Tuesday 30 March 2021

ಉದ್ಯೋಗಗಳ ಮರುಸೃಷ್ಟಿ

೯  

ಉದ್ಯೋಗಗಳ ಮರುಸೃಷ್ಟಿ



ಯುವಕನಾದ ಶಶಿಕಾಂತ್ ಒಬ್ಬ ವಿಭಿನ್ನ ಉದ್ದಿಮೆದಾರನಾಗಿದ್ದನು. ೧೦ ವರ್ಷಗಳ ಹಿಂದೆ ಅವನು 'ಎಂಬಿಬಿಎಸ್ಸ್' ಪದವಿ ಗಳಿಸಿ ವೈದ್ಯನಾದರೂ, ಉತ್ತಮ ಉದ್ಯೋಗವನ್ನು ಗಳಿಸಲು ಆ ಪದವಿ ಸಾಕಾಗದಾಗಿತ್ತು. ಸ್ನಾತಕೋತ್ತರ ಕೋರ್ಸಗಳ ಪ್ರವೇಶ ಪಡೆಯಲು ಅವನು ಆ ದಿನಗಳಲ್ಲಿ  ನಡೆಸಿದ ಹಲವು ಪ್ರಯತ್ನಗಳು ಸತತ ವಿಫಲವನ್ನು ಕಂಡಿದ್ದವು. ಅಂತಹ ಕೋರ್ಸಗಳ ಸೀಟೊಂದನ್ನು ಭಾರಿ ಮೊತ್ತದ ದೇಣಿಗೆ ತೆತ್ತು 'ಖರೀದಿಸುವಷ್ಟು ಹಣ' ಅವರಪ್ಪನ ಬಳಿ ಇತ್ತಿಲ್ಲ. 

ತನ್ನ 'ವೈದ್ಯಕೀಯ ಪದವಿಪೂರ್ವ ಸೇವಾ ಅವಧಿ (internship)'ಯನ್ನು ಪೂರೈಸಲು  ಸರಕಾರಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ, ಅದೇ ಆಸ್ಪತ್ರೆಯಲ್ಲಿ ನರ್ಸಾಗಿ ಸೇವೆ ಸಲ್ಲಿಸುತ್ತಿದ್ದ ಸುಹಾಸಿನಿ ಎಂಬ ಯುವತಿಯ ಪ್ರೇಮಪಾಶಕ್ಕೆ ಶಶಿಕಾಂತ್ ಬಿದ್ದಿದ್ದನು. ಅವರ ಪ್ರೇಮಾಯಣ ಸುಮಾರು ಎರಡು ವರ್ಷಗಳವರೆಗೂ ಸಾಗಿತ್ತು. ನಿರೋದ್ಯೋಗಿಯಾಗಿದ್ದರೂ, ಎರಡೂ ಕಡೆಯ ಪೋಷಕರ ಒತ್ತಾಯದ ಮೇರೆಗೆ ಶಶಿಕಾಂತ್, ಸುಹಾಸಿನಿಯನ್ನು ಮದುವೆಯಾಗಿದ್ದನು. ಮದುವೆಯನಂತರ ಶಶಿಯ ಮೇಲೆ ಸಂಪಾದಿಸಲೇ ಬೇಕಾದ ಒತ್ತಡ ಹೆಚ್ಚಿತ್ತು. ಪತಿಗಿಂತಲೂ ಹೆಚ್ಚು ಉತ್ಸಾಹಿಯೂ, ಉದ್ಯಮಶೀಲೆಯೂ ಆದ ಸುಹಾಸಿನಿ, ಶಶಿಗೆ ಮಾರ್ಗದರ್ಶಕಿಯಾಗಿಬಿಟ್ಟಿದ್ದಳು. ಆಸ್ಪತ್ರೆಗಳ ವಿವಿಧ ಉಪಕರಣಗಳಿಗೆ ನಗರದ ಆಸ್ಪತ್ರೆಗಳಿಲ್ಲಿ ಭಾರಿ ಬೇಡಿಕೆಯಿದೆಯೆಂಬುದನ್ನು ಮನಗಂಡಿದ್ದ ಸುಹಾಸಿನಿ, ತನ್ನ ಪತಿಗೆ ಆ ರೀತಿಯ ಉಪಕರಣಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದನ್ನು ಆರಂಭಿಸುವ ಸಲಹೆಯನ್ನು ನೀಡಿದ್ದಳು. ಈ ವಿಷಯದಲ್ಲಿ ಮಾಜಿ ಬ್ಯಾಂಕರ್ ಕೂಡ ಆಗಿದ್ದ ಸುಹಾಸಿನಿಯ ತಂದೆ ಶಂಕರ್ ಸಿಂಗ್ ರವರ ಸಮ್ಮತಿಯೂ ಇತ್ತು. ಹತ್ತು ವರ್ಷಗಳ ಸುಲಭ ಬಾಡಿಗೆ (ಲೀಸ್) ಆಧಾರದ ಮೇಲೆ, ೩೦ ಕಿಲೋವಾಟ್ ಉಚಿತ ವಿದ್ಯುತ್ ಸಂಪರ್ಕದೊಂದಿಗೆ ೩೦೦೦ ಚ.ಮೀ.ನಷ್ಟು ವಿಸ್ತಾರವಿದ್ದ ಕೈಗಾರಿಕಾ ಮಳಿಗೆಯೊಂದು ಸರಕಾರದ ಕಡೆಯಿಂದ ಲಭಿಸಿದಾಗಿನಿಂದ, ಶಶಿಯ ಯೋಜನೆ ಚುರುಕುಗೊಂಡಿತ್ತು. 'ಶಶಿ ಹಾಸ್ಪಿಟಲ್ ಎಕ್ವಿಪ್ಮೆಂಟ್ಸ್' ಎಂಬ ಹೆಸರಿನ ತನ್ನ ಹೊಸ ಉದ್ದಿಮೆಯನ್ನು ಶಶಿ, 'ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್  (Micro, Small and Medium Enterprises - MSME)'* ಎಂಬ ಕೇಂದ್ರ ಸರಕಾರದ ಯೋಜನೆಯಡಿ ದಾಖಲಿಸಿದ್ದನು. ಆ ಕೇಂದ್ರ ಸರಕಾರದ ಯೋಜನೆಯಡಿ 'ಉತ್ಪಾದಕ, ಸೇವಾ ಹಾಗೂ ವ್ಯಾಪಾರದ (Manufacturing, servicing and trading units)' ಘಟಕಗಳಿಗೂ ಮಾನ್ಯತೆ ಇದ್ದು, ಶಶಿಯ ಉದ್ದಿಮೆಯನ್ನು ಉತ್ಪಾದಕ ಘಟಕವೆಂದು ಪರಿಗಣಿಸಲಾಗಿತ್ತು.

ಇತ್ತೀಚೆಗೆ, ಕೋವಿಡ್ ದಾಳಿಯಿಂದಾದ ಉದ್ಯೋಗ ನಷ್ಟವನ್ನು ಮರುಸೃಷ್ಟಿಸಲು ಕೇಂದ್ರ ಸರಕಾರ ಘೋಷಿಸಿದ 'ಕೋವಿಡ್ ಆರ್ಥಿಕ ಪರಿಹಾರ(Covid package)ದ ಯೋಜನೆಯಡಿ  ಎಂ.ಎಸ್.ಎಂ.ಇ. ಯೋಜನೆಯ ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)ಗಳ ವಿಸ್ತಾರವನ್ನು ಹೆಚ್ಚಿಸಲಾಗಿತ್ತು. ಹೆಚ್ಚು ಘಟಕಗಳನ್ನು ಎಂ.ಎಸ್.ಎಂ. ಇ. ಯೋಜನೆಯಡಿ ಸೇರಿಸುವುದೇ ಆ ಕ್ರಮದ ಆಶಯವಾಗಿತ್ತು. 

ಉದ್ದಿಮೆಗೆ ಬೇಕಾದ ೨.೨ ಕೋಟಿಯಷ್ಟರ ಬ್ಯಾಂಕ್ ಸಾಲ, ಆ ದಿನಗಳಲ್ಲಿ ಭಾರಿ ಮೊತ್ತವಾಗಿದ್ದರೂ, ಶಶಿಗೆ ಅದು ದೊರಕುವುದರಲ್ಲಿ ಕಷ್ಟವೇನಾಗಲಿಲ್ಲ.  ಶಶಿಯ ಬ್ಯಾಂಕ್ ಸಾಲಕ್ಕೆ ಜಾಮೀನುದಾರರಾಗಿ ಸಹಿಮಾಡಿದ ಅವರ ಮಾವನವರಾದ ಶಂಕರ್ ಸಿಂಗ್ ರವರು, ಸುಮಾರು ಒಂದು ಕೋಟಿಯಷ್ಟು ಬೆಲೆಬಾಳುವ ತಮ್ಮ ವಾಸದ ಮನೆಯನ್ನೂ ಬ್ಯಾಂಕಿಗೆ ಅಡಮಾನ (mortgage) ಮಾಡಿಕೊಟ್ಟಿದ್ದರು. 

ಈ ಎಲ್ಲಾ ಬೆಳವಣಿಗೆಗಳು ಸುಮಾರು ಎಂಟು ವರ್ಷಗಳ ಹಿಂದೆ ನಡೆದಿದ್ದವು. ಆ ದಿನಗಳಲ್ಲಿ ಶಶಿಯ ಉತ್ಪನ್ನಗಳಾದ ಆಸ್ಪತ್ರೆಯ ಉಪಕರಣಗಳಿಗೆ ಸಾಕಷ್ಟು ಬೇಡಿಕೆಯಿತ್ತು. ಕುಶಲೆಯಾದ ಪತ್ನಿ ಸುಹಾಸಿನಿಯ ಆಸ್ಪತ್ರೆಯ ಸಂಪರ್ಕಗಳೂ ಶಶಿಗೆ ಸಹಾಯಕವಾಗಿತ್ತು. ಶಶಿಯ ಉದ್ದಿಮೆ ಬೇಗನೆ ಪ್ರಗತಿಯನ್ನು ಕಂಡಿತ್ತು. ಸುಮಾರು ೨೦ ಖಾಯಂ ಕೆಲಸಗಾರರನ್ನು ಮತ್ತು ೧೦ ದಿನಗೂಲಿಯ ಕೆಲಸಗಾರರನ್ನೂ ನೇಮಿಸಿಕೊಂಡಿದ್ದ ಶಶಿಯ ಉದ್ದಿಮೆ, ಕೇವಲ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಕೋಟಿಗೂ ಮೀರಿದ ವಾರ್ಷಿಕ ವ್ಯವಹಾರವನ್ನು ಕಂಡಿತ್ತು. ಹೊರಗಿನ ಸಣ್ಣ ಊರುಗಳಿಗೂ ತನ್ನ ಉತ್ಪಾದನೆಗಳ ಮಾರಾಟವನ್ನು ಶಶಿ ವಿಸ್ತರಿಸಿದ್ದು, ಅವನ ಉದ್ದಿಮೆಯ ಲಾಭಾಂಶ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಏರುತ್ತಲೇ ಸಾಗಿತ್ತು. 

ನಾಲ್ಕು ವರ್ಷಗಳನಂತರ ಶಶಿಯನ್ನು ಸಣ್ಣದಾಗಿ ಸಮಸ್ಯೆಗಳು ಕಾಡಹತ್ತಿದ್ದವು. ಶಶಿಯ ಉತ್ಪನ್ನಗಳನ್ನೇ ತಯಾರಿಸುವ ಹೆಚ್ಚು ಘಟಕಗಳು ನಗರದಲ್ಲಿ ತಲೆಯೆತ್ತಿದ್ದವು. ಮಾರಾಟದ ಬೆಲೆ ಗಳಲ್ಲಿ ಸ್ಪರ್ಧೆ ಹೆಚ್ಚಾಗಿ, ಶಶಿಯ ಗಳಿಕೆ ಕುಸಿತವನ್ನು ಕಂಡಿತ್ತು. ಖಾಸಗಿ ಆಸ್ಪತ್ರೆಗಳು 'ಕಮ್ಮಿ ಬೆಲೆಯಲ್ಲಿ ಅತ್ತ್ಯತ್ತಮ ಉಪಕರಣಗಳನ್ನು ನೀಡಿ' ಎಂದು ಶಶಿಯ ಮೇಲೆ ಒತ್ತಡವನ್ನು ಹೇರಲಾರಂಭಿಸಿದ್ದರು.  ಎರಡು ವರುಷಗಳ ಹಿಂದೆ, ಗುಣಮಟ್ಟ ಸಾಲದೆಂಬ ಕಾರಣವನ್ನು ನೀಡಿ, ಶಶಿಯು ಮಾರಾಟ ಮಾಡಿದ್ದ ಭಾರಿ ಸರಕುಗಳ ಪ್ಯಾಕೊಂದನ್ನು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದು  ಹಿಂತಿರುಗಿಸಿದಾಗಿನಿಂದ, ಅವನ ತೊಂದರೆಗಳ ಸರಮಾಲೆ ಶುರುವಾಗಿತ್ತು. ಮಾರಾಟದ ಮೊತ್ತ ಕಮ್ಮಿಯಾಗುತ್ತಾ ಸಾಗಿತ್ತು. ಸಣ್ಣ ಸಣ್ಣ ಆಸ್ಪತ್ರೆಗಳು ಶಶಿಗೆ ಹಣ ಪಾವತಿಸುವಲ್ಲಿ ವಿಳಂಬ ಮಾಡತೊಡಗಿದ್ದವು. ಮಾರಾಟಗಳು ನಿಲ್ಲದಂತೆ ಮುಂದುವರೆಸಲು, ಸಾಲದ ಮೇಲೆ ಸರಕುಗಳನ್ನು ಕಳುಹಿಸುವುದೊಂದೇ ಮಾರ್ಗವಾಗಿತ್ತು. ಹಣದ ಒಳ ಹರಿವು ನಿಂತ್ತಿದ್ದರಿಂದ, ಶಶಿ ತನ್ನ ಕೆಲಸಗಾರರಿಗೆ ಸಂಬಳಗಳನ್ನು ಕೊಡುವುದು ಕಷ್ಟವಾಗಿ ಹೋಗಿತ್ತು. ಕೇವಲ ೨೦,೦೦೦ ರುಪಾಯಿಗಳಷ್ಟಿದ್ದ ಅವನ ಕೈಗಾರಿಕಾ ಮಳಿಗೆಯ ತಿಂಗಳ ಬಾಡಿಗೆ, ಒಮ್ಮಲೇ ಶಶಿಗೆ ಭಾರಿಯಾಗಿ ಕಾಣಿಸಹತ್ತಿತ್ತು. ನಗರದ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದ ಅವರ ಇಬ್ಬರು ಮುದ್ದು ಪುತ್ರಿಯರ ಶಾಲಾ ಶುಲ್ಕವನ್ನು ಕಟ್ಟಲಾಗ ದಾದಾಗ, ಶಶಿ-ಸುಹಾಸಿನಿಯರ ಆರ್ಥಿಕ ಮುಗ್ಗಟ್ಟಿನ ಬಿಸಿ ನೆತ್ತಿಗೇರಿತ್ತು. ವಿವಿಧ ಸಾಲಗಳ ಕಂತುಗಳ ಭಾರಿ ಬಾಕಿಯನ್ನು ಕಟ್ಟುವಂತೆ ಬ್ಯಾಂಕ್ ಮ್ಯಾನೇಜರ್ ರವರಿಂದ ಮೇಲಿಂದ ಮೇಲೆ ಒತ್ತಡ ಬರುತ್ತಿತ್ತು. ಹಲವರಿಗೆ ನೀಡಬೇಕಾದ ಹಣ ಪಾವತಿಗಾಗಿ ಶಶಿ, ಖಾಸಿಗಿಯವರಿಂದ ೩೦ ಲಕ್ಷ ರೂಪಾಯಿಗಳಷ್ಟು, ಭಾರಿ ಬಡ್ಡಿಯ ಕೈಸಾಲವನ್ನು ಮಾಡಬೇಕಾಗಿ ಬಂದಿತ್ತು. ೨೦೨೦ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ, ಬ್ಯಾಂಕ್ ಮ್ಯಾನೇಜರ್ ಶಶಿಯೊಂದಿಗೆ ಮಾತನಾಡಿ, ಅವನ ವಿವಿಧ ಸಾಲಗಳಲ್ಲಿ ಕಟ್ಟಬೇಕಾದ ಮೊತ್ತಗಳೇರುತ್ತಿದ್ದು, ಅವನ ಖಾತೆಯನ್ನು 'ಎನ್.ಪಿ.ಎ. (N.P.A.-ನಿರುತ್ಪಾದಕ ಆಸ್ತಿ)' ಎಂದು ಪರಿಗಣಿಸಬೇಕಾಗಬಹುದು ಎಂದು ಎಚ್ಚರಿಸಿದ್ದರು. 

ದೇಶಾದ್ಯಂತ ಕೋವಿಡ್ ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನ್, ಶಶಿ ದಂಪತಿಯ ಉದ್ದಿಮೆಗೆ ಭಾರಿ ಆಘಾತವನ್ನೇ ತಂದಿತ್ತು. ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತಾದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಶಶಿಯ ಉತ್ಪಾದನೆಗಳಿಗೆ ಬೇಡಿಕೆಯೇ ಇಲ್ಲದಂತಾಗಿತ್ತು. ವೆಚ್ಚಗಳನ್ನು ಕಮ್ಮಿ ಮಾಡುವ ಸಲುವಾಗಿ ಶಶಿ ತನ್ನ ಹತ್ತು ದಿನಗೂಲಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದನು. ಲಾಕ್ಡೌನಿನಂತರದ ಆರು ವಾರಗಳು ಕಳೆದ ಮೇಲಂತೂ, ಕಾರ್ಖಾನೆಯ ಕೆಲಸಗಳು ನಿಂತು, ಹಣದ ಕೊರತೆ ತೀವ್ರವಾಗಿ, ೧೪ ಖಾಯಂ ನೌಕರರನ್ನೂ ಶಶಿ ತೆಗೆಯಬೇಕಾಗಿ ಬಂದಿತ್ತು.  ಇನ್ನುಳಿದ ಆರು ನೌಕರರುಗಳು ವಿಶೇಷ ಕೌಶಲ್ಯವುಳ್ಳವರಾಗಿದ್ದು ಅವರುಗಳು ಕೆಲಸವಿಲ್ಲದೇ ಕುಳಿತಿದ್ದರೂ, ಅವರುಗಳನ್ನು ಕೆಲಸದಿಂದ ತೆಗೆಯುವುದು ಕಷ್ಟಸಾಧ್ಯವಾಗಿತ್ತು. ಅಂತಹ ಕೌಶಲ್ಯವುಳ್ಳ ಕೆಲಸಗಾರರನ್ನು ಮತ್ತೆ ಪಡೆಯುವುದು ಅಷ್ಟು ಸುಲಭವಿರಲಿಲ್ಲ. ಬಹಳ ಪ್ರಯಾಸದಿಂದ ಆ ಆರು ನೌಕರರುಗಳನ್ನು ಅರ್ಧ ಸಂಬಳ ಮಾತ್ರ ನೀಡಿ ಶಶಿ ಉಳಿಸಿಕೊಂಡಿದ್ದನು. ತನ್ನ ಉದ್ದಿಮೆಯ ಕೆಲಸದಿಂದ ತೆಗೆಯಲ್ಪಟ್ಟ ೨೪ ನೌಕರರು ಎಲ್ಲಿ ಹೋದರು? ಏನು ಮಾಡುತ್ತಿದ್ದಾರೆ? ಎಂಬ ವಿಷಯದ ಬಗ್ಗೆ ಶಶಿಗೆ ಯಾವ ಆಸಕ್ತಿಯೂ ಉಳಿದಿತ್ತಿಲ್ಲ. ಗಂಡ, ಹೆಂಡತಿ ಇಬ್ಬರಿಗೂ ಮಂಕು ಕವಿದುಬಿಟ್ಟಿತ್ತು. 

ಪಕ್ಕದ ರಾಜ್ಯದ ಮುಖ್ಯಮಂತ್ರಿಗಳು, ಸಮಾರಂಭವೊಂದರಲ್ಲಿ, ತನ್ನ ಕಾಲೇಜು ದಿನಗಳ ಗೆಳತಿ ಉಷ ಮತ್ತವಳ ಗಂಡ ಮನೋಜರಿಗೆ ಸನ್ಮಾನ ಮಾಡುತ್ತಿರುವ ಚಿತ್ರವನ್ನು, ದಿನ ಪತ್ರಿಕೆಯೊಂದರಲ್ಲಿ ನೋಡಿದ ಸುಹಾಸಿನಿ ಆಶ್ಚರ್ಯಚಕಿತಳಾಗಿದ್ದಳು. ಆ ಸನ್ಮಾನದ ಚಿತ್ರವನ್ನು ಸುಹಾಸಿನಿ ತನ್ನ ಗಂಡನ ಗಮನಕ್ಕೂ ತಂದಿದ್ದಳು. ಶಶಿಯಂತೆ, ಮನೋಜ್ ಕೂಡ ನೆರೆಯ ನಗರವೊಂದರಲ್ಲಿ ಆಸ್ಪತ್ರೆ ಉಪಕರಣಗಳನ್ನು ತಯಾರಿಸುವ ಘಟಕವೊಂದನ್ನು ನಡೆಸುತ್ತಿದ್ದನು. ಮನೋಜನ ಘಟಕ ದೊಡ್ಡದಾಗಿದ್ದು, ಅವನ ಆರ್ಥಿಕ ಅನುಕೂಲ ಉತ್ತಮವಾಗಿತ್ತು. ದಿನ ಪತ್ರಿಕೆಯ ವರದಿಯ ಪ್ರಕಾರ, ಮನೋಜ್ ತನ್ನ ಘಟಕದಲ್ಲಿ ಉತ್ತಮ ಗುಣಮಟ್ಟದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು   ಹೊಸದಾಗಿ ಆರಂಭಿಸಿದ್ದು, ಅದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಆ ರೀತಿಯ ತೊಡುಗೆಗಳಿಗೆ ರಫ್ತಿನ ಬೇಡಿಕೆ ಹೆಚ್ಚಿದ್ದರೂ, ಸ್ಥಳೀಯ ಆಸ್ಪತ್ರೆಗಳಿಗೆ ಅವುಗಳ ಪೂರೈಕೆಯನ್ನು ಮಾಡುತ್ತಿದ್ದ ಮನೋಜನ ಸೇವೆಯನ್ನು ಅಲ್ಲಿನ ರಾಜ್ಯ ಸರಕಾರ ಗಮನಿಸಿತ್ತು. ಆ ವಿನೂತನ ಸಾಧನೆಗಾಗೇ ನಡೆದಿತ್ತು ಅಂದಿನ ಸನ್ಮಾನ ಸಮಾರಂಭ. 

ತಮ್ಮ ಉದ್ದಿಮೆಯ ಸಮಸ್ಯೆಗಳಿಗೆ, ಉಷಾ ಮತ್ತು ಮನೋಜ್ರವರನ್ನು ಭೇಟಿ ಮಾಡುವುದರಿಂದ, ಏನಾದರೂ ಪರಿಹಾರ ಸಿಗಬಹುದೆಂಬ ಸಲಹೆಯನ್ನು ಸುಹಾಸಿನಿ ತನ್ನ ಗಂಡನಿಗೆ ಅಂದೇ ನೀಡಿದ್ದಳು. ಕೋವಿಡ್ ಹರಡುವಿಕೆ ಎರಡೂ ರಾಜ್ಯಗಳಲ್ಲಿ ತೀವ್ರವಾಗಿದ್ದುದರಿಂದ, ಮನೋಜನ ಊರಿಗೆ ಪ್ರಯಾಣಿಸುವುದು ಬೇಡ ಎಂಬುದು ಶಶಿಯ ಅಭಿಪ್ರಾಯವಾಗಿತ್ತು. ಕೋವಿಡ್ನ ಆತಂಕದಿಂದಾಗಿ  ಉಷಾ-ಮನೋಜರು ಕೂಡ, ನೆರೆ ರಾಜ್ಯದಿಂದ ಬಂದವರನ್ನು ಭೇಟಿಮಾಡಲು ಇಷ್ಟಪಡರು ಎಂಬ ವಿಚಾರವೂ, ಶಶಿ-ಸುಹಾಸಿನಿಯರ ಅನಿಸಿಕೆಯಾಗಿತ್ತು. 

ಶಶಿ-ಸುಹಾಸಿನಿಯರು ಮನೋಜನನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಕೂಡಲೇ, ಮನೋಜ್ ವಿಡಿಯೋ ಮಾತುಕತೆಗೆ ಸಮ್ಮತಿಸಿದ್ದನು. ಉಷಾ ಹಾಗೂ ಮನೋಜರ ಈ ಔದಾರ್ಯ, ಶಶಿ-ಸುಹಾಸಿನಿಯರಿಗೆ ಸಂತಸವನ್ನು ತಂದಿತ್ತು. ತನ್ನ ಫ್ಯಾಕ್ಟರಿಯ ಎಲ್ಲಾ ವಿಭಾಗಗಳ ವಿಡಿಯೋ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿರಿಸಿದ್ದ ಉಷಾ, ತನ್ನ ಗೆಳತಿ ಸುಹಾಸಿನಿಗೆ ಅದರ ವಿವರಗಳನ್ನು ವಿಸ್ತಾರವಾಗೇ ವಿವರಿಸಿದ್ದಳು. ಮನೋಜನ ಫ್ಯಾಕ್ಟರಿ ದೊಡ್ಡದಾಗಿದ್ದು, ಅದರಲ್ಲಿ ಸುಮಾರು ೨೦೦ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಅವರ ಫ್ಯಾಕ್ಟರಿಯಲ್ಲಿ ಚುರುಕಿನಿಂದ ನಡೆಯುತ್ತಿದ್ದ ಉತ್ಪಾದನಾ ಕಾರ್ಯವನ್ನು ನೋಡಿ ಶಶಿ ದಂಗು ಬಡಿದಂಥವನಾಗಿದ್ದು ಸುಳ್ಳಲ್ಲ. 

'ನೀನೇಕಿಷ್ಟು ಮಂಕಾಗಿಬಿಟ್ಟಿದ್ದೀಯ?' ಉಷಾ ತನ್ನ ಗೆಳತಿ ಸುಹಾಸಿನಿಯನ್ನು ಪ್ರಶ್ನಿಸಿದ್ದಳು. 

'ನಿನಗೆ ನಮ್ಮ ಉದ್ದಿಮೆಯ ಬಗ್ಗೆ ತಿಳಿದಿರಬಹುದು. ನಮ್ಮ ಫ್ಯಾಕ್ಟರಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಳೆದೆರಡು ವಷಗಳಿಂದ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಕೋವಿಡ್ ಲಾಕ್ಡೌನ್ ನಮ್ಮನ್ನು ನೆಲಕಪ್ಪಳಿಸಿ ತುಳಿದಿದೆ. ನಮ್ಮ ಫ್ಯಾಕ್ಟರಿಯಲ್ಲೀಗ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ' ಎಂದುತ್ತರಿಸುವಾಗ ಸುಹಾಸಿನಿಯ ಮುಖದಲ್ಲಿ ಸಂಕೋಚವಿತ್ತು. 

'ನಿಮ್ಮ ಮಾರ್ಗದರ್ಶನವನ್ನು ಕೋರಿ ನಿಮ್ಮನ್ನು ಸಂಪರ್ಕಿಸಿದ್ದೇವೆ. ನಮ್ಮ ಉದ್ದಿಮೆಯನ್ನು ಪುನರುಜ್ಜೀವನಗೊಳಿಸುವ ಬಗೆ ಹೇಗೆ?' ಎಂದು ಶಶಿ, ಮನೋಜನನ್ನು ಪ್ರಶ್ನಿಸಿದ್ದನು. 

ಮನೋಜ್ ಮಾತನಾಡುತ್ತ, 'ತಾವಿಬ್ಬರೂ ಸರಿಯಾದ ಸಮಯದಲ್ಲಿ ನಮ್ಮನು ಸಂಪರ್ಕಿಸಿದ್ದೀರಿ. ತಾವುಗಳು ಹಳೆಯ ಸ್ನೇಹಿತರುಗಳಾದುದರಿಂದ ತಮ್ಮೊಡನೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಆ ವಿಷಯಗಳು ತಮ್ಮಲ್ಲೇ ಗೌಪ್ಯವಾಗಿರಬೇಕು,' ಎಂದಾಗ, ಶಶಿ-ಸುಹಾಸಿನಿಯರಿಬ್ಬರೂ ತಲೆಯಾಡಿಸಿ ಸಮ್ಮತಿಸಿದ್ದರು. 

'ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳ ಪರಿಚಯ ನಮಗೆ ಚೆನ್ನಾಗಿದೆ. ಕೋವಿಡ್ ರೋಗಿಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಬಹುದಾದಂತಹ  "ಉಸಿರಾಟದ ಉಪಕರಣಗಳು ಮತ್ತು ವೆಂಟಿಲೇಟರ್ಗಳ" ಉತ್ಪಾದನೆಯನ್ನು ನಿಮ್ಮ ಫ್ಯಾಕ್ಟರಿಯಲ್ಲಿ ಮಾಡುವ ಪ್ರಯತ್ನವನ್ನೇಕೆ ಮಾಡಬಾರದೆಂದು, ಅವರು ನಮಗೆ ಸಲಹೆ ನೀಡಿದ್ದಾರೆ. ಆ ಎರಡೂ ಉಪಕರಣಗಳು ಜೀವ ರಕ್ಷಕಗಳಾಗಿದ್ದು, ಅವುಗಳಿಗೆ ದೇಶಾದ್ಯಂತ ಅಪಾರ ಬೇಡಿಕೆಯಿದೆ. ಅದರ ಉತ್ಪಾದನಾ ಕಾರ್ಯದಲ್ಲಿ, ವಿದೇಶೀ ಸಂಯೋಗದ ಮೂಲಕ, ನಮ್ಮ ರಾಜ್ಯವು ನಮಗೆ ಮಾರ್ಗದರ್ಶನವನ್ನು ನೀಡುವ ಭರವಸೆ ನೀಡಿದೆ.  ಆದರೂ ಆ ಕಾರ್ಯಕ್ಕೆ ಕೈ ಹಾಕುವುದು ಒಂದು ಸವಾಲೇ ಸರಿ. ನಮ್ಮ ಫ್ಯಾಕ್ಟರಿಯ ಮೇಲೆ ಕೆಲಸದೊತ್ತಡ ಹೆಚ್ಚಿ, ನಮ್ಮ ಎಂದಿನ ಉತ್ಪನ್ನವಾದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಗೆ ತೊಡಕುಂಟಾಗಬಹುದು. ಅಂದಹಾಗೆ ನಮ್ಮ ಪಿ.ಪಿ.ಇ. ತೊಡುಗೆಗಳಿಗೆ ಬೇಡಿಕೆ ಏರುತ್ತಲೇ ಸಾಗಿದ್ದು, ರಫ್ತಿನ ವ್ಯಾಪಾರಕ್ಕೂ ಅಪಾರ ಬೇಡಿಕೆ ಇದೆ. ತಾವುಗಳು ಪಿ.ಪಿ.ಇ. ತೊಡುಗೆಗಳನ್ನು ಉತ್ಪಾದಿಸುವಲ್ಲಿ ನಮ್ಮೊಡನೆ ಸಹಕರಿಸಬಹುದು. ಆ ಉತ್ಪಾದನೆಯನ್ನು ನೀವು ನಮಗಾಗಿ ಮಾಡಿಕೊಟ್ಟರೆ (job work), ಅದು ನಮ್ಮಿಬರಿಗೂ ಲಾಭದಾಯಕವಾಗುತ್ತದೆ. ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು ಮಾಡಲು ಬೇಕಾದ ಕಚ್ಚಾ ವಸ್ತುಗಳನ್ನು ಮತ್ತು ಮಾರ್ಗದರ್ಶನವನ್ನೂ ನಿಮಗೆ ನಾವು ನೀಡಬಲ್ಲೆವು' ಎಂದು ಮನೋಜ್ ವಿವರಿಸಿದಾಗ, ಉಷಾ ತನ್ನ ಗೆಳತಿ ಸುಹಾಸಿನಿಯ ಪ್ರತಿಕ್ರಿಯೆಯನ್ನು ಗಮನಿಸುತ್ತಾ, ಅವಳ  ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಳು. 

ಸುಹಾಸಿನಿಗೀಗ, ಶಶಿಯ ಕಣ್ಣುಗಳಲ್ಲಿ ಹೊಸ ಮಿಂಚೊನ್ದು ಕಂಡುಬಂದಿತ್ತು. 'ತಾವು ನೀಡುತ್ತಿರುವ ಕೆಲಸವನ್ನು ಕೈಗೊಳ್ಳಲು ನನಗೆ ಎಷ್ಟು ಹಣ ಬೇಕಾಗಬಹುದು?' ಶಶಿಯ ಪ್ರಶ್ನೆ ಮನೋಜನ ಕಡೆಗಿತ್ತು. 

'ಹೊಸ ಉತ್ಪಾದನಾ ಯಂತ್ರಗಳನ್ನು ಖರೀದಿಸಲು ಸುಮಾರು ಒಂದು ಕೋಟಿ ರುಪಾಯೀಗಳು ಬೇಕಾಗಬಹುದು. ಕಚ್ಚಾ ಸಾಮಗ್ರಿಗಳನ್ನು ನಾವು ಕಳುಹಿಸಿಕೊಡುತ್ತೇವೆ,' ಮನೋಜನ ಉತ್ತರ ಥಟ್ಟನೆ ಬಂದಿತ್ತು. 

ಒಂದು ಕೋಟಿ ರೂಪಾಯಿಗಳಷ್ಟರ ಭಾರಿ ಮೊತ್ತದ ಮಾತನ್ನು ಕೇಳುತ್ತಲೇ, ಶಶಿಯ ಮನಸ್ಸು ಒಳಗೊಳಗೆ ಕುಸಿದಿದ್ದರೂ, ಮುಖದಲ್ಲಿ ಧೈರ್ಯ ತಂದುಕೊಂಡ ಅವನು, 'ಅಷ್ಟು ಹಣವನ್ನು ನಾನು ಹೊಂದಿಸಬಲ್ಲೆ. ೨-೩ ವಾರಗಳಷ್ಟರ ಸಮಯ ಬೇಕಾಗಬಹುದು,' ಎಂದನು. 

ಉಷಾ-ಮನೋಜರ ಅನುಮತಿಯನ್ನು ಪಡೆದನಂತರ, ಶಶಿ ವಿಡಿಯೋ ಕರೆಯನ್ನು ಅಂತ್ಯಗೊಳಿಸಿದ್ದನು. 

