Friday 12 July 2024

PARVA

 1) ಭೈರಪ್ಪನವರು ವಿಶ್ವ ವಿಖ್ಯಾತ ಕಾದಂಬರಿಕಾರರು

     - ೩೦ ಕಾದಂಬರಿಗಳು , ಬೃಹತ್, ವೈಚಾರಿಕತೆ 

 ೨) ಪರ್ವ - ಮೇರು ಕೃತಿ 

      - ಧನಾತ್ಮಕ ವಿಶ್ಲೇಷಣೆ 

     - ಓದದವರು, ಅರ್ಧ ಓದಿದವರು, ಓದಿರುವರಿಗಾಗಿ 

    - ೧೯೭೯ ಬಿಡುಗಡೆ, ಕ್ರಾಂತಿ, ಚರ್ಚೆ 

    ಎಲ್ಲ ಭಾಷೆಗಳಲ್ಲಿ ಅನುವಾದ, ಸಂಸ್ಕೃತ, ಇಂಗ್ಲಿಷ್, ಚೈನೀಸ್, ರಶಿಯನ್ 

    - ಮರುಸೃಷ್ಠಿ, ಪವಾಡಗಳಿಲ್ಲ, ಐತಿಹಾಸಿಕ, ಕೃಷ್ಣ ಕೂಡ ಸಾಮಾನ್ಯ 

೩) ಎಲ್ಲ ಸಬಲ ಪಾತ್ರಗಳೇ, ಮನೋವೇದನೆ ಬಗ್ಗೆ ಬರೆದಿಲ್ಲ, ಇಲ್ಲಿದೆ 

    -ಮೌಲ್ಯಗಳ ಸಂಘರ್ಷ, ಬಹುಪತಿತ್ವ, ಸೂತಪೂತ್ರ, ಕಾನೀನ - ಇದರ ಚರ್ಚೆ 

೪) ಆರಂಭ - ಯುದ್ಧ ಸನ್ನಿಹಿತವಾದ ಕಾಲ - ಎಲ್ಲ ಪಾತ್ರಗಳಿಗೂ ನಡು ವಯಸ್ಸು 

     -ಆತ್ಮಾವಲೋಖನಕ್ಕೆ ಸರಿಯಾದ ಕಾಲ 

೫) ಯಾವ ಭೂಭಾಗ - ಮಗಧದಿಂದ ಗಾಂಧಾರ  - ಆರ್ಯವೃತ್ತ -

     ಕುರುಗಳು, ಪಾಂಚಾಲರು, ಮದ್ರರು, ತ್ರಿಗರ್ತರು - ಇವರುಗಳ ನಡುವಿನ ಕಥೆ 

---------------------------------------------------------------------------------------------------------------


೧) ಶಲ್ಯನಿಂದಲೇ ಏಕೆ - 

     - ಯುದ್ಧ ಸನ್ನಿಹಿತ, ಕುರುಗಳ ಬಗ್ಗೆ ಇತರ ರಾಜರುಗಳ ಧೋರಣೆ  

        ಅರಮನೆಯ ಆಗು ಹೋಗುಗಳು , ಜನಜೀವನ, ಸಾಮಾನ್ಯ ಸೈನಿಕರ ಅನಿಸಿಕೆ 


೨) ಶಲ್ಯ - ಮದ್ರ ರಾಜ, ಕರ್ಣನ ಸಾರಥಿ, ಮಾದ್ರಿಯ ಅಣ್ಣ 


೩) ಭೂಗೋಳಿಕ ಅಧ್ಯಯನ - ಐರಾವತಿ (ರವಿ) - ಚಂದ್ರಭಾಗ (ಚೀನಾಬ್) ನಡುವೆ ಮದ್ರ 

     ಹಸ್ತಿನಾವತಿ - ದಿಲ್ಲಿಗೆ ಈಶಾನ್ಯ (ಮೀರತ್), ಅದಕ್ಕೆ ವಾಯುವ್ಯ ಭಾಗ ಮದ್ರ (ಈಗಿನ ಪಾಕ್) 


