Sunday 30 September 2018

ಗಾಂಧೀಜಿ ಪರಿಪೂರ್ಣರೆ?

ಮನುಕುಲ ಕಂಡ ಮಹಾನ್ ವ್ಯಕ್ತಿಯೆಂದೇ ಗಾಂಧೀಜಿಯವರನ್ನು  ಬಣ್ಣಿಸಲಾಗಿದೆ.  ಹೌದು, ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಮೇರುನಾಯಕರಾದ ಅವರು  ಹಲವು ಕೊಡುಗೆಗಳನ್ನು ನೀಡಿದ್ದಾರೆ.

೧.  ಗ್ರಾಮೀಣ ಭಾರತ: ರೈತನೇ ಭಾರತದ ಬೆನ್ನೆಲುಬು ಹಾಗೂ ಹಳ್ಳಿಗಳ ವಿಕಾಸವೇ ಭಾರತದ ವಿಕಾಸ ಎಂಬ ಸಂದೇಶವನ್ನು ಗಾಂಧೀಜಿ ನಮಗೆ ನೀಡಿದರು.


೨. ಸ್ವಚ್ಛ ಭಾರತ: ಸ್ವಚ್ಛತೆಯ ಬಗ್ಗೆ ನಮ್ಮ ಗಮನವನ್ನು ಮೊದಲ ಬಾರಿಗೆ ಸೆಳೆದವರು ಗಾಂಧೀಜಿ.  ಸ್ವಚ್ಛ ಭಾರತ ಎಂಬ ಅಭಿಯಾನಕ್ಕೆ ಪ್ರಥಮವಾಗಿ ನಾಂದಿ ಹಾಡಿದವರು ಗಾಂಧೀಜಿಯವರೆ. 

೩.ಸ್ವಾವಲಂಭಿ ಭಾರತ: ದೇಶದ ಗುಡಿಕೈಗಾರಿಕೆಗಳಿಂದ ಸ್ವಾವಲಂಬನೆ ಸಾಧ್ಯ ಎಂಬ ದೂರಧೃಷ್ಟಿಯನ್ನು ನಮಗೆ ತೋರಿಸಿದವರು ಗಾಂಧೀಜಿ.  'ಮೇಕ್ ಇನ್ ಇಂಡಿಯ' ಎಂಬುದು ಗಾಂಧೀಜಿಯವರು ಆರಂಭಿಸಿದ ಅಭಿಯಾನದ ಮುಂದುವರಿದ ಭಾಗ. 

೪. ಸತ್ಯಾಗ್ರಹ: ಅನ್ಯಾಯದ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವುದೇ ಸತ್ಯಾಗ್ರಹ ಎಂಬ ತಂತ್ರಗಾರಿಕೆಯನ್ನು ನಮಗೆ ತಿಳಿಸಿಕೊಟ್ಟರು ಗಾಂಧೀಜಿ.


೫.ಅಸ್ಪೃಶ್ಯತೆ  ವಿರುದ್ಧ ಹೋರಾಟ: ಅಸ್ಪೃಶ್ಯತೆಯೊಂದು  ಸಾಮಾಜಿಕ ಪಿಡುಗು ಹಾಗೂ ಎಲ್ಲರೂ ಸಮಾನರು ಎಂಬುದು ಗಾಂಧೀಜಿಯವರ ಅಭಿಪ್ರಾಯ.  ದೇಶದಲ್ಲಿ ಈಗ ಮುಂದುವರೆದಿರುವ ಸಾಮಾಜಿಕ ನ್ಯಾಯಕ್ರಾಂತಿಯ ರೂವಾರಿಗಳು ಗಾಂಧೀಜಿಯವರೇ. 

ಆದರೇ 
೧. ಪ್ರಧಾನಿ ಆಯ್ಕೆ: ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದ ಪಟೇಲರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ತಪ್ಪುಗಳಲ್ಲಿ ದೊಡ್ಡದು ಎಂಬುದು ನನ್ನ ಅಭಿಪ್ರಾಯ.  ದೇಶದ ಹಿತದೃಷ್ಟಿಯಿಂದ ನಿಸ್ವಾರ್ಥ ಹಾಗೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಅಂದು ಪಟೇಲರಲ್ಲಿ ಮಾತ್ರವಿತ್ತು.   ಅವರು ಪ್ರಧಾನಿಯಾಗಿದ್ದರೆ ದೇಶ ಇನ್ನೂ ಬಲಿಷ್ಠವಾಗಿರುತಿತ್ತು ಎಂಬುದರಲ್ಲಿ ಯಾವ ಅನುಮಾನವೂ ನನಗಿಲ್ಲ.