ಮಾರನೆಯ ದಿನವೇ ಶಶಿಕಾಂತ್ ಮತ್ತು ಸುಹಾಸಿನಿಯರು, ಅವರ ಬ್ಯಾಂಕ್ ಮ್ಯಾನೇಜರ್ ಕ್ಯಾಬಿನ್ನಲ್ಲಿ ಉಪಸ್ಥಿತರಿದ್ದರು. 'ನಿಮ್ಮ ವಿವಿಧ ಸಾಲಗಳಲ್ಲಿರುವ ಭಾರಿ ಬಾಕಿಯನ್ನು ಪಾವತಿಸುವ ಯಾವುದಾದರೂ ಪ್ರಸ್ತಾಪವನ್ನು ತಂದಿದ್ದೀರಾ?' ಬ್ಯಾಂಕ್ ಮ್ಯಾನೇಜರ್ ಪ್ರಶ್ನೆ ಶಶಿಯ ಕಣ್ಣಿಗೆ ಕೈ ಹಾಕಿದಂತಿತ್ತು. 

'ಹೌದು ಸಾರ್,' ಶಶಿಯ ಉತ್ತರದಲ್ಲೀಗ ದೃಢತೆಯಿತ್ತು. 

ತಮ್ಮ ಉದ್ದಿಮೆಯ ವಿಸ್ತರಣಾ ಯೋಜನೆಯನ್ನು ವಿವರಿಸಿದ ಶಶಿ, 'ಸುಮಾರು ಒಂದು ಕೋಟಿಯಷ್ಟು ಹೊಸ ಸಾಲವನ್ನು ತಾವು ಮಂಜೂರು ಮಾಡಿಸಿಕೊಟ್ಟರೆ, ನಾವು ನಮ್ಮ ಸಮಸ್ಯೆಯಿಂದ ಹೊರ ಬಂದು, ಆದಷ್ಟು ಬೇಗ ತಮ್ಮ ಸಾಲಗಳ ಬಾಕಿಯನ್ನೆಲ್ಲಾ ತೀರಿಸಬಲ್ಲೆವು' ಎಂದನು. 

ಶಶಿಯ ಕೋರಿಕೆಗೆ ಮ್ಯಾನೇಜರ್ ರವರ ಪ್ರತಿಕ್ರಿಯೆ ತಿರಸ್ಕಾರ ಭಾವದ ನಗೆ ಮಾತ್ರವಾಗಿತ್ತು. 'ನಿಮ್ಮ ವಿವಿಧ ಸಾಲಗಳಲ್ಲಿ ಭಾರಿ ಮೊತ್ತಗಳು ಬಾಕಿಯಿದ್ದು, ನಿಮ್ಮ ಎಲ್ಲಾ ಸಾಲಗಳನ್ನೂ  ಎನ್.ಪಿ.ಎ. ಎಂದು ಪರಿಗಣಿಸಬೇಕಾಬಹುದು. ನಿಮ್ಮ ಫ್ಯಾಕ್ಟರಿಯಲ್ಲಿ ಉತ್ಪಾದನೆ ನಿಂತಿದೆ. ತಮ್ಮ ಸಾಲಗಳಿಗೆ ಆಧಾರವಾಗಿ ತಾವು ನೀಡಿರುವ ಸ್ಥಿರಾಸ್ತಿಯ ಇಂದಿನ ಮಾರುಕಟ್ಟೆಯ ಬೆಲೆ ಕೇವಲ ಒಂದೂವರೆ ಕೋಟಿಯಷ್ಟಿದ್ದು, ತಮ್ಮ ಒಟ್ಟು ಸಾಲಗಳ ಮೊತ್ತ, ೩.೫ ಕೋಟಿ ರೂಪಾಯಿಗಳ ಮಂಜೂರಾತಿಗೆ ಹೋಲಿಸಿದರೆ, ೩.೮ ಕೋಟಿ ರುಪಾಯೀಗಳಿಷ್ಟಿದೆ. ಹೊಸ ಸಾಲವನ್ನು ನೀಡುವ ಪ್ರಶ್ನೆಯೇ ಇಲ್ಲ.' ಮ್ಯಾನೇಜರ್ ತಮ್ಮ ಕಂಪ್ಯೂಟರ್ ಮಾನಿಟರ್ನತ್ತ ನೋಡುತ್ತಾ, ಗಡಸು ಧ್ವನಿಯಲ್ಲೇ ಶಶಿಗೆ ಹೇಳಿದ್ದರು. 

ಸಪ್ಪಗಾದ ಶಶಿ ತನ್ನ ಪತ್ನಿಯ ಮುಖವನ್ನು ನೋಡಹತ್ತಿದ್ದನು. 'ಹೊಸ ಸಾಲವನ್ನು ಒದಗಿಸುವ ಅವಕಾಶವೇ ಇಲ್ಲ. ಕೋವಿಡ್ ಲಾಕ್ಡೌನ್ನಿಂದ ಇಡೀ ದೇಶದ ಆರ್ಥಿಕತೆಯೇ ಹದಗೆಟ್ಟು ಹೋಗಿದೆ. ಎಲ್ಲಾ ಬ್ಯಾಂಕ್ಗಳಂತೆ ನಮ್ಮ ಬ್ಯಾಂಕ್ ಕೂಡ ತೀವ್ರ ಸಂಕಷ್ಟದಲ್ಲಿದೆ. ತಮ್ಮ ಸಾಲಗಳ ಬಾಕಿಯನ್ನು ಮೊದಲು ಮರುಪಾವತಿ ಮಾಡುವ ಏರ್ಪಾಡು ಮಾಡಿ.' ಮ್ಯಾನೇಜರ್ ರವರ ಆದೇಶದಲ್ಲಿ ಆಕ್ರೋಶದ ಭಾವವಿತ್ತು. ಮ್ಯಾನೇಜರ್ ರವರ ಕ್ಯಾಬಿನ್ನನ್ನು ಕೆಲ ಕ್ಷಣ ಮೌನ ಆವರಿಸಿತ್ತು. ನಿರಾಶರಾದ ಶಶಿಕಾಂತ್, ಸುಹಾಸಿನಿ  ಹೊರಟು ನಿಂತಾಗ, ಮ್ಯಾನೇಜರ್ ರವರ ಅನುಮತಿಯನ್ನು ಕೇಳಬೇಕೆಂಬ ಸಮಾಧಾನವೂ ಅವರಲ್ಲಿ ಉಳಿದಿತ್ತಿಲ್ಲ. 

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆದ ತನ್ನ ತಂದೆ ಶಂಕರ್ ಸಿಂಗ್ ರವರೊಂದಿಗೆ ವಿಷಯವನ್ನು ಚರ್ಚಿಸಬೇಕೆಂಬುದು ಸುಹಾಸಿನಿಯ ವಿಚಾರವಾಗಿತ್ತು. ನಿವೃತ್ತರಾದರೂ, ಚಟುವಟಿಕೆಯಿಂದಲೇ ಇದ್ದ ಶಂಕರ್ ಸಿಂಗ್, ಆರ್ಥಿಕ ವಲಯದ ಆಗು-ಹೋಗುಗಳನ್ನು ದಿನ ನಿತ್ಯ ಗಮನಿಸುವವರಾಗಿದ್ದರು. ಕೋವಿಡ್ನ ದಾಳಿಯಿಂದ ತತ್ತರಿಸಿದ ದೇಶ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪ್ರಧಾನಿ ಮೋದಿಯವರು ಈಚೆಗೆ ಜಾರಿಗೊಳಿಸಿದ್ದ ರೂ. ೨೦ ಲಕ್ಷ ಕೋಟಿಯಷ್ಟರ ಆರ್ಥಿಕ ಪರಿಹಾರದ (pandemic package) ವಿಚಾರವನ್ನು, ಶಂಕರ್ ಸಿಂಗ್ರವರು ಕೆಲವು ಬಾರಿ ತಮ್ಮ ಅಳಿಯ ಶಶಿಕಾಂತನೊಂದಿಗೆ ಚರ್ಚಿಸಿದ್ದರು. 

'ದೇಶದ ಆರ್ಥಿಕತೆಯ ಜೀವನಾಡಿಗಳಾದಂತಹ  ಎಂ.ಎಸ್.ಎಂ.ಇ. ಘಟಕಗಳು ಲಾಕ್ಡೌನಿನಿಂದ ಬಳಲಿದ್ದು, ಅವುಗಳಿಗೆ ಹೊಸ ಚೈತನ್ಯವನ್ನು ನೀಡಲು ಪ್ರಧಾನಿಯವರ ಆರ್ಥಿಕ ಪ್ಯಾಕೇಜ್ನಲ್ಲಿ ವಿಶೇಷವಾದ ಪ್ರಸ್ತಾಪಗಳಿವೆ. ನೀವಿಬ್ಬರೂ ಬನ್ನಿ. ಎಂ.ಎಸ್.ಎಂ.ಇ. ಮಂತ್ರಾಲಯದ ವೆಬ್ಸೈಟನ್ನೇ ಅವಲೋಕಿಸೋಣ' ಎಂದು ಶಂಕರ್ ಸಿಂಗ್ ತಮ್ಮ ಮಗಳು-ಅಳಿಯಂದಿರನ್ನೂ ಕರೆದಾಗ, ಅವರ ಮುಖದಲ್ಲಿ ಕೊಂಚ ಕ್ರೋಧ ಭಾವವಿತ್ತು. ಆ ವೆಬ್ಸೈಟ್ನಲ್ಲಿ ಎಂ.ಎಸ್.ಎಂ.ಇ.ಗಳ ಪುನರುಜ್ಜೀವನಕ್ಕಾಗಿ ಅಧಿಕೃತವಾಗಿ ಪ್ರಕಟವಾದ ಪ್ಯಾಕೇಜ್ನ ವಿವರಗಳು ಹೀಗಿತ್ತು.  

"ಉದ್ಯಮಿ ಬಾಂಧವರೇ 

ತಾವುಗಳು ಎಂದಿಗೂ ಒಬ್ಬಂಟಿಗರಲ್ಲ. 

ಕೋವಿಡ್ನ ಪಿಡುಗಿನ ದಿನಗಳಲ್ಲಿ ಇಡೀ ದೇಶವೇ ತಮ್ಮೊಂದಿಗಿದೆ. 

ಎಂ.ಎಸ್.ಎಂ.ಇ. ಘಟಕಗಳನ್ನು ಪುನರುಜ್ಜೀವನಗೊಳಿಸಲು, ಕಮ್ಮಿ ಬಡ್ಡಿ ದರದಲ್ಲಿ ಅವುಗಳಿಗೆ ಸಾಲವನ್ನೊದಗಿಸಲು, ೩ ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಕಾದಿರಸಲಾಗಿದೆ. ತಮ್ಮ ಸಮೀಪದ ಬ್ಯಾಂಕ್ಗಳಲ್ಲಿ ಅಥವಾ ನಮ್ಮ ಪೋರ್ಟಲ್ ಮುಖಾಂತರ ತಾವುಗಳು ಆ ರೀತಿಯ ಸಾಲಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 

ಆ ರೀತಿಯ ಸಾಲಗಳ ಮಂಜೂರಾತಿಗೆ ಯಾವ ರೀತಿಯ ಹೆಚ್ಚಿನ ಭದ್ರತೆ ಬೇಡವಾಗಿದ್ದು, ೧೦೦%ನಷ್ಟು ಮರು ಪಾವತಿಯ ಖಾತರಿಯನ್ನು ಕೇಂದ್ರ ಸರಕಾರ ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ  ನೀಡುತ್ತದೆ. 

ಆ ರೀತಿಯ ಸಾಲಗಳ ಅಸಲಿನ ಮರುಪಾವತಿಯನ್ನು ಮೊದಲ ವರ್ಷ ಮಾಡಬೇಕಿಲ್ಲ. 

ಎಂ.ಎಸ್.ಎಂ.ಇ. ಘಟಕಗಳ 'ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)'ಯ ವಿಸ್ತಾರವನ್ನು ಹೆಚ್ಚಿಸಿರುವದರಿಂದ, ಇನ್ನೂ ಹೆಚ್ಚು ಘಟಕಗಳು ಆ ಯೋಜನೆಯಡಿ ವಿವಿಧ ರೀತಿಯ ಸೌಲಭ್ಯಗಳನ್ನು ಈಗ ಪಡೆಯಬಹುದು. 

ಎಂ.ಎಸ್.ಎಂ.ಇ. ಘಟಕಗಳ ವಹಿವಾಟನ್ನು ಸುಲಭೀಕರಣಗೊಳಿಸಲು, ಅವುಗಳು ೨೦೦ ಕೋಟಿ ರೂಪಾಯಿಗಳವರೆಗೆ ಸರಕಾರಗಳಿಗೆ ಮಾರಾಟ ಮಾಡುವ ಕರಾರುಗಳನ್ನು ಅಂಗೀಕರಿಸುವಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್ಗಳನ್ನು ಕರೆಯಲಾಗುವುದಿಲ್ಲ.  

ಕೋವಿಡ್ನ ಪರಿಸ್ಥಿತಿಯಿಂದ ಬಳಲಿರುವ ಎಂ.ಎಸ್.ಎಂ.ಇ. ಘಟಕಗಳ ಬೆಂಬಲಕ್ಕಾಗಿ ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

-೨೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಸುಲಭ ಸಾಲಗಳ ಬಿಡುಗಡೆಗಾಗಿ ಕಾದಿರಿಸಲಾಗಿದೆ. ಈ ನಿಧಿಯಿಂದ ಸುಮಾರು ೨ ಲಕ್ಷ ಘಟಕಗಳಿಗೆ ಸಹಾಯ ಕಲ್ಪಿಸಬಹುದೆಂದು ಅಂದಾಜಿಸಲಾಗಿದೆ. 

-೫೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಬಂಡವಾಳವನ್ನೊದಗಿಸುವ ಸಲುವಾಗಿ ಕಾದಿರಿಸಲಾಗಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಜಂಟಿಯಾಗಿ ಈ ನಿಧಿಯನ್ನು ಒದಗಿಸಲಿವೆ. 

'www.champions.gov.in' ಎಂಬ ಹೊಸ ಪೋರ್ಟಲ್ಲೊಂದನ್ನು ಎಂ.ಎಸ್.ಎಂ.ಇ. ಮಂತ್ರಾಲಯ ಸ್ಥಾಪಿಸಿದೆ. ಅನ್ಯಾಯಕ್ಕೊಳಗಾಗಿರುವ ಘಟಕಗಳು ತಮ್ಮ ದೂರುಗಳನ್ನು ಈ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. 

ತಾವುಗಳು ಗೆದ್ದರೆ, ದೇಶ ಗೆದ್ದಂತೆ. 

ಕೋಟ್ಯಾಂತರ ಪ್ರಜೆಗಳ ಜೀವನಕ್ಕಾಧಾರಿಯಾಗಿರುವ ಎಂ.ಎಸ್.ಎಂ.ಇ.ಗಳು ಆತ್ಮನಿರ್ಭರ ಭಾರತದ ಭದ್ರ ಬುನಾದಿಯಾಗಿವೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು"

ಬ್ಯಾಂಕಿಂಗ್ ಕ್ಷೇತ್ರದ ಹಳೆ ಹುಲಿಯಾದ ಶಂಕರ್ ಸಿಂಗ್, ಮಂತ್ರಾಲಯದ ಪ್ರಕಟಣೆಯನ್ನೋದಿದನಂತರ ಇನ್ನೂ ಕುಪಿತರಾಗಿದ್ದರು. 'ಮಾನ್ಯ ಪ್ರಧಾನಿಗಳು ಇಷ್ಟು ಒಳ್ಳೆಯ ಸೌಲಭ್ಯಗಳನ್ನು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಪ್ರಕಟಿಸಿರುವಾಗ, ಕಷ್ಟದಲ್ಲಿರುವ ನಿಮ್ಮ ಘಟಕಕ್ಕೇಕೆ ಸಹಾಯ ಮಾಡಲು ನಿಮ್ಮ ಬ್ಯಾಂಕ್ ಮ್ಯಾನೇಜರ್ ನಿರಾಕರಿಸಿದ್ದಾರೆ? ಹೊಸ ನೀತಿಯ ಪ್ರಕಟಣೆಯನ್ನು ನಿಮ್ಮ ಬ್ಯಾಂಕ್ ಮ್ಯಾನೇಜರ್ ರವರು ಓದಿಲ್ಲವೇಕೆ? ನಿಮ್ಮ ಮ್ಯಾನೇಜರ್ ಬಳಿ ಮತ್ತೆ ಹೋಗೋಣ, ಹೊಸ ನೀತಿಯ ಪ್ರಕಟಣೆಯನ್ನು ಅವರಿಗೆ ತೋರಿಸೋಣ.' ಶಂಕರ್ ಸಿಂಗ್ ತಮ್ಮ ಅಳಿಯನನ್ನು ನೋಡುತ್ತಾ ಸಣ್ಣದಾಗಿ ಗುಡುಗಿದ್ದರು. 

ಅದೇ ದಿನ ಶಶಿಕಾಂತನೊಡನೆ, ಶಂಕರ್ ಸಿಂಗ್ ರವರು ಬ್ಯಾಂಕ್ ಮ್ಯಾನೇಜರ್ ಬಳಿಗೆ ದೌಡಾಯಿಸಿದ್ದರು. ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರಕಾರ ಪ್ರಕಟಿಸಿದ್ದ ವಿವರಗಳನ್ನು ಪ್ರಸ್ತಾಪಿಸುತ್ತಾ ಶಂಕರ್ ಸಿಂಗ್, ಬ್ಯಾಂಕ್ ಮ್ಯಾನೇಜರ್ ಮೇಲೆ ಒಮ್ಮಲೇ ಮುಗಿ ಬಿದ್ದಿದ್ದರು. 'ನಾನು ಕೂಡ ಒಬ್ಬ ಮಾಜಿ ಬ್ಯಾಂಕ್ ಮ್ಯಾನೇಜರ್. ಸಣ್ಣ ಕೈಗಾರಿಕೆಯೊಂದನ್ನು ಕೊಲ್ಲುವ ಪ್ರಯತ್ನವನ್ನೇಕೆ ಮಾಡುತ್ತಿದ್ದೀರಿ?  ಈ ರೀತಿಯ ಉದ್ದಿಮೆಗಳು  ೧೨ ಕೋಟಿಯಷ್ಟು ಜನಗಳಿಗೆ  ಉದ್ಯೋಗವನ್ನು ಕಲ್ಪಿಸಿವೆ ಎಂದು ತಮಗೆ ತಿಳಿದಿಲ್ಲವೆ? ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಯೋಜನೆಗಳನುಸಾರ ನಮ್ಮ ಘಟಕಕ್ಕೆ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡುವಲ್ಲಿ ಇರುವ ತೊಂದರೆಗಳಾದರೂ ಏನು?' ಎಂದಿತ್ತು  ಶಂಕರ್ ಸಿಂಗ್ ರವರ ವಾದ. 

ಶಂಕರ್ ಸಿಂಗ್ ರವರು ತಮ್ಮ ಮೊಬೈಲ್ನಲ್ಲಿ ತೆಗೆದು ತೋರಿಸಿದ್ದ ಕೇಂದ್ರ ಸರಕಾರದ ಹೊಸ ನೀತಿಯನ್ನು ನೋಡುವ ಗೋಜಿಗೂ ಹೋಗದ ಬ್ಯಾಂಕ್ ಮ್ಯಾನೇಜರ್, 'ನಿಮ್ಮ ಸಾಲಗಳು          "ಎನ್.ಪಿ.ಎ." ಹಾದಿ ಹಿಡಿದಿವೆ. ತಮ್ಮ ಫ್ಯಾಕ್ಟರಿ ಹಲವು ತಿಂಗಳುಗಳಿಂದ ಚಾಲನೆಯಲ್ಲಿಲ್ಲ. ನಿಮ್ಮ ಕೆಲಸಗಾರರನ್ನು ತೆಗೆದು ಹಾಕಿದ್ದೀರಿ. ೩೦ ಲಕ್ಷ ರೂಪಾಯಿಗಳಷ್ಟರ ಮರುಪಾವತಿಯನ್ನು ತಾವು ಕೂಡಲೇ ಮಾಡಬೇಕಾಗಿದೆ. ಹೀಗಿರುವಾಗ ತಮ್ಮ ಘಟಕಕ್ಕೆ ಒಂದು ಕೋಟಿಯಷ್ಟರ ಹೊಸ ಸಾಲವನ್ನು ಹೇಗೆ ನೀಡಲಿ? ಮಾಜಿ ಬ್ಯಾಂಕರ್ ಆದ ತಮಗೆ, ವಸೂಲಾಗದ ಸಾಲಗಳ ತೂಗುಗತ್ತಿ ನಮ್ಮಂಥ ಬಡಪಾಯೀ ಮ್ಯಾನೇಜರ್ ಗಳ ಮೇಲೆ ತೂಗುತ್ತಿರುತ್ತದೆ ಎಂದು ಗೊತ್ತಿಲ್ಲವೆ?' ಎಂದು ಕೇಳಿದಾಗ ಮ್ಯಾನೇಜರ್ ರವರ ದನಿಯಲ್ಲಿ ಕೊಂಚ ಆತಂಕವಿತ್ತು. 

'ಹಾಗಾದರೆ ಕೇಂದ್ರ ಸರಕಾರದ ಹೊಸ ನೀತಿಗೆ ಅರ್ಥವಿಲ್ಲವೇ? ನಿಮ್ಮ ಮೇಲಧಿಕಾರಿಗಳ ಅಭಿಪ್ರಾಯವನ್ನೇಕೆ ತಾವು ಕೇಳಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಮಾಧಾನ ಕಾಣುತ್ತಿತ್ತು. 

'ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಹೊಸ ನೀತಿಯನ್ನು ನಾನೊಮ್ಮೆ ನೋಡುವೆ. ನಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸುವೆ. ಹೆಚ್ಚಿನ ಸಾಲವನ್ನು ನೀಡುವೆನೆಂಬ ಖಾತರಿಯನ್ನು ಈಗಲೇ ಕೊಡಲಾರೆ.' ಮ್ಯಾನೇಜರ್ ರವರ ಉತ್ತರ ಯಾವ ಭರವಸೆಯನ್ನೂ ಕೊಡದಂತಿತ್ತು.  

ಶಶಿಯೀಗ 'ಎಡಬಿಡದ ತ್ರಿವಿಕ್ರಮ'ನಂತಾಗಿದ್ದನು. ಮಾರನೇ ದಿನವೇ ಅವನು, ಮ್ಯಾನೇಜರ್ ಮುಂದಿನ ಕುರ್ಚಿಯಲ್ಲಿ ಜಮಾಯಿಸಿದ್ದನು. 'ನಿಮಗೆ ಹೆಚ್ಚಿನ ಸಾಲವನ್ನು ಒದಗಿಸುವ ಸಣ್ಣ ಭರವಸೆಯೊಂದು ಕಂಡಿದೆ. ತಮ್ಮ ಸಾಲಗಳನ್ನು ನಾವಿನ್ನು ಎನ್.ಪಿ. ಎ. ಎಂದು ಪರಿಗಣಿಸದಿರುವುದು ನಿಮ್ಮ ಪಾಲಿಗೆ ಒಳ್ಳೆಯದಾಗಿದೆ. ಹೆಚ್ಚಿನ ಸಾಲವನ್ನು ಕೋರಿ ತಾವು ಹೊಸ ಅರ್ಜಿಯೊಂದನ್ನು, ಈ ಪಟ್ಟಿಯಲ್ಲಿರುವ ವಿವರಗಳೊಂದಿಗೆ ಸಲ್ಲಿಸಿ' ಎಂದು ಹೇಳಿದ ಮ್ಯಾನೇಜರ್, ಶಶಿಯ ಕೈಗೆ ಪಟ್ಟಿಯನ್ನಿಟ್ಟಿದ್ದರು. ಮ್ಯಾನೇಜರ್ ನೀಡಿದ ಉದ್ದನೆಯ ಪಟ್ಟಿಯನ್ನು ನೋಡಿ ಶಶಿಕಾಂತ್ಗೆ ಗಾಬರಿಯಾಗಿತ್ತು.  ತನ್ನ ಹೊಸ ಸಾಲದ ಅರ್ಜಿಯೊಂದಿಗೆ ಶಶಿ ನೀಡಬೇಕಾದ ವಿವರಗಳು ಹಾಗೂ ದಾಖಲೆಗಳ ಪಟ್ಟಿ ಕೆಳಕಂಡಂತಿತ್ತು. 

೧. ಉದ್ದಿಮೆಯಲ್ಲಿ ಉತ್ಪಾದನೆ ನಿಂತು ಎಷ್ಟು ದಿನಗಳಾಗಿವೆ? ಉತ್ಪಾದನೆ ನಿಲ್ಲಲು ಕಾರಣಗಳೇನು?

೨. ೨೦೨೦ರ ಮಾರ್ಚ್ ೩೧ರ 'ಆಸ್ತಿ ಮತ್ತು ಹೊಣೆಗಳ(Balance Sheet) ಪಟ್ಟಿ'ಯನ್ನು ನೀಡಿ. 

೩. ಹೊಸ ಉತ್ಪಾದನೆ ಹಾಗು ಮುಂಚಿನ  ಉತ್ಪಾದನೆಯನ್ನು ಮತ್ತೆ ಆರಂಭಿಸುವ ಬಗೆಗಿನ ವಿವರಗಳನ್ನು (Project report) ನೀಡಿ. 

೪. ಪಿ.ಪಿ. ಇ. ತೊಡುಗೆಗಳನ್ನು ತಯಾರು ಮಾಡಿ, ಅವುಗಳನ್ನು ಮನೋಜರ ಸಂಸ್ಥೆಗೆ ಕಳುಹಿಸುವ/ಮಾರಾಟ ಮಾಡುವ ಪ್ರಕ್ರಿಯೆಯನ್ನು ಕುರಿತಾದ ಒಪ್ಪಂದದ ಪತ್ರವನ್ನು ನೀಡಿ. 

೫. ಮನೋಜರ ಸಂಸ್ಥೆಯ ಕಳೆದ ಎರಡು ವರ್ಷದ ಆಸ್ತಿ ಮತ್ತು ಹೊಣೆಗಳ ಪಟ್ಟಿಗಳನ್ನೂ ನೀಡಿ. 

೬. ಮನೋಜರವರು ವ್ಯವಹರಿಸುವ ಬ್ಯಾಂಕಿನಿಂದ, ಮನೋಜ್ರವರ ಸಂಸ್ಥೆಯ ಆರ್ಥಿಕ ಸ್ಥಿರತೆ ಕುರಿತಾದ 'ಗೌಪ್ಯ ವರದಿ (Confidential report)'ಯ ಪತ್ರವನ್ನು ನೀಡಿ. 

೭. ಮನೋಜ್ರವರ ಸಂಸ್ಥೆಯಿಂದ ನಿಮ್ಮ ಸಂಸ್ಥೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಹಣದ ಪಾವತಿ ನೇರವಾಗಿ ನಮ್ಮ ಬ್ಯಾಂಕಿಗೇ ತಲುಪಬೇಕು. ಈ ವಿಷಯದಲ್ಲಿ ಮನೋಜರವರ ಸಂಸ್ಥೆಯ 'ಸಮ್ಮತಿ ಪತ್ರ (Power of Attorney - PoA)'ವನ್ನು ನೀಡಿ. 

೮. ಹೊಸ ಉತ್ಪಾದನೆಯನ್ನು ಆರಂಭಿಸಲು ಈಗಿರುವ ಫ್ಯಾಕ್ಟರಿಯಲ್ಲಿರುವಷ್ಟು ಸ್ಥಳಾವಕಾಶ ಸಾಕೆ? ಅದರ ಬಗೆಗಿನ ವಿವರಗಳನ್ನು ನೀಡಿ. 

೯. ಹೊಸ ಉತ್ಪಾದನೆಗೆ ಬೇಕಾದ ಕೌಶಲ್ಯವುಳ್ಳ ಕೆಲಸಗಾರರ ಲಭ್ಯದ ಬಗೆಗಿನ ವಿವರಗಳನ್ನು ನೀಡಿ. 

೧೦. ಫ್ಯಾಕ್ಟರಿ ಆವರಣದ ಬಾಡಿಗೆ ಕರಾರು ಪತ್ರದ ಅವಧಿ ಶೀಘ್ರವೇ ಅಂತ್ಯಗೊಳ್ಳಲಿದ್ದು, ಅದನ್ನು ನವೀಕರಣಗೊಳಿಸಿ, ಹೊಸ ಕರಾರು ಪತ್ರದ ಪ್ರತಿಯನ್ನು ನೀಡಿ. 

'ಇಷ್ಟೊಂದು ವಿವರಗಳು, ದಾಖಲೆ ಪಾತ್ರಗಳು ಏಕೆ ಬೇಕು? ಈ ಎಲ್ಲ ಅಂಶಗಳಿಗೆ ದಾಖಲೆಗಳನ್ನೊದಗಿಸಲು ಸಾಕಷ್ಟು ಸಮಯ ಬೇಕು. ಸಧ್ಯಕ್ಕೆ ೫೦ ಲಕ್ಷ ರೂಪಾಯಿಗಳ ನೆರವನ್ನೇಕೆ ಬಿಡುಗಡೆ ಮಾಡಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಹಾಯಕತೆ ಇತ್ತು. 

'ಶಶಿಯವರೇ, ತಾವು ಬ್ಯಾಂಕ್ಗೂ ಮತ್ತು ಸರಕಾರಕ್ಕೂ ಆಭಾರಿಗಳಾಗಿರಬೇಕು. ಕೋವಿಡ್ ಪ್ಯಾಕೇಜ್ನ ಸೌಲಭ್ಯಗಳ ಪ್ರಕಾರ, ತಮ್ಮ ಸಾಲದ ಖಾತೆಯಲ್ಲಿ ಬಾಕಿ ಇರುವ ಇಡೀ ಮೊತ್ತದ ೨೦%ನಷ್ಟು ಮೊತ್ತವನ್ನು, ಅಂದರೆ ಸುಮಾರು ೭೬ ಲಕ್ಷ ರೂಪಾಯಿಗಳನ್ನು ತಮ್ಮ ಫ್ಯಾಕ್ಟರಿಯ ಪುನರುಜ್ಜೀವನಕ್ಕೆಂದು ಹೊಸ ಸಾಲದ ರೂಪದಲ್ಲಿ ನೀಡಬಹುದು. ಬಂಡವಾಳದ ಹೆಚ್ಚಳಕ್ಕಾಗೆಂದು ಮತ್ತೆ ೧೨ ಲಕ್ಷ ರುಪಾಯಿಗಳ ನೆರವನ್ನು ನೀಡಬಹುದು. ನಿಮ್ಮ ಫ್ಯಾಕ್ಟರಿಯ ಪುನರುಜ್ಜೀವನ ಸಾಲದ ಬಡ್ಡಿಯ ದರ ೮%ಗಿಂತ ಹೆಚ್ಚಿರಲಾರದು. ನೀವು ಯಾವುದೇ ರೀತಿಯ ಹೆಚ್ಚಿನ ಭದ್ರತೆ/ಅಡಮಾನಗಳನ್ನು ನೀಡಬೇಕಿಲ್ಲ. ಆದರೆ ನಾವು ಕೇಳಿರುವ ವಿವರಗಳು ಮತ್ತು ದಾಖಲೆ ಪತ್ರಗಳನ್ನು  ನೀಡದೆ ಅನ್ಯ ಮಾರ್ಗವಿಲ್ಲ. ನಿಮ್ಮ ಸಾಲದ ಹೊಣೆ, ಮಂಜೂರಾತಿ ನೀಡುತ್ತಿರುವ ನಮ್ಮಗಳ ಮೇಲೂ ಇರುತ್ತದೆ. ಬ್ಯಾಂಕ್ ಮ್ಯಾನೇಜರ್ ಗಳಾದ ನಮ್ಮಗಳ ಮೇಲೂ ಹೆಚ್ಚಿನ ಜವಾಬ್ದಾರಿ ಹಾಗೂ ತೀವ್ರವಾದ ಆತಂಕಗಳು ಇರುತ್ತವೆ. ಮಾಜಿ ಬ್ಯಾಂಕರ್ ಆದ ನಿಮ್ಮ ಮಾವನವರಿಗೆ ನಮ್ಮ ಆತಂಕಗಳ ಅರಿವಿರಬಹುದು. ನಮಗೆ ಬೇಕಾದ ವಿವರಗಳು, ದಾಖಲೆಗಳು ನಮ್ಮ ಕೈಸೇರದೆ ನಾವು ಮುಂದುವರಿಯುವಂತಿಲ್ಲ.' ಬ್ಯಾಂಕ್ ಮ್ಯಾನೇಜರ್ ರವರ ಮಾತುಗಳಲ್ಲಿ ಖಚಿತತೆಯಿತ್ತು. 

'ನಿಮ್ಮ ಆಡಿಟರ್ಗಳ (ಲೆಕ್ಕ ಪರಿಶೋಧಕರು) ಮತ್ತು ನಿಮ್ಮ ಮಾವನವರ ಸಹಾಯವನ್ನು ಪಡೆಯಿರಿ. ನೀವೂ ಕೂಡಲೇ ಕಾರ್ಯೋನ್ಮುಖರಾಗಿ. ಆಗ ನಿಮ್ಮ ಕೆಲಸಗಳು ಬೇಗ ಮುಗಿಯಬಹುದು. ಮುಖ್ಯವಾಗಿ ತಮ್ಮ ಸ್ನೇಹಿತರಾದ ಮನೋಜ್ರವರ ಬೆಂಬಲ ತಮಗೆ ಅವಶ್ಯಕ.' ಮ್ಯಾನೇಜರ್ ರವರ ಸಲಹೆ ಮುಂದುವರೆದಿತ್ತು. 