೪) ಮಗ ರುಕ್ಮರಥನಿಗೆ ರಾಜ್ಯ ಕೊಟ್ಟಿದ್ದರು - ಆಕ್ಟಿವ್ ಆಗೇ ಇದ್ದ -

     ಪ್ರತಿಷ್ಠಿತ ಹಿರಿಯರ ತರಹ - ವಯಸ್ಸು ೬೪

 ೫) ಶಲ್ಯನ ಭೀಷ್ಮ ಭಕ್ತಿ = ೧೨೦ - ೮೪ = ೩೬  - ಹಿರಣ್ಯವತಿ ಸಂವಾದ 

      ೬೦ ವರ್ಷದ ಹಿಂದೆ ಮಾದ್ರಿಯನ್ನು ಕೇಳಿಕೊಂಡು ಭೀಷ್ಮ 

      - ಬಹುಪತಿತ್ವ, ನಿಯೋಗಳ ಬಗ್ಗೆ ಭೀಷ್ಮರ ಒಪ್ಪಿಗೆ, ಶಲ್ಯನದ್ದೂ 

೬) ರುಕ್ಮರಥ - ಹಿರಣ್ಯವತಿ - ೨೦ ವರ್ಷ - ಮದುವೆಯಿಲ್ಲ - ಸ್ವಯಂವರ ದುಬಾರಿ -

     ಕನ್ಯಾಶುಲ್ಕ ಅವಮಾನ - ಆತಂಕ, ಹಿರಿಯರ - ನಡುವಯಸ್ಕರ - ಯುವಕರ ತಿಕ್ಕಾಟ 

೭) ಪಾಂಡವರ ದೂತ ಒಬ್ಬ ಬ್ರಾಹ್ಮಣ - ಧರ್ಮ ಪಾಂಡವರ ಕಡೆಗೆ 

     ಪಂಚಾಳರ, ವಿರಾಟನ, ಕಾಶೀರಾಜನ ಬೆಂಬಲ ಪಾಂಡವರಿಗೆ 

     ರಾಜಸೂಯದ ಹಿರಿಮೆ ಪಾಂಡವರಿಗೆ 

     ನಕುಲ ಸಹದೇವರ - ಎಲ್ಲರ ಸೋದರಮಾವ ನೀವು - ನಮ್ಮ ಪಕ್ಷಕ್ಕೆ ಬನ್ನಿ 

     ಪ್ರತಿವಿಂಧ್ಯ - ಹಿರಣ್ಯವತಿಯರ ಪ್ರಸ್ತಾಪ, ಯುದ್ಧ ತಂತ್ರ 


೮) ತ್ರಿಗರ್ತ ರಾಜಕುಮಾರ - ರುಕ್ಮರಥನ ಸ್ನೇಹಿತ 

      ತ್ರಿಗರ್ತ ಕೌರವರ ಕಡೆ, 

       ಅರಣ್ಯ ಸುತ್ತಿಬಂದ ಪಾಂಡವರ ಕಡೆಗೆ ಬೆಂಬಲ ಕಮ್ಮಿ 

       ನಾಗರ ವೈರ, hidimba ಬಕಾಸುರರ ವೈರ 

       ಪ್ರತಿವಿಂದ್ಯನಿಗಿಂತ ದು ಮಗ ಲಕ್ಷಣ ಹೆಚ್ಚು ಸರಿ, ಬಹುಪತಿತ್ವದ ಭಯ 

೯) ಯುದ್ಧದ ತಯಾರಿಯಲ್ಲಿ ಮದ್ರ

     ರಥಗಳ ನಿರ್ಮಾಣ, ರಥಗಳ ರಿಪೇರಿ, 

    ಸಾಮಾನ್ಯ ಸೈನಿಕರಿಗೆ ಯುದ್ಧದ ಭಯ - ಯುದ್ಧ ಆಗುತ್ತೋ ಇಲ್ಲ್ವೋ, ನಮಗೇಕೆ ಮೈನೋವು 

    ಶಸ್ತ್ರ ತಯಾರಿಕರಿಗೆ ಯುದ್ಧವಾಗದಿದ್ದರೆ ನಷ್ಟ 


೧೦) ದು ಕಡೆಯಿಂದ ದುಶ್ಯಾಸನ ದೂತ 

        - ನಿಯೋಗಕ್ಕೆ ಹುಟ್ಟಿದವರು 

        - ದು ಬುದ್ಧಿವಂತಿಕೆ ಉದ್ದಕ್ಕೂ 

       - ಮಾದ್ರಿ ಏನು ಸುಖಪಟ್ಟಳು? 