.ಹುಲಿಗಳನ್ನು ಇಲಿಗಳನ್ನಾಗಿ  ಮಾಡಿದರೆ? ಹಾಗೇ ಸುಭಾಷ್ ಚಂದ್ರ ಬೋಸರಂಥ ನಾಯಕರ ಉತ್ಸಾಹಕ್ಕೆ, ಅಹಿಂಸೆಯ ಹೆಸರಿನಲ್ಲಿ ತಣ್ಣೀರು ಸುರಿದದ್ದು ಮತ್ತು ಅಂಥವರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ಮತ್ತೊಂದು ತಪ್ಪು. ಒಂದು ಕೆನ್ನೆಗೆ ಬಾರಿಸಿದರೆ, ಮತ್ತೊಂದು ಕೆನ್ನೆಯನ್ನು ತೋರಿಸು ಎಂಬ ಪಾಠ ಭಾರತೀಯರನ್ನು ದುರ್ಬಲ ವ್ಯಕ್ತಿಗಳನ್ನಾಗಿ ಮಾಡಿತೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತದೆ. 

೩.ದೇಶ ವಿಭಜನೆಯಲ್ಲಾದ ಹಿನ್ನಡೆ: ಒಡೆದು ಆಳು ಎಂಬ ಬ್ರಿಟಿಷರ ತಂತ್ರಕ್ಕೆ ನಾವು ಸುಲಭ ತುತ್ತಾದೆವು.  ನಾವು ಅದರ ಪರಿಣಾಮವನ್ನು ಈಗಲೂ ಅನುಭವಿಸುತ್ತಿದ್ದೇವೆ.  ಇದಕ್ಕೆ ಯಾರು ಹೊಣೆ?  ಪಟೇಲರು  ತಂತ್ರಗಾರಿಕೆ ಮಾಡದಿದ್ದರೆ ನಮ್ಮ ಹೈದರಾಬಾದ್  ಕೂಡ ಪಾಕಿಸ್ತಾನ ಆಗುತಿದ್ದರಲ್ಲಿ ಅನುಮಾನ ಬೇಡ. ಕಾಶ್ಮೀರ ಮುಂತಾದ ಸಮಸ್ಯೆಗಳಿಗೆ ಅಂದೇ ಇತಿಶ್ರೀ ಹಾಡಬಹುದಿತ್ತು.   ಮತ್ತೊಂದು ಕೆನ್ನೆ ತೋರಿಸುವ ಮನೋಭಾವವೇ ನಮಗೆ ಮುಳುವಾಯಿತೆ/ಮತ್ತೆ  ಮತ್ತೆ ಮುಳುವಾಗುತ್ತಿದೆಯೆ  ಎಂಬ ದ್ವಂದ ನಮ್ಮೆಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. 

ಈ ಎಲ್ಲಾ ವಿಚಾರಧಾರೆಗಳ ನಡುವೆ 'nobody is perfect'  ಎಂಬ ಮಾತು ನೆನಪಿಗೆ ಬರುತ್ತದೆ.  ಆದರೂ ನಮ್ಮ ದೇಶ ಹಾಗೂ ಅದರ ವಿಚಾರಧಾರೆಗಳನ್ನು ರೂಪಿಸುವಲ್ಲಿ ಅಪಾರ ಪ್ರಭಾವ ಬೀರಿದವರಲ್ಲಿ ಗಾಂಧೀಜಿಯವರು ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ . 
-೦-೦-೦-೦-೦-೦-೦-೦-೦-
(ಮೇಲಿನ ಚಿತ್ರಗಳ ಮೂಲಕ್ಕೆ ನಾನು ಆಭಾರಿ)



Saturday 22 September 2018

MUDRA LOANS

1) ಮುದ್ರಾಸಾಲ  (MUDRA) ಯೋಜನೆ ಎಂದರೇನು?
(Micro-Units Development & Refinance Agency)
ಮುದ್ರಸಾಲ ಯೋಜನೆ ಎಂಬುದು ನಮ್ಮ ಪ್ರಧಾನಿಯವರ ಕನಸು.  ನಿರುದ್ಯೋಗ ನಿವಾರಣೆಯತ್ತ ನಮ್ಮ ದೇಶವಿಟ್ಟಿರುವ ಮಹತ್ತರವಾದ ಹೆಜ್ಜೆ.   2015ರ ಏಪ್ರಿಲ್ 8-ರಂದು ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಯ್ತು. 
ಸಣ್ಣ ಪ್ರಮಾಣದ ಕೈಗಾರಿಕೆಗಳು (Egs.-Garment Manufacturing), ವ್ಯಾಪಾರಗಳು (Egs.-Provision shop), ಸೇವಾ ಘಟಕಗಳು (Egs.-Beauty Parlour), ಕೃಷಿ-ಜೊತೆಗಿನ ಉದ್ಯೋಗಗಳು (Egs.-Cattle-rearing) ಇವುಗಳಿಗೆ 10 ಲಕ್ಷ ರೂ. ಗಳವರೆಗಿನ ಸುಲಭ ಆಧಾರ-ರಹಿತ ಸಾಲವನ್ನು (Loans without collateral security or third party guarantee) ಬ್ಯಾಂಕುಗಳ ಮುಖಾಂತರ ಒದಗಿಸಿಕೊಡುವುದೇ ಈ ಯೋಜನೆಯ ಉದ್ದೇಶ. ವಹಿವಾಟಿನ ಪ್ರಮಾಣಕ್ಕನುಸಾರವಾಗಿ ನೀಡುವ ಸಾಲಗಳನ್ನು 3 ವಿಭಾಗಗಳಾಗಿ ವಿಂಗಡಿಸಬಹದು. 