ಶಶಿಗೀಗ ಹೊಸ ಭರವಸೆಯೊಂದು ಮೂಡಿತ್ತು. ಬೇಕಾದ ದಾಖಲೆಗಳನ್ನು ಪಡೆಯಲು ಅವನ ಪ್ರಯತ್ನಗಳು ಶುರುವಾಗಿತ್ತು. ಮಾವನವರಾದ ಶಂಕರ್ ಸಿಂಗ್ ರವರು ಫ್ಯಾಕ್ಟರಿ ಬಾಡಿಗೆ ಕರಾರು ಪತ್ರದ ನವೀಕರಣವನ್ನು ಮಾಡಿಸಿ ಮುಗಿಸಿದ್ದರು. ಶಶಿಯ ಫ್ಯಾಕ್ಟರಿಯ ಸಮೀಪವೇ ಇದ್ದ ಮತ್ತೊಂದು ಫ್ಯಾಕ್ಟರಿ ಆವರಣವನ್ನು ಅವರು ಪಡೆಯುವ ಕಾರ್ಯವನ್ನು ಮುಗಿಸಿಯಾಗಿತ್ತು. ಶಶಿಯ ಆಡಿಟರ್ಗಳು ಶಶಿಗೆ ಬೇಕಾದ ಮಿಕ್ಕೆಲ್ಲ ದಾಖಲೆಗಳನ್ನು ತಯಾರು ಮಾಡಿ ಕೊಟ್ಟಿದ್ದರು. ಮನೋಜರಿಂದ ಬರಬೇಕಾದ ಮಾಹಿತಿ ಮತ್ತು ದಾಖಲೆಗಳು ಬರುವಲ್ಲಿ ಯಾವ ತಡವೂ ಆಗಲಿಲ್ಲ. ಫ್ಯಾಕ್ಟರಿಗೆ ಬೇಕಾದ ಹೆಚ್ಚಿನ ವಿದ್ಯುತ್ತಿನ ಮಂಜೂರಿ ಸುಹಾಸಿನಿಯ ಪ್ರಯತ್ನದಿಂದ ದೊರೆತಿತ್ತು. ಫ್ಯಾಕ್ಟರಿಯಿಂದ ಹೊರನಡೆದ್ದಿದ್ದ ಕೆಲಸಗಾರರೆಲ್ಲರನ್ನು ವಾಪಸ್ಸು ಕರೆಸಿಕೊಳ್ಳುವ ಪ್ರಯತ್ನವನ್ನೂ ಸುಹಾಸಿನಿ ಮಾಡಹತ್ತಿದ್ದಳು. 'ಮನಸ್ಸಿದ್ದಲ್ಲಿ ಮಾರ್ಗ' ಎಂಬ ಮಾತು ಶಶಿಗೀಗ ನಿಜವೆನಿಸತೊಡಗಿತ್ತು.

ಹತ್ತು ದಿನಗಳು ಕಳೆಯುವಷ್ಟರಲ್ಲಿ, ಶಶಿ ಎಲ್ಲ ವಿವರಗಳನ್ನು ಹಾಗೂ ದಾಖಲೆಗಳನ್ನು ತನ್ನ ಬ್ಯಾಂಕ್ಗೆ ಸಲ್ಲಿಸಿದ್ದನು. ಶಶಿ ೧ ಕೋಟಿ ರುಪಾಯಿಗಳಷ್ಟರ  ಹೆಚ್ಚುವರಿ ಸಾಲಕ್ಕೆ ಅರ್ಜಿಯನ್ನು ನೀಡಿದ್ದರೂ, ಬ್ಯಾಂಕ್ ಮ್ಯಾನೇಜರ್ ರವರು ಮುಂಚೆಯೇ ತಿಳಿಸಿದ್ದಂತೆ  ರೂ. ೭೬  ಲಕ್ಷಗಳ ಹೆಚ್ಚುವರಿ ಸಾಲವನ್ನು ಮತ್ತು ರೂ. ೧೨ ಲಕ್ಷಗಳಷ್ಟರ ಬಂಡವಾಳ ನಿಧಿಯನ್ನು ಮಾತ್ರ ಮಂಜೂರು ಮಾಡಿದ್ದರು. ಅಷ್ಟೇ ಹೆಚ್ಚಿನ ಹಣದೊಂದಿಗೆ ತನ್ನ ಕೆಲಸವನ್ನು ನಿಭಾಯಿಸುವ ವಿಶ್ವಾಸ ಶಶಿಗೀಗ ಬಂದಿತ್ತು. 

ಫ್ಯಾಕ್ಟರಿಯಿಂದ ಕಳುಹಿಸಲ್ಪಟ್ಟ ೨೪ ಕೆಲಸಗಾರರ ಪೈಕಿ, ೧೬ ಕೆಲಸಗಾರರು ಅದೇ ನಗರದಲ್ಲೇ ವಾಸವಿದ್ದರು. ಕೆಲಸಕ್ಕೆ ಹಿಂತಿರುಗಿದ ೧೬ ಕೆಲಸಗಾರರಿಗೆ ಸುಹಾಸಿನಿ ತಲಾ ರೂ. ೧೦,೦೦೦ಗಳ ತಕ್ಷಣದ ಪರಿಹಾರವನ್ನು ನೀಡಿದ್ದಳು. ನೋಡು ನೋಡುವಷ್ಟರಲ್ಲೇ ಫ್ಯಾಕ್ಟರಿಗೆ ಮರು ಜೀವ ಬಂದು, ಕರ್ಣಾನಂದಕರವಾದ  ಉತ್ಪಾದನೆಯ ಸದ್ದು ಕೇಳಿಸತೊಡಗಿತು. ಒಂದೇ ತಿಂಗಳೊಳಗಾಗಿ ಶಶಿ ಪಿ.ಪಿ.ಇ. ತೊಡುಗೆಗಳ ಮೊದಲ ಕಟ್ಟ(ಪ್ಯಾಕ್)ನ್ನು, ಮನೋಜರಿಗೆ ಕಳಿಸಿದ್ದೂ ಆಗಿತ್ತು. ಸುಹಾಸಿನಿ ಮತ್ತು ಶಶಿಕಾಂತರಲ್ಲಿ ಹೊಸ ಉತ್ಸಾಹವೊಂದು ಮೂಡಿತ್ತು. 

ಶಶಿಯ ಆಹ್ವಾನದ ಮೇರೆಗೆ, ಅವನ  ಫ್ಯಾಕ್ಟರಿಯನ್ನು ಕಣ್ಣಾರೆ ಕಂಡ  ರಾಜು ಹಾಗು ರೋಹಿಣಿಯವರಿಗೆ ಸಂತೋಷವಾಗಿತ್ತು. ಶಶಿ ನೀಡಿದ ಮಾಹಿತಿಗಳ ಎಲ್ಲಾ ವಿವರಗಳನ್ನು ದಾಖಲಿಸಿಕೊಂಡ ರೋಹಿಣಿಗೆ, ತನ್ನ ಸಂಶೋಧನೆಯ ಪ್ರಬಂಧಕ್ಕೆ ಹೊಸದೊಂದು ಅಧ್ಯಾಯ ದೊರೆಕಿತ್ತು. 'ಸರಕಾರವನ್ನು ಟೀಕಿಸುವುದು ಸುಲಭದ ಕೆಲಸ. ಆದರೆ ಕುಸಿದು ಬಿದ್ದ ದೇಶದ ಆರ್ಥಿಕತೆಗೆ ಮರುಜೀವ ನೀಡುವುದು ಸುಲಭದ ಕೆಲಸವಲ್ಲ. ಮೋದಿಯವರು ಪ್ರಕಟಿಸಿದ ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನ ಯೋಜನೆಯ ಕಾರ್ಯಾನ್ವಯ ಸಾಧ್ಯ ಎಂಬುದಕ್ಕೆ ಶಶಿಯ ವೃತ್ತಾಂತವೇ ಜೀವಂತ ಸಾಕ್ಷಿ. ಸರಕಾರದ ಈ ಯೋಜನೆಯ ಯಶಸ್ಸಿಗೆ ಬ್ಯಾಂಕರ್ ಮತ್ತು ಗ್ರಾಹಕರುಗಳ ನಡುವಿನ ಸುಮಧುರ ಬಾಂಧವ್ಯ ಬಹಳ ಮುಖ್ಯವಾದದ್ದು. ಎರಡೂ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ನಡೆದರೆ, ಯಶಸ್ಸು ಖಚಿತ.' ರಾಜುರವರ ಸಮಜಾಯಿಷಿ ಈ ಬಾರಿ ರೋಹಿಣಿಗೆ ಸರಿಯೆನಿಸಿತ್ತು.  

-೦-೦-೦-೦-೦-೦-






 



  





 


 

Tuesday 23 March 2021

 

 ಫ್ಲಾರೆನ್ಸ್ ನೈಟಿಂಗೇಲ್ 



ಅಂದು ೨೦೨೦ರ ಮೇ ೧೨ರ ದಿನವಾಗಿತ್ತು. 'ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪಕಿ'ಯಾದ ಫ್ಲಾರೆನ್ಸ್ ನೈಟಿಂಗೇಲ್ರವರ ಜಯಂತಿಯ ದ್ವಿಶತಮಾನೋತ್ಸವ ಅಂದಾಗಿತ್ತು. ಆ ಮಹಾ ಚೇತನದ ಗೌರವಾರ್ಥ ೨೦೨೦ರ ವರ್ಷವನ್ನು 'ಅಂತಾರಾಷ್ಟ್ರೀಯ ನರ್ಸ್ ಮತ್ತು ಮಿಡ್ ವೈಫಗಳ ವರ್ಷ'ವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. 'ಉತ್ತಮ ನರ್ಸಿಂಗ್ ಮೂಲಕ ವಿಶ್ವ ಆರೋಗ್ಯ' ಎಂಬುದು ಆ ಸಂಸ್ಥೆಯ ೨೦೨೦ರ ಧ್ಯೇಯ ವಾಕ್ಯವಾಗಿತ್ತು. ಅಂದಿನ ಫ್ಲಾರೆನ್ಸ್ ನೈಟಿಂಗೇಲ್ ರವರ ದ್ವಿಶತಮಾನೋತ್ಸವ ಸಮಾರಂಭಕ್ಕೆ ನಗರದ ಕೇಂದ್ರ ಸಭಾಂಗಣವೇ ವೇದಿಕೆಯಾಗಿತ್ತು. ಆಹ್ವಾನಿತರಾದ ಕೆಲವೇ ಗಣ್ಯರುಗಳ ಮುಖಗಳಲ್ಲಿ ಅಂದು ಎಂದಿನ ಉತ್ಸಾಹವಿರಲಿಲ್ಲ. ದಿನದಿಂದ ದಿನಕ್ಕೆ ಇಡೀ ದೇಶವನ್ನೇ ಆವರಿಸುತ್ತಿರುವ ಕೋವಿಡ್ನ ಆತಂಕ ಅವರುಗಳನ್ನು ಕಾಡುತ್ತಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಸನಗಳ ಏರ್ಪಾಡನ್ನು ಎಲ್ಲರಿಗೂ ಮಾಡಲಾಗಿತ್ತು.  'ನೈಟಿಂಗೇಲ್ ಪದಕ ವಿಜೇತರಾದ ಶ್ರೀಮತಿ. ವಸಂತ, ಶ್ರೀ. ಥಾಮಸ್, ಶ್ರೀಮತಿ. ಯಶೋಧ ಮತ್ತು ಶ್ರೀಮತಿ.  ಮಿಠಾಲಿರವರುಗಳೇ ಅಂದಿನ ಸಮಾರಂಭದ ಮುಖ್ಯಾಕರ್ಷಣೆಯಾಗಿದ್ದರು. ವೇದಿಕೆಯ ಮೇಲೆ ಹಾಕಲಾಗಿದ್ದ ವಿಶೇಷ ಆಸನಗಳಲ್ಲಿ ಅವರುಗಳು ಕುಳಿತಿದ್ದರು. ಅಂದಿನ ಸಮಾರಂಭದ ನಿರ್ವಹಣೆಯ ಕಾರ್ಯವನ್ನು  ಡಾ. ಕಿರಣ್ ರವರಿಗೆ ವಹಿಸಲಾಗಿತ್ತು. ರೋಹಿಣಿ ಮತ್ತವಳ ತಂದೆ ರಾಜುರವರು ಶ್ರೋತೃಗಳ ಮೊದಲ ಸಾಲಲ್ಲಿ ಕುಳಿತಿದ್ದರು. ಆಹ್ವಾನಿತ ಮುಖ್ಯ ಅತಿಥಿಗಳೆಲ್ಲರೂ ಸೇರಿ 'ದೀಪವನ್ನು ಬೆಳಗು'ವುದರ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಫ್ಲಾರೆನ್ಸ್ ನೈಟಿಂಗೇಲ್ ರವರ ಜೀವನ ಮತ್ತು ಸಾಧನೆಗಳ ಸಾಕ್ಷ್ಯ ಚಿತ್ರವೊಂದರ ಪ್ರದರ್ಶನದೊಂದಿಗೆ ಅಂದಿನ ಕಾರ್ಯಕ್ರಮ ಆರಂಭವಾಗಿತ್ತು. ತನ್ನ ಡೈರಿ ಮತ್ತು ಲೇಖನಿಗಳೊಂದಿಗೆ ಕಾರ್ಯಕ್ರಮದ ವಿವರಗಳನ್ನು ಬರೆದುಕೊಳ್ಳಲು ರೋಹಿಣಿ ಸಿದ್ಧಳಾಗಿ ಕುಳಿತಿದ್ದಳು. 

'ದೀಪದ ಮಹಿಳೆ' (Lady with the lamp) ಎಂದೇ ಖ್ಯಾತಿ ಹೊಂದಿರುವ ಫ್ಲಾರೆನ್ಸ್ ನೈಟಿಂಗೇಲ್ ರವರು ಇಟಲಿ ದೇಶದ ಫ್ಲಾರೆನ್ಸ್ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅವರು ಜನಿಸಿದ ನಗರದ ಜ್ಞಾಪಕಾರ್ಥವಾಗಿ ಅವರಿಗೆ 'ಫ್ಲಾರೆನ್ಸ್' ಎಂದು ಹೆಸರಿಡಲಾಗಿತ್ತು. ಕೆಲವು ವರ್ಷಗಳನಂತರ ಅವರ ಕುಟುಂಬವು ತಮ್ಮ ಮೂಲ ದೇಶವಾದ ಇಂಗ್ಲೆಂಡ್ಗೆ ಮರಳಿತ್ತು. ಬಾಲ್ಯದ ದಿನಗಳಿಂದ    ಫ್ಲಾರೆನ್ಸ್ ದೈವಭಕ್ತಳಾಗಿದ್ದು, ದೀನ ದಲಿತರ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದವಳಾಗಿದ್ದಳು. ಫ್ಲಾರೆನ್ಸ್ ಮದುವೆಯಾಗಿ ನೆಮ್ಮದಿಯಾದ ಸಂಸಾರವನ್ನು ನಡೆಸಲಿ ಎಂಬುದು ಅವರ ಶ್ರೀಮಂತ ಪೋಷಕರ ಅಭಿಲಾಷೆಯಾಗಿತ್ತು. ಆದರೆ ಫ್ಲಾರೆನ್ಸ್ ತಮ್ಮ ಪೋಷಕರ ಅಭಿಲಾಷೆಯನ್ನು ನಿರಾಕರಿಸಿ, ತನ್ನ ಅಂತಃಸ್ಫೂರ್ತಿಗನುಗುಣವಾದ ನರ್ಸಿಂಗ್ ಕ್ಷೇತ್ರವನ್ನೇ ಆರಿಸಿಕೊಂಡರು. ಆ ದಿನಗಳಲ್ಲಿ ನರ್ಸಿಂಗ್ ಕೆಲಸವನ್ನು ಗೌರವಾನ್ವಿತ  ಕುಟುಂಬದ ಹೆಣ್ಣು ಮಕ್ಕಳು ಆರಿಸಿಕೊಳ್ಳುವುದು ಅಪರೂಪವಾಗಿತ್ತು. 

೧೮೫೪ರ ಇಸವಿಯ ಸಮಯದಲ್ಲಿ, ಇಂಗ್ಲೆಂಡ್ ಮತ್ತು ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ಶುರುವಾಗಿತ್ತು. ಆ ಯುದ್ಧದ ಕೇಂದ್ರ ಸ್ಥಾನವಾಗಿದ್ದ ಟರ್ಕಿ ಪ್ರಾಂತ್ಯದ ಸೇವೆಗೆಂದು ಫ್ಲಾರೆನ್ಸ್ ರವರನ್ನು ಅಂದಿನ ಬ್ರಿಟಿಷ್ ಸರಕಾರ ಕಳುಹಿಸಿತ್ತು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಗಾಯಾಳು ಸೈನಿಕರ ಆರೈಕೆಯ ಜವಾಬ್ದಾರಿ ಫ್ಲಾರೆನ್ಸ್ರವರ ತಂಡದ ಮೇಲಿತ್ತು.  ಭಾರಿ ಸಂಖ್ಯೆಯ ಗಾಯಾಳು ಸೈನಿಕರುಗಳನ್ನು ಕಿರಿದಾದ ಗಲೀಜು ಕೋಣೆಗಳಲ್ಲಿ ಮಲಗಿಸಲಾಗಿತ್ತು. ಆ ಕೋಣೆಗಳಲ್ಲಿ ಬೆಳಕು, ಗಾಳಿ ಮತ್ತು ನೀರಿನ ವ್ಯವಸ್ಥೆಯ ಕೊರತೆಯಿದ್ದು, ಚರಂಡಿಗಳ ಅನುಕೂಲವೇ ಇರಲಿಲ್ಲ. ಇಲಿಗಳು ಮತ್ತು ಕ್ರಿಮಿಕೀಟಗಳ ಓಡಾಟ ಆ ಕೋಣೆಗಳಲ್ಲಿ ಎಗ್ಗಿಲ್ಲದೆ ಸಾಗಿತ್ತು. ಆಹಾರ ಸಾಮಗ್ರಿಗಳು, ಸಾಬೂನುಗಳು ಮತ್ತು ಬ್ಯಾಂಡೇಜುಗಳ ಕೊರತೆ ತೀವ್ರವಾಗಿತ್ತು. ಯುದ್ಧದಲ್ಲಾದ ಗಾಯಗಳಿಗಿಂತ, 'ಕಾಲರಾ, ಟೈಫಾಯಿಡ್, ಭೇದಿ ಮತ್ತು ಪೌಷ್ಟಿಕ ಆಹಾರದ ಕೊರತೆ' ಮುಂತಾದ ರೋಗಗಳಿಂದ ಹೆಚ್ಚು ಸೈನಿಕರು ಅಲ್ಲಿ ಸಾಯುತ್ತಿದ್ದರು.  

ಆಸ್ಪತ್ರೆಯ ಪರಿಸ್ಥಿತಿಯ ಸುಧಾರಣೆಗಾಗಿ ತನ್ನ ಮೇಲಧಿಕಾರಿಗಳೊಂದಿಗೆ ಹೋರಾಡಲು ಫ್ಲಾರೆನ್ಸ್ ನಿರ್ಧರಿಸಿದ್ದರು. ಹಾಗಾಗಿ ಅವರು ಹಿರಿಯ ವೈದ್ಯರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ಫ್ಲಾರೆನ್ಸ್ ತಮ್ಮ ಛಲವನ್ನು ಬಿಡದಾದರು. ತನ್ನ ಆಸ್ಪತ್ರೆಯ ದುಃಸ್ಥಿತಿಯನ್ನು ಇಂಗ್ಲೆಂಡ್ ಸರಕಾರದ ಗಮನಕ್ಕೂ ತರುವುದರಲ್ಲಿ ಫ್ಲಾರೆನ್ಸ್ ಹಿಂಜರಿಯಲಿಲ್ಲ. ಫ್ಲಾರೆನ್ಸ್ರವರು ಗಣಿತ ಮತ್ತು ಸಂಖ್ಯಾಶಾಸ್ತ್ರಗಳಲ್ಲೂ ನಿಪುಣೆಯಾಗಿದ್ದರು. ತಾನೇ ವಿನ್ಯಾಸಗೊಳಿಸಿದ 'ಪೈ ಛಾರ್ಟ(Pai Chart)ನ್ನು ಹೋಲುವ ಕಾಕ್ಸ್ಕುಂಬ್ ನಕ್ಷೆ (coxcomb diagrams)'ಗಳ ಸಹಾಯದಿಂದ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಫ್ಲಾರೆನ್ಸ್, 'ಯುದ್ಧದ ಕಾರಣಗಳಿಗಿಂತ, ಯುದ್ಧೇತರ ಕಾರಣಗಳಿಂದಾಗಿ ಸೈನಿಕರ ಸಾವುಗಳು ಹೆಚ್ಚಾಗುತ್ತಿದೆ' ಎಂದು ಅವರುಗಳು ಮನಗಾಣುವಂತೆ ಮಾಡಿದರು. ಫ್ಲಾರೆನ್ಸ್ ರ ಹೋರಾಟಕ್ಕೆ  ಮನ್ನಣೆ ದೊರೆತಿತ್ತು. ಸಮಸ್ಯೆಯನ್ನು ಒಪ್ಪಿಕೊಂಡ ಹಿರಿಯ ಅಧಿಕಾರಿಗಳು ಔಷಧ, ಆಹಾರ ಮತ್ತು ಸ್ವಚ್ಛತಾ ಸಾಮಗ್ರಿಗಳ ಸರಬರಾಜನ್ನು ಹೆಚ್ಚಿಸಿದರು. ತನ್ನ ತಂಡದ ಸದಸ್ಯರುಗಳೊಂದಿಗೆ ಮಾತನಾಡಿದ ಫ್ಲಾರೆನ್ಸ್, 'ಸ್ವಚ್ಛತೆ ಮತ್ತು ಚಿಕಿತ್ಸಾ ವಿಧಿ-ವಿಧಾನ'ಗಳ ಪಾಲನೆಗೆ  ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಂತೆ ಆಗ್ರಹಿಸಿದರು. 'ಸಾಬೂನಿನಿಂದ ಆಗಾಗ ಕೈ ತೊಳೆಯುವ ವಿಧಾನ'ವನ್ನು ಅಂದೇ ಫ್ಲಾರೆನ್ಸ್ ರವರು ಸಾರಿ ಸಾರಿ ತಿಳಿಸಿದ್ದರು. ಫ್ಲಾರೆನ್ಸ್ ರ ಈ ಎಲ್ಲ ಕ್ರಮಗಳಿಂದ ಅವರ ಆಸ್ಪತ್ರೆಯ ನೈರ್ಮಲ್ಯ ಮಟ್ಟ ಸುಧಾರಿಸಿತ್ತು.  ಆಸ್ಪತ್ರೆಯಲ್ಲಿನ  ಗಾಯಾಳು ಸೈನಿಕರ ಸಾವು, ಮುಂಚಿನ ಸಂಖ್ಯೆಯ ಮೂರನೇ ಒಂದು ಭಾಗದಷ್ಟಕ್ಕೆ ಇಳಿದಿತ್ತು. ಫ್ಲಾರೆನ್ಸ್ ರ ಶ್ರಮ ಮತ್ತು ಸಾಧನೆ ಇಂಗ್ಲೆಂಡಿನ ಸರಕಾರದ ಗಮನವನ್ನು ಕೂಡ ಸೆಳೆದಿತ್ತು. 

ಫ್ಲಾರೆನ್ಸ್ ರವರು ತಮ್ಮ ರೋಗಿಗಳ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದ್ದರು. ಪ್ರತಿ ರೋಗಿಯ ಹೆಸರನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದ ಫ್ಲಾರೆನ್ಸ್ ರವರಲ್ಲಿ, ರೋಗಿಗಳ ನೋವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯೊಂದಿತ್ತು. ರೋಗಿಗಳ ಆರೋಗ್ಯದ ವಿಷಯವನ್ನು ಅವರವರ ಕುಟುಂಬಗಳಿಗೆ ಪತ್ರಗಳನ್ನು ಬರೆದು ಫ್ಲಾರೆನ್ಸ್ ತಿಳಿಸುತ್ತಿದ್ದರು. ಫ್ಲಾರೆನ್ಸ್ ವಾರ್ಡುಗಳ ಭೇಟಿಗೆಂದು ಬಂದರೆ, ಗಾಯಾಳು ಸೈನಿಕರ ಚೈತನ್ಯ ಇಮ್ಮಡಿಯಾಗುತ್ತಿತ್ತು. ರಾತ್ರಿ ವೇಳೆ ಅವರು ವಾರ್ಡುಗಳ ಭೇಟಿ ನೀಡುವಾಗ ತಪ್ಪದೆ ದೀಪವೊಂದನ್ನು ಹಿಡಿದು ಬರುತ್ತಿದ್ದರು. ಹಾಗಾಗಿ ಸೈನಿಕರು ಅವರನ್ನು 'ದೀಪದ ಮಹಿಳೆ' ಎಂದೇ ಕರೆಯುತ್ತಿದ್ದರು. 

೧೮೫೬ನೇ ಇಸವಿಯಲ್ಲಿ ಯುದ್ಧ ಮುಗಿದನಂತರ 'ದೇಶದ ಹೆಮ್ಮೆ'ಯಾಗಿ ಫ್ಲಾರೆನ್ಸ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿದ್ದರು. ತನ್ನ ಸ್ವಂತ ಉಳಿತಾಯದ ಮತ್ತು ಬಹುಮಾನಗಳಿಂದ ಗಳಿಸಿದ ೪೫,೦೦೦ ಪೌಂಡ್ಗಳಷ್ಟು ಬೃಹತ್ತಾದ ಮೊತ್ತವನ್ನು ವಿನಿಯೋಗಿಸಿ, ಫ್ಲಾರೆನ್ಸ್ ೧೮೬೦ರಲ್ಲಿ, ಲಂಡನ್ ನಗರದಲ್ಲಿ 'ನೈಟಿಂಗೇಲ್ ಟ್ರೈನಿಂಗ್ ಸ್ಕೂಲ್ ಫಾರ್ ನರ್ಸಸ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.  ನರ್ಸ್ಗಳಿಗೆ ತರಬೇತಿಯನ್ನು ನೀಡುವ ವಿಶ್ವದ ಮೊದಲ ಸಂಸ್ಥೆ ಅದಾಗಿತ್ತು. ನರ್ಸಿಂಗ್ ಆದರ್ಶಗಳನ್ನು ತನ್ನ ಶಾಲೆಯಲ್ಲಿ ಬೋಧಿಸಿದ ಫ್ಲಾರೆನ್ಸ್, ನರ್ಸಿಂಗ್ ವೃತ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. 'ರೋಗಿಗಳಿಗೆ, ನೀವೆಷ್ಟು ಕಾಳಜಿಯನ್ನು ಹೊಂದಿದ್ದೀರಿ ಎಂಬುದು ಮುಖ್ಯ, ನಿಮಗೆಷ್ಟು ಗೊತ್ತೆಂಬುದು ಅವರುಗಳಿಗೆ ಮುಖ್ಯವಲ್ಲ' ಎಂಬ ಧ್ಯೇಯ ವಾಕ್ಯವನ್ನು ಫ್ಲಾರೆನ್ಸ್ ತಮ್ಮ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಪ್ಪದೆ ಬೋಧಿಸುತ್ತಿದ್ದರು. 

'ಎಲ್ಲರ ಆರೋಗ್ಯಕ್ಕಾಗಿ ಸಮಗ್ರ ಪ್ರಯತ್ನ ನಡೆಸೋಣ' ಎಂಬುದು ಫ್ಲಾರೆನ್ಸ್ ರ ಗುರಿಯಾಗಿತ್ತು. ನರ್ಸಿಂಗ್ ವೃತ್ತಿಗೆ ಅವರು ನೀಡಿದ ಹೊಸ ರೂಪುರೇಷೆಗಳು ಫಲ ನೀಡಿ, ಇಡೀ ಇಂಗ್ಲೆಂಡ್ ದೇಶದ ಆಸ್ಪತ್ರೆಗಳ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆ ಉಂಟಾಗಿತ್ತು. ಫ್ಲಾರೆನ್ಸ್ ರ ಬೋಧನೆಯ ಪ್ರೇರಣೆಯಿಂದ, ಅಂದು ಇಂಗ್ಲೆಂಡ್ ದೇಶದ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ ಆಸ್ಪತ್ರೆಗಳಲ್ಲೂ ಸುಧಾರಣೆ ಕಂಡು ಬಂದಿತ್ತು.  ಅಂದಿನ ಇಂಗ್ಲೆಂಡ್ ದೇಶದ ರಾಜರಾದ ಕಿಂಗ್ ಎಡ್ವರ್ಡ್ರವರು, ಫ್ಲಾರೆನ್ಸ್ ರ ಸೇವೆಯನ್ನು ಗುರುತಿಸಿ ಅವರಿಗೆ 'ಆರ್ಡರ್ ಆಫ್ ಮೆರಿಟ್' ಎಂಬ ಗೌರವವನ್ನು ೧೯೦೮ರಲ್ಲಿ ನೀಡಿದ್ದರು.  

ಫ್ಲಾರೆನ್ಸ್ ರವರು ೨೦೦ ವರ್ಷಗಳ ಹಿಂದೆ ಬೋಧಿಸಿದ 'ಸ್ವಚ್ಛತೆ, ಚಿಕಿತ್ಸಾ ವಿಧಿ-ವಿಧಾನ ಮತ್ತು ಸಾಬೂನಿನಿಂದ ಆಗಾಗ ಕೈ ತೊಳೆಯುವುದು' ಮುಂತಾದ ಪ್ರಕ್ರಿಯೆಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಇಂದಿನ ಕೊರೋನಾ ವಿರುದ್ಧದ ಹೋರಾಟಕ್ಕೆ ಅವುಗಳೇ ದಿವ್ಯವಾದ ಅಸ್ತ್ರಗಳಾಗಿವೆ. 'ರೋಗಿಗಳ ಚಿಕಿತ್ಸೆಗೆ ಅವರವರ ಮನೆಗಳೇ ಅತ್ತ್ಯುತ್ತಮ ಚಿಕಿತ್ಸಾ ತಾಣಗಳೆಂಬ' ಸರಳ ಸತ್ಯವನ್ನು ಫ್ಲಾರೆನ್ಸ್ ರವರು ಅಂದೇ ಬೋಧಿಸಿದ್ದರು. ಆದರಿಂದು ನಾವು ಅವರ ಬೋಧನೆಗಳನ್ನು ಮರೆತ್ತಿದ್ದೇವೆ. 'ನಿರ್ಬಂಧನಾ  (quarantine) ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಇಂದು ನಮ್ಮ ಆರೋಗ್ಯಾಧಿಕಾರಿಗಳಿಗಿರುವ ಗೊಂದಲ ಮತ್ತು ಅವರುಗಳು ಅನುಸರಿಸುತ್ತಿರುವ ಚಂಚಲ ನಡೆಗಳು, ನಮಗೆ ಫ್ಲಾರೆನ್ಸ್ ರವರು ಅಂದು ಬೋಧಿಸಿದ ಸರಳ ವಿಧಾನಗಳ ಪ್ರಾಮುಖ್ಯತೆಯನ್ನು ನೆನಪಿಸುತ್ತವೆ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದುಕೊಂಡಿದ್ದಳು.  

ಫ್ಲಾರೆನ್ಸ್ ನೈಟಿಂಗೇಲ್ ರವರ ಸ್ಮರಣಾರ್ಥವಾಗಿ, ಇಂದಿಗೂ ವಿಶ್ವದಾದ್ಯಂತ ಹೊಸದಾಗಿ ನರ್ಸಿಂಗ್ ವೃತ್ತಿಯ ಪದವಿಯನ್ನು ಪಡೆದ ಅಭ್ಯರ್ಥಿಗಳು ತಮ್ಮ 'ನರ್ಸಿಂಗ್ ಪ್ರಮಾಣ ವಚನ'ವನ್ನು ಅವರ ಹೆಸರಿನಲ್ಲೇ ಸ್ವೀಕರಿಸುತ್ತಾರೆ. ಕೋವಿಡ್ ನಿಯಂತ್ರಣಕ್ಕಾಗೇ ಇತ್ತೀಚೆಗೆ ಲಂಡನ್ನಲ್ಲಿ ಆರಂಭಿಸಿದ ಐದು ಮತ್ತು ಐರ್ಲೆಂಡಿನ ಎರಡು ಚಿಕಿತ್ಸಾ ಕೇಂದ್ರಗಳಿಗೆ ಫ್ಲಾರೆನ್ಸ್ರ ಹೆಸರನ್ನೇ ಇಡಲಾಗಿದೆ. 

###

ಅಂದಿನ ಸಮಾರಂಭದ ಮುಂದಿನ ಕಾರ್ಯಕ್ರಮದ ಅಂಗವಾಗಿ ಆಯ್ಕೆಯಾಗಿದ್ದ ನಾಲ್ಕು ಕೊರೋನಾ ಸೇನಾನಿಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪದಕಗಳ ವಿತರಣೆಯನ್ನು ಮಾಡಲಾಯಿತು. ತಮ್ಮ ಪದಕಗಳನ್ನು ಪ್ರದರ್ಶಿಸುತ್ತಾ ವಿನಮ್ರತೆಯಿಂದ ವೇದಿಕೆಯ ಮೇಲೆ ನಿಂತ ನಾಲ್ಕೂ ಕೊರೋನಾ ಸೇನಾನಿಗಳಿಗೆ, ಸಭಿಕರುಗಳೆಲ್ಲಾ ದೀರ್ಘ ಕರತಾಡನ ಮಾಡುವ ಮೂಲಕ ತಮ್ಮ ಗೌರವವನ್ನು ಸಲ್ಲಿಸಿ ದರು. 

ಕೊರೋನಾ ಸೇನಾನಿಗಳ ಪೈಕಿ ಮೊದಲನೆಯವರಾಗಿ ಮಾತನಾಡಲು ಆರಂಭಿಸಿದ ವಸಂತರವರ  ಕಣ್ಣಾಲೆಗಳು ತುಂಬಿ ಬಂದಿದ್ದವು. ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಗೆ  ಮತ್ತು ಸಭಿಕರಿಗೆ ತಮ್ಮ ಧನ್ಯವಾದಗಳನ್ನು ಅವರು ವ್ಯಕ್ತಪಡಿಸಿದರು.

'ಬಾಲ್ಯದ ದಿನಗಳಿಂದಲೂ ವಸಂತ, ಓರ್ವ ವಿಭಿನ್ನ ಬಾಲಕಿಯಾಗಿದ್ದಳು. ಅವಳ ವಯಸ್ಸು ಕೇವಲ ೧೦ ವರ್ಷಗಳಾಗಿದ್ದಾಗಲೇ, ವಸಂತಳ ಪ್ರೌಢಿಮೆ ಅವಳ ವಯಸ್ಸಿಗೆ ಮೀರಿದ್ದಾಗಿತ್ತು ಎಂಬುದನ್ನು ಅವರ ತಾಯಿ ಮನಗಂಡಿದ್ದರು. ಆ ದಿನಗಳಲ್ಲಿ ವಸಂತಳ ಅಜ್ಜಿ ಸ್ನಾನದ ಮನೆಯಲ್ಲಿ ಬಿದ್ದು ತನ್ನ ಬಲಗಾಲನ್ನು ಮುರಿದುಕೊಂಡಿದ್ದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಧೈರ್ಯಶಾಲಿಯಾದ ವಸಂತ ಏಕಾಂಗಿಯಾಗಿದ್ದರೂ, ನೆರೆಹೊರೆಯವರ ಸಹಾಯವನ್ನು ಪಡೆದು, ತನ್ನ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಮುರಿದ ಕಾಲಿಗೆ ಹಾಕಿದ ಭಾರಿ ಬ್ಯಾಂಡೇಜಿನ ಸಹಿತ ಅವಳಜ್ಜಿ ಮೂರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು.  ಆ ಇಡೀ ಮೂರು ತಿಂಗಳುಗಳ ಕಾಲ ಅವಳಜ್ಜಿಯ ಸೇವೆಗೆ ಅವಿರತವಾಗಿ ನಿಂತಿದ್ದವಳು ಬಾಲಕಿ ವಸಂತ. ಆ ಅವಧಿಯಲ್ಲೇ ವಸಂತ ನರ್ಸಿಂಗ್ ವೃತ್ತಿಯ ಸಾಕಷ್ಟು ಕೆಲಸಗಳನ್ನು ಕಲಿತಿದ್ದಳು. ಅಂದಿನ ದಿನಗಳಲ್ಲೇ ಮುಂದೆ ತಾನು ನರ್ಸ್ ಆಗಬೇಕೆಂಬ ಬಯಕೆ ಬಾಲಕಿ ವಸಂತಳ ಮನಸ್ಸಿನಲ್ಲಿ ಮೂಡಿತ್ತು. 

