಥಕ ಜೀವಿ' ಇವ ಕಂಡರಲ್ಲ ನೂರೆಂಟು ವಸಂತ 


'ಶತನಮನ'ಗಳು ನಿಮಗಿದೋ ನಮ್ಮೆಲ್ಲರ ತಾತ 

ಟಿಪ್ಪಣಿಗಳು 

೧) ಶ್ರೀಯುತ ಜಿ.ವೆಂಕಟಸುಬ್ಬಯ್ಯನವರು ''ಜೀವಿ' ಎಂದೇ ಪ್ರಸಿದ್ಧರು. 

೨)  'ಇಗೋ ಕನ್ನಡ' ಎಂಬುದು 'ಜೀವಿ'ಯವರ ವಿಶಿಷ್ಟ ನಿಘಂಟು.  

೩) ೧೦೦೦ ವರ್ಷಗಳ ಹಿಂದೆ ಕನ್ನಡದ ಮೊದಲ ನಿಘಂಟು ರಚನೆ ಮಾಡಿದವರು ಕವಿ  'ರನ್ನ. 

೪) ೧೮೯೪ರಲ್ಲಿ ಕನ್ನಡದ ನಿಘಂಟನ್ನು ಮತ್ತೆ ರಚಿಸಿದವರು 'ಕೆಟಲ್' ಎಂಬ ಜೆರ್ಮನಿಯ ವಿದ್ವಾಂಸರು. ನೂರು ವರ್ಷಗಳನಂತರ ಅಂದರೆ ೧೯೯೪ರಲ್ಲಿ 'ಜೀವಿ'ಯವರು ೯೦೦೦ ಪುಟಗಳ ಹೊಸ ಕನ್ನಡ ನಿಘಂಟು ಬಿಡುಗಡೆಯಾದದ್ದು ಕನ್ನಡಿಗರ ಹೆಮ್ಮೆ. 

೫) 'ಶಬ್ದ ಸಾಗರ, ಸಾರ್ಥಕ ಜೀವಿ, ಶತ ನಮನ, ಇವುಗಳು ಶ್ರೀಯುತರನ್ನು ಕುರಿತು ರಚಿತವಾಗಿರುವ ಅಭಿನಂದನಾ ಗ್ರಂಥಗಳು. 

(ರಚನೆ: ಲಕ್ಷ್ಮೀನಾರಾಯಣ ಕೆ.)


No comments:

Post a Comment