ಶಿಶು - ರೂ. 5೦,೦೦೦ ಗಳವರಗೆ 
ಕಿಶೋರ - ರೂ. 5 ಲಕ್ಷದವರಗೆ 
ತರುಣ - ರೂ.10 ಲಕ್ಷದವರಗೆ 

ಹೊಸದಾಗಿ ಆರಂಭಿಸುವ ಹಾಗೂ ಈಗಾಗಲೇ ನಡೆಸುತ್ತಿರುವ ಉದ್ದಿಮೆ/ವಹಿವಾಟುಗಳಿಗೂ ಅವಕಾಶವುಂಟು. (New Units and Existing Units)

ಆಟೋ/ಟ್ಯಾಕ್ಸಿ/ಟೆಂಪೋ ಖರೀದಿಸಲು ಈ ಯೋಜನೆಯಡಿ ಸಾಲ ದೊರೆಯುವುದೆ?
-ಖಂಡಿತ .  ಸಾಲದ ಮಿತಿ 10 ಲಕ್ಷಗಳ ಒಳಗೆ ವಾಹನ ದೊರೆಯುವಂತಿರಬೇಕು.

ಕೃಷಿಗೆ  ಈ ಯೋಜನೆಯಡಿ ಸಾಲ ದೊರೆಯುವುದೆ?

ಇಲ್ಲ .  ಅವುಗಳಿಗೆ ಬೇರೆ-ಬೇರೆ ಯೋಜನೆಗಳಿವೆ .

ಆದರೆ ಕೃಷಿ-ಜೊತೆಗಿನ ಚಟುವಟಿಗೆಗಳಾದ - ಪಶು-ಸಾಕಾಣಿಕೆ (animal husbandry) ,  ಬೀಜ-ರಸಗೊಬ್ಬರ ವ್ಯಾಪಾರ (seeds-fertilizers business), ಕೀಟನಾಶಕ ಔಷಧಿ ಸಿಂಪಡಿಸುವಿಕೆ (spraying pesticides)   ಮುಂತಾದವುಗಳಿಗೆ ಅವಕಾಶವುಂಟು . 


2) ಸಾಲಪಡೆಯುವ ಅಭ್ಯರ್ಥಿಯ ಅರ್ಹತೆಗಳೇನು?(eligibility)
-ಸಾಲಪಡೆಯುವ ಕ್ಷೇತ್ರದಲ್ಲಿ ಅಭ್ಯರ್ಥಿ ಕಳೆದ 2 ವರ್ಷಗಳಿಂದ ವಾಸವಿರಬೇಕು. 
-ಯಾವುದೇ ಬ್ಯಾಂಕ್ ಒಂದರ ಸಾಲವನ್ನು ಅವಧಿ ಮೀರಿ ಬಾಕಿ (not a defaulter) ಉಳಿಸಿಕೊಂಡಿರಬಾರದು.   
-ತಾವು ಯೋಜಿಸಿರುವ ಉದ್ಯಮದ ಚಟುವಟಿಕೆಗಳಿಗೆ ಬೇಕಾಗುವ ತರಬೇತಿಯನ್ನು ಪಡೆದಿರುವರಿಗೆ ಆದ್ಯತೆ ಉಂಟು.  ಗ್ರಾಮೀಣಾ ಸ್ವಯಂ-ಉದ್ಯೋಗ ತರಬೇತಿ ಸಂಸ್ಥೆ (RSETI) ಬೇಕಾದ ತರಬೇತಿಯನ್ನು ನೀಡುತ್ತದೆ. ಪ್ರತಿಜಿಲ್ಲೆಯಲ್ಲೂ ಈ ಸಂಸ್ಥೆ ಇರುತ್ತದೆ. 

3) ಸಾಲದ ನಿಯಮ-ಷರತ್ತುಗಳ  (Terms and conditions) ವಿವರವೇನು?
-Margin - ಅಭ್ಯರ್ಥಿ ತೊಡಗಿಸಬೇಕಾದ ಮೊತ್ತ 
ಶಿಶು ಸಾಲಗಳಿಗೆ - NIL , ಬೇಡ 
ಕಿಶೋರ ಮತ್ತು ತರುಣ ಸಾಲಗಳಿಗೆ  - 10%

-ಸಾಲದ ಮರುಪಾವತಿ ಅವಧಿ (Repayment Period)
Term Loan (Avadhi Sala)
5 ವರ್ಷಗಳು-ಸುಲಭ ಕಂತುಗಳಲ್ಲಿ  (ಮರುಪಾವತಿ ಆರಂಭಿಸಲು                        6 ತಿಂಗಳವರೆಗಿನ ಕಾಲಾವಕಾಶವಿರುತ್ತೆ - Holiday period). 
Loan installments are subject to income generation pattern of the activity.