೨೨ರ ಯುವತಿ ವಸಂತ ನರ್ಸಾಗಿ ಜಿಲ್ಲಾ ಆಸ್ಪತ್ರೆಯನ್ನು ಸೇರಿದಾಗ 'ಅವರ ಕನಸು ನನಸಾಗಿತ್ತು.' ಅರ್ಪಣಾ ಮನೋಭಾವದ ವೃತ್ತಿಪರರಾಗಿದ್ದ ವಸಂತ ತನ್ನ ಆಸ್ಪತ್ರೆಯಲ್ಲಿ ಬಹು ಬೇಗ ಎಲ್ಲರ ಮನಗಳನ್ನು ಗೆದ್ದಿದರು. ಆದರೆ ಮದುವೆಯ ವಿಷಯದಲ್ಲಿ ಅವರಿಗಿದ್ದ ನಿರಾಸಕ್ತಿ, ಅವರ ತಾಯಿ ಅನಸೂಯರಿಗೆ ಆತಂಕವನ್ನುಂಟು ಮಾಡಿತ್ತು. 'ಮದುವೆಯಾಗ ಬೇಕಾದ ಅವಶ್ಯಕತೆ ಎಲ್ಲಿದೆ? ನಮ್ಮ ದೇಶದಲ್ಲಿ ಸಹಸ್ರಾರು ಅನಾಥ ಮಕ್ಕಳಿದ್ದಾರೆ. ಆ ತರಹದ ಅನಾಥ ಮಗುವೊಂದ್ದಕ್ಕೆ ನಾನು ತಾಯಿಯಾಗಬಾರದೇಕೆ?' ಎಂದು ವಸಂತ ತಾಯಿಯನ್ನು ಕೇಳುತ್ತಿದ್ದರು. 

ಬಡ ಕುಟುಂಬದಲ್ಲಿ ಜನಿಸಿದ ಸುಮಿತ್ರ, ವಸಂತಳ ಬಾಲ್ಯದ ಸ್ನೇಹಿತಳಾಗಿದ್ದಳು. ಪ್ರಾಯಕ್ಕೆ ಬಂದಿದ್ದ ಸುಮಿತ್ರ ಒಬ್ಬ ಹುಡುಗನ ಪ್ರೇಮಜಾಲಕ್ಕೆ ಬಿದ್ದಿದ್ದಳು. ದಿನಗಳು ಕಳೆದಂತೆ ಸುಮಿತ್ರ ಬಸುರಿ ಕೂಡ ಆಗಿಬಿಟ್ಟಿದ್ದಳು. ಆದರೆ ಸುಮಿತ್ರಾಳ ಕೈಬಿಟ್ಟ ಆ ಹುಡುಗ ಬೇರೊಂದು ಊರಿಗೆ ಹೋಗಿಬಿಟ್ಟಿದ್ದನು. ಅವನ ನಿರೀಕ್ಷೆಯಲ್ಲೇ ಕಾಲವನ್ನು ತಳ್ಳುತ್ತಿದ್ದ ಸುಮಿತ್ರಳ ಗರ್ಭ ಬೆಳೆಯುತ್ತಾ ಸಾಗಿತ್ತು. ಒಂದು ದಿನ ಹೆರಿಗೆಗಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳಿಗೆ ಹೆರಿಗೆ ಮಾಡಿಸುವ ಕಾರ್ಯ ವಸಂತರ ಹೆಗಲಿಗೆ ಬಿದ್ದಿತ್ತು. ತೀವ್ರ ನೋವನ್ನು ಅನುಭವಿಸುತ್ತಿದ್ದ ಸುಮಿತ್ರಾಳ ಹೆರಿಗೆ ಕಷ್ಟವಾಗಿದೆಯೆಂಬುದು ವೈದ್ಯರ ಅಭಿಪ್ರಾಯವಾಗಿತ್ತು. ವಿಪರೀತ ರಕ್ತಸ್ರಾವದ ನಡುವೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಸುಮಿತ್ರಾಳ ಜೀವವನ್ನು, ವಸಂತ ಮತ್ತವರ ವೈದ್ಯರು ಉಳಿಸದಾದರು. ಮರಣಾವಸ್ಥೆಯಲ್ಲಿದ್ದ ಸುಮಿತ್ರಾ, ವಸಂತರತ್ತ ನೋಡುತ್ತಾ 'ನನ್ನ ಮಗುವಿಗೆ ನೀನೇ ತಾಯಿ' ಎಂದಿದ್ದಳು. ಕೈ ಸೇರಿದ ಹೆಣ್ಣುಮಗುವನ್ನು 'ದೇವರಿತ್ತ ವರ'ವೆಂದೇ ಭಾವಿಸಿದ ವಸಂತ ಮಗುವಿನ ಪಾಲನೆಯನ್ನು ಅಕ್ಕರೆಯಿಂದ ಆರಂಭಿಸಿದ್ದರು. ಆ ಸುಂದರ ಹೆಣ್ಣು ಮಗುವಿಗೆ ವಸಂತ ನೀಡಿದ ಮುದ್ದಾದ ಹೆಸರು 'ಆದ್ಯ.'  ಅಕ್ಕರೆಯ ಪಾಲನೆಯೊಂದಿಗೆ ಬೆಳೆಯುತ್ತಾ ಆದ್ಯ, ವಸಂತರ ಮನಸ್ಸನ್ನು ಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದ್ದಳು. ವಸಂತ ಆಸ್ಪತ್ರೆಯ ಕೆಲಸದ ಮೇಲೆ ತೆರೆಳಿದಾಗ ಆದ್ಯಳ ಲಾಲನೆ, ವಸಂತರ ತಾಯಿ ಅನಸೂಯರವರದಾಗುತ್ತಿತ್ತು.

ಆದ್ಯಳ ಪಾಲನೆ ಪೋಷಣೆಯಲ್ಲಿ ಮೂರು ವರುಷಗಳು ಕಳೆದಿತ್ತು. ವಸಂತ ಹಿರಿಯ ನರ್ಸಾಗಿ ಬಡ್ತಿ ಹೊಂದಿದ್ದರು. ಆ ದಿನಗಳಲ್ಲಿ ಕೋವಿಡ್ ವೈರಾಣು ತನ್ನ ಕೆನ್ನಾಲಿಗೆಯನ್ನು ಭಯಾನಕವಾಗಿ ಚಾಚಿತ್ತು. ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಆಯ್ಕೆಗೊಂಡ ಸಿಬ್ಬಂಧಿಯಲ್ಲಿ, ವೃತ್ತಿಪರತೆ ಮತ್ತು ಅರ್ಪಣಾ ಮನೋಭಾವಗಳಿಗೆ ಹೆಸರಾದ ವಸಂತರವರು ಮೊದಲಿಗರಾಗಿದ್ದರು.  ಆಸ್ಪತ್ರೆಯ ಆಡಳಿತ ಮಂಡಳಿಯ ಸೂಚನೆಯ ಪ್ರಕಾರ ವಸಂತ ಮೂರು ವಾರಗಳ ಕಾಲದ ಸತತ ಸೇವೆಯನ್ನು ಆಸ್ಪತ್ರೆಯಲ್ಲೇ ಉಳಿದು ಸಲ್ಲಿಸಬೇಕಿತ್ತು. ಅದಾದನಂತರ ಮನೆಗೆ ಹಿಂತಿರುಗುವ ಮುನ್ನ, ಆಸ್ಪತ್ರೆಯಲ್ಲೇ ಮತ್ತೆರಡು ವಾರಗಳ ನಿರ್ಬಂಧನಾ  ಅವಧಿಯನ್ನು ವಸಂತ ಪೂರ್ಣಗೊಳಿಸಬೇಕಿತ್ತು. 

ತನ್ನ ಅಮ್ಮನ ಮೇಲೆ ಆಸ್ಪತ್ರೆಯವರು ವಿಧಿಸಿದ್ದ ಕರ್ತವ್ಯದ ಹೊರೆಯ ಭಾರವನ್ನರಿಯುವ ವಯಸ್ಸು ಪುಟ್ಟ ಬಾಲಕಿ ಆದ್ಯಳದಾಗಿತ್ತಿಲ್ಲ. ಆಸ್ಪತ್ರೆಗೆ ಹೊರಟು ನಿಂತ ಅಮ್ಮನಿಗೆ, ಎಂದಿನ ಉತ್ಸಾಹದಿಂದಲೇ ಆದ್ಯ 'ಟಾ ಟಾ' ಹೇಳಿದ್ದಳು. ಆದರೆ ಆದ್ಯಳನ್ನು ತನ್ನ ತೋಳುಗಳ ಮೇಲೆ ಕೂರಿಸಿಕೊಂಡಿದ್ದ ಅನಸೂಯಮ್ಮರವರ ಕಣ್ಣುಗಳಿಂದ ಮಾತ್ರ ಕಣ್ಣೀರ ಕೋಡಿ ಹರಿದಿತ್ತು. ತನ್ನ ಕರ್ತವ್ಯ ಕಠಿಣವಾದದ್ದು ಮತ್ತು ದೀರ್ಘವಾದದ್ದು ಎಂದು ವಸಂತರಿಗೆ ತಿಳಿದಿತ್ತು. ಆದರೂ ತನ್ನಮ್ಮ ಮತ್ತು ಪ್ರೀತಿಯ ಮಗಳ ಮುಂದೆ ದುಃಖವನ್ನು ತೋರ್ಪಡಿಸಲಿಚ್ಛಿಸದ ವಸಂತ, ಕಣ್ಣೀರನ್ನು ತಡೆಹಿಡಿದೇ ಆಸ್ಪತೆಯ ವ್ಯಾನನ್ನೇರಿದ್ದರು. 

ವಸಂತರ ಸತತ ಸೇವೆಗೆ ದಿನ ರಾತ್ರಿಗಳ ವ್ಯತ್ಯಾಸವಿರಲಿಲ್ಲ. 'ಐ.ಸಿ.ಯು.'ನಲ್ಲಿದ್ದ ೮ ರೋಗಿಗಳೂ ಸೇರಿದಂತೆ, ೩೨ ಕೋವಿಡ್ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ವಸಂತರ ತಂಡದ್ದಾಗಿತ್ತು. ಅವರುಗಳಲ್ಲಿ ಮೂರು ರೋಗಿಗಳಿಗೆ 'ವೆಂಟಿಲೇಟರ್' ಕೂಡ ಅಳವಡಿಸಲಾಗಿತ್ತು. ವಸಂತರ ತಂಡದ ಎಲ್ಲಾ  ಸದಸ್ಯರುಗಳಿಗೂ 'ಪಿ.ಪಿ.ಇ.' ತೊಡುಗೆಗಳು ದೊರೆತ್ತದ್ದು ಅವರುಗಳ ಅದೃಷ್ಟವೇ ಆಗಿತ್ತು. ಆದರೆ ಆ ತೊಡುಗೆಗಳನ್ನು ಧರಿಸುವುದೇ ಬಹಳ ತ್ರಾಸದಾಯಕವಾಗಿತ್ತು. ಇಡೀ ದೇಹವನ್ನೇ ಆವರಿಸುತ್ತಿದ್ದ ಆ ತೊಡುಗೆ,  ರಕ್ಷಕ ಪ್ಲಾಸ್ಟಿಕ್ನಿಂದ ತಯಾರಿಸಿದ್ದಾಗಿತ್ತು. ತೊಡುಗೆಯೊಂದಿಗೆ ಶಿರಸ್ತ್ರಣ, ದಪ್ಪವಾದ ಕಪ್ಪನೆಯ ಕನ್ನಡಕ ಮತ್ತು ಉಸಿರಾಟದ ಉಪಕರಣಗಳನ್ನೂ ಧರಿಸಬೇಕಾಗಿತ್ತು. 'ಪಿ.ಪಿ.ಇ. ತೊಡುಗೆಯನ್ನು ಧರಿಸಿದ ಮಾತ್ರಕ್ಕೆ ಸೋಂಕಿನ ಸಾಧ್ಯತೆ ಇಲ್ಲವೇ ಇಲ್ಲವೆಂದು ಹೇಳಲಾಗದು' ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೂ ಆ ತೊಡುಗೆಯನ್ನು ಧರಿಸದೆ ಬೇರೇ ದಾರಿಯಿರಲಿಲ್ಲ. ಪಿ.ಪಿ.ಇ ತೊಡುಗೆಯನ್ನು ಧರಿಸಿ, ಮಲ ಮೂತ್ರ ವಿಸರ್ಜನೆಗೆ ಹೋಗುವುದು ಅಸಾಧ್ಯವಾಗಿತ್ತು. ಆದುದರಿಂದ ಆ ತೊಡುಗೆಯೊಂದಿಗೆ ವಿಶೇಷ ಪ್ಯಾಡ್ಗಳನ್ನು ಧರಿಸುವುದೂ ಅನಿವಾರ್ಯವಾಗಿತ್ತು. ಸುಡು ಬೇಸಿಗೆ ಈ ಎಲ್ಲಾ ಕಷ್ಟಗಳ ತ್ರಾಸವನ್ನು ಇನ್ನೂ ಹೆಚ್ಚಿಸಿತ್ತು. ಆದರೆ ವಸಂತರವರಿಗೆ ಕರ್ತವ್ಯದ ಕರೆ ಎಲ್ಲವುದಕ್ಕಿಂತಾ ಮಿಗಿಲಾಗಿತ್ತು.

ತನ್ನ ಕೆಲಸದಲ್ಲಿ ನಿಪುಣೆಯಾದ ವಸಂತರಿಗೆ, ತನ್ನ ಕರ್ತವ್ಯದೊತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಚೆನ್ನಾಗೇ ತಿಳಿದಿತ್ತು. ಆದರೆ ತನ್ನ ಪ್ರೀತಿಯ ಮಗಳು ಆದ್ಯಳನ್ನು ಅಷ್ಟೊಂದು ದಿನ ಬಿಟ್ಟಿರುವುದು ಸಹಿಸಿಕೊಳ್ಳಲಾರದ ವೇದನೆಯಾಗಿತ್ತು. ತನ್ನಮ್ಮನಿಗೆ ಮೊಬೈಲ್ನಿಂದ ವಿಡಿಯೋ ಕರೆ ಮಾಡುವುದು ಹೇಗೆಂಬುದು ಆದ್ಯಳಿಗೆ ತಿಳಿದಿತ್ತು. ಪಿ.ಪಿ.ಇ. ತೊಡುಗೆಯನ್ನು ಧರಿಸಿ ಕರ್ತ್ಯವದಲ್ಲಿ ನಿರತೆಯಾಗಿದ್ದ ವಸಂತಳಿಗೆ ಆದ್ಯಳ ಕರೆಯನ್ನು ಎಷ್ಟೋ ಬಾರಿ ಸ್ವೀಕರಿಸಲಾಗುತ್ತಿರಲ್ಲಿಲ್ಲ. ಅಂತೂ ಒಂದು ದಿನ ವಸಂತ ತನ್ನ ಮಗಳ ಕರೆಯನ್ನು ಸ್ವೀಕರಿಸಿದಾಗ, ಆದ್ಯ ಅಳುತ್ತಲೇ ಮಾತನಾಡಿದ್ದಳು. 'ಅಮ್ಮ, ಮನೆಗ್ ಬಾ. ಈಗಲೇ ಮನೆಗ್ ಬಾ. ಮನೆಗೆ ನೀನ್ಯಾಕೆ ಬರುತ್ತಿಲ್ಲ? ನೀನಿವತ್ತು ಬರ್ದಿದ್ರೆ, ನಾನ್ ಊಟನೇ ಮಾಡಲ್ಲ. ನೋಡಿಲ್ಲಿ, ಅನಸೂಯಜ್ಜಿನೂ ಅಳ್ತಿದಾರೆ.' ತಮ್ಮ ಮಗಳನ್ನು ಸಮಾಧಾನ ಪಡಿಸುವ ಮಾತುಗಳೇ ತೋಚದಾದ ವಸಂತ, 'ನಂಚಿನ್ನ ಅಳಬೇಡ. ನಾನು ಬೇಗ ಬಂದ್ಬಿಡ್ತೀನಿ. ಅಜ್ಜಿ ನಿಂಜೊತೆ ಇದ್ದರಲ್ಲಾ. ಅವರೇ ನಿಂಗ್ ಊಟ ಮಾಡಿಸ್ತಾರೆ. ಅಮ್ಮ....... , ಆದ್ಯಂಗೆ ಮಾವ್ನ ಹಣ್ಣು ಕೊಡ್ಸು.  ನಾನು ಬರುವಾಗ ಅವಳಿಗೆ ದೊಡ್ಡ ದೊಡ್ಡ ಚೊಕೊಲೇಟ್ಸ್ ತರ್ತೀನಿ' ಎಂದು ಹೇಳುವಷ್ಟರಲ್ಲೇ, ಮುಂದಿನ ಮಾತುಗಳು ಅವರ ಕಂಠದಿಂದ ಹೊರಡದಾಗಿತ್ತು. ಪ್ರತಿ ಬಾರಿಯೂ  ಮೊಬೈಲ್ ಕರೆಗಳಿಂದ ತನ್ನಮ್ಮನನ್ನು, ಮಗಳನ್ನು, ವಸಂತ ಸಂತೈಸದಾಗುತ್ತಿದ್ದರು. ಬಿಸಿ ಮುತ್ತುಗಳು ಮತ್ತು ಅಳುಗಳೊಂದಿಗೆ  ಕರೆಗಳು ಕೊನೆಗೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. 

ಮೂರು ವಾರಗಳ ಕೋವಿಡ್ ಕರ್ತವ್ಯ, ವಸಂತರಿಗೆ ಮೂರು ವರ್ಷಗಳದ್ದಾಗಿತ್ತೇನೋ ಎಂದೆನಿಸಿತ್ತು. ಅಂತೂ ಮೂರು ವಾರಗಳ ಕೋವಿಡ್ ವಾರ್ಡ್ನ ಕರ್ತವ್ಯ ಮುಗಿಸಿ, ಕ್ವಾರಂಟೈನ್ ವಾರ್ಡ್ಗೆ ಹೊರಡುವ ಸಮಯ ಬಂದೇ ಬಿಟ್ಟಿತ್ತು. ಕ್ವಾರಂಟೈನ್ ವಾರ್ಡ್ಗೆ ಸೇರುವ ಮುನ್ನ ದೂರದಿಂದ ಮಾತ್ರ ತನ್ನ ಮಗಳನ್ನು ನೋಡುವ ಸದವಕಾಶ ಅಂದು ವಸಂತಳದಾಗಿತ್ತು. ಆದ್ಯಳನ್ನು ಎತ್ತಿಕೊಂಡಿದ್ದ ಅನಸೂಯಮ್ಮ ಅಂದು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ನಿಂತಿದ್ದರು. ಕರುಳು ಕಿತ್ತು ಬರುವಂತಹ  ಅಂದಿನ ಸನ್ನಿವೇಶದ  ನೇರ ಪ್ರಸಾರ ಮಾಡಲು ವಿವಿಧ ಟಿ.ವಿ. ವಾಹಿನಿಗಳು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧವಾಗಿ ನಿಂತಿದ್ದವು. ಆದ್ಯಳನ್ನು ಕಂಡಾಕ್ಷಣ ವಸಂತ ತಮ್ಮ ಕಣ್ಣೀರನ್ನು ತಡೆಹಿಡಿಯದಾಗಿದ್ದರು. ಆದ್ಯಳ ಆಕ್ರಂದನ ಮುಗಿಲು ಮುಟ್ಟಿತ್ತು. 'ಅಮ್ಮ, ನೀನ್ಯಾಕೆ ದೂರಾನೇ ಇದ್ದೀಯ? ನನ್ನನ್ ಎತ್ಕೊ, ಮುದ್ದ್ ಮಾಡು' ಎಂದ ಆದ್ಯಳ ಗೋಳನ್ನು ನೋಡಿ, ಸುತ್ತಲೂ ನೆರೆದಿದ್ದ ಜನಗಳ ಕಣ್ಣಾಲೆಗಳು ತುಂಬಿ ಬಂದಿದ್ದವು. ಟಿ.ವಿ.ಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ರಾಜ್ಯದ ಜನಗಳೆಲ್ಲರೂ ಅಮ್ಮ-ಮಗಳ ಪರಿಸ್ಥಿತಿಯನ್ನು ನೋಡಿ ಕಣ್ಣೀರಿಟ್ಟಿದ್ದರು. ಹಿರಿಯರಾದ ಅನಸೂಯಮ್ಮ ಮಾತ್ರ ಏನೂ ಮಾಡಲು ತೋಚದೆ, ಮೂಕರಾಗಿ ನಿಂತಿದ್ದರು. 

ಅಂದು ವಸಂತರ ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿದಿತ್ತು. ವಸಂತರ ಮನಸ್ಸು ತನ್ನ ಮಗಳನ್ನು ಸೇರುವ ಕಾತರದಲ್ಲಿತ್ತು. ಆ ಅಪೂರ್ವ ಕ್ಷಣವನ್ನು ವೀಕ್ಷಿಸಲು ಇಡೀ ರಾಜ್ಯದ ಜನತೆ ಮತ್ತೆ ಟಿ.ವಿ.ಗಳ ಮುಂದೆ ಕಾಯುತ್ತಿತ್ತು. ಆಸ್ಪತ್ರೆಯಿಂದ ಹೊರಬಂದ ಕ್ಷಣವೇ ವಸಂತ ತನ್ನ ಮಗಳ  ಕಡೆ ಧಾವಿಸಿದ್ದರು. ತನ್ನಮ್ಮ ಎತ್ತಪ್ಪಿಕೊಂಡಾಗ ಆದ್ಯಳ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ಮುತ್ತುಗಳ ಮಳೆಯನ್ನೇ ತಮ್ಮ ಮುದ್ದು ಮಗಳ ಮೇಲೆ ಸುರಿಸಿದ ವಸಂತ, ಮಾತುಗಳೇ ಹೊರಡದಂತಾಗಿದ್ದರು. ಅನಸೂಯಮ್ಮ ಸಮಾಧಾನದ ನಿಟ್ಟುಸಿರಿಟ್ಟಿದ್ದರು. 

ವಸಂತರ ವೃತ್ತಿ ಹಾಗು ವೈಯುಕ್ತಿಕ ಜೀವನದ ಭಾವನಾತ್ಮಕ ಅನುಭವಗಳನ್ನು ಕೇಳಿದ ರೋಹಿಣಿ ಕೂಡ ಕಣ್ಣೀರಿಟ್ಟಿದ್ದಳು. ಸಮೀಪದಲ್ಲೇ ನಿಂತಿದ್ದ ಅವಳ ಗೆಳಯ ಡಾ. ಕಿರಣ್ ಅವಳಿಗೆ ಸಂಯಮದಿಂದಿರುವಂತೆ ಸನ್ನೆ ಮಾಡಿದ್ದರು. 

###  

ಮಾತನಾಡಿದ, ಮುಂದಿನ ಕೊರೋನಾ ಸೇನಾನಿ ಶ್ರೀ.ಥಾಮಸ್ರವರಾಗಿದ್ದರು. ಅವರು ಕೋವಿಡ್ ಪರೀಕ್ಷಾ ಕೇಂದ್ರವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಶಂಕಿತ ಸೋಂಕಿತರಿಂದ 'ಸ್ವಾಬ್ (swab - ಗಂಟಲು ಮತ್ತು ಮೂಗೊಳಗಿನ ದ್ರವ) ದ್ರವದ ಮಾದರಿ'ಯನ್ನು ಶೇಖರಿಸಿ, ಕೋವಿಡ್ ಪರೀಕ್ಷೆಗೆ ಕಳುಹಿಸುವುದೇ ಅವರ ಕೆಲಸವಾಗಿತ್ತು. ಥಾಮಸ್ ರವರ ಆಸ್ಪತ್ರೆಯ ಪರಿಧಿಯೊಳಗಿದ್ದ ಹಳ್ಳಿಯೊಂದರಲ್ಲಿ,  ಸುಮಾರು ೭೫ ವರ್ಷದ ಹಿರಿಯರೊಬ್ಬರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. ವಿಷಯ ಆಸ್ಪತ್ರೆಯ ಹಿರಿಯಧಿಕಾರಿಗಳನ್ನು ತಲುಪಿತ್ತು. ಉಸಿರಾಟದ ತೊಂದರೆಯಿಂದಾದ ಸಾವಾದುದರಿಂದ, ಆ ಮೃತ ದೇಹದ ಸ್ವಾಬ್ ಮಾದರಿಯನ್ನುಪಡೆದು, ಕೋವಿಡ್ ಪರೀಕ್ಷೆಗೆ ಕಳುಹಿಸಬೇಕೆಂದು ಮೇಲಧಿಕಾರಿಗಳು ಥಾಮಸ್ ರವರಿಗೆ ಆಜ್ಞಾಪಿಸಿದ್ದರು.  ಸಾವುಂಟಾದ ನಾಲ್ಕು ಘಂಟೆಗಳ ಕಾಲಾವಧಿಯಲ್ಲಿ ಸ್ವಾಬ್ ಮಾದರಿಯನ್ನು ಪಡೆಯುವುದು ಅನಿವಾರ್ಯವೆಂದು ಥಾಮಸ್ ರಿಗೆ ತಿಳಿದಿತ್ತು. ಸಾಕಷ್ಟು ಕಾಲಾವಧಿ ಇದ್ದುದರಿಂದ,  ಸುಮಾರು ೨೦ ಕಿ.ಮೀ.ದೂರದಲ್ಲಿದ್ದ ಆ ಹಳ್ಳಿಗೆ ಥಾಮಸ್ ತಮ್ಮ ಆಸ್ಪತ್ರೆ ವ್ಯಾನಿನಲ್ಲೇ ಧಾವಿಸಿದ್ದರು.

ಥಾಮಸ್ ರವರು ಆ ಹಳ್ಳಿಯನ್ನು ಸೇರುವಷ್ಟರಲ್ಲೇ ಆ ಮೃತರ ಕುಟುಂಬದವರು, ದೇಹವನ್ನು ಮಣ್ಣು ಮಾಡುವ ಸ್ಮಶಾನಕ್ಕಾಗಲೇ ಸಾಗಿಸಿಯಾಗಿತ್ತು. ಬೇರೇ ದಾರಿಯಿಲ್ಲದೆ, ಥಾಮಸ್ ಸ್ಮಶಾನಕ್ಕೇ ಧಾವಿಸಬೇಕಾಗಿ  ಬಂದಿತ್ತು.  ದೇಹವನ್ನಾಗಲೇ ಗುಂಡಿಯೊಳಗೆ ಇಳಿಸಿಯಾಗಿತ್ತು. ತನ್ನ ಕೆಲಸವೀಗ ಕಷ್ಟಸಾಧ್ಯವೆಂಬುದು ಥಾಮಸ್ರಿಗೆ ತಿಳಿದಿತ್ತು. ವ್ಯಾನೊಳಗಿಂದಲೇ ಕೂಗಿ ಹೇಳಿದ ಥಾಮಸ್, ನೆರೆದ ಜನಗಳಿಗೆ ಸ್ವಲ್ಪ ನಿಧಾನಿಸುವಂತೆ ತಿಳಿಸಿದರು. ಪಿ.ಪಿ.ಇ. ತೊಡುಗೆಯನ್ನು ಧರಿಸಿಯೇ ತಯಾರಾಗಿದ್ದ ಥಾಮಸ್, ಜನಗಳ ಸಹಾಯ ಪಡೆದು, ಗುಂಡಿಯೊಳಗೆ ಇಳಿಯಬೇಕಾಯಿತು. ಕರ್ತ್ಯವ್ಯ ಪ್ರಜ್ಞೆ ಮೆರೆದ ಥಾಮಸ್, ವಿಧಿ ವಿಧಾನಗಳ ಮೂಲಕ ಶವದಿಂದ ಸ್ವಾಬ್ ಮಾದರಿಯನ್ನು ಪಡೆದು, ಅದನ್ನು ತಂದಿದ್ದ ವಿಶೇಷ  ಸಾಧನವೊಂದರಲ್ಲಿ ಶೇಖರಿಸಿ ಇಟ್ಟದ್ದೂ ಆಯಿತು. ಗುಂಡಿಯಿಂದ ಹೊರಗೆದ್ದ ಥಾಮಸ್, ಸುತ್ತಲೂ ನೆರೆದಿದ್ದವರನ್ನು ಎಚ್ಚರಿಸುತ್ತಾ, 'ಮೃತರು ಕೋವಿಡ್ನಿಂದ ಸತ್ತಿರಬಹುದು. ಕೋವಿಡ್ ಪರೀಕ್ಷೆಯ ವರದಿ ಬರುವ ತನಕ,  ಅವರ ಸಂಪರ್ಕದಲ್ಲಿದ್ದವರೆಲ್ಲರೂ ಕ್ವಾರಂಟೈನಿನಲ್ಲಿ ಇರಬೇಕು' ಎಂದರು. ಆಸ್ಪತ್ರೆಯನ್ನು ಮರಳಿ ತಲುಪಲು ಇನ್ನೂ ೪೦ ನಿಮಿಷಗಳ ಕಾಲಾವಧಿಯಿತ್ತು. ಸಮಯಾವಧಿಯೊಳಗೆ ಆಸ್ಪತ್ರೆಯನ್ನು ತಲುಪಿದ ಥಾಮಸ್, ತಮ್ಮ ಅನುಭವವನ್ನು ಮೇಲಧಿಕಾರಿಗಳಿಗೆ ವಿವರಿಸಿದರು. ಥಾಮಸ್ ರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡ ಅವರ ಮೇಲಧಿಕಾರಿಗಳು, ಅವರ ಸಾಹಸಗಾಥೆಯನ್ನು ಇಲಾಖೆಯ ಮುಖ್ಯಸ್ಥರಿಗೂ ತಲುಪಿಸಿದ್ದರು.  

ಎರಡು ದಿನಗಳೊಳಗೆ ಮೃತರ ಸ್ವಾಬ್ ಮಾದರಿಯ ಪರೀಕ್ಷೆಯ ವರದಿ ಬಂದಿತ್ತು. ಮೃತರಿಗೆ ಕೋವಿಡ್ ಸೋಂಕಿತ್ತೆಂಬುದು ಖಾತರಿಯಾಗಿತ್ತು. ಕೂಡಲೇ ಮೃತರ ಸಂಪರ್ಕದಲ್ಲಿದ್ದವರನ್ನೆಲ್ಲಾ ಎಚ್ಚರಿಸಿದ ಥಾಮಸ್, ಅವರೆಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸುವ ಏರ್ಪಾಡು ಮಾಡಿಯಾಗಿತ್ತು. 

'ಮಣ್ಣಿನ ಗುಂಡಿಯೊಳಗಿಳಿದು, ಶವದಿಂದ ಸ್ವಾಬ್ ಮಾದರಿಯನ್ನು ಶೇಖರಿಸುವದು, ಥಾಮಸ್ ರಂತಹ ಧೈರ್ಯಶಾಲಿ ಕೊರೋನಾ ಸೇನಾನಿಗಳಿಗೆ ಮಾತ್ರ  ಸಾಧ್ಯ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ದಾಖಲಿಸಿದ್ದಳು. 

----

ಮುಂದಿನ ಹೃದ್ರಾವಕ ಅನುಭವವನ್ನು ಸಭಿಕರ ಮುಂದಿಡಲು ನಿಂತಿದ್ದವರು, ಮಹಿಳಾ ಪೊಲೀಸ್ ಪೇದೆ ಯಶೋದರವರು. ಕೇವಲ ಒಂದು ತಿಂಗಳ ಹಿಂದೆ ಆಕೆ ಗಂಡು ಮಗುವೊಂದ್ದಕ್ಕೆ ಜನ್ಮ ನೀಡಿದ್ದರು. ಆದರೂ ಕೋವಿಡ್ ದಾಳಿಯಿಂದುಟಾದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಇಲಾಖೆಯಿಂದ ಬಂದ ಕರೆಗೆ ಓಗೊಟ್ಟ ಯಶೋದ, ಸ್ಥಳೀಯ ಸರಕಾರಿ ಆಸ್ಪತ್ರೆಯ ಪೊಲೀಸ್ ತಂಡವನ್ನು ಸೇರಿದ್ದರು. ಹೆರಿಗೆಯಾದ ಸುಮಾರು ೨೦ ತಾಯಂದಿರುಗಳನ್ನೊಳಗೊಂಡ ವಾರ್ಡಿನ ರಾತ್ರಿ ಕಾವಲಿನ ಕರ್ತವ್ಯ ಅವರದ್ದಾಗಿತ್ತು. 

