Thursday 18 April 2024

ದಿನ ಪತ್ರಿಕೆಗಳು

ದಿನ ಪತ್ರಿಕೆಗಳು 

ಒಂದು ಚಟುವಟಿಕೆ 

*** 


ಕನ್ನಡ ಪ್ರಭ 

೧೮-೦೪-೨೦೨೪

ಪ್ರಶ್ನೆಗಳು 

***

೧) ರಾಮನವಮಿಯ ದಿನ ಅಯೋಧ್ಯೆಯ ರಾಮಮಂದಿರದಲ್ಲಿ, ಬಾಲಕ ರಾಮನ ವಿಗ್ರಹದ ಹಣೆಯ ಮೇಲೆ ಯಾವ ಕೌತುಕದ ಘಟನೆ ನಡೆಯಿತು?   (ಪುಟ 1)


೨) ಬೆಂಗಳೂರಿನ ಬಸವೇಶ್ವರನಗರದ ಯಶಸ್ವಿನಿ ಮಾಡಿರುವ ಸಾಧನೆ ಏನು?  (ಪುಟ 2) 


೩) ಕನ್ನಡ ಪಾಠಶಾಲೆ, ದುಬೈಗೆ ಮಾನ್ಯತೆಯನ್ನು ಯಾರು ನೀಡಿದ್ದಾರೆ?  (ಪುಟ 3)


೪) ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಅಭ್ಯರ್ಥಿಯಾಗಿದ್ದಾರೆ?    (ಪುಟ 6 )


೫) ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಎಂದು ನಡೆಯಲಿದೆ? (ಪುಟ 11)


೬) ಈಚೆಗೆ ಜ್ವಾಲಾಮುಖಿಯ ಸ್ಫೋಟ ಯಾವ ದೇಶದಲ್ಲಿ ನಡೆದಿದೆ?  


೭) ಬೆಂಗಳೂರಿನಲ್ಲಿ ಈಚೆಗೆ  ಯಾವ ಗಣ್ಯ ವ್ಯಕ್ತಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು?              

     (ಪುಟ 13) 


೮) ರಿಷಬ್ ಪಂತ್ ಯಾವ ಐ.ಪಿ.ಎಲ್. ತಂಡದ ನಾಯಕರು?  (ಪುಟ 14) 


***


ಕನ್ನಡ ಪ್ರಭ

೧೭-೦೪-೨೦೨೪

***

೧) ಛತ್ತೀಸ್ಗಡ್ ರಾಜ್ಯದಲ್ಲಿ ಯಾವ ದುರ್ಘಟನೆ ನಡೆದಿದೆ? (ಪುಟ 2) 


೨) ಡಾ. ಟೆಸ್ಸಿ ರವರು ವೈದ್ಯ ವಿದ್ಯಾರ್ಥಿಗಳಿಗೆ ಏನೆಂದು ಸಲಹೆ ನೀಡಿದ್ದಾರೆ? (ಪುಟ 4)


೩) ಪ್ರಮಾಣ ವಚನ ಸ್ವೀಕರಿಸಿದ ಐವರು ಹೈಕೋರ್ಟ್ ಜಡ್ಜ ಗಳು ಯಾರು ಯಾರು?  (ಪುಟ 6)


೪) ಎಸ್.ಐ. ಶಾಂತಪ್ಪ ನವರು ಯಾವ ಸಾಧನೆಯನ್ನು ಮಾಡಿದ್ದಾರೆ? (ಪುಟ 7) 


೫) ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕರ್ನಾಟಕದ ರಾಜ್ಯದ ಟಾಪರ್ ಯಾರು?  (ಪುಟ 8) 


೬) ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯ ಅಭ್ಯರ್ಥಿಗಳು ಯಾರು? 



೭) ಈಚೆಗೆ ನಿಧನ ಹೊಂದಿದ ದ್ವಾರಕೀಶ್ ರವರು ಯಾವ ಊರಿನವರು? (ಪುಟ 14)


೮) ಡಿ. ಗುಕೇಶ್ ಯಾರು?  (ಪುಟ 16)


***

ಕನ್ನಡ ಪ್ರಭ

೧೬-೦೪-೨೦೨೪

***

೧) ಈ ವರ್ಷದ ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಏನೆಂದು ಹೇಳಿದೆ? (ಪುಟ 1) 


೨) ಎಸ್. ಜೈಶಂಕರ್ ಯಾರು?  (ಪುಟ 5) 


೩) ಮತದಾರರಿಗೆ ಸುತ್ತೂರು ಶ್ರೀಗಳು ಏನೆಂದು ಹೇಳಿದ್ದಾರೆ? (ಪುಟ 6) 


೪) ತುಮಕೂರು ಲೋಕಸಭಾ ಕ್ಷೇತ್ರದ ಮುಖ್ಯ ಅಭ್ಯರ್ಥಿಗಳು ಯಾರು ಯಾರು? (ಪುಟ 7)


೫) ಈಚೆಗೆ ಯಡಿಯೂರಿನಲ್ಲಿ ಯಾವ ಸಮಾರಂಭ ಜರುಗಿದೆ?  (ಪುಟ 9) 


೬) ಗುಜರಾತ್ ನ ಉದ್ಯಮಿ ಭವೇಶ್ ಭಂಡಾರಿ ಯವರು ಯಾವ ಒಳ್ಳೆ ಕೆಲಸವನ್ನು ಮಾಡಿದ್ದಾರೆ? 