Overdraft is for 1 year period, and can be renewed every year

-ಭದ್ರತೆಗಳು (Securities)
ನೀಡಿದ ಸಾಲದಿಂದ ಖರೀದಿಸಿದ ಆಸ್ಥಿಗಳು ಮಾತ್ರ 
ಮನೆ  ಇತರ ಸ್ಥಿರಾಸ್ತಿಗಳ  (No Immovable properties) ಆಧಾರವನ್ನು ನೀಡಬೇಕಾದ್ದಿಲ್ಲ .  
ಮೂರನೇ ವ್ಯಕ್ತಿಯ ಜಾಮೀನು ನೀಡಬೇಕಾಗಿಲ್ಲ.  (No Third party guarantee)

-ಬಡ್ಡಿಯ ದರ (Rate of Interest)
ಸುಮಾರು 9-11% ( linked to MCLR of the bank)

4) ಈ ಸಾಲವನ್ನು ಪಡೆಯವುದು ಹೇಗೆ?
ಅಭ್ಯರ್ಥಿ ತನ್ನ ನಿವಾಸದ ಅಥವಾ ಉದ್ದಿಮೆಯ ಹತ್ತಿರವಿರುವ ಯಾವುದೇ ಬ್ಯಾಂಕನ್ನು ಸಂಪರ್ಕಿಸಬಹುದು. ಸರ್ಕಾರಿ ವಲಯದ ಬ್ಯಾಂಕುಗಳನ್ನು (Public Sector Bank like SBI, Canara Bank) ಸಂಪರ್ಕಿಸುವುದು ಒಳ್ಳೆಯದು. 
ಗ್ರಾಮೀಣ ಜನರು ತಮ್ಮ ಹಳ್ಳಿಗಳಿಗೆ ಹತ್ತಿರವಿರುವ ಬ್ಯಾಂಕುಗಳನ್ನು ಸಂಪರ್ಕಿಸಬಹದು. 
ಶಿಶು ಸಾಲಕ್ಕೆ - 1 ಪುಟದ ಅರ್ಜಿ 
ತರುಣ್ ಹಾಗು ಕಿಶೋರ ಸಾಲಗಳಿಗೆ - 3 ಪುಟದ ಅರ್ಜಿ 
ಆಧಾರ್ ಕಾರ್ಡ  ಅಥವ  ವೋಟರ್ ಐಡಿಗಳು
PAN ಕಾರ್ಡ್ (ಖಡ್ಡಾಯವಿಲ್ಲ)
2 ಭಾವಚಿತ್ರಗಳು 
ಉದ್ದಿಮ್ಮೆಗೆ ಸಂಬಂಧಪಟ್ಟ ದಾಖಲೆಗಳು (Project report, licence)
ಖರೀದಿಸಬೇಕಾದ ಯಂತ್ರಗಳು, ಉಪಕರಣಗಳು, ಸಾಮಾನುಗಳ ವಿವರ ಮತ್ತು 
 quotationಗಳು 
ತರಬೇತಿಪಡೆದ ಬಗ್ಗೆ ದಾಖಲೆಗಳು 
ಕುಟುಂಬದ ವಿವರ etc. etc......

ಸಾಲಪಡೆಯುವಲ್ಲಿ ಎಷ್ಟು ಸಮಯ ಬೇಕಾಗಬಹುದು?
ಎಲ್ಲಾ ವಿವರಗಳನ್ನು ನೀಡಿದ ಮೇಲೆ, ಶಿಶು ಸಾಲವಾದರೆ ಸುಮಾರು ಒಂದು ವಾರದೊಳಗೆ ಸಾಲ ದೊರೆಯಬಹುದು.  ಹೆಚ್ಚಿನ ಮೊತ್ತದ ಸಾಲಗಳಿಗೆ ಸ್ವಲ್ಪ ಜಾಸ್ತಿ ಸಮಯ ಬೇಕಾಗಬಹುದು. 
ಮುದ್ರಾ ಕಾರ್ಡ್ ಎಂದರೇನು?
ಎಲ್ಲಾ ಮುದ್ರಾ ಸಾಲಗಾರರಿಗೆ ರೂಪೇ-ಮುದ್ರಾ ಕಾರ್ಡ್ ನ್ನು ವಿತರಿಸಲಾಗವುದು.  ಸಾಲದ ಹಣವನ್ನು ಈ ಕಾರ್ಡ್ ನ ಮುಖಾಂತರ ಬೇರೆ ಬೇರೆ ಕಡೆಗಳಲ್ಲಿ ಉದ್ದಿಮೆಗೆ ಬೇಕಾದ ಸಾಮಾನುಗಳನ್ನು ಖರೀದಿಸಬಹುದು. 