ಹೀಗಿರುವಾಗ ಒಂದು ದಿನ ಯಶೋದರಿದ್ದ ವಾರ್ಡಿಗೆ, ದಿನ ತುಂಬಿದ ಬಸುರಿಯಾದ ಕಮ್ರುನ್ನಿಸ್ಸಾ  ಎಂಬ ಮಹಿಳೆಯನ್ನು ಸುಮಾರು ರಾತ್ರಿ ೧೦ ಘಂಟೆಯ ಹೊತ್ತಿಗೆ ಸೇರಿಸಲಾಗಿತ್ತು. ಅರ್ಧ ಘಂಟೆಯೊಳಗೆ ಕಮ್ರುನಿಸ್ಸಾ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗುವಿನ ಆರೋಗ್ಯ              ಚೆನ್ನಾಗಿತ್ತು. ಹುಟ್ಟಿದ ಒಂದು ಘಂಟೆಯೊಳಗೆ ಮಗು ಹಸಿವಿನಿಂದ ಅಳತೊಡಗಿತು. ಆದರೆ ತಾಯಿಗಿನ್ನೂ  ಹಾಲು ಬಂದಿರಲಿಲ್ಲ. ಕೆಲವು ತಾಯಂದಿರಿಗೆ ಹಾಲು ಬರುವುದು ತಡವಾಗಬಹುದೆಂಬುದು ನರ್ಸೊಬ್ಬರ ಅಭಿಪ್ರಾಯವಾಗಿತ್ತು. ಹೊರಗಿನಿಂದ ನೀಡಲ್ಪಟ್ಟ ಹಾಲನ್ನು ಮಗು ಕುಡಿಯದಾಯಿತು. ಮಗುವಿನ ನಿರಂತರ ರೋದನ ಎಲ್ಲರನ್ನು ಕಂಗೆಡಿಸಿತ್ತು. ಯಶೋದಾ ಕೂಡ ಮಗುವಿನ ಬಗ್ಗೆ ಚಿಂತಿತರಾಗಿದ್ದರು. ಇಡೀ ರಾತ್ರಿ ಕಳೆದು, ಬೆಳಗಿನ ಜಾವದ ಐದು ಘಂಟೆಯ ಸಮಯವಾಗಿದ್ದರೂ ತಾಯಿಗಿನ್ನೂ ಹಾಲು ಬಂದಿರಲಿಲ್ಲ. ಹಾಲು ನೀಡಲಾಗದ ತಾಯಿ ಕಣ್ಣೀರುಡುತ್ತಿದ್ದರು.  ದಿಕ್ಕು ತೋಚದ ಹಿರಿಯ ನರ್ಸ್, ಕಮರುನ್ನೀಸಾರ ಮಗುವಿಗೆ ಮೊಲೆ ಹಾಲನ್ನುಣಿಸಿ, ಮಗುವಿನ ಜೀವವನ್ನುಳಿಸುವಂತೆ, ವಾರ್ಡಿನಲ್ಲಿದ್ದ ಎಲ್ಲಾ ತಾಯಂದಿರನ್ನು ಕೇಳಿಕೊಂಡರು. ಯಾವ ತಾಯಿಯೂ ಹಾಲನ್ನುಣಿಸಲು ಮುಂದೆ ಬರಲೇ ಇಲ್ಲ. ಅಂತೂ ಕಡೆಗೆ ಗಿರಿಜಾ ಎಂಬ ಒಬ್ಬ ತಾಯಿ ತನ್ನ ಮೊಲೆಯುಣಿಸಲು ಮುಂದಾದರೂ, ಗಿರಿಜಾರ ತಾಯಿ ಅವರನ್ನುತಡೆದು, 'ಕೋವಿಡ್ನ ದಿನಗಳಲ್ಲಿ ಗೊತ್ತಿಲ್ಲದವರ ಮಗುವಿಗೆ ಮೊಲೆಯುಣಿಸಿ ತೊಂದರೆಯನ್ನು ತಲೆಯ ಮೇಲೆಳುದುಕೊಳ್ಳುವುದು ಬೇಡ'ವೆಂದಿದ್ದರು. ಪೊಲೀಸ್ ಪೇದೆ ಯಶೋದಾ ಇವೆಲ್ಲವನ್ನೂ ಗಮನಿಸುತ್ತಲೇ ಇದ್ದರು. 

ಯಶೋದರ ಕಣ್ಣುಗಳು ವಾರ್ಡಿನ ಗೋಡೆಯ ಮೇಲೆ ನೇತುಹಾಕಿದ್ದ ಚಿತ್ರವೊಂದರ ಮೇಲೆ ಬಿದ್ದಿದ್ದವು. ತಾಯಿ ಯಶೋದಾ ತನ್ನ ಸಾಕುಮಗ ಕೃಷ್ಣನಿಗೆ ಮೊಲೆಹಾಲುಣಿಸುತ್ತಿರುವ ಚಿತ್ರ ಅದಾಗಿತ್ತು. ಆಗಲೇ ಪೇದೆ ಯಶೋದಾಳ ಒಳಗೆ ಅಡಗಿದ್ದ 'ಮಹಾ ತಾಯಿ'ಯ ಭಾವ ಜಾಗೃತವಾಗಿತ್ತು. ತಟ್ಟನೆ ಮುಂದಾದ ಯಶೋದಾ ಅಳುತ್ತಿದ್ದ ಮಗುವನ್ನು ಕೈಗೆತ್ತಿಕೊಂಡು ಕುಳಿತು, ತಮ್ಮ ಮೊಲೆಯನ್ನು ಮಗುವಿನ ಬಾಯಿಗಿಟ್ಟಿದ್ದರು. ಮೊಲೆಯನ್ನು ಚೀಪುತ್ತಾ ಹಾಲುಂಡ ಮಗು ಸಮಾಧಾನಗೊಂಡಿತ್ತು. ಮನ ಕಲಕುವ ದೃಶ್ಯವನ್ನು ನೋಡುತ್ತಾ ವಾರ್ಡಿನಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾಗಿದ್ದರು. ಮಾರನೆಯ ದಿನದ ವೃತ್ತ ಪತ್ರಿಕೆಗಳು ಘಟನೆಯ ವಿವರಣೆಯನ್ನು ನೀಡಿ,  'ಕರ್ತವ್ಯದ ಎಲ್ಲೆಯನ್ನು ಮೀರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸತ್ಕಾರ್ಯ' ಯಶೋದರದ್ದು ಎಂದು ಪ್ರಶಂಸಿದ್ದವು. 

'ಈ ವರಗೆ ನಾನು ಕೇಳಿದ್ದು ಜಗದೋದ್ಧಾರಕ  ಕೃಷ್ಣನ ತಾಯಿ ಯಶೋದಾ ಬಗ್ಗೆ ಮಾತ್ರ.  ಆದರಿಂದು ಜೀವಂತ ಯಶೋದರ ದರ್ಶನ ಮಾಡಿದ ಭಾಗ್ಯ ನನ್ನದಾಯಿತು' ಎಂದೆನಿಸಿದ ರೋಹಿಣಿ ಭಾವಪರವಶರಾಗಿದ್ದರು. 

---  

ತನ್ನನ್ನು ನೈಟಿಂಗೇಲ್ ಪದಕದ ಪ್ರಶಸ್ತಿಗೆ ಭಾಜನಳನ್ನಾಗಿ ಮಾಡಿದ ತನ್ನ ಸತ್ಕಾರ್ಯವನ್ನು ಸಭಿಕರ ಮುಂದಿಡುವ ಕಡೆಯ ಸರದಿ ಮಿಠಾಲಿಯವರದಾಗಿತ್ತು. ಅವರು ಮಧ್ಯ ವಯಸ್ಸಿನ ವಿಧವೆಯಾಗಿದ್ದರು. ವಿನಯವೇ ಮೂರ್ತಿವೆತ್ತಂತ್ತಿದ್ದ ಮಿಠಾಲಿಯವರು, ಸುಮಾರು ಹತ್ತು ವರ್ಷಗಳ ಹಿಂದೆ 'ಸುಭಿಕ್ಷ ಫೌಂಡೇಶನ್' ಎಂಬ ಸೇವಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಶಾಲಾ ಬಾಲಕರುಗಳಿಗೆ ಮಧ್ಯಾಹ್ನದೂಟವನ್ನು ಕಳುಹಿಸುವುದೇ ಅವರ ಸಂಸ್ಥೆಯ ಮೂಲೋದ್ಧೇಶವಾಗಿತ್ತು. ೨೦ ಸ್ವಯಂ ಸೇವಕಿಯರುಗಳು ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಆಶ್ರಯವಿಲ್ಲದ ಸುಮಾರು ೧೦೦ ಮಹಿಳೆಯರನ್ನು ಮಿಠಾಲಿ ಸಂಸ್ಥೆಯ ವಿವಿಧ ಕೆಲಸಗಳಿಗೆ ನೇಮಿಸಿಕೊಂಡಿದ್ದರು. ಒಂದು ಲಕ್ಷ ಶಾಲಾ ಮಕ್ಕಳಿಗೆ ಭೋಜನವನ್ನು ತಯಾರಿಸುವ ಅಣಿಯಿದ್ದ ಎಂಟು ಸುಸಜ್ಜಿತ ಅಡುಗೆ ಮನೆಗಳು ಅವರೊಂದಿಗಿತ್ತು. ಇಡೀ ನಗರದ ಶಾಲೆಗಳಿಗೆ ಸಿದ್ಧ ಭೋಜನವನ್ನು ಕೊಂಡೊಯ್ಯುವ ಒಂದು ನೂರು ವ್ಯಾನ್ಗಳನ್ನು ಆ ಸಂಸ್ಥೆ ಹೊಂದಿತ್ತು. 

ಕೋವಿಡ್ ಲಾಕ್ಡೌನ್ನಿಂದ ಕೆಲಸವನ್ನು ಕಳೆದುಕೊಂಡ ವಲಸಿಗರು ಮತ್ತು ಇತರ ಬಡವರುಗಳಿಗೆ ಊಟವನ್ನು ಒದಗಿಸುವ ಕಾರ್ಯಕ್ಕೆ ಮಿಠಾಲಿ ಮುಂದಾಗಿದ್ದರು. ಅವರ ಸಂಸ್ಥೆಯಾಗಲೇ ಸರಕಾರದಿಂದ ಮಾನ್ಯತೆಯನ್ನು ಪಡೆದುದಾದ್ದರಿಂದ, ಹೆಚ್ಚಿನ ಸೌಲಭ್ಯಗಳನ್ನು ಗಳಿಸುವುದು ಮಿಠಾಲಿರವರಿಗೆ ಕಷ್ಟವಾಗಲಿಲ್ಲ. ಲಾಕ್ಡೌನ್ ಜಾರಿಗೊಳಿಸಿದಾಗಿನಿಂದ ಸಿದ್ಧ ಭೋಜನದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಾ ಸಾಗಿತ್ತು. ಹೆಚ್ಚು ಸ್ವಯಂ ಸೇವಕರುಗಳು ಅವರ ಸಂಸ್ಥೆಯನ್ನು ಸೇರಿದ್ದು, ಮೂರು ಪಾಳಿಗಳಲ್ಲಿ ಅಡುಗೆಯ ಕೆಲಸ ನಡೆಸುತ್ತಿದ್ದರು. ಭೋಜನದ ಅವಶ್ಯಕತೆಯುಳ್ಳವರು ಸಂಪರ್ಕಿಸಲೆಂದು ಅವರ ಸಂಸ್ಥೆಗೆ 'ಸಹಾಯ ವಾಣಿ'ಯ ವ್ಯವಸ್ಥೆಯನ್ನು ಏರ್ಟೆಲ್ನಂತಹ ಸಂಸ್ಥೆಗಳು ಮಾಡಿದ್ದವು. ಎಲ್ಲಾ  ಮಾಧ್ಯಮಗಳೂ ಅವರ ಸಂಸ್ಥೆಯ ಸಹಾಯ ವಾಣಿಯ ಬಗೆಗಿನ ಪ್ರಸಾರವನ್ನು ಮತ್ತೆ ಮತ್ತೆ ಮಾಡುತ್ತಿದ್ದವು. ಅವಶ್ಯಕತೆ ಇರುವ ಯಾರಾದರೂ ಸಂಸ್ಥೆಯ ಸಹಾಯ ವಾಣಿಗೆ ಕರೆ ಮಾಡಿ ಬೇಕಾದಷ್ಟು ಭೋಜನಗಳನ್ನು ಉಚಿತವಾಗಿ ಪಡೆಯಬಹುದಿತ್ತು. ನಗರದ ಯಾವುದೇ ಮೂಲೆಯ ನಿರಾಶ್ರಿತರ ಶಿಬಿರಗಳಿಗೆ ಬೇಕಾದಷ್ಟು ಭೋಜನಗಳನ್ನು ತಲುಪಿಸಲು, ನಾಲ್ಕು ಘಂಟೆಗಳ ಮುನ್ಸೂಚನೆ ಆ ಸಂಸ್ಥೆಗೆ ಸಾಕಾಗಿತ್ತು. ಸಂಸ್ಥೆಯ ಈ ಮಹಾ ಅಭಿಯಾನಕ್ಕೆ ಪೊಲೀಸ್ ಇಲಾಖೆಯ ಬೆಂಬಲ ಕೂಡ ಸಹಾಯಕವಾಗಿತ್ತು. ವಲಸಿಗರು, ರಸ್ತೆಬದಿಯ ವ್ಯಾಪಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಮುಂತಾದವರಿಗೆ, ಮಿಠಾಲೀಯವರ ಸಂಸ್ಥೆ ದಿನನಿತ್ಯ ಒಂದು ಲಕ್ಷದಷ್ಟು ಭೋಜನಗಳನ್ನು ಒದಗಿಸುತ್ತಿತ್ತು. ಸುಡು ಬಿಸಿಲಿನ ದಿನಗಳಲ್ಲಿ ಬೆವರಿಳಿಸಿ ದುಡಿಯುತ್ತಿದ್ದ ಪೊಲೀಸರು, ಸ್ವಚ್ಛತಾ ಕರ್ಮಚಾರಿಗಳು, ಆರೋಗ್ಯ ಸಂಸ್ಥೆಗಳ ನೌಕರರು, ಚಾಲಕರು ಮುಂತಾದ ಸಹಸ್ರಾರು ಕರೋನ ಸೇನಾನಿಗಳಿಗೂ ಆ ಸಂಸ್ಥೆಯ ಭೋಜನವನ್ನು ಅವರಿರುವ ಸ್ಥಳಗಳಿಗೇ ತಲುಪಿಸಲಾಗುತ್ತಿತ್ತು.  

ಮಿಠಾಲೀಯವರ ಮಹತ್ಕಾರ್ಯ ದೇಶದ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿ, ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಅವರ ಕಾರ್ಯ ವೈಖರಿ, ಲಾಕ್ಡೌನ್ ಕಾರಣದಿಂದಾಗಿ ಕೆಲಸವಿಲ್ಲದೇ ಬಳಲುತ್ತಿದ್ದ ಕೋಟ್ಯಂತರ ಹಸಿದ ಹೊಟ್ಟೆಗಳಿಗೆ ಅನ್ನವನ್ನೊದಗಿಸುವ ಕಾರ್ಯವನ್ನು ಮಾಡುತ್ತಿದ್ದ ಸಹಸ್ರಾರು ಸಂಸ್ಥೆಗಳಿಗೆ ಮಾದರಿಯಾಗಿತ್ತು. 

'ನಿಷ್ಕರುಣಿ ಕೋವಿಡ್, ಇಡೀ ದೇಶಕ್ಕೆ ಕಂಡು ಕೇಳರಿಯದ ಸಂಕಷ್ಟವನ್ನು ತಂದೊಡ್ಡಿದೆ. ವಸಂತ, ಥಾಮಸ್, ಯಶೋದಾ, ಮಿಠಾಲಿಯವರುಗಳಂತಹ ನಿಸ್ವಾರ್ಥ ಕೊರೋನಾ ಸೇನಾನಿಗಳ ನೆರವಿನಿಂದ ಕೋವಿಡ್ನ ವಿರುದ್ಧದ ಸಮರವನ್ನು ನಾವು ಗೆದ್ದೇ ಗೆಲ್ಲುತ್ತೇವೆ' ಎಂಬ ಭರವಸೆಯೊಂದಿಗೆ ರೋಹಿಣಿ, ಕಿರಣ್ ಮತ್ತು ರಾಜು ಅಂದಿನ ಸಮಾರಂಭದಿಂದ ನಿರ್ಗಮಿಸಿದ್ದರು.

-೦-೦-೦-೦-೦-೦-೦- 











 

Monday 22 March 2021

Remembering 22nd March 2020!


 It was nearing 5.00 pm on Sunday, the 22nd March 2020. People on either side of the street, were standing in front of their respective houses and on their roof-tops, to perform the most sacred duty assigned to them by their Prime Minister, Mr. Narendra Modi. They wanted to thank and encourage millions of ‘corona warriors,’ including medical staff, police personnel, sanitation workers, those who work for supply of essential items, bankmen, postal employees and media-men etc., who were working 24 X 7 for fighting ‘Covid-19’ (Coronavirus disease-19).

At the stroke of 5.00 pm, they started clapping, cheering, clanging of utensils, ringing pooja (worship) bells, and blowing conch shells. Being a long-time resident of the area, Raju was in his elements in cheering up his neighbours. His rational-minded daughter Rohini, who was a ‘Sociology research scholar,’ too was equally enthusiastic in drumming support for her father. Being tech-savvy, she was ringing bell sound from her i-phone connected to the speaker by bluetooth! A few were video recording and taking pictures through their mobiles. Children, young, middle-aged and the old displayed great enthusiasm in adding to the intensity of the event. In fact, the show went on for about 15 minutes. Raju's street was a picture of ‘mini-India,’ expressing its gratitude to the brave men who were at the forefront in fighting ‘Covid-19 virus’ (Coronavirus disease-19 virus), risking their lives.

The next day, Raju was first to show his daughter, Prime Minister, Modiji's tweet tagging the video clip of his nonagenarian mother beating a plate in her Gandhinagar house. 'With the blessings of crores of mothers like you, the doctors, nurses, medical staff, police personnel, security personnel, sanitation workers and members of the media fighting coronavirus are encouraged,’ the PM had written. Young Rohini had nodded in approval.

Newspapers were full of pictures of people from almost all parts of India clapping for their fighting countrymen. Politicians, film personalities and sportsmen, were second to none in stealing the show. What was heartening, were the pictures of 'aam janata' (common men), joining from their doorsteps in expressing their willingness to fight the menace, which was slowly engulfing their country.

Clap show for fighting Corona event was not without aberrations. Rohini was quick in chiding her father, showing pictures of people in most places, throwing the discipline of ‘social distancing.’ The dignity of clapping had been washed away, as people had spilled over from balconies and terraces to the streets, shouting slogans and marching with the tri-colour flag. People were seen virtually in a celebration mood in most pictures. Raju too had to nod in agreement.

Quickly regaining his poise, Raju lost no time in convincing his daughter. 'A few people might have negated the sanctity of the “14-hour janata (people's) curfew.” But the country's response to PM's appeal was overwhelming. I never thought I would witness such a sight. People clapping, banging steel plates, beating drums, and blowing pipes was an expression of solidarity. And what an amazing energy?’

Rohini was too good on social media. She was quick in catching a tweet from a veteran film star of pan-India fame, whose ardent fan was none other than her father. The star in his tweet had claimed that vibrations from clapping and blowing of conch shells as part of 'Janata (people's) Curfew day,' were aimed at reducing coronavirus potency as it was an 'amavasya', the darkest day of the month. Some self-proclaimed intellectuals had even re-tweeted, that a few great astrologers had rightly advised the Prime Minister to call for ‘Janata curfew and the 5 pm-clapping event on 22nd March!’ WhatsApp messages started flooding reflecting the tweet of the superstar. 'NASA satellite video live telecast, has shown that the coronavirus is retreating in India, thanks to the people effort at 5 pm on 22nd March at the instance of its Prime Minister! The bio-satellite of NASA has recorded that Covid-19 activity had weakened exactly at that time,' said the message exchanges. Even Raju, despite being a strong believer in astrology, knew very well that all these tweets, re-tweets, and WhatsApp messages were far from the truth and were condemned by experts.

Rohini's further dig from media had revealed more criticisms. 'High on talk, low on substance,' was the criticism from certain sections on Modiji's appeal for 'janata curfew.’ 'Without any concrete steps to combat the virus, Prime Minister has asked people to clap,' was their ridicule. ‘Clap-hailing of our heroes who are fighting the virus is copied from western countries,’ they had pointed out. A critique doctor from South India, had even tweeted 'please don't come out at 5 pm on Sunday, the 22nd March, to applaud us. Instead, stand wherever you are and ask your PM to give you more tests for Covid-19. Ask for more hospital beds, ventilators, masks, and facilities for healthcare workers. Ask for financial back up for the most vulnerable.’

Raju had to retreat to a conciliatory mood, facing a barrage of sharp criticisms, from his ‘no-nonsense daughter Rohini!’ ‘In a democratic set-up, criticisms are a healthy sign and welcome,’ he defended. But nobody can deny that Modiji's call, for a day's Janata curfew on 22nd March, did serve the purpose of alerting a nation, which was under the threat of the worst pandemic, the mankind had seen. One day of the self-imposed curfew, was something like a trial drill, for preparing a vast nation for a prolonged restraint in the days to come. Our ancestors have hailed doctors with the message 'Vaidyo narayano harihi,’ meaning that the doctors are Gods. Our PM had reiterated the same by making it ‘more inclusive under the name corona warriors,' and had called people to express their gratitude to our heroes, by clapping at 5 pm on that day.

***

The euphoria created by 'Janata curfew,' was short-lived. Soon state governments were grappling with the most haunting question, 'what next?’ They were all undecided. Most states and even Union Territories, had imposed lockdown in 82 districts of the country, with confirmed cases of Covid-19 till 31st March. Inter-state bus services too were suspended. Center was contemplating suspension of all metro-train services. There were strong rumours, that there would be a ban on movements of trains too. But even people knew that these measures were not enough. Many were questioning the efficacy of blocking only 82 districts in their vast country.

PM Modiji, while thanking people for the success of Janata curfew, had cautioned people to get ready for a longer battle. He had tweeted that, 'today's janata curfew may get over at 9 pm, but that doesn't mean, we should start celebrating. Do not consider it a success. “This the beginning of a long fight.” Today, our countrymen have declared that we are capable, and if we decide, we can beat the biggest challenge together.’

'Lockdown completely now,' was the considered opinion of medical experts. While China was the first to be hit, followed by most European countries and the US, India was fortunate to be among the last few. China had almost contained the impact with its draconian measures. But Europe and even the US were undecided in implementing strict measures and the result was there for everyone to see. Italy was the worst hit. Can India with its poor medical facilities withstand, if hit on a large scale?

Rohini's probing eyes were focusing on the issue, 'what next?’ Leading doctors were of the opinion that corona had the quickest propensity to spread. While contact with infected's droplets was deadly, the impact of physical contacts and even air-borne transmissions could not be ignored. The worst-hit Italy was facing a sea of patients and doctors were perplexed with the question, ‘whom to save and whom to be left to die?’ There were even reports that, Italy is no longer providing ventilators to 80+ aged patients! What can India do if confronted with such a deluge of patients?

Community health experts were of the opinion that lockdown should be now and before it becomes too late. Shutting down after a month will have disastrous consequences, with a huge number of cases and demoralized citizens facing sky-rocketing costs. Projected data of escalation of the Covid spread was presenting a scary picture. Do we have enough hospital beds, ICUs, and ventilators? Will we be able to ensure enough supply of Oxygen to our ventilators? Can we afford to mix regular patients with the Covid-19 patients? Do we have enough doctors, nurses, and other para-medical staff? Can we ensure the safety of our health workers? Are we rich enough to import doctors? Can we bypass regulations, to deploy medical students in the final year of their course, as doctors? The questions posed by medical experts were virtually piercing the eyes and ears of the government and the people. Even many enlightened citizens were becoming restless and were questioning why the Government is not coming out with at least a 3-week total lockdown?

It was the 24th of March 2020. There was news in the air that Prime Minister Narendra Modiji, will be addressing the nation at 8 pm. PM coming on media for the second time in five days, was almost confirming the worst fear haunting the minds of all concerned. ‘Will it be a total lockdown? And if so, for how long?’

It was 8 pm and Prime Minister was on TV. Raju and Rohini were glued to the television screens. So also were the 1.3 billion pairs of eyes of the country. A determined-looking Modiji delivered his address, declaring a ‘lockdown,’ of the whole country, for a period of 21 days, from the beginning of the 25th day of March, 2020!

Raju and his daughter Rohini, both were in a state of shock after listening to the Prime Minister's address. It was a case of total lockdown of the entire nation for 21 days, with no buses, trains and flights both domestic and international. They really needed some time to assess the situation before reacting.

Next day, newspapers too had just recorded the proceedings of the previous day, without adding any comments from their think-tanks. Even the opposition parties too, chose to take some time before responding. It was only after a couple of days, the debate on the related issues started trickling in.

More experienced father Raju chose to count the blessings first.

‘I am happy that the uncertainty in the matter of locking down has ended. A popular Telugu proverb says that “Anumanam Pedda Rogam,” which means that “the state of uncertainty can be a big disaster.” I am happy that our Prime Minister has taken a firm decision in imposing the lockdown. This was possible because of the following factors.

-The country had a strong PM with a full majority to impose the toughest lockdown for 21 days. Had it been a coalition Government, such a tough and sudden decision would not have been possible.

-Although a federal structure, the relationship between the Center and the States was reasonably pleasant, barring a couple of aberrations.

-Although the country was passing through a financial crisis, the monsoon was good in the year 2019 and there was substantial storage of food grains in our godowns. Crude oil prices were ruling low, allowing a sort of luxury for the Government on the foreign exchange front.

-State assembly elections, that constantly haunt the country were quite away, and the nearest one was during November 2020 for Bihar assembly.

-The impact of the virus was predicted to be less severe on our country, as we fall under the tropical zone. Moreover, the demographic dividend of a younger population was in our favour, who had better resistance to the pandemic attack.

'No Appa (father), you are trying to cover the larger issues with generic ones,' averred the ever combative Rohini. She was ready with a barrage of counter-arguments.

-The Prime Minister should have had a detailed discussion with all Chief Ministers before deciding on the lockdown. What happened to the rhetoric of swearing by our federal structure day in and day out? There was only a video conference at the level of chief secretaries, which was not enough. Although the center was powerful enough to impose the country-wide lockdown, the responsibility of implementation lies with the states only.

-The decision of total lockdown was too sudden, almost reminding us of the chaos created, during the aftermath of the demonetization in the year 2016.

-Even before 24th March 2020, unrest in the camps of migrant workers was very much visible throughout the country. Trains from Mumbai leaving towards the east had witnessed tremendous rush with the flood of anxious migrants. They feared the loss of jobs and also the income. They had nowhere to go except marching towards their native villages. The Chief Ministers of different states and the PM never thought about the possible plight of migrant workers before deciding on the lockdown.

Daughter Rohini was quite furious with her strong points.

'It's easier to become wiser after the incident. Fortunately, Covid-19 virus’ late entry was to India's advantage, and it was a wise decision to impose the lockdown when the number of Covid-positive cases were only in few hundreds for the Country,’ said the seasoned campaigner Raju.

Living with total lockdown was a different experience, both for police and also the common men. Incidents of violating breakdown were rampant. Police hitting lawbreakers on 2-wheelers with lathis was a common scene. Police catching wrongdoers and letting them away with mild punishments like 'stand ups and sit downs' were also observed. But the worst development was the unrest among migrant workers. Unable to bear the job loss and with no incomes, they started walking towards their villages, hundreds and thousands of kilometers away.

***

It was time for Modiji's third message on TV on the 3rd of April. As earlier Raju and Rohini were in front of the TV. Modi's video message this time was shorter. 'We are confined to our homes, but none of us is alone. The collective strength of 130 crore Indians is with each one of us.... This Sunday, on April 5 at 9.00 pm, turn off all the lights in your homes, stand at your doors or in your balconies and light candles or diyas (lamps), torches or mobile flashlights for 9 minutes.... Amidst the darkness spread by the corona pandemic, we must continuously progress towards light and hope. No one must assemble or gather anywhere participating in this programme.’ PM's message was aimed at keeping the public morale up with a candle program, half-way through the 21-day national lockdown.

While Raju was excited about the program, Rohini was quick in pointing out the criticisms emanating from opposition benches. 'Instead of addressing the real issues of saving lives and livelihood, Modiji is resorting to gimmicks and photo-ops! Some opposition leaders even went on to point out that 6th April, being the “foundation day of Modiji's party BJP,” he wanted its celebration on the previous day itself!’

Some more opposition leaders and technocrats, raised concern about the switching off of all the lights at one time, which may create a sudden drop in the load on the supply grid, which may lead to collapse of the grid itself, further leading to disruption of power supply! Electricity department officials, even rushed to appeal to the public, to switch off only the lights, but keep the other equipment like fans and fridges running, so that the load on the grid does not come down drastically.

A day before the light event, undeterred by criticism, Modiji continued to quote a poem of his mentor and former Prime Minister Atal Bihari Vajpayee, which highlighted the significance of lighting a lamp. The poem read......



Hindi Version

Aao phir se diya jalayen
Bhari dupheri mein andhiyara
Suraj parchyi se hara
Antartam ka neh nichude
Bujhi hui baati sulgaye
Aao phir se diya jalayen

Hum padaav ko samjhe manzil
Lakshay hua aanko se ojhal
Vartaman keh mohjaal me
Aane wala kal na bhulaye
Aao phir se diya jalaye

Aahuti baki yagna adhura
Apno ke Vighno ne ghera
Antim jaye ka wajra banana
Nav Dadheechi haddiyan galayen
Aao phir se diya jalayen

***

English Version

At the time of this darkness during the afternoon
When sun is covered by shadows
Let us take out as oil, the darkness within our mind and body
To re-kindle the flame instead
Let's light the lamp together again

We mistook the milestone for the destination
Our goal has become out of sight
In the mundane trappings of the present
Let's not lose sight of the coming tomorrow
Let's light the lamp together again

The sacrifice is pending, the yajna* is incomplete
Engulfed by the obstacles born from our own men
To make the vajra for the final victory
Let our modern Dadheechis* donate their backbones
Let's light the lamp together again

(*Yajna is a Vedic ritual in Hindu tradition, which is done as sacrifice or offerings, composed of ingredients like ghee, to a sacred fire with the objective of invoking good for the society. Fight against coronavirus is symbolized here as Yajna).

(*Vajra stands for Vajrayudh, a weapon which God Indra had used to kill a demon).

(*Dadheechi was a saint who donated his backbone to God Indra, to be made as Vajrayudh).

***

'I vaguely remember to have seen Vajpayeeji on TV. I haven’t heard him speaking. Did he write this poem? When and why?’ was young Rohini's reaction. Now it was time for father Raju to take full scope in explaining the relevance of Atalji and his poem to his daughter. 'Vajpayeeji was our Prime Minister. More than a politician, he was a great orator and a poet. Many during his lifetime, used to say that “Vajpayeeji going to politics, was a great loss to the world of literature.” In spite of his very active political life, both as an opposition leader and the Prime Minister, he kept time for giving vent to his literary skills too. The quoted poem was aimed at the youth of the country, symbolized by the afternoon sun, which is covered by the darkness of clouds. But our young men are energetic and enthusiastic. Their march on the track should not be disturbed by obstacles of the present day. In view of a bright tomorrow, they should continue to fight together (Yajna) by lighting the lamp of hope. Our modern youth, like “saint Dadheechi,” should sacrifice their time, intellect, and energy to the ongoing fight for ensuring the welfare of mankind. Full marks to Modiji, for a timely quotation of the poem and calling upon our people to light the 'lamp heralding our fight against the pandemic,' averred a beaming Raju. Combative Rohini was now subdued and nodded in appreciation of the great spirit of the poem.

It was 9 pm on Sunday, the 5th of April. Lights went off and people came out of their houses. Rohini too joined her father in lighting the lamps and candles responding to the call of the Prime Minister. A few even blew the conch and fired crackers. It was virtual 'Diwali, the Indian festival of lights' replayed. Modiji himself was at the forefront of lighting the lamp, wearing a 'mundu' (a rectangular white cloth used to wrap around the waist, also called dhoti) and draped in an Assamese 'gamusa' (a rectangular white cloth with red borders draped around the neck). The nation-wide lighting of the lamps symbolized the country's resolve in being together for the fight against Covid-19.

###

Sunday 21 March 2021

World Poetry Day

 

World Poetry Day
21st March
My translation tributes in English and Kannada to two of our great poets. 

ಕವನ ಹುಟ್ಟುವ ಸಮಯ 

ರಚನೆ: ಕೆ.ಎಸ್. ನರಸಿಂಹ ಸ್ವಾಮಿ

***

ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು 

'ಕವನ ಹುಟ್ಟಿತೇ?' ಎಂದು ಕೇಳುತಿದೆ. 

ನಾನೀಗ ತುಟಿಯಂಚಿನಲ್ಲಿ ಹೇಳಿದ್ದಿಷ್ಟೆ:

ಇನ್ನೊಂದು ದಿವಸ ಕಾದರೆ ನಷ್ಟವೆ?


ಅನುಭವದ ಆಯ್ಕೆ ಮುಗಿದಿತ್ತು. ಒದಗಿರಲಿಲ್ಲ 

ತಕ್ಕಂಥ ಮಾತು, ಕಾಯುತ್ತ ನಿಂತೆ. 

ಅಬ್ಬರಗಳನು ದಾಟಿದ ಗಟ್ಟಿ ಪಂಕ್ತಿಗಳ 

ಸಹಜ ಸಂಚಾರಗಳ ಕನಸ ಕಂಡೆ. 


ಆಳದನುಭವವನ್ನು ಮಾತು ಕೈಹಿಡಿದಾಗ 

ಕಾವು ಬೆಳಕಾದಾಗ ಒಂದು ಕವನ 

ನಾನು ಬಯಲಿಗೆ ಬಂದು ನಿಂತಿದ್ದೇನೆ;

ಬರುವುದಿದೆ ಸರಿಯಾದ ವರ್ತಮಾನ 


ಇಂಥ ಅಂಗಡಿಯಲ್ಲಿ ಈ ಮಾತಿಗಿಷ್ಟೆ ಬೆಲೆ 

ಎನ್ನುವುದು ಮೊದಲು ಗೊತ್ತಾಗಲಿಲ್ಲ 

ಒಂದೊಂದು ಮಾತಿಗೊಂದೊಂದು ಇತಿಹಾಸವಿದೆ;

ನಾನು ಬೇರಿನ ತನಕ ಹೋಗಲಿಲ್ಲ 


ಕಾಯುವುದು ಕಷ್ಟವೂ ಅಲ್ಲ, ನಕ್ಷತ್ರಗಳು 

ಆದಿಯಿಂದಲು ಹೀಗೆ ಕಾಯುತ್ತಿವೆ. 

ಕವನ ಹುಟ್ಟುವ ಸಮಯದಲ್ಲಿ 

ನನ್ನಿಂದಲೇ ಆಗಬೇಕಾದ್ದಿಲ್ಲಿ ನೂರಾರಿವೆ. 


ನನ್ನ ತೊಡಕುಗಳನ್ನೇ ಅರಿಯದ ಪರಿಧಾವಿ 

ಧಾವಿಸುತ್ತಿದೆ ನನ್ನ ಶಿಶಿರದೆಡೆಗೆ 

ಅಶರೀರ ಭಾವಕ್ಕೆ ಇಷ್ಟರೂಪವ ತೊಡಿಸಿ 

ಕಳಿಸಿಕೊಡಲಾದೀತೆ ನಾಳೆಯೊಳಗೆ?     