೭) ಐ.ಪಿ.ಎಲ್. ಕ್ರಿಕೆಟ್ ನ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ಅತ್ಯಂತ  ಹೆಚ್ಚು ರನ್ನು ಗಳಿಸಿರುವ ತಂಡ ಯಾವುದು? 

(ಪುಟ 12) 


೮) ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ ಯಾವ ನಗರದಲ್ಲಿ ನಡೆಯುತ್ತಿದೆ? (ಪುಟ 12) 


ಕನ್ನಡ ಪ್ರಭ 

೧೫-೦೪-೨೦೨೪

***

೧) ಇಸ್ರೇಲ್ ಮೇಲೆ ಈಚೆಗೆ ದಾಳಿ ನಡೆಸಿದ ದೇಶ ಯಾವುದು?  (ಪುಟ 1) 


೨) ಕಲಾ ಮಂಗಳ ಉತ್ಸವದಲ್ಲಿ ಏನು ನಡೆಯಿತು? (ಪುಟ 2) 


೩) ಈಚೆಗೆ ಗೋವಾ ದಲ್ಲಿ ಯಾವ ದುರ್ಘಟನೆ ನಡೆದಿದೆ? (ಪುಟ 4) 


೪) ಮೈಸೂರು ಲೋಕಸಭಾ ಕ್ಷೇತ್ರದ ಮುಖ್ಯ ಅಭ್ಯರ್ಥಿಗಳು ಯಾರು ಯಾರು? (ಪುಟ 5) 


೫) ಬಾಡಿಗೆ ವಿಮಾನ ಮತ್ತು ಹೆಲಿಕ್ಯಾಪ್ಟರ್ ಗಳಿಗೆ ಈಚೆಗೆ ಭಾರಿ ಬೇಡಿಕೆ ಏಕೆ ಉಂಟಾಗಿದೆ? 

(ಪುಟ 7) 


೬) ಇರಾನ್ ದಾಳಿಯನ್ನು ಇಸ್ರೇಲ್ ಹಿಮ್ಮೆಟಿಸಿದ್ದು ಹೇಗೆ? 


೭) ಐ.ಪಿ.ಎಲ್. ಅಂಕಪಟ್ಟಿಯ ಪ್ರಕಾರ ಎರಡನೆಯ ಸ್ಥಾನ ಪಡೆದಿರುವ ತಂಡ ಯಾವದು? 

(ಪುಟ 9)


೮) ರಂಜನಿ ರಾಘವನ್ ಏಕೆ ಸುದ್ದಿಯಲ್ಲಿದ್ದಾರೆ?  (ಪುಟ 10)  


ಕನ್ನಡ ಪ್ರಭ

೧೪-೦೪-೨೦೨೪

***

೧) 14-04-2024........  ಒಂದು ವಿಶೇಷ ದಿನ. ಏಕೆ?  (ಪುಟ 1) 


೨) ಬಾಹ್ಯಾಕಾಶ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತದ ಮೊದಲ ವ್ಯಕ್ತಿ ಯಾರು?  (ಪುಟ 1) 


೩) ನಮ್ಮ ರಾಜ್ಯದಲ್ಲಿ ಬೇಸಿಗೆ ಮಳೆ ಯಾವ ಯಾವ ಊರುಗಳಲ್ಲಿ ಆಗಿದೆ?  (ಪುಟ 4) 


೪) ಉಡುಪಿ-ಚಿಕ್ಕಮಗಳೂರ್ ಕ್ಷೇತ್ರದ ಲೋಕ ಸಭಾ ಚುನಾವಣೆಯ ಅಭ್ಯರ್ಥಿಗಳು ಯಾರು ಯಾರು? 

(ಪುಟ 5) 


೫)  ಐ.ಪಿ.ಎಲ್. ಅಂಕಪಟ್ಟಿಯ ಪ್ರಕಾರ ಆರು ಅಂಕಗಳನ್ನು ಎಷ್ಟು ತಂಡಗಳು ಹೊಂದಿವೆ? 

(ಪುಟ 8) 


೬) ಆಸ್ಟ್ರೇಲಿಯಾದ ಸಿಡ್ನಿ ಯಲ್ಲಿ ಯಾವ ದುರ್ಘಟನೆ ನಡೆದಿದೆ?  


೭) ಬೋರ್ನ್ ವಿಟಾ ವನ್ನು ಆರೋಗ್ಯ ಪೇಯವಲ್ಲ ಎಂದು ಏಕೆ ಹೇಳಲಾಗಿದೆ?  (ಪುಟ 11) 


೮) 'ಈಶಾನ್ಯೆ ಒಡಲು'  ಎಂಬ ಪುಸ್ತಕದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗಿದೆ? (ಪುಟ 12)