5) ದೇಶಾದ್ಯಂತ ಕಳೆದ ಮೂರುವರೆ ವರ್ಷಗಳಿಂದ ಜಾರಿಯಲ್ಲಿರುವ ಈ ಯೋಜನೆ ಯಶಸ್ಸು ಕಂಡಿದೆಯೆ?
                                                                      (Rs. in Crores)

-ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 12 ಕೋಟಿ ಫಲಾನುಭವಿಗಳಿಗೆ, 6 ಲಕ್ಷ  ಕೋಟಿ ರೂಗಳಷ್ಟು ಸಾಲವನ್ನು ವಿತರಿಸಲಾಗಿದೆ. 

75%ರಷ್ಟು ಫಲಾನುಭವಿಗಳು ಯುವಕರು ಹಾಗು ಮಹಿಳೆಯರು 

28%ರಷ್ಟು ಫಲಾನುಭವಿಗಳು, ಅಂದರೆ 3.25 ಕೋಟಿಯಷ್ಟು ನಿರುದ್ಯೋಗಿಗಳು.  ಹೀಗಾಗಿ ಉದ್ಯೋಗ ಸೃಷ್ಟಿಯಲ್ಲಿ ಇದೊಂದು ಮಹಾಕ್ರಾಂತಿಯೇ ಸರಿ! 

55%ರಷ್ಟು ಫಲಾನುಭವಿಗಳು SC/ST/OBC categories                                        
ಸುಮಾರು 11 ಕೋಟಿಯಷ್ಟು ಫಲಾನುಭವಿಗಳಿಗೆ ಶಿಶು ಸಾಲ ದೊರೆತಿದೆ .  ಅಂದರೆ ಈ ಯೋಜನೆಯ ಸಿಂಹಪಾಲು ಬಡವರಿಗೆ ದೊರೆತಿದೆ. 

ನೀಡಿದ ಸಾಲಗಳ ಮರುಪಾವತಿ ಸ್ಥಿತಿ  (Repayment position) ಹೇಗಿದೆ?

ಸಂತೋಷದ ಸುದ್ದಿ ಏನೆಂದರೆ, ನಮ್ಮ ದೇಶದ ಸಾಮಾನ್ಯ ಪ್ರಜೆಗಳು ಪ್ರಾಮಾಣಿಕರು ಹಾಗೂ ಕಷ್ಟಪಟ್ಟು ದುಡಿಯುವಂತವರು.  ಹಾಗಾಗಿ ಈ ಯೋಜನೆಯಡಿ ನೀಡಿದ ಸಾಲಗಳ ಮರುಪಾವತಿ ಉತ್ತಮವಾಗಿದೆ.  
ಮರುಪಾವತಿಯಾಗದ ಸಾಲಗಳ (NPAs) ಪ್ರಮಾಣ ೪% ಮಾತ್ರ. 

6) ಈ ಯೋಜನೆಯಡಿ ಸಾಲಪಡೆಯುವಲ್ಲಿ ತೊಂದರೆಗಳು ಎದುರಾದರೆ ಏನು ಮಾಡಬೇಕು? (Grievances Redressal)

 ಅರ್ಹ ಅಭ್ಯರ್ಥಿಗಳಿಗೆ ಸಾಲ ದೊರಕುವುದರಲ್ಲಿ ಯಾವುದೇ ತೊಂದರೆಯಾಗದು.  ಅರ್ಜಿ ತಿರಸ್ಕೃತವಾಗಬೇಕಾದರೆ ಬ್ಯಾಂಕ್ ನ್ಯಾಯಸಮ್ಮತವಾದ ಕಾರಣಗಳನ್ನು (Valid reasons) ನೀಡಲೇ ಬೇಕಾಗುತ್ತದೆ. ಆದರೂ ತೊಂದರೆಗೊಳಗಾದ ಅಭ್ಯರ್ಥಿಗಳು ಸಂಬಂಧಪಟ್ಟ ಬ್ಯಾಂಕಿನ ರೀಜನಲ್ ಮೆನೇಜೆರ್ ರವರನ್ನು  (Regional Manager) ಸಂಪರ್ಕಿಸಬಹುದು.

ಹತ್ತಿರವಿರುವ ಮತ್ತೊಂದು ಬ್ಯಾಂಕನ್ನೂ ಸಂಪರ್ಕಿಸಬಹುದು. 