Poem’s Birth Time
***
Will my poem be born?
Asked my peeping eyes.
Can’t you wait for a day more?
Cautioned my lips!
Scanning my experiences was not enough,
right words were eluding.
I dreamt of natural words
bereft of pomp.
Heat paves way for light,
when ideas emerge from within.
I am waiting in open
for the flash of thoughts.
Each word has its price in gold,
but they are never sold.
Each word has its history,
but I don’t know its mystery!
Stars are waiting,
can’t I wait?
Let me accomplish more
before my poem rises in the air.
Notwithstanding my constraints,
my thoughts are running fast!
Let abstracts become concrete,
before my poem takes shape.
(TRANSLATED BY LAKSHMINARAYANA K.)
*********


क़दम मिलाकर चलना होगा।
Poem by A.B.Vajpayee
बाधाएँ आती हैं आएँ, घिरें प्रलय की घोर घटाएँ,
पावों के नीचे अंगारे, सिर पर बरसें यदि ज्वालाएँ,
निज हाथों में हँसते-हँसते, आग लगाकर जलना होगा।
क़दम मिलाकर चलना होगा।
हास्य-रूदन में, तूफ़ानों में, अगर असंख्यक बलिदानों में,
उद्यानों में, वीरानों में, अपमानों में, सम्मानों में,
उन्नत मस्तक, उभरा सीना, पीड़ाओं में पलना होगा।
क़दम मिलाकर चलना होगा।
उजियारे में, अंधकार में, कल कहार में, बीच धार में,
घोर घृणा में, पूत प्यार में, क्षणिक जीत में, दीर्घ हार में,
जीवन के शत-शत आकर्षक, अरमानों को ढलना होगा।
क़दम मिलाकर चलना होगा।
सम्मुख फैला अगर ध्येय पथ, प्रगति चिरंतन कैसा इति अब,
सुस्मित हर्षित कैसा श्रम श्लथ, असफल, सफल समान मनोरथ,
सब कुछ देकर कुछ न मांगते, पावस बनकर ढ़लना होगा।
क़दम मिलाकर चलना होगा।
कुछ काँटों से सज्जित जीवन, प्रखर प्यार से वंचित यौवन,
नीरवता से मुखरित मधुबन, परहित अर्पित अपना तन-मन,
जीवन को शत-शत आहुति में, जलना होगा, गलना होगा।
क़दम मिलाकर चलना होगा।

Kannada Translation:
ಜೊತೆ ಜೊತೆ ಸಾಗೋಣ
ವಿಘ್ನಗಳಿರಲಿ, ಪ್ರಳಯವೇ ಬರಲಿ
ಕಾಲಡಿಯಲ್ಲೇ ಕೆಂಡಗಳಿರಲಿ
ಬೆಂಕಿಯ ಮಳೆಯು ತಲೆಯನೆ ಸುಡಲಿ
ಸುಡುಗೆಂಡವನೆ ಕರದಲಿ ಪಿಡಿದು
ನಗುತ ನಡೆಯೋಣ
ಜೊತೆ ಜೊತೆ ಸಾಗೋಣ
ಅಳು-ನಗುಗಳ ಅಲೆಯಲ್ಲಿ
ಬಿರುಗಾಳಿಯ ಸುಳಿಯಲ್ಲಿ
ಎಣಿಕೆಗೆ ಸಿಲುಕದ ಬಲಿದಾನದಲಿ
ಹಸಿರು ಬನದಲಿ, ಬಂಜರು ಮಣ್ಣಲಿ
ಅಪಮಾನದಲಿ, ಬಹುಮಾನದಲಿ
ಉನ್ನತ ಜ್ಞಾನದ ಅಭಿಮಾನದಲಿ
ನೋವ್ಗಳ ನಡುವೆಯೇ ಬಾಳೋಣ
ಜೊತೆ ಜೊತೆ ಸಾಗೋಣ
ಹಗಲಿರಲಿ, ಇರುಳಿರಲಿ
ದಡವಿರಲಿ, ನಡುನೀರಿರಲಿ
ಧಿಕ್ಕಾರವಿರಲಿ, ಜೈಕಾರವಿರಲಿ
ಕಿರುಗೆಲುವಿರಲಿ, ಕಾಡುವ ಸೋಲಿರಲಿ
ನೂರಾರು ಆಶಯಗಳ
ಹೊತ್ತು ನಡೆಯೋಣ
ಜೊತೆ ಜೊತೆ ಸಾಗೋಣ
ತಲಪುವ ದಾರಿ ಕಾಣುತಲಿರಲು
ಚಿರಂತನ ಪ್ರಗತಿಗೆ ಎಣೆಯೆಲ್ಲಿ?
ಸೋಲು-ಗೆಲುವುಗಳ ನಡುವಿನಲಿ
ಶ್ರಮಿಕನ ಮುಖದಲಿ ನಗುವಿರಲಿ
ಎಲ್ಲವ ಕೊಟ್ಟು, ಏನನು ಬೇಡದ
ಜಲಧಾರೆಯಂತೆ ಹರಿಯೋಣ
ಜೊತೆ ಜೊತೆ ಸಾಗೋಣ
ನೀರವ ಮೌನದಿ ಮಡುಗಟ್ಟಿದ ವನ
ವಂಚಿತ ಪ್ರೇಮದ ನೋವುಂಡ ಮನ
ಮುಳ್ಳಿನ ಹಾದಿಯ ನಡುವೆಯೆ ಜೀವನ
ಪರಹಿತಕಾಗೆ ಮೀಸಲು ತನು ಮನ
ಶತ ಶತ ಆಹುತಿಗಳ ನೀಡೋಣ
ಜೊತೆ ಜೊತೆ ಸಾಗೋಣ
(ಭಾವಾನುವಾದ:
ಲಕ್ಷ್ಮೀನಾರಾಯಣ ಕೆ.)








     

Friday 19 March 2021

೭. ಕೊರೋನಾ ಸೇನಾನಿಗಳು

ಕೊರೋನಾ ಸೇನಾನಿಗಳು  

ರೋಹಿಣಿಗಾದ ಅಂದಿನ ಅಚ್ಚರಿಯು  ಖುಷಿ ನೀಡಿತ್ತು. ಆತ್ಮೀಯ ಸ್ನೇಹಿತರಾದರೂ, ಅಪರೂಪದ ಅತಿಥಿಯಾದ ಡಾ. ಕಿರಣರ ಆಗಮನ ರೋಹಿಣಿಯನ್ನು ಚಕಿತಗೊಳಿಸಿತ್ತು. ಸಮಯವಾಗಲೇ ರಾತ್ರಿ ೮ ಘಂಟೆಯಾಗಿತ್ತು. ಆಯಾಸಗೊಂಡಂತೆ ಕಂಡ ಕಿರಣ್ ಮನೆಯ ಹೊರಗಿನ ಕುರ್ಚಿಯ ಮೇಲೆ ಕುಳಿತರು. ಕೊರೋನಾ ಸೋಂಕು ಹರಡಲು ಶುರುವಾದಾಗಿನಿಂದ ಡಾ. ಕಿರಣ್, ಯಾರ ಮನೆಗೆ ಹೋದರೂ, ಮನೆಯ ಹೊರಗೇ ಉಳಿದು ಮಾತನಾಡಿಕೊಂಡು ಹೋಗುವ ನಿಯಮವನ್ನು ಸ್ವಯಂ ವಿಧಿಸಿಕೊಂಡಿದ್ದರು. ಆತಂಕದಿಂದ ಕೂಡಿದ್ದ ಅವರು, ಏನೋ ಹೇಳಲು ಬಂದಂತ್ತಿತ್ತು. ಎಲ್ಲವನ್ನೂ  ಗಮಿನಿಸಿದ ರಾಜುರವರೂ ಮನೆಯಿಂದ ಹೊರಗೆ ಬಂದರು. 

'ಇಂದು ಬೆಳಗ್ಗೆ ದುರ್ಘಟನೆಯೊಂದು ನಡೆಯಿತು. ನಮ್ಮ ಆಶಾ (ASHA - Accredited Social Health Activist) ಕಾರ್ಯಕರ್ತೆಯರ ತಂಡವೊಂದನ್ನು, ಹೆಚ್ಚು ಜನದಟ್ಟಣೆಯುಳ್ಳ ನಮ್ಮ ನಗರದ ಬಡಾವಣೆಯೊಂದಕ್ಕೆ, ಕೋವಿಡ್ ಕುರಿತಾದ ಸಲಹೆಗಳನ್ನು ನೀಡಲು ಕಳುಹಿಸಿದ್ದೆವು. ಆ ಬಡಾವಣೆಯ ಹಲವರು ದೂರದೂರಿನ ಪ್ರವಾಸ ಮುಗಿಸಿ ಹಿಂತಿರುಗಿದ್ದು, ಅವರ ಪ್ರವಾಸದ ವೇಳೆ, ಅವರುಗಳು ಕೋವಿಡ್ ರೋಗ ಪೀಡಿತರ ನಿಕಟ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ನಮಗೆ ಬಂದಿತ್ತು. ಸೋಂಕಿತರ ಪತ್ತೆ ಮತ್ತು ಇನ್ನಿತರರನ್ನು ಎಚ್ಚರಿಸುವ ಕಾರ್ಯ ಕೂಡಲೇ ಆಗಬೇಕಿತ್ತು. ಆ ಬಡಾವಣೆಯ ನಿವಾಸಿಗಳು ಆರಂಭದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಲು ಇಚ್ಛಿಸಲಿಲ್ಲ. ನಂತರ ಅವರುಗಳ ಮಾತಿನ ಬಿಸಿ ಏರಿತ್ತು. ನೋಡ ನೋಡುತ್ತಿದಂತೆ ೧೫-೨೦ ಯುವಕರ ಗುಂಪೊಂದು ಜಮಾಯಿಸಿ ನಮ್ಮ ಕಾರ್ಯಕರ್ತೆಯರನ್ನು ಅಶ್ಲೀಲ ಪದಗಳಿಂದ ಬಯ್ಯಲಾರಂಭಿಸಿತು. ಅವರಲ್ಲಿ ಕೆಲವರು ನಮ್ಮ ವನಿತೆಯರ ಪೆನ್ನು ಮತ್ತು ಡೈರಿಗಳನ್ನು ಕಿತ್ತೆಸದರು. ಕೆಲವು ಕಿಡಿಗೇಡಿಗಳು ನಮ್ಮ ಆಶಾ ಕಾರ್ಯಕರ್ತೆಯರ ಮುಖಗಳ ಮೇಲೆ ಉಗುಳಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಭಯಭೀತರಾದ ನಮ್ಮ ಮಹಿಳೆಯರು, ತಮ್ಮ ಮುಖಗಳನ್ನು ಮುಚ್ಚಿಕೊಂಡು ಅಲ್ಲಿಂದ ಓಡಿ ಬರಬೇಕಾಯಿತು.' ಘಟನೆಯ ವಿವರಗಳನ್ನು ನೀಡಿದ ಡಾ. ಕಿರಣ್ ಜಿಗುಪ್ಸೆಗೊಂಡಂತೆ ಕಂಡಿತ್ತು. 

'ನಮ್ಮ ಆಶಾ ವನಿತೆಯೊರೊಂದಿಗೆ ಅವರುಗಳು ಅಷ್ಟು ಕೀಳಾಗಿ ವರ್ತಿಸಿದರೆ? ಅವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲವೆ?' ಎಂದು ಕೇಳಿದಳು ರೋಹಿಣಿ. 

'ಈ ರೀತಿಯ ಘಟನೆಗಳು ನಡೆಯುವುದು ಅಪರೂಪವಾಗಿತ್ತು. ಕೋವಿಡ್ ಮಹಾಮಾರಿ ಹಬ್ಬಿದಾಗಿನಿಂದ, ಕೆಲವರು ಈ ರೀತಿಯ ರೊಚ್ಚಿನ ಪ್ರತಿಕ್ರಿಯೆಯನ್ನು ತೋರಿಸಲಾರಂಭಿಸಿದ್ದಾರೆ. ವೈದ್ಯಕೀಯ ಸಿಬ್ಬಂಧಿಗಳು ಮಾತ್ರವಲ್ಲ, ಪೊಲೀಸರು, ಸ್ವಚ್ಛತಾ ಕರ್ಮಿಗಳು, ಬ್ಯಾಂಕ್ ಕರ್ಮಚಾರಿಗಳು, ಚಾಲಕರು ಮುಂತಾದ ಕೊರೋನಾ ಕಾರ್ಯಕರ್ತರುಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಈಗ  ಕಷ್ಟವಾಗಿ ಹೋಗಿದೆ. ನಮ್ಮಗಳ ಕರ್ಮಕ್ಷೇತ್ರ ರಣಭೂಮಿಯಂತಾಗಿ ಹೋಗಿದೆ. ಆದರೂ ನಾವುಗಳು ನಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ನಮ್ಮ ವೈದ್ಯರುಗಳು, ದಾದಿಯರು ಮತ್ತು ಕೆಲವು ಆಶಾ ವನಿತೆಯರುಗಳ ತಂಡವೊಂದು ಅದೇ ಬಡಾವಣೆಗೆ ಮತ್ತೆ ಭೇಟಿ ನೀಡಲಿದೆ. ಆ ಬಡಾವಣೆಯಲ್ಲಿ ಕೋವಿಡ್ ಸೋಂಕಿತರುಗಳ ಕುರಿತಾದ ಸಮೀಕ್ಷೆ, ಪತ್ತೆ, ನಿರ್ಬಂಧನ ಮತ್ತು ಚಿಕಿತ್ಸೆಗಳನ್ನು ತುರ್ತಾಗಿ ನಡೆಸಲೇ ಬೇಕಾಗಿದೆ' ಎಂದರು ಡಾ. ಕಿರಣ್. 

'ಪೋಲೀಸರ ರಕ್ಷಣೆಯನ್ನು ಏಕೆ ನೀವು ಪಡೆಯಬಾರದು?' ಎಂಬುದು ರಾಜುರವರ ಸಲಹೆಯಾಗಿತ್ತು. 'ಪೊಲೀಸರು ಕೂಡ ತೀವ್ರ ಒತ್ತಡದಲ್ಲಿದ್ದಾರೆ. ಅವರಲ್ಲೂ ಸಿಬ್ಬಂಧಿಯ ಕೊರತೆಯಿದೆ. ಎಲ್ಲಾ  ಕಾರ್ಯಕರ್ತರ ತಂಡಗಳಿಗೂ ಪೊಲೀಸರು ರಕ್ಷಣೆ ಕೊಡಲಾರರು' ಎಂದರು ಡಾ. ಕಿರಣ್. 

'ಕೋವಿಡ್ ಕುರಿತಾದ ಅಧ್ಯಯನ ಅಧಿಕೃತವಾಗಿ ಮಾಡುತ್ತಿರುವ ಸಂಶೋಧಕಿ ನಾನು. ಹಾಗಾಗಿ ತಮ್ಮ ತಂಡದೊಂದಿಗೆ ನಾಳೆ ನಾನೂ ಬರಬಹುದೆ?' ಎಂದು ಕೇಳಿದಳು ರೋಹಿಣಿ. 

'ನೀನು ನಮ್ಮೊಡನೆ ಬರಬಹುದು. ನಮ್ಮೊಂದಿಗೆ ನಾಳೆ ಕೆಲವು ಮಾಧ್ಯಮದ ಪ್ರತಿನಿಧಿಗಳೂ ಬರಲಿದ್ದಾರೆ. ಆದರೆ, ನಮ್ಮಗಳ ಮೇಲೆ ಹಲ್ಲೆ ನಡೆಯಬಹುದು, ಹಿಂಸಾಚಾರ ಜರುಗಬಹುದು' ಎಂದು ರೋಹಿಣಿಯನ್ನು ಎಚ್ಚರಿಸಿದರು ಡಾ. ಕಿರಣ್. 

ಮಾರನೆಯ ದಿನ ೮ ಘಂಟೆಗೂ ಮುಂಚೆಯೇ, ಡಾ. ಕಿರಣ್ ಮತ್ತವರ ತಂಡ ಆ ಬಡಾವಣೆಯನ್ನು ತಲುಪಿತ್ತು. ತಂಡದ ವಾಹನವನ್ನು ಬಡಾವಣೆಯ ಪ್ರವೇಶದ ರಸ್ತೆಯಲ್ಲೇ ನಿಲ್ಲಿಸಲಾಗಿತ್ತು. ಬಹಳ ಜನಜಂಗುಳಿಗಳಿಂದ ಕೂಡಿದ್ದ ಆ ಬಡಾವಣೆಯ ರಸ್ತೆಗಳು ಕಿರಿದಾಗಿಯೂ, ಅಂಕುಡೊಂಕಾಗಿಯೂ ಇದ್ದವು. ರಸ್ತೆಗಳ ತುಂಬಾ ಗಲೀಜಿದ್ದು, ದುರ್ವಾಸನೆಯ ನಾತ ಹೊಡೆಯುತ್ತಿತ್ತು. ಅಲ್ಲಲ್ಲಿ ನಾಯಿಗಳು, ಮಕ್ಕಳು ಮಲವಿಸರ್ಜನೆ ಮಾಡುತ್ತಿದ್ದದ್ದು ಕಂಡು ಬರುತಿತ್ತು. ಆದರೂ ಡಾ. ಕಿರಣರ ತಂಡ ಉತ್ಸಾಹದಿಂದ ತನ್ನ ಕೆಲಸವನ್ನು ನಿರ್ವಹಿಸಲು ಮುನ್ನಡೆದಿತ್ತು. ರಸ್ತೆಯಲ್ಲಿ ಓಡಾಡುತ್ತಿದ್ದ ಜನಗಳು ನಿಂತು, ಡಾ. ಕಿರಣರ ತಂಡವನ್ನು ಅನುಮಾನದಿಂದ ನೋಡ ತೊಡಗಿದರು. ಮನೆಗಳಲ್ಲಿದ್ದವರು ಕಿಟಕಿಗಳನ್ನು ತೆರದು ನೋಡುತ್ತಿದ್ದರು. ಅಂತೂ ವೈದ್ಯಕೀಯ ತಂಡ ತನ್ನ ಕಾರ್ಯಕ್ಷೇತ್ರದ ಸ್ಥಾನಕ್ಕೆ  ಬಂದು ನಿಂತ್ತಿತ್ತು. ಸುತ್ತುವರೆದಿದ್ದ ಜನರುಗಳನ್ನು ಡಾ. ಕಿರಣ್ ಸಂಭೋದಿಸಲಾರಂಭಿಸುತ್ತಿದ್ದಂತೆಯೇ, ಗುಂಪಿನಲ್ಲಿದ್ದ ಕೆಲವರು 'ಮಾಧ್ಯಮದವರನ್ನೇಕೆ ಕರೆತಂದಿದ್ದೀರ? ಕ್ಯಾಮೆರಾಗಳನ್ನೇಕೆ ತಂದಿದ್ದೀರ? ಅವರುಗಳೆಲ್ಲಾ ಕೂಡಲೇ ಹೊರಟು ಹೋಗಲಿ' ಎಂದು ಕಿರುಚಿದರು. ಡಾ. ಕಿರಣ್ ಸನ್ನೆ ಮಾಡುತ್ತಲೇ ಮಾಧ್ಯಮದ ಮಿತ್ರರೆಲ್ಲ ಹೊರನಡೆದರು. 

ತನ್ನ ಸಂಬೋಧನೆಯನ್ನು ಮುಂದುವರಿಸಿದ ಡಾ. ಕಿರಣ್, 'ದೂರದ ಊರಿನಲ್ಲಿ ಈಚೆಗೆ ಜರುಗಿದ ಸಮಾರಂಭವೊಂದಕ್ಕೆ, ತಮ್ಮ ಬಡಾವಣೆಯ ಬಹಳ ಜನಗಳು ಹೋಗಿ ಬಂದಿದ್ದಾರೆ ಎಂದು ತಿಳಿಯಿತು. ಆ ಸಮಾರಂಭದಲ್ಲಿ ವಿದೇಶಿ ಪ್ರತಿನಿಧಿಗಳೂ ಭಾಗವಹಿಸಿದ್ದರೆಂಬ ಮಾಹಿತಿಯಿದೆ. ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಲ್ಲಿ, ಭಾರಿ ಸಂಖ್ಯೆಯಲ್ಲಿನ ವ್ಯಕ್ತಿಗಳಿಗೆ ಕೋವಿಡ್ ಸೋಂಕಿತ್ತು ಎಂದು ಪತ್ತೆಯಾಗಿದೆ. ತಮ್ಮಲ್ಲಿ ಹಲವರುಗಳು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ, ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದಿರಬಹುದು. ಹಾಗಾಗಿ ತಮ್ಮಗಳಿಗೂ ಕೂಡ ಸೋಂಕು ತಗುಲಿರಬಹುದು. ಪ್ರವಾಸದಿಂದ ಹಿಂತಿರುಗಿರುವ ತಮ್ಮ ಬಡಾವಣೆಯವರು ಮತ್ತು ಅವರುಗಳ ನಿಕಟ ಸಂಪರ್ಕದಲ್ಲಿರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಬಂದಿದ್ದೇವೆ. ನಿಮ್ಮ ಬಡಾವಣೆಯಲ್ಲಾಗಲೇ ಕೆಲವು ಕೋವಿಡ್ ರೋಗಿಗಳಿದ್ದಾರೆ. ಸೋಂಕಿತರ ಪತ್ತೆ, ನಿರ್ಬಂಧನೆ ಮತ್ತೆ ಚಿಕಿತ್ಸಾ ಕಾರ್ಯಗಳು ಕೂಡಲೇ ಆಗಬೇಕಾಗಿದೆ' ಎಂದು ತಮ್ಮ ಮಾತನ್ನು ಮುಗಿಸುವಷ್ಟರಲ್ಲೇ, ಆ ಗುಂಪಿನ ನಾಯಕನಂತೆ ಕಾಣುವ ವ್ಯಕ್ತಿಯೊಬ್ಬ, 'ಇಲ್ಲಿ ಬರಲು ನೀವು ನಮ್ಮ ಅನುಮತಿಯನ್ನು ಪಡೆದಿದ್ದೀರ? ನಮಗೆ ಮುಂಚಿತವಾಗಿ ತಿಳಿಸದೇ ಇಲ್ಲಿಗೇಕೆ ಬಂದಿರಿ? ಮಾಧ್ಯಮದವರನ್ನೇಕೆ ಕರೆತಂದಿದ್ದೀರಿ?' ಎಂದು ಕಿರುಚಿದನು. ಅಷ್ಟು ಹೊತ್ತಿಗಾಗಲೇ ಇನ್ನೂ ಹೆಚ್ಚು ಜನಗಳು ಜಮಾಯಿಸಿದ್ದರು. ಇದ್ದಕಿದ್ದಂತೆ ಅಲ್ಲಿನ ಗುಂಪಿನ ಜನರು ಹಿಂಸಾಕಾರ್ಯಕ್ಕೆ ಸಿದ್ಧರಾದರು. ವೈದ್ಯರುಗಳ ಕೈಗಳನ್ನೆಳದು, ಅವರುಗಳ ಅಂಗಿಗಳನ್ನು ಹರಿದರು. ಗುಂಪಿನ ಹಲವರು 'ಇಲ್ಲಿಂದ ಹೊರಡಿ, ಹೊರಡಿ' ಎಂದು ಕಿರುಚಿದರು. ಪೋಲಿ ಸಂಜ್ಞೆಗಳನ್ನು ಮಾಡುತ್ತಾ, ಅಶ್ಲೀಲ ಪದಗಳಿಂದ ಬಯ್ಯುತ್ತ ಮಹಿಳೆಯರತ್ತ ಬಂದ ದುಷ್ಕರ್ಮಿಗಳು ಅವರುಗಳ ಸೀರೆಗಳನ್ನೆಳೆದಾಡಿದರು. ಕಲ್ಲೆಸತದಿಂದ ತಪ್ಪಿಸಿಕೊಳ್ಳಲು ಓಡಲು ಹೊರಟವರಲ್ಲಿ, ಇಬ್ಬರು ಪುರುಷ ಡಾಕ್ಟರ್ಗಳು ಮತ್ತೊಬ್ಬ  ಮಹಿಳಾ ದಾದಿಯೊಬ್ಬರು ಕೆಳಗೆ ಬಿದ್ದರು. ಕೆಳಗೆ ಬಿದ್ದವರನ್ನು ಲಾಠಿಯಿಂದ ಥಳಿಸಲಾಯಿತು. ಕೆಲವು ಹಿರಿಯರು ಮಧ್ಯೆ ಪ್ರವೇಶಿಸಿ ಬಿದ್ದವರಿಗೆ ಹೆಚ್ಚಿನ ಹೊಡತಗಳು ಬೀಳದಂತೆ ನೋಡಿಕೊಂಡರು. ತಂಡದ ಎಲ್ಲಾ ಸದಸ್ಯರು ಆತ್ಮರಕ್ಷಣೆಗಾಗಿ ಓಡಿಹೋಗಬೇಕಾಗಿ ಬಂತು. 

'ಅಂದಿನ ಅನುಭವ ಭಯಾನಕವಾಗಿತ್ತು' ಎಂದು ರೋಹಿಣಿ ತನ್ನ ಡೈರಿಯಲ್ಲಿ ಬರೆದಳು. 'ತಮ್ಮವರಿಗೆ  ಸಹಾಯ ಮಾಡಲು ಬಂದ ವೈದ್ಯಕೀಯ ತಂಡದೊಂದಿಗೆ ಅಷ್ಟು ಕ್ರೂರವಾಗಿ ವರ್ತಿಸಿದರೇಕೆ? ಅವರ ಕ್ರೌರ್ಯಕ್ಕೆ ಕಾರಣ, ಸಿಟ್ಟೋ ಅಥವಾ ದ್ವೇಷವೋ? ಬೇರೆ ವಿಷಯಗಳನ್ನು ಕುರಿತಂತೆ ಸರಕಾರದ ವಿರುದ್ಧ ಅವರುಗಳಿಗಿರಬಹುದಾದ ದ್ವೇಷದಿಂದ, ಅವರುಗಳು ನಮ್ಮ ಕೊರೋನಾ ಸೇನಾನಿಗಳೊಂದಿಗೆ ಈ ರೀತಿಯ ಹಿಂಸಾಚಾರಕ್ಕಿಳಿದರೆ? ನಮ್ಮ ಕೊರೋನಾ ಕಾರ್ಯಕರ್ತರುಗಳ ಜೀವಕ್ಕೆ ಅಪಾಯವಿಲ್ಲವೆ? ಅವರುಗಳಿಗೇಕೆ ಪೊಲೀಸ್ ರಕ್ಷಣೆ ಸಿಗುತ್ತಿಲ್ಲ? ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದಾಗುತ್ತಿರುವ ನಮ್ಮ ಕೊರೋನಾ ಸೇನಾನಿಗಳ ಹಿಂದಿರುವ ಪ್ರೇರಕ ಶಕ್ತಿ ಯಾವುದು?' ಹೀಗೆ ಸಾಗಿತ್ತು ರೋಹಿಣಿಯ ಯೋಚನಾ ಲಹರಿ. 

ಘಟನೆ ನಡೆದ ಎರಡು ದಿನಗಳನಂತರ ಮತ್ತೆ ಸೇರಿದ ವೈದ್ಯಕೀಯ ತಂಡದಲ್ಲಿ, ಅಂದು ಗಾಯಗೊಂಡ ಡಾ. ಸಯ್ಯದ್, ಡಾ. ಗೋಯಲ್ ಮತ್ತು ಮಹಿಳಾ ದಾದಿ ಸುಪ್ರಿಯಾ ಹೆಚ್ಚು ಉತ್ಸಾಹಿಗಳಂತೆ ಕಂಡರು. 'ಆ ದಿನದ ಅನುಭವ ಆತಂಕಕಾರಿಯಾಗಿತ್ತು. ಆ ರೀತಿಯ ಹಿಂಸಾಚಾರ ನಡೆಯಬಹುದೆಂಬ ಅನುಮಾನ ನಮಗಿರಲಿಲ್ಲ. ಮುಂಚಿನ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಅಲ್ಲಿನ ಜನಗಳು ನಮ್ಮೊಂದಿಗೆ ಸಹಕರಿಸಿದ್ದರು. ಆ ದಿನ ಅವರುಗಳಿಗೇನಾಗಿತ್ತೋ, ತಿಳಿಯದು. ಯಾವುದೇ ರೀತಿಯ ಹಿಂಸಾಚಾರಕ್ಕೆ ಹೆದರುವವರು ನಾವಲ್ಲ. ನಮ್ಮ ಕಾರ್ಯಗಳನ್ನು ಇಂದು ಪೂರ್ತಿ ಮಾಡೇ ಹಿಂತಿರುಗುತ್ತೇವೆ,' ಎಂದ ಡಾ. ಸಯ್ಯದ್ರವರ ಮಾತಿನಲ್ಲಿ ದೃಢ ವಿಶ್ವಾಸವಿತ್ತು. 

ಮುನ್ನೆಚ್ಚರಿಕೆಯ ಕ್ರಮವಾಗಿ ಆ ದಿನ ಡಾ. ಕಿರಣರವರ ತಂಡಕ್ಕೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು. ಆದರೆ ಪೊಲೀಸರು ತಮ್ಮ ವಾಹನಗಳೊಂದಿಗೆ ಸ್ವಲ್ಪ ದೂರ ಉಳಿದಿದ್ದರು. ಡಾ. ಸಯ್ಯದ್, ಡಾ. ಗೋಯಲ್ ಮತ್ತು ದಾದಿ ಸುಪ್ರಿಯಾರವರು ತಮ್ಮ ಕೈಯಲ್ಲಿ ಗುಲಾಬಿ ಹೂಗಳನ್ನು ಹಿಡಿದಿದ್ದರು. 'ಎಲ್ಲಿ ಗೂಂಡಾಗಿರಿ ನಡೆಯಬಹುದೋ, ಅಲ್ಲಿ "ಗಾಂಧೀಗಿರಿ" ಪರಿಸ್ಥಿತಿಯನ್ನು ನಿಭಾಯಿಸುವುದೆಂಬ ವಿಶ್ವಾಸ ನಮಗಿದೆ. ಯಾರು ನಿಮ್ಮನ್ನು ದ್ವೇಷಿಸುತ್ತಾರೋ, ಅವರುಗಳನ್ನು ಪ್ರೀತಿಸು ಎಂಬುದೇ "ಗಾಂಧೀಗಿರಿ."  ಅದಕ್ಕಾಗಿಯೇ ಈ ಗುಲಾಬಿ ಹೂಗಳು' ಎಂದ ದಾದಿ ಸುಪ್ರಿಯರ ಮುಖದಲ್ಲಿ ಸ್ನೇಹಭರಿತ ಮುಗುಳ್ನಗೆಯೊಂದಿತ್ತು. 

ವೈದ್ಯರ ತಂಡ ಮತ್ತೆ ಬಂದಿದ್ದನ್ನು ನೋಡಿ ಅಲ್ಲಿನ ಜನತೆಗೆ ಆಶ್ಚರ್ಯವಾಯಿತು. ಅಂದು  ಗಾಯಗೊಂಡಿದ್ದ ಡಾಕ್ಟರ್ಗಳು ಮತ್ತೆ ದಾದಿಯರು, ಇಂದು  ಕೈಗಳಲ್ಲಿ ಗುಲಾಬಿಯನ್ನು ಹಿಡಿದು ಬಂದದ್ದನ್ನು ನೋಡಿ, ಅಲ್ಲಿನ ಹಿರಿಯರು ಮತ್ತು ಮಹಿಳೆಯರು ಸಂತೋಷಗೊಂಡಂತೆ ಕಂಡರು. 'ಗಾಂಧೀಗಿರಿ ಕೆಲಸ ಮಾಡಲು ಶುರು ಮಾಡಿದೆ' ಎಂದು ಆಗ ರೋಹಿಣಿಗೆ ಖಾತರಿಯಾಗಿತ್ತು. ಡಾ. ಕಿರಣರ ತಂಡ ತನ್ನ ಕಾರ್ಯವನ್ನು ಆರಂಭಿಸಿತ್ತು. ಸೋಂಕಿತರೊಂದಿಗಿನ ಸಂಪರ್ಕದಲ್ಲಿರುವವರೊಂದಿಗೆ ಮಾತನಾಡಲಾಯಿತು. ನೋಡು ನೋಡುತ್ತಿರುವಷ್ಟರಲ್ಲೇ, ಸೋಂಕಿತರ ಪರೀಕ್ಷೆ, ಪತ್ತೆ, ನಿರ್ಬಂಧನೆ ಮತ್ತು ಚಿಕಿತ್ಸಾ ಕಾರ್ಯಗಳು ಚುರುಕುಗೊಂಡವು. ಆಗಾಗ ಸಾಬೂನಿನಿಂದ ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಲ್ಲಿನ ಜನಗಳಿಗೆ ಆಶಾ ಕಾರ್ಯಕರ್ತೆಯರು ವಿವರಿಸಿದರು. ನೆರೆದವರಿಗೆಲ್ಲಾ ಮಾಸ್ಕ್ಗಳನ್ನೂ ವಿತರಿಸಲಾಯಿತು. 

ತನ್ನ ಕಾರ್ಯವನ್ನು ಮುಗಿಸಿ ಸಂತೃಪ್ತವಾದ ವೈದ್ಯಕೀಯ ತಂಡ ಹಿಂತಿರುಗಲಾರಂಭಿಸಿತು. ಅಲ್ಲಿನ ಜನತೆಯ ನಡುವಿನ ಹಿರಿಯರೊಬ್ಬರು ಡಾ. ಕಿರಣರ ಕ್ಷಮೆಯನ್ನು ಕೋರುತ್ತಾ, 'ನಕಲಿಯಾಗಿರಬಹುದಾದ ಕೆಲವು ವಿಡಿಯೋಗಳಿಂದ ನಮ್ಮ ಜನರ ಮನಸ್ಸು ಕೆಟ್ಟಿದೆ. ಕೆಲವು ದುಷ್ಟರು ವೈದ್ಯಕೀಯ ತಂಡದ ಸೋಗಿನಲ್ಲಿ ಬಂದು, ಕೋವಿಡ್ ರೋಗವನ್ನು ಹರಡುವ ಚುಚ್ಚುಮದ್ದನ್ನು ನಮ್ಮೆಲ್ಲರಿಗೂ ಚುಚ್ಚುವ ಸಂಚು ನಡೆಸಿದ್ದಾರೆಂಬ ವದಂತಿಗಳು ಇಲ್ಲಿ ದಟ್ಟವಾಗಿ ಹಬ್ಬಿದೆ. ತಾವುಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೀರಿ. ನಮ್ಮ ಜನಗಳಿಂದ ತಮಗಾದ ತೊಂದರೆಗೆ ನಾನು ಕ್ಷಮೆ ಬೇಡುತ್ತೇನೆ. ಅವರುಗಳನ್ನು ಕ್ಷಮಿಸಿ. ತಮ್ಮೊಂದಿಗೆ ಮುಂದಿನ ದಿನಗಳಲ್ಲಿ ನಾವುಗಳು ಸಹಕರಿಸುತ್ತೇವೆ' ಎಂದರು. 

ಸಂತುಷ್ಟಗೊಂಡಂತೆ ಕಂಡ ರೋಹಿಣಿ ತನ್ನ ಡೈರಿಯಲ್ಲಿ ಹೀಗೆ ಬರೆದಳು. 'ಅವಿರತ ಯತ್ನ, ತಾಳ್ಮೆ ಮತ್ತು ಜನತೆಯ ಮೇಲಿನ ವಿಶ್ವಾಸಗಳಿಂದ ಯಾವ ಕಾರ್ಯವನ್ನಾಗಲೀ, ಸಾಧಿಸಬಹುದು.'

***

ಕೊರೋನಾ ಸೇನಾನಿಗಳ ತಂಡಗಳ ಮೇಲಿನ ದಾಳಿ, ಹಿಂಸಾಚಾರದ ವರದಿಗಳು ಬೇರೆ ಬೇರೆ ನಗರಗಳಿಂದಲೂ ಬರುತ್ತಿದ್ದವು. ದೂರದ ಊರೊಂದರಲ್ಲಿ ವೈದ್ಯರ ತಂಡವೊಂದು ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದ ಹಲವರನ್ನು ಪತ್ತೆ ಹಚ್ಚಿ, ಅದೇ ಊರಿನ ಹೊರ ವಲಯದ ಶಾಲೆಯೊಂದರಲ್ಲಿ ನಿರ್ಬಂಧನೆ(quarantine)ಗೊಳಪಡಿಸಿತ್ತು. ಆದರೆ ನಿರ್ಬಂಧನೆಗೊಳಪಟ್ಟ ಆ ಜನಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು. ಬೆಳಗಿನ ತಿಂಡಿಗಾಗಿ ಉಪ್ಪಿಟನ್ನು ಕೊಟ್ಟಾಗ, ತಿಂಡಿಯ ತಟ್ಟೆಗಳನ್ನು ರೊಯ್ಯನೆ ಎಸೆದ ಅವರುಗಳು, ಮಸಾಲೆ ದೋಸೆ ಬೇಕೆಂದು ಹಠ ಹಿಡಿದಿದ್ದರು. ಅವರಲ್ಲಿ ಕೆಲವರು ಸಿಗರೇಟುಗಳು ಮತ್ತು ಮದ್ಯದ ಬಾಟಲಿಗಳು ಬೇಕೆಂದು ದಾಂಧಲೆ ನಡೆಸಿದ್ದರು. ಕೆಲ ಯುವಕರು ಶಾಲಾ ಕೊಠಡಿಗಳಲ್ಲೇ ಮೂತ್ರ ಮತ್ತು ಮಲವಿಸರ್ಜನೆ ಮಾಡಹತ್ತಿದ್ದರು. ಅಂತಹ ಗಲೀಜುಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರು ಹೆಣಗಾಡಬೇಕಾಯಿತು. ಮತ್ತೆ ಕೆಲವು ಯುವಕರು ಮಹಿಳಾ ಪೋಲೀಸರ ಮುಂದೆ ನಗ್ನರಾಗಿ ಓಡಾಡ ಹತ್ತಿದ್ದರು. ಅವರುಗಳನ್ನು ನಿಯಂತ್ರಿಸುವ ಹೊತ್ತಿಗೆ ಪೊಲೀಸರು ಹೈರಾಣಾಗಿ ಹೋಗಿದ್ದರು. ಹೀಗೆ ವರ್ತಿಸಿದ ಕೆಲವರ ಮೇಲೆ ದೂರು ದಾಖಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. 

'ತಮ್ಮ ಜೀವಗಳನ್ನೇ ಒತ್ತೆ ಇಟ್ಟು ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ಸೇನಾನಿಗಳ ಸೇವೆ, ನಮ್ಮ ಪರಾಕ್ರಮಿ ಸೈನಿಕರ ಸೇವೆಯಷ್ಟೇ ಕಷ್ಟಕರವಾದದ್ದು. ಕೊರೋನಾ ಸೇನಾನಿಗಳನ್ನು ಜನತೆಯನ್ನು ಕಾಯುವ ದೇವರೆಂದೇ ಕರೆಯಬಹುದು. ಆದರೆ ಅವರುಗಳ ಕಾರ್ಯಕ್ಕೆ ವಿಘ್ನವೊಡ್ಡಿ, ಅವರುಗಳನ್ನು ಅವಮಾನಿಸುತ್ತಿರುವದು ದುರದೃಷ್ಟಕರ. ಅವರುಗಳ ನಿಸ್ವಾರ್ಥ ಸೇವೆಗೆ ನನ್ನದೊಂದು ದೊಡ್ಡ ಸಲಾಮ್.'  ಹೀಗೆ ಹೇಳುತ್ತಾ ರೋಹಿಣಿ ತನ್ನ ಸ್ನೇಹಿತ ಹಾಗು ಕೊರೋನಾ ಸೇನಾನಿ ಡಾ.ಕಿರಣ್ಗೆ 'ಸಲಾಂ' ಹೊಡೆದ್ದಿದ್ದಳು. 

ಈ ಮಧ್ಯೆ ಸರಕಾರಗಳು ಕೊರೋನಾ ಸೇನಾನಿಗಳ ಸಂಕಷ್ಟಗಳಿಗೆ ಮರುಗಿ, ಅವರುಗಳ ಬೆಂಬಲಕ್ಕಾಗಿ ಹಲವು ಕ್ರಮಗಳನ್ನು ಕೈಕೊಂಡಿದ್ದವು. ಅವರುಗಳಿಗೆ ಕರ್ತವ್ಯ ನಿರ್ವಹಣಾ ಸಮಯದಲ್ಲಿ ನಿರಂತರ ಪೊಲೀಸ್ ರಕ್ಷಣೆಯ ಏರ್ಪಾಡನ್ನು ಮಾಡಲಾಯಿತು. ಕೊರೋನಾ ಸೇನಾನಿಗಳಿಗೆ ತೊಂದರೆಯನ್ನುಂಟು ಮಾಡಿದ ಹಲವಾರು  ದುಷ್ಕರ್ಮಿಗಳ ವಿಚಾರಣೆ ನಡೆಸಿ,    ಶಿಕ್ಷೆಗೊಳಪಡಿಸಲಾಗಿತ್ತು. ಎಲ್ಲಾ ಕೊರೋನಾ ಸೇನಾನಿಗಳಿಗೆ ೫೦ ಲಕ್ಷ ರೂಪಾಯಿಗಳ ಜೀವವಿಮೆಯ ಭದ್ರತೆಯನ್ನು ನೀಡಲಾಯಿತು. ಆದರೂ ಅವರುಗಳ ಕಾರ್ಯ ನಿರ್ವಹಣೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಾ ಸಾಗಿತ್ತಿದ್ದದು ಮಾತ್ರ ಸುಳ್ಳಾಗಿರಲಿಲ್ಲ.

***

ಯುವ ವೈದ್ಯರಾದ ಡಾ.ಕಿರಣರವರು ಅವರ ನೆರೆಹೊರೆಯವರ 'ಯುವ ಕಣ್ಮಣಿ'ಯಾಗಿದ್ದರು. ಅನುರೂಪ ವರನಾದ ಅವರ ಮೇಲೆ ಎಲ್ಲರ ಕಣ್ಣುಗಳು ಸದಾ ನೆಟ್ಟಿರುತ್ತಿದ್ದವು. ಕೆಲವು ತಿಂಗಳುಗಳ ಹಿಂದೆ ನಡೆದ ಘಟನೆಯೊಂದರ ನೆನಪನ್ನು ಡಾ.ಕಿರಣರು ಇನ್ನೂ ಮರೆತಿರಲಿಲ್ಲ. ತನ್ನ ವೃದ್ಧ ತಾಯಿಯೊಂದಿಗೆ ಡಾ. ಕಿರಣ್ ವಾಸವಿದ್ದ ಮನೆಯ ಮಾಲೀಕರ ಹೆಸರು ರವಿ ಶ್ರೀವಾಸ್ತವ ಎಂದು. ಒಂದು ದಿನ ರವಿಯವರು ಡಾ. ಕಿರಣರನ್ನು ತಮ್ಮ ಮನೆಗೆ ರಾತ್ರಿ ಭೋಜನಕ್ಕಾಗಿ ಆಮಂತ್ರಿಸಿದ್ದರು. 'ನಿಮ್ಮ ತಾಯಿಯವರನ್ನೂ ಜೊತೆಗೆ ಕರೆ ತನ್ನಿ' ಎಂಬುದು ರವಿಯವರ ವಿಶೇಷ ಬಿನ್ನಹವಾಗಿತ್ತು. 

ತಮ್ಮ ತಾಯಿಯೊಂದಿಗೆ ಡಾ. ಕಿರಣ್ ಆಗಮಿಸುತ್ತಲೇ, 'ಸ್ವಾಗತ, ಸುಸ್ವಾಗತ ಡಾ. ಕಿರಣರವರೇ; ಮಾತಾಜಿಯವರಿಗೆ ನನ್ನ ವಿಶೇಷ ನಮಸ್ಕಾರಗಳು' ಎನ್ನುತ್ತಾ ಮಾತಾಜಿಯವರ ಚರಣಗಳನ್ನು ಸ್ಪರ್ಶಿಸಿದ್ದರು ರವಿ. ತಾಯಿ ಹಾಗೂ ಮಗನ ಜೋಡಿಯನ್ನು ತಮ್ಮ ಐಷಾರಾಮಿ ಬಂಗಲೆಯ ಕೇಂದ್ರ ಕೊಠಡಿಗೆ, ವಿಶೇಷವಾಗಿ ಸ್ವಾಗತಿಸಿ ಕರೆದೊಯ್ದವರು ರವಿಯವರ ಪತ್ನಿ ಮಂಜುಳಾರವರು. ರವಿ ಸನ್ನೆ ಮಾಡುತ್ತಲೇ, ಸ್ವಾಗತ ಪಾನೀಯಗಳನ್ನು ಹೊತ್ತು ತಂದವಳು ಅವರ ಮಗಳು ಪಿಂಕಿ. ೨೧ರ ಪ್ರಾಯದ ಪಿಂಕಿ ತನ್ನ ಪದವಿ ಕೋರ್ಸನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವ ವೈದ್ಯ ಡಾ.ಕಿರಣರನ್ನು ಸ್ವಾಗತಿಸಲು, 'ಜಾಣರ ಜಾಣೆ' ಪಿಂಕಿ ತುದಿಗಾಲಲ್ಲಿ ನಿಂತ್ತಿದ್ದಳು. 'ಹಲೋ ಡಾ.ಕಿರಣ್, ನೀವು ನಮ್ಮ ಮನೆಗೆ ಬಂದದ್ದು ಬಹಳ ಬಹಳ ಸಂತೋಷದ ವಿಷಯ. ತಮ್ಮ ಮಾರ್ಗದರ್ಶನದೊಂದಿಗೆ ನಾನು ಬರೆದ, ನನ್ನ ಅಂತಿಮ ವರ್ಷದ ಸಾಮಾಜಿಕ ಅಧ್ಯಯನದ ಪ್ರಬಂಧ (dissertation)ಕ್ಕೆ ಪ್ರಥಮ ಸ್ಥಾನ ದೊರೆತಿದೆ! ಮನಸ್ಸಿನಲ್ಲೇ ತಮಗೆ ಅದೆಷ್ಟು ಬಾರಿ "ಥ್ಯಾಂಕ್ಯೂ" ಎಂದು ಹೇಳಿದ್ದೇನೋ ನನಗೇ ತಿಳಿಯದು' ಎಂದು ಕಿರಣರ ಪಕ್ಕದಲ್ಲೇ ಕುಳಿತಳು ಪಿಂಕಿ. 'ಪಿಂಕಿ ನೀನು ಯೋಚಿಸಬೇಕಿಲ್ಲ, ನಿನ್ನ ಡಿಗ್ರಿ ಮುಗಿದ ದಿನದಿಂದಲೇ, ನಿನ್ನ ಕೆಲಸವನ್ನು ಕಿರಣರೊಂದಿಗೇ ಮುಂದುವರೆಸಲು ಅವಕಾಶ ಕಲ್ಪಿಸುವಂತೆ ಕಿರಣರನ್ನು ನಾನಾಗಲೇ ಕೋರಿಕೊಂಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನೀನು ಕಿರಣರೊಂದಿಗೆ ನಿನ್ನ ಅಧ್ಯಯನವನ್ನು ನಡೆಸುವೆ' ಎಂದು ಹೇಳುವಾಗ ತಂದೆ ರವಿಯವರು ಉಬ್ಬಿಹೋದಂತೆ ಕಂಡಿದ್ದರು. ರವಿಯವರ ಪತ್ನಿ ಮಂಜುಳಾರವರು ಕೂಡ ಜಾಣತನದ ಮಾತನಾಡುವುದರಲ್ಲಿ ಕಮ್ಮಿಯೇನಿರಲಿಲ್ಲ. 'ಮಾತಾಜಿ, ಡಾ. ರವಿಯಂತಹ ಸುಪುತ್ರನನ್ನು ಹಡೆದ ತಾವು ಅದೃಷ್ಟಶಾಲಿಗಳು. ಕೋಮಲೆಯರಾದ ಹೆಣ್ಣುಮಕ್ಕಳನ್ನು ಪಡೆದ ಪೋಷಕರು, ತಮ್ಮ ಹೆಣ್ಣುಮಕ್ಕಳನ್ನು ನಿಮ್ಮ ಮಗನಿಗೆ ನೀಡಲು ಹಾತೊರೆಯುತ್ತಿರಬಹುದು. ಅಂತಹವರುಗಳ ಪೈಕಿ ನಾವೂ ಇದ್ದೇವೆಂಬುದನ್ನು ಮರೆಯಬೇಡಿ' ಎಂದು ಹೇಳಿದ ಮಂಜುಳಾರವರು, ಡಾ.ಕಿರಣರತ್ತವೂ ಕಣ್ಣು ಹಾಯಿಸುವುದನ್ನು ಮರೆತಿರಲಿಲ್ಲ. ಹಲವು ವಿಭಿನ್ನ ಸಿಹಿತಿಂಡಿಗಳೊಂದಿಗಿನ ಅಂದಿನ ಭೋಜನ ರಸಭರಿತವಾಗಿದ್ದು, ರವಿಯವರು ತಮ್ಮಉಪಚಾರದೊಂದಿಗೆ  ಸ್ವರ್ಗವನ್ನೇ ಧರೆಗಿಳಿಸುವ ಪ್ರಯತ್ನ ನಡೆಸಿದ್ದರೆಂಬುದು ಸುಳ್ಳಾಗಿರಲಿಲ್ಲ.  

ಕೋವಿಡ್ ರೋಗದ ಹಾವಳಿ ಶುರುವಾದಾಗಿನಿಂದ, ತನ್ನ ನೆರೆಹೊರೆಯವರು ತನ್ನನ್ನು ನೋಡುವ ರೀತಿಯಲ್ಲಿ ಭಾರಿ ಬದಲಾವಣೆಯನ್ನು ಕಂಡಿದ್ದರು ಕಿರಣ್.  ಅವರೆಲ್ಲರಿಗೂ ಡಾ. ಕಿರಣ್, ಕೋವಿಡ್ ರೋಗಿಗಳ ಚಿಕಿತ್ಸೆಯ ಕಾರ್ಯಕ್ಕಾಗಿ ನೇಮಕಗೊಂಡಿರುವುದು ತಿಳಿದಿತ್ತು. 'ಕೋವಿಡ್ನ ಸೋಂಕು ವೈದ್ಯರುಗಳಿಗೆ ತಗುಲುವ ಸಾಧ್ಯತೆ ತುಂಬಾ ಹೆಚ್ಚು. ವೈದ್ಯರುಗಳಿಂದ ನಮ್ಮಗಳಿಗೂ ಸೋಂಕು ಹರಡುವ ಸಾಧ್ಯತೆಯು ಮತ್ತೂ ಹೆಚ್ಚು' ಎಂಬ ಪಿಸುಮಾತುಗಳು ಕಿರಣರವರ ಕಿವಿಗೂ ಮತ್ತೆ ಮತ್ತೆ ಬೀಳುತ್ತಿತ್ತು. ನೆರೆಹೊರೆಯ ಸ್ನೇಹಿತರು ಕಿರಣರ ಜೊತೆ ಮಾತನಾಡುವುದನ್ನು ಬಿಟ್ಟು ಎಷ್ಟೋ ದಿನಗಳಾಗಿ ಹೋಗಿತ್ತು. 

ಒಂದು ದಿನ ಡಾ. ಕಿರಣ್ ತನ್ನ ಮನೆಯಿಂದ ಆಸ್ಪತ್ರೆ ಕಡೆಗೆ ಹೊರಟಿದ್ದಾಗ, ಮಾಸ್ಕ್ ಧರಿಸಿದ್ದ ರವಿ, ಕಿರಣರನ್ನು ಕರೆದು 'ತಾವು ಇನ್ನೆರಡು ವಾರಗಳಲ್ಲಿ ನನ್ನ ಮನೆಯನ್ನು ಖಾಲಿ ಮಾಡಿ. ನಮ್ಮ ಮನೆಯವರ  ಉಪಯೋಗಕ್ಕೇ  ಆ ಮನೆ ಬೇಕು. ತಾವು ಕೂಡಲೇ ಮನೆಯನ್ನು ಖಾಲಿ ಮಾಡಿದರೆ, ತಾವು ನೀಡಿರುವ ಮುಂಗಡ ಬಾಡಿಗೆಯನ್ನು ಅದೇ ಕ್ಷಣ ಹಿಂತಿರುಗಿಸುವೆ. ನನ್ನ ಮನೆಯನ್ನು ಖಾಲಿ ಮಾಡುವ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ' ಎಂದು ಗಡುಸಾದ ಧ್ವನಿಯಲ್ಲೇ ಹೇಳಿದ್ದರು. ಮನೆ ಮಾಲೀಕರಾದ ರವಿಯ ಈ ಗಡುಸಿನ ಮಾತುಗಳನ್ನು, ಬೇರೆ ಬಾಡಿಗೆದಾರರು ತಮ್ಮ ಮನೆಯ ಕಿಟಕಿಗಳ ಹಿಂದೇ ನಿಂತು ಕೇಳಿಸಿಕೊಳ್ಳುತ್ತಿದ್ದದ್ದು ಕಿರಣರ ಗಮನಕ್ಕೆ ಬಾರದಿರಲಿಲ್ಲ. ಅವರುಗಳ್ಯಾರೂ  ಮಧ್ಯ ಪ್ರವೇಶಿಸದೆ ತಟಸ್ಥರಾಗಿ ಉಳಿದದ್ದು, ಕಿರಣರ ನೀರಿಕ್ಷೆಗೆ ಹೊರತಾಗೇನೂ ಇರಲಿಲ್ಲ. 

ತಮ್ಮ ಆಸ್ಪತ್ರೆಯನ್ನು ತಲುಪಿದ ತಕ್ಷಣ ಡಾ. ಕಿರಣ್, ತಮ್ಮ ಮನೆಯ ಮಾಲೀಕರು ತಮಗೆ ನೀಡಿದ 'ಕಟ್ಟಪ್ಪಣೆ'ಯ ವಿಷಯವನ್ನು ತನ್ನ ಸಹೋದ್ಯೋಗಿಗಳಿಗೆಲ್ಲಾ ಹೇಳಿದ್ದರು. ಕಿರಣರ ಸಹೋದ್ಯೋಗಿಗಳು ಅದೇ ರೀತಿಯ ಅನುಭವಗಳನ್ನು ಅಂದು ಹೇಳಿಕೊಂಡಿದ್ದರು. ಸ್ಟಾಫ್ ನರ್ಸೊಬ್ಬರು ಮಾತನಾಡುತ್ತಾ, 'ಕೋವಿಡ್ ಕರ್ತ್ಯವದ ಮೇಲೆ  ಬೇರೆ ಊರಿಗೆ ತೆರಳಿದ್ದ ಮಹಿಳಾ ನರ್ಸೊಬ್ಬರ ಮನೆಯ ಬೀಗವನ್ನು, ಅವರ ಮನೆಯ ಮಾಲೀಕ ಮುರಿದು ಒಳ ಪ್ರವೇಶಿಸಿ, ಮನೆಯೊಳಗಿದ್ದ ಅವರ ಸಾಮಾನುಗಳನ್ನೆಲ್ಲ ಹೊರಗಿಟ್ಟು, ಬೇರೊಂದು ಬೀಗವನ್ನು ಆ ಮನೆಗೆ ಜಡಿದಿದ್ದ ಪ್ರಕರಣವನ್ನು ಮೊನ್ನೆ ನಾನೊಂದು ಪತ್ರಿಕೆಯಲ್ಲಿ ಓದಿದ್ದೆ. ಆ ಬಡಪಾಯಿ ನರ್ಸ್ರವರು ಪೊಲೀಸ್ ದೂರನ್ನು ದಾಖಲಿಸಿದ ಮೇಲೂ, ಅವರಿಗ್ಯಾವ ಪರಿಹಾರವೂ ಇನ್ನೂ ದೊರೆತಿಲ್ಲವೆಂದು ಕೇಳ್ಪಟ್ಟೆ' ಎಂದರು. 

'ಇದ್ದಕಿದ್ದಂತೆ ನಾವುಗಳೆಲ್ಲ ಅಸ್ಪೃಶ್ಯರಾಗಿ ಹೋಗಿದ್ದೇವೆ' ಎಂದು ಉದ್ಗರಿಸಿದವರು ಡಾ. ಕಿರಣ್.  

ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಡಾ. ಕಿರಣರನ್ನು ತಲುಪಿತ್ತು. ಅವರ ವಾರ್ಡಿನಲ್ಲಿದ್ದ ಕೋವಿಡ್ ರೋಗಿಯೊಬ್ಬ ತಪ್ಪಿಸಿಕೊಂಡು ಓಡಿ ಹೋಗಿದ್ದ. ವೈದ್ಯರುಗಳ ತಂಡವೊಂದರ ಮೇಲೆ ಮಾರಕ ದಾಳಿಯನ್ನು ಮಾಡಿದ್ದ ಆರೋಪ, ಓಡಿ ಹೋಗಿದ್ದ ಆ ರೋಗಿಯ ಮೇಲಿದ್ದ ವಿಷಯ ಕಿರಣರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಪ್ರಕರಣವನ್ನು ಕುರಿತಾದ ದೂರನ್ನು ಪೊಲೀಸರಿಗೆ ತಲುಪಿಸುವ ಜವಾಬ್ದಾರಿಯೂ ಕಿರಣರದ್ದೇ ಆಗಿತ್ತು. ತಮ್ಮ ಕರ್ತ್ಯವಗಳ ಜೊತೆ ಪೊಲೀಸರಂತೆ ರೋಗಿಗಳನ್ನು, ಅಪರಾಧಿಗಳನ್ನೂ ಕಾಯುವ ಹೊಣೆಯೂ ಈಗ ವೈದ್ಯರುಗಳದ್ದಾಗಿ ಹೋಗಿತ್ತು. 

***

ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿರುವ ಪೊಲೀಸರ ಮೇಲಿನ ಒತ್ತಡವೂ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತ್ತು. ಲಾಕ್ಡೌನ್ ಉಲ್ಲಂಘಿಸಿದವರ ಬೆನ್ನಟ್ಟುವುದು, ವೈದ್ಯಕೀಯ ತಂಡಗಳಿಗೆ ರಕ್ಷಣೆಯನ್ನು ಒದಗಿಸುವುದು, ನಿರ್ಬಂಧನೆಗಳೊಪಟ್ಟವರನ್ನು ನಿಯಂತ್ರಿಸುವುದು, ಹೆದ್ದಾರಿ ಹಾಗೂ ರೈಲು ಹಳಿಗಳನ್ನು ಹಿಡಿದು ಕಾಲ್ನಡುಗೆಯಲ್ಲಿ ಸಾಗುವ ವಲಸಿಗರನ್ನು ತಡೆಯುವುದು, ಪೂಜಾ ಮಂದಿರಗಳ ಮೇಲೊಂದು ಕಣ್ಣಿಟ್ಟಿರುವುದು, ಮೇಲಧಿಕಾರಿಗಳ ಆಜ್ಞೆಯನ್ನು ಪಾಲಿಸುವುದು ಮುಂತಾದ ಎಲ್ಲಾ ಕಾರ್ಯಗಳ ಒತ್ತಡ ಪೊಲೀಸರನ್ನು ಸತತವಾಗಿ ಕಾಡಿತ್ತು. ಬಿಡುವಿಲ್ಲದ ಕೆಲಸದ ಭಾರ ಅವರುಗಳ ಮನೋಬಲವನ್ನು ದುರ್ಬಲಗೊಳಿಸಿತ್ತು. 

೨೭ರ ಯುವತಿ ತಾಮರೈ ಸೆಲ್ವಿ ದಕ್ಷ ಪೊಲೀಸ್ ಅಧಿಕಾರಿಣಿಯೆಂದು ಹೆಸರು ಗಳಿಸಿದ್ದವರು. ಅವರು ಉತ್ತಮ ವಾಗ್ಮಿಯು ಹಾಗೂ ಗಾಯಕಿಯೂ ಕೂಡ ಎಂಬುದು ಎಲ್ಲರಿಗೂ ತಿಳಿದಿದ್ದ ವಿಷಯವಾಗಿತ್ತು.  ಇಲಾಖೆಯ ಹಲವಾರು ಕಠಿಣವಾದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡುಹಿಡಿದ ಖ್ಯಾತಿ ಅವರದ್ದಾಗಿತ್ತು. ಅವರ ನಗರದ ಪ್ರದೇಶವೊಂದು ಕುಖ್ಯಾತ ರೌಡಿಗಳಿಂದ ತುಂಬಿದ್ದು, ಅಲ್ಲಿನ ಜನಗಳೆಲ್ಲರೂ ಲಾಕ್ಡೌನ್ ನಿರ್ಬಂಧಗಳನ್ನು ಲೆಕ್ಕಿಸುತ್ತಿರಲಿಲ್ಲ. ಆ ಪ್ರದೇಶವನ್ನು ನಿಯಂತ್ರಿಸುವಲ್ಲಿ ದಕ್ಷರೆನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು. ತಾಮರೈ ಸೆಲ್ವಿಯವರ ವಿನೂತನ ವಿಧಾನಗಳ ಬಗ್ಗೆ ಕೇಳಿದ್ದ ನಗರದ ಪೊಲೀಸ್ ಕಮೀಷನರವರು, ಅವರನ್ನು ಆ ಪ್ರದೇಶದ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯನ್ನಾಗಿ ನೇಮಿಸಿದ್ದರು. ಸೆಲ್ವಿ ಹೊಸ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅವರೊಂದಿಗೆ ಮಾತನಾಡಿದ ಕಮಿಷನರವರು, 'ಸೆಲ್ವಿಯವರೇ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಾವುಗಳು ಈವರೆಗೆ ಕೈಗೊಂಡ ಕಠಿಣ ಕ್ರಮಗಳು ವಿಫಲವಾಗಿವೆ. ನಾನು ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಿದ್ದೇನೆ. ತಾವು ಯಾವುದೇ ಹೊಸ ರೀತಿಯ ವಿಧಾನಗಳನ್ನು ಪ್ರಯೋಗಿಸಬಹುದು. ನಿಮ್ಮೊಡನೆ ನಾವುಗಳು ಎಂದಿಗೂ ಇರುತ್ತೇವೆ. ತಾವು ಯಶಸ್ವಿಯಾಗುವಿರೆಂಬ ವಿಶ್ವಾಸ ನಮಗಿದೆ' ಎಂದರು. 

ಮಾರನೆಯ ದಿನವೇ ಸೆಲ್ವಿಯವರು ಆ ಪೊಲೀಸ್ ಠಾಣೆಯ ಅಧಿಕಾರವನ್ನು ವಹಿಸಿಕೊಂಡಿದ್ದರು. ತಮ್ಮೆಲ್ಲ ಸಹೋದ್ಯೋಗಿಗಳ ಸಭೆಯೊಂದನ್ನು ಕರೆದು ಮಾತನಾಡಿದ ಸೆಲ್ವಿಯವರು, 'ನಾನು ನಿಮ್ಮವರಲ್ಲೊಬ್ಬಳು. ಪರಿಸ್ಥಿತಿಯ ಅರಿವು ನನಗಿಂತ ತಮ್ಮಗಳಿಗೆ ಚೆನ್ನಾಗಿದೆ. ನಯವಾದ ಕ್ರಮಗಳಿಂದ  ಜನರುಗಳನ್ನು ಗೆಲ್ಲುವ ಪ್ರಯತ್ನ ಮಾಡೋಣ. ಬಲ ಪ್ರಯೋಗದ ಪ್ರಯತ್ನ ಕಡೆಯದಾಗಿರಲಿ' ಎಂದರು. ಮರು ದಿನ ಬೆಳಗ್ಗೆ ಸೆಲ್ವಿಯವರು ತಮ್ಮ ತಂಡದೊಂದಿಗೆ, ತಮ್ಮ ಪ್ರದೇಶದ ಪ್ರದಕ್ಷಿಣೆ ನಡೆಸುತ್ತಾ, ಬೆಳಗಿನ ವಾಯುವಿಹಾರ ಮಾಡುತ್ತಿದ್ದವರನ್ನು ಭೇಟಿ ಮಾಡಿದರು. ಮಾಸ್ಕ್ ಧರಿಸಿದೆ ಇದ್ದವರಿಗೆಲ್ಲಾ, ಸೆಲ್ವಿ ಗುಲಾಬಿಗಳನ್ನಿತ್ತರು, ಮತ್ತು ಅವರುಗಳಿಗೆ ಮಾಸ್ಕ್ಗಳನ್ನು ವಿತರಿಸಿದರು.  ಪೋಷಕರೊಂದಿಗೆ ನಡೆದಾಡುತ್ತಿದ್ದ ಮಕ್ಕಳುಗಳಿಗೆಲ್ಲಾ ಚಾಕಲೇಟ್ಗಳನ್ನೂ ಹಂಚಲಾಯಿತು. ಕೆಲವೇ ಘಂಟೆಗಳಲ್ಲಿ ಸೆಲ್ವಿಯವರ ಈ ವಿನೂತನ ಕ್ರಮದ ಸುದ್ದಿ ಅವರ ಠಾಣೆಯ ಪ್ರದೇಶದ ಸುತ್ತೆಲ್ಲ ಹರಡಿಹೋಗಿತ್ತು. ಮಾರನೆಯ ದಿನ ಬೆಳಗಿನ ನಡೆದಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಸೆಲ್ವಿಯವರು ಕೂಡ ಮೈಕ್ ಉಪಕರಣಗಳನ್ನುಅಳವಡಿಸಿದ್ದ ಜೀಪೊಂದರಲ್ಲಿ ತಮ್ಮ ತಂಡದವರೊಂದಿಗೆ ಹಾಜರಾಗಿದ್ದರು. ನಡೆದಾಡುತ್ತಿದ್ದ ಜನಗಳನ್ನು ಅಲ್ಲಲ್ಲಿಯೇ ಅಂತರಗಳನ್ನು ಕಾಯ್ದುಕೊಂಡು ನಿಲ್ಲುವಂತೆ ಸೂಚಿಸಿದ ಸೆಲ್ವಿ, ಜನರುಗಳನ್ನುದ್ದೇಶಿಸಿ ಮಾತನಾಡಹತ್ತಿದರು. 'ತಾವುಗಳೆಲ್ಲ ಬೆಳಗಿನ ವಾಯುವಿಹಾರದ ನಡಿಗೆಯನ್ನು ಉತ್ಸಾಹದಿಂದ ಮಾಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಆದರೆ ಕೋವಿಡ್ ದಾಳಿಗೆ ನಾವೆಲ್ಲರೂ ತುತ್ತಾಗಬಹುದೆಂಬ ವಿಷಯ ನೆನಪಿರಲಿ. ಲಾಕ್ಡೌನಿನ ನಿಯಮಗಳನ್ನು ಪಾಲಿಸಿ ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಉಳಿದುಕೊಳ್ಳುವುದರಿಂದ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಸಹಾಯವಾಗುತ್ತದೆ. ಗುಂಪು ಸೇರುವುದು ಬೇಡ. ಸಭೆ-ಸಮಾರಂಭಗಳಲ್ಲಿ ಸರಕಾರ ನಿಗದಿಪಡಿಸಿರುವಷ್ಟಕ್ಕಿಂತಾ ಹೆಚ್ಚು ಜನರಗಳನ್ನು ಸೇರಿಸುವುದು ಬೇಡ. ಮಾಸ್ಕ್ ಧಾರಣೆ, ಆಗಾಗ ಸಾಬೂನಿನಿಂದ ಕೈತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳಿಂದ, ಕೋವಿಡ್ ಹರಡುವಿಕೆಯನ್ನು ತಡೆಯಲು ಸಾಧ್ಯ. ಕೋವಿಡ್ ರೋಗವನ್ನು ಹೊಡೆದೋಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆಂಬ ವಿಶ್ವಾಸ ನನಗಿದೆ' ಎಂದ ಸೆಲ್ವಿಯವರು, ತಮ್ಮ ಪುಟ್ಟ ಭಾಷಣದ ಕಡೆಗೊಂದು ಜನಪ್ರಿಯ ಗೀತೆಯೊಂದನ್ನು ಹಾಡ ಹತ್ತಿದರು. 

ಜಯವು ನಮ್ಮದೇ, ಜಯವು ನಮ್ಮದೇ 

ಜಯವು ನಮ್ಮದೇ ಎಂದೆಂದಿಗೂ 

ಮನದಲ್ಲಿದೆ ವಿಶ್ವಾಸ 

ಪೂರ್ತಿ ವಿಶ್ವಾಸ 

ಜಯವು ನಮ್ಮದೇ ಎಂದೆಂದಿಗೂ  

ತನ್ನ ಕೈಗಳಿಂದ ಚಪ್ಪಾಳೆ ತಟ್ಟುತ್ತಾ  ಸನ್ನೆ ಮಾಡಿದ ಸೆಲ್ವಿಯವರನ್ನು ಕಂಡು ಉತ್ತೇಜಿತರಾದ ಜನಗಳು ಕೂಡ ಹಾಡಿನ ತಾಳಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುತ್ತಾ ಹಾಡಲಾರಂಭಿಸಿದರು. ಮಹಿಳೆಯರಲ್ಲಿ ಮತ್ತು ಮಕ್ಕಳುಗಳಲ್ಲಿ ಹಾಡುವ ಉತ್ಸಾಹ ಹೆಚ್ಚಾಗಿದ್ದು ಕಂಡುಬಂದಿತ್ತು.