7) ಹೊಸ ಅಭ್ಯರ್ಥಿಗಳಿಗೆ ನೀವು ನೀಡುವ ಸಂದೇಶವೇನು?
-ಉತ್ಸಾಹ ಮತ್ತು ನಿರ್ವಹಿಸುವ ಶಕ್ತಿ ಅತ್ಯವಶ್ಯಕ.  (enthusiasm and energy)
ನೀವು ಆರಂಭಿಸ ಬೇಕಿರುವ ಉದ್ದಿಮೆಯ ಬಗ್ಗೆ ಚೆನ್ನಾಗಿ  ತಿಳಿದುಕೊಳ್ಳಿ. 
ನಿಮ್ಮ ಉದ್ದಿಮೆಗೆ ಸರಿಯಾದ ಸ್ಥಳವನ್ನು ಆಯ್ಕೆಮಾಡಿ. 
-ಅನುಭವ/ತರಬೇತಿಗಳನ್ನು ಪಡೆದಿದ್ದರೆ ಉತ್ತಮ (Experience/training)
-ಹಿರಿಯ ಫಲಾನುಭವಿಗಳ/ಉದ್ದಿಮಿಗಳ  ಮಾರ್ಗದರ್ಶನವನ್ನು ಪಡೆಯಬಹುದು 
(senior MUDRA borrowers)
-ನಿರ್ಭಯವಾಗಿ ನಿಮ್ಮ ಹತ್ತಿರದ ಬ್ಯಾಂಕನ್ನು ಸಂಪರ್ಕಿಸಿ 
-ಎಲ್ಲ ವಿವರಗಳನ್ನು ನೀಡಿ 
-ಸಾಲ ಪಡೆದ ಮೇಲೆ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ.
Make best use of the loan sanctioned! 
ಮರುಪಾವತಿಯ ಕರ್ತವ್ಯ ನಿಮ್ಮದು. (Repayment obligation)
-ಉತ್ಸಾಹ, ದುಡಿಮೆ, ಪ್ರಾಮಾಣಿಕತೆ  ನಿರಂತರವಾಗಿರಬೇಕು. (Be honest)
-ಇತರರಿಗೂ ಮುಂದೆ ಮಾರ್ಗದರ್ಶನ ನೀಡಿ
                                                 -೦-೦-೦-೦-೦-೦-೦-೦-೦-

ಕಾರ್ಯಕ್ರಮದ ನಡುವೆ ಈ ಕೆಳಕಂಡ ಚಿತ್ರಗಳನ್ನು ಪಕ್ಕದಲ್ಲಿ ತೋರಿಸುತ್ತಿರಬಹುದು. 










ಮೇಲೆ ಉಪಯೋಗಿಸಿರುವ ಚಿತ್ರಗಳ ಹಕ್ಕು-ಸ್ವಾಮ್ಯ ನನಗಿಲ್ಲ .  ಅವುಗಳ ಮೂಲಕ್ಕೆ ನನ್ನ ಧನ್ಯವಾದಗಳು. 

Sunday 16 September 2018

ಬೀಳದಿರು ಪಾತಾಳಕೆ!

ಬೀಳದಿರು ಪಾತಾಳಕೆ!
ನಮ್ಕಿಸೆಯ ರುಪಾಯೇ ಬೀಳದಿರು ಪಾತಾಳಕೆ 
ತಳ್ಳದಿರು ನಮ್ಮ ಕಂಡರಿಯದ ತಳಮಳಕೆ 

ಕಳಿಸಿಹೆವು ನಮ್ಮೊಲುಮೆಯ ಕುಡಿಯ 
                                ವಿದೇಶದ  ವ್ಯಾಸಂಗಕೆ 
ಕಂಡಿಹೆವು ಕನಸ ತಲೆಮೇಲ ಸೂರೊಂದಕೆ 
ಕಮರಿಹುದಾಸೆಗಳು ಬರಿಸಲಾರದೆ ಹೊರೆಯ 
ಬೆಲೆಗಳೇರಿರೆ ಎತ್ತರದ ಹೊಸಗಗನಕೆ 

ಬಿದ್ದರೇನು ಕುಂದಿಲ್ಲ, ನೀನಿನ್ನೂ ಸೋತಿಲ್ಲ 
 ನಿನ್ನಲಿಹುದು ಪುಟಿದೇಳುವ ಯುಕ್ತಿ  
ದೊರೆಕಿಸು ನಮಗೆಲ್ಲ ಬೆಲೆಗಳಿಂದ ಮುಕ್ತಿ 
ನಿನ್ನ ಹಿಂದಿಹುದು ನವ ಭಾರತದ ಶಕ್ತಿ 

ರಚನೆ: ಲಕ್ಷ್ಮೀನಾರಾಯಣ ಕೆ. 
(ಮೇಲಿನ ಚಿತ್ರದ ಮೂಲಗಳಿಗೆ ಧನ್ಯವಾದಗಳು)

Wednesday 5 September 2018

25th Teachers Day

At the outset I wish all our teachers a very 'Happy Teachers Day'. It is said that 


a good teacher explains, 
a superior teacher demonstrates and 
a great teacher inspires!  

I salute all my teachers who have inspired me in my life.

With all humble feelings I would like to tell you all that this year's Teachers Day marks the completion of 25 years of my career as a trainer and teacher in the banking industry.  It was on 3rd Sep 1993 
that I reported as a faculty for my mother institution i.e. Indian Bank.  My banking faculty journey continued as a freelancer and founder faculty for IFBI_NIIT, Bengaluru.  Presently I am with Manipal Academy of BFSI, Bengaluru. I thank all these great institutions for providing me the opportunity.