ಅದೇ ದಿನ ಆ ಪ್ರದೇಶದ ನಾಯಕರು ಮತ್ತು ಹಿರಿಯರ ಸಭೆಯೊಂದನ್ನು ಸೆಲ್ವಿ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಸೆಲ್ವಿ, ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಲಾಕ್ಡೌನಿನ  ನಿಯಮಗಳನ್ನು ಪಾಲಿಸಿ ಕೋವಿಡ್ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಅವರುಗಳಲ್ಲಿ ಕೆಲವರು ದಿನಸಿ ಪೊಟ್ಟಣಗಳ ವಿತರಣೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಒಂದೇ ದಿನದಲ್ಲಿ ಇಡೀ ಪ್ರದೇಶಕ್ಕೆ ಬೇಕಾದಷ್ಟು ದಿನಸಿ ಪೊಟ್ಟಣಗಳನ್ನು ತರಿಸಿ,  ಹಂಚುವ ಕಾರ್ಯವನ್ನು ಸೆಲ್ವಿ ಮಾಡಿ ಮುಗಿಸಿದ್ದರು. ಈ ರೀತಿಯ ನಯವಾದ ಕಾರ್ಯಕ್ರಮಗಳಿಂದ, ಇಡೀ ಪ್ರದೇಶವನ್ನು ಒಂದು ವಾರದೊಳಗೆ ಸೆಲ್ವಿ ನಿಯಂತ್ರಣಕ್ಕೆ ತಂದಿಟ್ಟಿದ್ದರು. ಸೆಲ್ವಿಯವರ ಯಶಸ್ವೀ ಪ್ರಯತ್ನದ ಸುದ್ದಿಯು ಪೊಲೀಸ್ ಇಲಾಖೆಯ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ದೇಶದ ದೂರ ದೂರದ ಪೊಲೀಸ್ ವಲಯಗಳಲ್ಲಿ ಸೆಲ್ವಿ ಕ್ರಮದ ಬಗ್ಗೆ ಪ್ರಶಂಸೆಗಳು ಮತ್ತು ಅವರ ವಿಧಾನಗಳನ್ನನುಸರಿಸುವ ಪ್ರಯತ್ನಗಳ ವರದಿಗಳು ಹರಿದಾಡತೊಡಗಿದ್ದವು.  

ಅಂದು ರಾತ್ರಿ ೮ ಘಂಟೆಯ ಸಮಯವಾಗಿತ್ತು.  ಹೆದ್ದಾರಿಯೊಂದರಲ್ಲಿ ಸಂಚಾರಿ ವಾಹನಗಳ ತಪಾಸಣೆ ನಡೆಸಲೆಂದು ತಡೆಗಟ್ಟನ್ನು (barricades) ಹಾಕಿದ್ದ ಸ್ಥಳದಲ್ಲಿ, ಸೆಲ್ವಿ ಮತ್ತವರ ನಾಲ್ಕು ಸಹೋದ್ಯೋಗಿಗಳು ಕಾವಲು ಕಾಯುತ್ತಿದ್ದರು. ಸೆಲ್ವಿಯವರು ಅಂದು ಮೂರು ತಿಂಗಳ ಗರ್ಭಿಣಿಯಾಗಿದ್ದರು. ಗರ್ಭಾವಸ್ಥೆಯ ಆರಂಭದ ದಿನಗಳ ತೊಂದರೆ ಸೆಲ್ವಿಯವರನ್ನು ತೀವ್ರವಾಗೇ ಕಾಡುತ್ತಿತ್ತು. ಆದರೂ ಮೇಲಧಿಕಾರಿಗಳಿಂದ ಯಾವ ರಿಯಾಯ್ತಿಗೂ ವಿನಂತಿಸದ ಸೆಲ್ವಿಯವರು ರಾತ್ರಿ ಪಾಳಿಯ ಸೇವೆಗೇ ಬಂದು ನಿಂತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿದ್ದರೂ, ಅನುಮತಿ ಪಡೆದ ವಾಹನಗಳ ಸಂಚಾರಕ್ಕೆ ಅಡ್ಡಿಯಿರಲಿಲ್ಲ. ಇದ್ದಕಿದ್ದಂತೆ ವೇಗವಾಗಿ ನುಗ್ಗಿ ಬಂದ ಕಾರೊಂದು                            ತಡೆಗಟ್ಟುಗಳಿಗಪ್ಪಳಿಸಿತ್ತು. ಪೊಲೀಸರ ಸೀಟಿಯನ್ನು ಧಿಕ್ಕರಿಸುತ್ತಾ ಆ ಕಾರು ಓಡುತ್ತಾ ರೊಯ್ಯನೆ ಮುಂದೆ ಸಾಗಿತ್ತು. ತಕ್ಷಣವೇ ತನ್ನ ಜೀಪಿನ ಚಾಲಕರ ಆಸನದಲ್ಲಿ ಕುಳಿತಿದ್ದ ಸೆಲ್ವಿ, ತನ್ನ ಸಹೋದ್ಯೋಗಿಗಳಿಗೆ ಜೀಪನ್ನೇರುವಂತೆ ಸನ್ನೆ ಮಾಡಿದರು. ಆ ಪುಂಡ ಕಾರಿನ ಬೆನ್ನಟ್ಟಿ ಹೊರಟ ಸೆಲ್ವಿ ತಮ್ಮ ಜೀಪನ್ನು ಅತಿ ವೇಗವಾಗೇ ಚಲಾಯಿಸಿದ್ದರು. ನಾಲ್ಕೈದು ನಿಮಿಷಗಳು ಬೆನ್ನಟ್ಟುವಷ್ಟರಲ್ಲೇ ಸೆಲ್ವಿ, ಆ ದುಷ್ಟರುಗಳ ಕಾರನ್ನು ತಡೆದು ನಿಲ್ಲಿಸಿದ್ದರು. ಜೀಪಿನಿಂದ ಕೆಳಗಿಳಿದ ಸೆಲ್ವಿ, ಆ ಕಾರಿನ ಚಾಲಕರಿಗೆ ಅನುಮತಿಯ ಪತ್ರವನ್ನು ತೋರಿಸುವಂತೆ ಆಗ್ರಹಿಸಿದ್ದರು. ಮಿಕ್ಕ ಪೊಲೀಸ್ ಅಧಿಕಾರಿಗಳು, ಕಾರಲ್ಲಿದ್ದವರನ್ನೆಲ್ಲಾ ಹೊರಬರುವಂತೆ ಕರೆದರು. ಕಾರೊಳಗಿದ್ದ ಐದೂ ವ್ಯಕ್ತಿಗಳು ಒಮ್ಮಲೇ ಹೊರಬಂದಿದ್ದರು. ಅವರುಗಳ ಪೈಕಿ, ಭಾರಿ ಕತ್ತಿಯೊಂದನ್ನು ಝಳಪಿಸುತ್ತಾ ಮುನ್ನುಗಿದ ದುಷ್ಟನೊಬ್ಬ ನೋಡು ನೋಡುತ್ತಿರುವಷ್ಟರಲ್ಲೇ, ಪಿಸ್ತೂಲ್ ಹಿಡಿದಿದ್ದ ಸೆಲ್ವಿಯವರ ಬಲಗೈಯನ್ನು ತುಂಡರಿಸಿಯೇ ಬಿಟ್ಟಿದ್ದನು. ತುಂಡಾದ ಸೆಲ್ವಿಯವರ ಬಲಗೈ ಕೆಳಗೆ ಬಿದ್ದ ಕೂಡಲೇ, ಸೆಲ್ವಿಯವರೂ ನೆಲಕ್ಕುರುಳಿದ್ದರು. ಇನ್ನುಳಿದ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಷ್ಟರೊಳಗೆ ಕಾರನ್ನು ವೇಗವಾಗಿ ಚಲಾಯಿಸಿತ್ತಾ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದರು. 

ಗಾಯಗೊಂಡ ನಾಲ್ಕು ಪೊಲೀಸ್ ಕರ್ಮಚಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ, ಕೆಳಗೆ ತುಂಡಾಗಿ ಬಿದ್ದಿದ್ದ ಸೆಲ್ವಿಯವರ ಬಲಗೈಯನ್ನು ಕೈಗೆತ್ತಿಕೊಂಡರು. ಎದ್ದು ನಿಲ್ಲಲು ಸೆಲ್ವಿಗೆ ಸಹಾಯ ಮಾಡಿದ ಪೊಲೀಸ್ ಸಹಚರರು, ಸೆಲ್ವಿಯವರನ್ನು ಜೀಪಿನೊಳಗೆ ಕೂರಿಸಿಕೊಂಡು, ಜಿಲ್ಲಾ ಆಸ್ಪತ್ರೆಯ ಕಡೆಗೆ ವೇಗವಾಗಿ ಜೀಪನ್ನು ಓಡಿಸತೊಡಗಿದರು. ತೀವ್ರವಾಗಾಗುತ್ತಿದ್ದ ರಕ್ತಸ್ರಾವವನ್ನು ತಡೆಯಲು ಸೆಲ್ವಿಯವರ ಕೈಗಳಿಗೆ ಮತ್ತು ಮುರಿದುಬಿದ್ದಿದ್ದ ಕೈಭಾಗಕ್ಕೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ವಸ್ತ್ರಗಳಿಂದ ಬಿಗಿಯಾಗಿ ಬ್ಯಾಂಡೇಜುಗಳನ್ನು, ಸೆಲ್ವಿಯ ಸಹೋದ್ಯೋಗಿಗಳು ಕಟ್ಟಿದ್ದರು.  ಸೆಲ್ವಿ ಸಹಚರರೊಬ್ಬರ  ಮೊಬೈಲ್ ಮೂಲಕ ನಿಯಂತ್ರಣ ಕಾರ್ಯಾಲಯವನ್ನು ಮುಟ್ಟಿದ ಸುದ್ದಿ, ಬಿರುಗಾಳಿಯಂತೆ ಪೊಲೀಸ್ ವಲಯಗಳೆಲ್ಲ ಹಬ್ಬಿ ಹೋಯಿತು. ಸುದ್ದಿ ತಿಳಿದ ರಾಜ್ಯದ ಮುಖ್ಯ ಮಂತ್ರಿಗಳು, ಗಾಯಗೊಂಡ ಎಲ್ಲ ಪೊಲೀಸರಿಗೂ ಅತ್ತ್ಯುತ್ತಮ ಚಿಕಿತ್ಸೆಯ ಏರ್ಪಾಡು ಕೂಡಲೇ ಆಗಬೇಕೆಂದು ಆಜ್ಞಾಪಿಸಿದ್ದರು. 

ತುರ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರುಗಳು, ಸೆಲ್ವಿಯವರ ಚಿಕಿತ್ಸೆಯನ್ನಾರಂಭಿಸಿದರು. ಎಲ್ಲಾ  ಹಿರಿಯ ವೈದ್ಯರುಗಳಿಗೂ ತುರ್ತು ಕರೆಯನ್ನು ಕಳುಹಿಸಲಾಯಿತು. ಕೊಂಚವೂ ಸಮಯ ವ್ಯರ್ಥವನ್ನು ಮಾಡದ ವೈದ್ಯರುಗಳ ತಂಡ , ಸೆಲ್ವಿಯವರ ಕೈಯನ್ನು ಮತ್ತೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ವೈದ್ಯರುಗಳು ನಿರ್ಧಾರ ಸರಿಯಾಗಿಯೇ ಇತ್ತು. ಕತ್ತಿಯಿಂದ ಬಿದ್ದ ಏಟು ಕೈಯನ್ನು ಒಮ್ಮಲೇ ಕತ್ತರಿಸಿ ತುಂಡಾಗಿಸಿತ್ತು. ಕತ್ತಿಯಿಂದ ಜಜ್ಜು ಗಾಯಗಳಾಗದೆ ಇದ್ದದ್ದು, ಕೈಜೋಡಣೆಯ ಶಸ್ತ್ರಚಿಕಿತ್ಸೆಯ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿತ್ತು. ನೋವಿನಿಂದ ಬಳಲುತ್ತಿದ್ದ ಸೆಲ್ವಿ, ವೈದ್ಯರ ತಂಡಕ್ಕೆ 'ತಾನು ಮೂರು ತಿಂಗಳ ಗರ್ಭಿಣಿ' ಎಂಬುದನ್ನು ತಿಳಿಸಲು ಮರೆಯಲಿಲ್ಲ. ಎರಡು ಸ್ತ್ರೀ ರೋಗ ತಜ್ಞರನ್ನು (gynaecologists) ಕೂಡಲೇ ಕರೆಸಲಾಯಿತು. ಎಂಟು ವೈದ್ಯರುಗಳ ತಂಡ ಶಸ್ತ್ರಕ್ರಿಯೆಯನ್ನು ಆರಂಭಿಸಿದಾಗ ಸಮಯವಾಗಲೇ ರಾತ್ರಿಯ ೧೦ ಘಂಟೆಯಾಗಿತ್ತು. ಸುಮಾರು ಒಂದು ಲೀಟರಿನಷ್ಟು ರಕ್ತವನ್ನು ಕಳೆದುಕೊಂಡಿದ್ದ ಸೆಲ್ವಿಯವರಿಗೆ, ಹೊರಗಿನಿಂದ ರಕ್ತವನ್ನೊದಗಿಸುವ ಕಾರ್ಯಕೂಡ ಜೊತೆ ಜೊತೆಯೇ ಶುರುವಾಗಿತ್ತು. 

ಈ ನಡುವೆ ಸ್ತ್ರೀ ರೋಗ ತಜ್ಞರು, ಸೆಲ್ವಿಯವರ ದೇಹದ ಕೆಳಭಾಗದಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದರು. ಸೆಲ್ವಿಯವರು ಘಟನೆಯಿಂದ ಗಾಬರಿಕೊಂಡಿದ್ದು, ಆ ಕಾರಣದಿಂದ ಅವರಿಗೆ ಗರ್ಭಪಾತವಾಗಿರಬಹುದೆಂಬ ವೈದ್ಯರುಗಳು ಅನುಮಾನ ಸರಿಯಾಗಿಯೇ ಇತ್ತು. ಸೆಲ್ವಿಯವರಿಗೆ ಗರ್ಭಪಾತವಾಗಿತ್ತು. ಬೇಕಾದ ಚಿಕಿತ್ಸೆಯನ್ನು ಸ್ತ್ರೀ ರೋಗ ತಜ್ಞರು ಜೊತೆ ಜೊತೆಯಲ್ಲೇ ಆರಂಭಿಸಿದ್ದರು. 

ಮುರಿದುಬಿದ್ದ ಕೈಯನ್ನು ಮರುಜೋಡಣೆ ಮಾಡುವ ಶಸ್ತ್ರಚಿಕಿತ್ಸೆಗೆ 'ಅನಸ್ಟೋಮೊಸಿಸ್ (anastomosis)' ಎನ್ನುತ್ತದೆ ವೈದ್ಯಕೀಯ ಶಾಸ್ತ್ರ. ಮೂಳೆಗಳು, ಮಾಂಸ ಖಂಡಗಳು, ರಕ್ತ ನಾಳಗಳು ಮತ್ತು ನರಗಳ ಜೋಡಣೆಯನ್ನೂ ನಡೆಸಬೇಕಾದ ಆ ಶಸ್ತ್ರಚಿಕಿತ್ಸೆ ತುಂಬಾ ಸಂಕೀರ್ಣವಾದದ್ದು ಎಂಬುದು ವೈದ್ಯರುಗಳ ಅಭಿಪ್ರಾಯ. ಮೂಳೆಗಳನ್ನು ವಿಶೇಷವಾದ ತಂತಿಗಳಿಂದ ಕೂಡಿಸಿಡಬೇಕು. ಮೂಳೆಗಳ ನಡುವೆ ಸ್ವಾಭಾವಿಕವಾದ ಸೇರುವಿಕೆ ಉಂಟಾದ ಮೇಲೆ ತಂತಿಗಳನ್ನು ತೆಗೆಯಬೇಕು. ತಜ್ಞ ವೈದ್ಯರುಗಳ ತಂಡಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಲು ಸುಮಾರು ಏಳು ಘಂಟೆಗಳಷ್ಟು ಸಮಯ ಬೇಕಾಯಿತು. ಶಸ್ತ್ರಚಿಕಿತ್ಸೆಯ ಗಾಯ ಮಾಯಲು ಕನಿಷ್ಠ ಮೂರು ವಾರಗಳ ಸಮಯ ಬೇಕೆಂಬುದು ವೈದ್ಯರುಗಳಿಗೆ ತಿಳಿದಿತ್ತು. 

ಏತನ್ಮಧ್ಯೆ ಸೆಲ್ವಿ ಮತ್ತವರ ಸಹೋದ್ಯೋಗಿಗಳ ಸಾಹಸಗಾಥೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿಹೋಗಿತ್ತು. ವೈದ್ಯರುಗಳ ತಂಡ ಯಶಸ್ವಿಯಾಗಿ ಸೆಲ್ವಿಯವರ ಕೈಯಿನ  ಮರುಜೋಡಣೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾಡಿರುವ ಸುದ್ದಿ ಜನಗಳಿಗೆ ಸಮಾಧಾನ ತಂದಿತ್ತು. ಆಘಾತದಿಂದ ಸೆಲ್ವಿಯವರಿಗಾದ ಗರ್ಭಪಾತದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿದ ಮಹಿಳೆಯರು ಕಣ್ಣೀರಿಟ್ಟಿದ್ದರು. 

ಶಸ್ತ್ರಚಿಕಿತ್ಸೆಯನಂತರದ ಮೂರುವಾರಗಳ ಅವಧಿ ಮುಗಿದಿತ್ತು. ಧೈರ್ಯಶಾಲಿಯಾದ ಸೆಲ್ವಿಯವರು ಚಿಕಿತ್ಸೆಯ ನೋವನ್ನು ಸಹಿಸುವಲ್ಲಿ ಅಪಾರವಾದ ಸಂಯಮವನ್ನು ಪ್ರದರ್ಶಿಸಿದ್ದರು. ಅವರು ಸಮಸ್ಥಿತಿಗೆ ಮರಳುತ್ತಿದ್ದ ವೇಗವನ್ನು ನೋಡುತ್ತಿದ್ದ ವೈದ್ಯರುಗಳ ತಂಡವೇ ಆಶ್ಚರ್ಯಗೊಂಡಿತ್ತು. ಆದರೂ ಜೋಡಿಸಲ್ಪಟ್ಟ ಕೈಯಿನ ಚಲನೆ ಮತ್ತು ಸಂವೇದನೆಗಳು (motor movements and sensation) ಮರಳಲು ಮತ್ತೆ ಮೂರು ವಾರಗಳಷ್ಟರ 'ಫಿಸಿಯೋಥೆರಪಿ (physiotherapy)'ಯ ಅವಶ್ಯಕತೆಯಿತ್ತು.

ಕಡೆಗೂ ಸೆಲ್ವಿಯವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರನಡೆವ ದಿನ ಬಂದೇ ಬಂದಿತ್ತು. ಆಸ್ಪತ್ರೆಯಿಂದ ಹೊರಬರುವಾಗಲೇ ಪೊಲೀಸ್ ಸಮವಸ್ತ್ರವನ್ನು ಧರಿಸಿ, ನೇರವಾಗಿ ತನ್ನ ಪೊಲೀಸ್ ಠಾಣೆಯನ್ನು ಸೇರಿ ಕರ್ತವ್ಯಕ್ಕೆ ಹಾಜರಾಗುವ ಆಶಯವನ್ನು ಸೆಲ್ವಿ ವ್ಯಕ್ತಪಡಿಸಿದ್ದರು.  ಪೊಲೀಸ್ ಮೇಲಧಿಕಾರಿಗಳ ಆಜ್ಞೆಯ ಮೇರೆಗೆ, ಸೆಲ್ವಿಯವರ ಠಾಣೆ ಸೇರುವ ಮಾರ್ಗಕ್ಕೆ ಕೆಂಪುಹಾಸನ್ನು ಹಾಸಿ ಸಿಂಗರಿಸಲಾಗಿತ್ತು. ಆಸ್ಪತ್ರೆಯಿಂದ ಹೊರಟ ಸೆಲ್ವಿಯವರನ್ನು ತೆರದ ಪೊಲೀಸ್ ಜೀಪೊಂದರಲ್ಲಿ ಕೊಂಡೊಯ್ಯಲಾಗಿತ್ತು. ಅವರ ಜೀಪಿನ್ನು ಹಲವಾರು ಪೊಲೀಸ್ ಅಧಿಕಾರಿಗಳು ಕುಳಿತ ಜೀಪುಗಳು ಹಿಂಬಾಲಿಸಿದವು. ದಾರಿಯುದ್ದಕ್ಕೂ ಪೊಲೀಸ್ ವಾದ್ಯಗಾರರು ತಮ್ಮ ವಾದ್ಯಗಳನ್ನು ನುಡಿಸುತ್ತಾ ಸಾಗಿದ್ದರು. ರಸ್ತೆಗಳ ಎರಡೂ ಬದಿಗಳ, ತಮ್ಮ ಮನೆ ಮತ್ತು ಅಂಗಡಿಗಳ ಬಾಗಿಲುಗಳಲ್ಲಿ ನಿಂತಿದ್ದ ಜನರು ಕೈ ಬೀಸುತ್ತಾ 'ಸೆಲ್ವಿ, ಸೆಲ್ವಿ, ಸೆಲ್ವಿ' ಎಂದು ಜೈಕಾರಗಳನ್ನು ಕೂಗಿದ್ದರು. ಸೆಲ್ವಿ ತನ್ನ ಪೊಲೀಸ್ ಠಾಣೆಯ ಮುಂದಿಳಿಯುತ್ತಲೇ, ಪೊಲೀಸ್ ಅಧಿಕಾರಿಗಳು ಅವರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದರು. ಸೆಲ್ವಿಯವರ ಪತಿಯವರು ಹಾಗೂ ಅವರ ಕುಟುಂಬದವರೆಲ್ಲರೂ, ಆರತಿ ಬೆಳಗಿ ಸೆಲ್ವಿಯವರನ್ನು ಸ್ವಾಗತಿಸಿದರು. ದೀರ್ಘ ಕರತಾಡನದ ನಡುವೆ ಸೆಲ್ವಿ ತಮ್ಮ ಅಧಿಕೃತ ಆಸನದ ಮೇಲೆ ಕುಳಿತರು. ಸುತ್ತಲೂ ನೆರೆದಿದ್ದವರೆಲ್ಲರಿಗೂ ಸಿಹಿಯನ್ನು ಹಂಚಲಾಯಿತು. ಸಮಾರಂಭಕ್ಕೆ ತಪ್ಪದೆ ಹಾಜರಾಗಿದ್ದ ನಗರದ ಪೊಲೀಸ್ ಕಮೀಷನರ್ರವರು   ಸೆಲ್ವಿಯವರ ಧೈರ್ಯ-ಸಾಹಸಗಳನ್ನು ಕೊಂಡಾಡಿ 'ಸೆಲ್ವಿಯವರಿಗೆ  ಈ ಕ್ಷಣದಿಂದಲೇ ಮುಂಬಡ್ತಿ ನೀಡಿ,  ಡಿ.ವೈ.ಎಸ್ಪಿ. (Dy.S.P.) ಹುದ್ದೆಗೆ ನೇಮಿಸಲಾಗಿದೆ' ಎಂದು ಘೋಷಿಸಿದರು. ಸೆಲ್ವಿಯವರೊಂದಿಗಿದ್ದ ಮಿಕ್ಕ ನಾಲ್ಕು ಪೊಲೀಸ್ ಕರ್ಮಚಾರಿಗಳಿಗೂ ಮುಂಬಡ್ತಿಯನ್ನು ಮೇಲಧಿಕಾರಿಗಳು ಘೋಷಿಸಿದ್ದರು. ಹಾಜರಿದ್ದ ಆರೋಗ್ಯ ಸಚಿವರು, ಸೆಲ್ವಿಯವರಿಗೆ ಚಿಕಿತ್ಸೆ ನೀಡಿದ ವೈದ್ಯರುಗಳ ಇಡೀ ತಂಡಕ್ಕೆ ವಿಶೇಷ ನಗದು ಬಹುಮಾನವನ್ನು ನೀಡಿದರು. 

ತನ್ನ ಡೈರಿಯಲ್ಲಿ, ಪೊಲೀಸ್ ಅಧಿಕಾರಿಣಿ ತಾಮರೈ ಸೆಲ್ವಿಯವರ ಸಾಹಸಗಾಥೆಯನ್ನು ದಾಖಲಿಸುತ್ತಾ ರೋಹಿಣಿ ಭಾವಪರವಶರಾಗಿದ್ದರು. ಸೆಲ್ವಿಯವರು  ಅನುಭವಿಸಿರಬಹುದಾದ ದೈಹಿಕ ಮತ್ತು ಮಾನಸಿಕ ಆಘಾತಗಳು ರೋಹಿಣಿಯನ್ನು ಇಡೀ ರಾತ್ರಿ ಕಾಡುತ್ತಿತ್ತು. 

***

ಮಾರನೆಯ ದಿನದ ಬೆಳಗ್ಗೆ, ದಿನಪತ್ರಿಕೆಯನ್ನೋದುತ್ತಿದ್ದ ರೋಹಿಣಿಗೆ ಸಂತಸದ ಅಚ್ಚರಿಯುಂಟಾಗಿತ್ತು. ಪೊಲೀಸ್ ಸಮವಸ್ತ್ರದಲ್ಲಿದ ಅವಳ ಕಾಲೇಜು ದಿನಗಳ ಸಹಪಾಠಿ ಆಕಾಶ್, ತನ್ನ ಮೇಲಧಿಕಾರಿಯೊಬ್ಬರಿಂದ ಪ್ರಶಸ್ತಿಯೊಂದನ್ನು ಸ್ವೀಕರಿಸುತ್ತಿದ್ದನು. ರೋಹಿಣಿಗೆ ತನ್ನ ಕಾಲೇಜು ದಿನಗಳ ನೆನಪಾಗಿತ್ತು. ಆಕಾಶ್ ಮತ್ತು ರೋಹಿಣಿ ಸಮಾಜ ಶಾಸ್ತ್ರದ ಎಮ್. ಎ. ತರಗತಿಯ ಸಹಪಾಠಿಗಳಾಗಿದ್ದರು. ರೋಹಿಣಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು. ಕುಟುಂಬದ ಸಮಸ್ಯೆಗಳ ಒತ್ತಡದ ಕಾರಣಗಳಿಂದ ಆಕಾಶನಿಗೆ ಹಾಜರಿಯ ಕೊರತೆಯುಂಟಾಗಿ, ಪದವಿ ಗಳಿಸದಾಗಿದ್ದನು. ಎಂಟು ತಿಂಗಳ ಹಿಂದೆ ಪೊಲೀಸ್ ಪೇದೆಯಾಗಿ ನೇಮಕಗೊಂಡ ಆಕಾಶ್, ಒಂಬತ್ತು ತಿಂಗಳ ತರಬೇತಿಯ  ಅಭ್ಯರ್ಥಿಯಾಗಿದ್ದನು.  ಸಂಬಳ ಮತ್ತು ನಿವೃತ್ತಿವೇತನಗಳ ಖಾತರಿಯಿದ್ದ ಸರಕಾರಿ ಕೆಲಸ ಸಿಕ್ಕಿದ್ದರಿಂದ ಆಕಾಶ್ ಖುಷಿಯಾಗೇ ಇದ್ದನು. ಕೊರೋನಾದ ನಿಮಿತ್ತ ಉಂಟಾದ ಸಿಬ್ಬಂಧಿಯ ಕೊರತೆಯನ್ನು ತುಂಬಲು, ಆಕಾಶನೊಡನೆ ತರಬೇತಿಯಲ್ಲಿದ್ದ ಎಲ್ಲಾ ಅಭ್ಯರ್ಥಿಗಳನ್ನು, ಕೋರ್ಸ್ ಮುಗಿಯುವ ಮೂರು ತಿಂಗಳ ಮುಂಚೆಯೇ, ಪೇದೆ ಕೆಲಸ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಕೆಲಸಗಳನ್ನು ಕಳೆದುಕೊಂಡ ಸುಮಾರು ೬೦ ವಲಸಿಗರುಗಳು ತಂಗಲು ನಿರ್ಮಿಸಿದ್ದ ದೊಡ್ಡ ಬಿಡಾರವೊಂದರ ಕಾವಲಿಗಾಗಿ ಆಕಾಶನನ್ನು ನೇಮಿಸಲಾಗಿತ್ತು. 

ಪತ್ರಿಕೆಯ ವರದಿಯನ್ನು ರೋಹಿಣಿ ಕುತೂಹಲದಿಂದ ಓದಲಾರಂಭಿಸಿದಳು. ಜೂನ್ ತಿಂಗಳ ಮಳೆ ಅಬ್ಬರಿಸಿ ಸುರಿಯುತ್ತಿತ್ತು. ಆಕಾಶ್ ಕಾವಲಿದ್ದ ಬಿಡಾರದ ಸೂರು ಮಳೆಯ ರಭಸಕ್ಕೆ ಹರಿದು, ಮಳೆ ನೀರು ಬಿಡಾರದ ತುಂಬಾ ಹರಿಯಲಾರಂಭಿಸಿತ್ತು. ಮಕ್ಕಳುಗಳಿದ್ದ ಮಹಿಳೆಯರನ್ನು ಕ್ಷೇಮವಾದ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಆಕಾಶ್ ತೊಡಗಿದ್ದಾಗ, ಭಾರಿ ಮರವೊಂದು ಮುರಿದು ಬಿಡಾರದ ಮೇಲೆ ಬಿದ್ದಿತ್ತು. ಬಿಡಾರದ ಸೂರಿನ ತಗಡುಗಳು ನೆಲಕ್ಕುರುಳಿದ್ದವು. ಇದ್ದಕಿದ್ದಂತೆ ವಿದ್ಯುತ್ ಸಂಪರ್ಕ ತಪ್ಪಿದ್ದು, ಒಳಗಿದ್ದವರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಉರಿಯುತ್ತಿದ್ದ ವಿದ್ಯುತ್ ತಂತಿಯೊಂದು ಮಗುವನ್ನು ಹೊತ್ತ ಮಹಿಳೆಯೊಬ್ಬರ ಮೇಲೆ ಬಿದ್ದು, ಆ ಮಹಿಳೆ ಗಾಬರಿಯಿಂದ ಕಿರುಚಾಡಹತ್ತಿದ್ದರು. ಜಾಗರೂಕನಾಗಿದ್ದ ಆಕಾಶ್, ಉದ್ದವಾದ ದೊಣ್ಣೆಯೊಂದರ ಸಹಾಯದಿಂದ ಉರಿಯುತ್ತಿದ್ದ ತಂತಿಯನ್ನು ಮಹಿಳೆಯಿಂದ ದೂರ ಸರಿಸಿದ್ದನು. ತಾಳ್ಮೆಯಿಂದಿರುವಂತೆ ಜನರನ್ನು ಎಚ್ಚರಿಸಿದ ಆಕಾಶ್, ಒಬ್ಬರಿಗೊಬ್ಬರು ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದನು. ವಲಸಿಗರ ಭಾಷೆ ಬರದಿದ್ದರೂ, ಪಕ್ಕದ ಬಿಡಾರದಿಂದ ೮-೧೦ ಯುವಕರನ್ನು ಕರೆತಂದ ಆಕಾಶ್, ಅವರುಗಳ ಸಹಾಯದಿಂದ ತನ್ನ ಬಿಡಾರದ ಜನರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದನು. ಆಕಾಶ್,  ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಸುದ್ದಿಯನ್ನಾಗಲೇ ತಲುಪಿಸಿಯಾಗಿತ್ತು. ಕೂಡಲೇ ಬಿಡಾರದ ಬಳಿ ಆಗಮಿಸಿದ ಪೊಲೀಸ್ ಮೇಲಧಿಕಾರಿಗಳು, ಆಕಾಶನ ಸಮಯ ಪ್ರಜ್ಞೆ ಮತ್ತು ಪರಿಹಾರ ಕಾರ್ಯಗಳನ್ನು ಮೆಚ್ಚಿಕೊಂಡಿದ್ದರು. 

ಆಕಾಶನ ಸಾಹಸವನ್ನು ರೋಹಿಣಿ ಕೂಡ ಮೆಚ್ಚಿಕೊಂಡಿದ್ದಳು. ಆಕಾಶನಿಗೆ ಕರೆಮಾಡಿ ಮಾತನಾಡಿದ್ದ ರೋಹಿಣಿ 'ಆಕಾಶ್ ನಿನಗೆ ಅಭಿನಂದನೆಗಳು. ನಿನ್ನ ಮಹತ್ಕಾರ್ಯವನ್ನು ನೋಡಿದ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿದೆ. ಮುರಿದು ಬಿದ್ದ ಬಿಡಾರದಲ್ಲಿದ್ದ ವಲಸಿಗರ ಜೀವಗಳನ್ನುಳಿಸಿದ್ದೀಯ. ಪೊಲೀಸ್ ಇಲಾಖೆಯಲ್ಲಿ ಇನ್ನೂ ದೊಡ್ಡ ಹುದ್ದೆ ನಿನಗೆ ದೊರೆಯುವಂತಾಗಬೇಕು. ನೀನು "ಐ.ಪಿ.ಎಸ್." ಹುದ್ದೆಗೆ ಪ್ರಯತ್ನಿಸಬೇಕೆಂಬುದು ನನ್ನ ಆಸೆ. ನಿನಗೆ ಬೇಕಾದ ಪರೀಕ್ಷಾ ತಯಾರಿಗೆ ಕೈಲಾದ ಸಹಾಯವನ್ನು ಮಾಡಲು ನಾನು ಸಿದ್ಧಳಿದ್ದೇನೆ' ಎಂದಿದ್ದಳು. ಆಕಾಶ್ ಉತ್ತರಿಸುತ್ತಾ, 'ನನ್ನನ್ನು ಇನ್ನೂ ನೀನು  ಮರೆತಿಲ್ಲದ್ದು ಸಂತೋಷದ ವಿಷಯ. ನಾನು ನಿರ್ವಹಿಸಿರುವ ಅಲ್ಪ ಕರ್ತವ್ಯವನ್ನು ನೀನು ಮೆಚ್ಚಿಕೊಂಡಿರುವುದಕ್ಕೆ ನಾನು ಆಭಾರಿ. ಐ.ಪಿ.ಎಸ್. ಎಂಬುದು ದೂರದ ಕನಸು. ಆ ಹುದ್ದೆಗೆ ನಾನು ಅರ್ಹನೆಂದು ಪರಿಗಣಿಸಿದ್ದಕ್ಕೆ ನಿನಗೆ ಧನ್ಯವಾದಗಳು. ನಿನ್ನಂತಹ ಸ್ನೇಹಿತರ ಶುಭ ಹಾರೈಕೆಗಳೊಂದಿಗೆ ನಾನು ಆ ಪರೀಕ್ಷೆಯಲ್ಲಿ ಆಯ್ಕೆಯಾಗಬಲ್ಲೆನೆಂಬ ಭರವಸೆಯಿದೆ,' ಎಂದಿದ್ದನು. 

-೦-೦-೦-೦-೦-