I fondly recall my students who were either seasoned banking professionals or budding bankers.  I proudly remember many of my early students who have now become top executives in banks. I 
have experienced greatest moments in my life when my old students have recognized me and spoken to me with a thankful feeling for what little I had taught to them.

During these 25 years I have seen great transformation in the way 

training is imparted to trainees. Black board-Chalk piece classrooms have given way to high tech classrooms and Labs.  Lecturing method has given way to imparting skills through activities and games.  Training has now become customized keeping in mind the needs of modern banks.  Therefore for me my career as a trainer is that of continuous learning and skill up-gradation along with my students!

A teacher's strength lies in his preparation for the day.  I have realized that 'a teacher is as good as his preparation for the day' and one can't sit on past laurels!  

I also fondly remember all my faculty colleagues who have guided me through this long journey.  I remember Mr. Jayashankar of Indian Bank who guided me during my early days.  I also remember  
Dr. Amaranath of Indian Bank (down left) whom I would like to respect as the 'Guru of Gurus'.  Through my good friend Mr. Nagesha K.S. (down right) I learnt what is sincerity in training and how to do multi-tasking.  Top above is Mr. Keshava Murthy who is presently my colleague.  He is a power house of knowledge.  He has taught me the essence of sense of humour.  He has also initiated me to the world of blog-writing and he himself is a great writer.
I also remember with respect Mr. Rahul Aradhya (centre above) who was once my Assistant Faculty and presently my Boss!  Under his leadership I have designed and introduced new activities like 'field visits, out-door classes and blind-fold activity' to impart selling skills to students.

My organization has also given me opportunity to introduce inter-vertical activities setting competition among future bankers and insurance professionals (BFSI students).  During 4th Dec 2014, I designed and introduced the contest named 'GAMES TRAINERS PLAY' which was a contest for teams consisting of faculty members and students. I may not be wrong if I say it was first of its kind in the entire banking industry.

A couple of years ago when I was watching the popular TV show 'Bigg Boss', the creative child in me thought of adopting it as a 
contest among teams of our BFSI students. With the support of my present Boss Mr. Balasubramaniam, colleagues and my students I could conduct this contest under the name 'Big B.O.S.S.' (where B.O.S.S. stands for BFSI Officer's Skill Set)
on 24th August 2018.  It was 'reality show' wherein our 9 participating teams were exposed to 4 different live situations by the Big B.O.S.S. of the event (see pic above).
The four events were the 'Kitchen event, Field event, Sales event and the event of creating their own BFSI company'. Students participation was much beyond our expectations. Especially in
the Sales event our contesting teams sold physical and service goods and earned a profit of Rs.8,547 within a short period of 90 minutes.  
As declared earlier the entire profits were sent towards Kerala Flood Relief Fund. Speaking out of my experience in the banking 
industry as a faculty, once again I can say that such a reality show as a contest may be first of its kind in the entire BFSI industry.  I am thankful to my colleagues, students and my organization who have made it possible through my humble services.

Last but not the least I proudly would like to record that I am from a family of teachers.  My grand father was a teacher.  My three 
sisters and one brother (Mr. Ramesha K, first left in Pic,  Inspiring Sports Teacher) are teachers.  Two days ago my son      Dr. Subhash has joined as an Assistant Professor in the reputed Warwickshire University, Birmingham, UK.  Therefore it is a rare occasion wherein both father and his son are serving as teachers at one time!
                                  
Long live the fraternity of teachers
-0-0-0-0-0-0-0-

Saturday 1 September 2018

ದುಬಾರಿ ಡಾಲರ್

ಅಮೆರಿಕದ ಡಾಲರೇ ಶರಣು, ಸಮನಾರು ನಿನಗೆಂಬೆನು?
ಕಿಸೆಯಲಿ ರೂಪಾಯಿ ಮಾತ್ರವುಳ್ಳ ಬಲಹೀನ ನಾನು 

ಕಚ್ಚಾತೈಲ ಖರೀದಿಸಲು ನೀನೇ ಬೇಕಂತೆ 
ಅದರ ಬೆಲೆಯೇರುತಿರೆ ನಿನ್ನ ಹಿಡಿವರಾರಂತೆ?
ನಿನ್ನ ಗಳಿಸಲು ರಪ್ತು ಹೆಚ್ಚು ಮಾಡಬೇಕಂತೆ 
ಏರುತಿರೆ ಆಮದು ನೀ ಮುನಿದು ಓಡುವೆಯಂತೆ 

ಪಡುತಿರುವರಂತೆ ಎಲ್ಲ ನಿನ್ನ ಪಡೆಯುವ ಕಾತರ 
ಅದೇ ವಿಶ್ವದ ದಿಗ್ಗಜರ ನಡುವಿನ ವ್ಯಾಪಾರ ಸಮರ 
ಸುಂಕ -ಮರುಸುಂಕಗಳ ಸರಣಿಯ ಥರಥರ 
ಅದಕೆ ಏರಿದೆಯಂತೆ ನಿನ್ನ ಬೆಲೆಯೂ ಸರಸರ 

ಏನೆಂದು ಬಣ್ಣಿಸಲಿ ನಿನ್ನ ಅಟ್ಟಹಾಸ 
ಏರಿಸಿರುವೆ ಬೆಲೆಗಳ ಬರೆದು ಹೊಸ ಇತಿಹಾಸ 
ನನಸುಗೊಳಿಸಬಹುದೇ ನಮ್ಮ ಮನೆ-ಮದುವೆಗಳ ಕನಸ?
ಬದುಕನೇ  ಮಾಡಿರುವೆ ನಮ್ಮ ಪಾಲಿಗೊಂದು ದುಃಸ್ಸಾಹಸ
-0-0-0-0-0-0-

(ಮೇಲೆ ಉಪಯೋಗಿಸಿರುವ ಚಿತ್ರದ ಹಕ್ಕುಸ್ವಾಮ್ಯ ನನಗಿಲ್ಲ. ಅದರ ಮೂಲಕ್ಕೆ ನನ್ನ ಧನ್ಯವಾದಗಳು.
I don't have copyrights on the picture used above.  Thanks to the source.)

ಟ್ರ೦ಪನ ರ೦ಪ


ವಿಶ್ವದ ದೊಡ್ಡಣ್ಣ, ಅವನೇ ಟ್ರ೦ಪಣ್ಣ 
'ನಮದೇ ಕೊಳ್ಳಿ, ನಮ್ಮವರನೇ  ನೇಮಿಸಿಕೊಳ್ಳಿ'
ಎಂಬುದೆ ಅವನ ಅಂಬೋಣ 
ಅದ ಕಂಡು ನಡುನಡುಗಿ ಜಗತ್ತೇ ತಲ್ಲಣ 

ಕಾರಬಾರು ನಡೆಸಿದೆಯಂತೆ ಅಮೆರಿಕಾ ತುಂಬಾ ಚೀನಾ 
ಗಳಿಸಿದೆಯಂತೆ ಡಾಲರುಗಳ ಝಣಝಣ, ಜೊತೆಗೆ ಉನ್ನತ ತಂತ್ರಜ್ಞಾನ 
ಅದ ಕಂಡು ಕೆಂಪಾಗಿದ್ದಾನಂತೆ ಮುನಿದು ಟ್ರ೦ಪಣ್ಣ 
ಯೋಜಿಸಿದ್ದಾನಂತೆ ಹಾಕಲದಕೊಂದು  ಕಡಿವಾಣ 

ಚೀನೀ ಸರಕು ತಲುಪಲೀಗ ಅಮೆರಿಕಾ 
ತೆರಬೇಕಂತೆ ಭಾರೀ ಸುಂಕ 
ವಿಧಿಸಿದೆಯೆಂತೆ ಚೀನವು ದುಬಾರಿ ಮರುಸುಂಕ 
ಹೇಗಿದೆ ನೋಡಿ, ಟ್ರ೦ಪನ ರಂಪ, ಚೀನಾದ ಬಿಂಕ 

ಅಪ್ಪ-ಅಮ್ಮನ ಜಗಳದಲಿ ಬಡವಾಯ್ತ೦ತೆ ಕೂಸು 
ಬೇರೆಲ್ಲ ದೇಶಗಳ ನಡುವೀಗ ಸಂಕಟದ ಗುಸುಗುಸು 
ನಮ್ಮನ್ನೂ ಬಿಟ್ಟಿಲ್ಲ ಇದರ ಇರಿಸು-ಮುರಿಸು 
ಸಾಗಬೇಕಿದೆ ನಡುವೆ ನಮ್ಮ ವಿಕಾಸದ ಕನಸು 

ವಿಶ್ವವೊಂದೀಗ ಪುಟ್ಟಗ್ರಾಮ 
ಬಾರದು ಬಾರದೀಗ ವ್ಯಾಪಾರ ಸಂಗ್ರಾಮ 
ಬೇಡೀಗ ದೊಡ್ಡಣ್ಣ ವಲಸಿಗರ ಹೊರಗಟ್ಟುವ ಕರ್ಮ 
ಬೇಗ ಸದ್ಬುದ್ಧಿಯ ದಯಪಾಲಿಸೋ ಎಲ್ಲರಿಗು ರಾಮರಾಮ
-0-0-0-0-0-0-

(ಮೇಲೆ ಉಪಯೋಗಿಸಿರುವ ಚಿತ್ರದ ಹಕ್ಕುಸ್ವಾಮ್ಯ ನನಗಿಲ್ಲ. ಅದರ ಮೂಲಕ್ಕೆ ನನ್ನ ಧನ್ಯವಾದಗಳು.
I don't have copyrights on the picture used above.  Thanks to the source.)