       - ನಕುಲ ಸಹದೇವರ ಮೇಲೆ ವೈರವಿಲ್ಲ, ರಾಜ್ಯ ಅವರಿಗೆ 

      - ಶಲ್ಯ ಸೈನ್ಯದ ಆತಿಥ್ಯ ದು ದೇ 

      - ಅಪಾರ ಸೈನ್ಯವನ್ನು ನೋಡೇ ಪಾಂಡವರು ಶರಣಾಗತರಾಗುವರು 

----------------------------------------------------------------------------------------------------------------------------

   ಕುಂತಿಯ ಸ್ವಾಗತ 

   - ಶೂರಸೇನ (ಉಗ್ರನ ಅಣ್ಣ) ನ ಮಗಳು, ಕೃಷ್ಣನ ಸೋದರತ್ತೆ, 

  - ಪೃಥಾ ಎಂದು ಮೊದಲ ಹೆಸರು, ಭಾರಿ ಹೆಂಗಸು, ಹೆಸರಿನ ಹಾಗೆ 

  - ಕುಂತಿಭೋಜ ದತ್ತು, ಕುಂತಿ 

 - ಪಾಂಡವರ ತಾಯಿ , ಪಾಂಡವರ ವನವಾಸ ಸಮಯ ೧೨ _ ೧ = ೧೩ ವರ್ಷ ವಿದುರನ ಮನೆಯಲ್ಲಿ 

 - ನಿತ್ಯ ಗಂಗಾ ತಟದಲ್ಲಿ ಕಾಲ ಕಳೆಯುವಿಕೆ 

 - ಗಂಗೆ ಕುಂತಿಗೆ ಪ್ರತೀಕವಾಗಿ, ರೂಪಕವಾಗಿ ಬಳಕೆ, ಗಂಗೆಯಂತೆ ಕಷ್ಟ ಈಗ ಶಾಂತ 

 - ಏಕಾಂತದಲ್ಲಿ ಸ್ವಾಗತ , ಹಳೆಯ ನೆನಪುಗಳ ಬುತ್ತಿ, ಪರ್ವ ಸ್ವಾಗತಗಳ ಸರಣಿ 

 - ಕೃಷ್ಣ ಆಗದ ಸಂಧಾನಕ್ಕೆ ಏಕೆ ಬಂದ ? ಯುದ್ಧವಾಗಲಿ ಕುಂತಿ (ಕುಂತಿ ಮತ್ತು ದ್ರೌಪಾಡಿ ಮಾತ್ರ) 

 - ವಿದುರನ ಆಗಮನ ..... ಪಾಂಡವರಿಗೆ ಹಕ್ಕಿಲ್ಲ , ನಿಯೋಗ, ಸೂಜಿ ಮನೆಯಷ್ಟು ಕೊಡಲಾರೆ 

 - ಕೃಷ್ಣ ಕುಂತಿ, ಕರ್ಣ, ವಿದುರರನ್ನು ಭೇಟಿ ಮಾಡಿದ್ದೂ ದು ಗೆ ಹೇಗೋ ಗೊತ್ತು 

   ಬೇಧ ತಂತ್ರದಿಂದ ನಮ್ಮನ್ನು ಒಡೆಯಲು ಬಂದಿದ್ದಾನೆ 

-ಕೃಷ್ಣನ ಬಂಧನವಾಗಲಿ, ಮುಂಜಾಗರೂಕತೆ, ಅಂಗರಕ್ಷಕರ ಚಾಕಚಕ್ಯತೆಯಿಂದ ಪಾರು 

  ಪವಾಡಗಳಿಲ್ಲ, ವಿಶ್ವರೂಪವಿಲ್ಲ 



- ಕುಂತಿಗೆ ತನ್ನ ಸ್ವಯಂವರದ ನೆನಪು 

  ಭಾರಿ ಗಂಡಾದ ಪಾಂಡುವಿನ ಆಯ್ಕೆ, ಭಾರಿ ಆಸೆ, ಗಾಡಿಗಟ್ಟಲೆ ವರದಕ್ಷಿಣೆ 

  ಮೊದಲ ದಿನವೇ ನಿರಾಸೆ 

   ಕೈಲಾಗದವನು ಮೈ ಪರಚಿಕೊಳ್ಳುವಂತೆ, ತನಗೆ ಪ್ರತಿರಾತ್ರಿ ಹೊಡೆತ 

   ಕುಂತಿ ಬಂಜೆ - ಭೀಷ್ಮ, ಮಾದ್ರಿ ಎರಡನೇ ವಧು 

   ಅವಳಿಗೂ ನಿರಾಸೆ, ಬಿಲ್ಲಿನಲ್ಲೇ ಬಲವಿಲ್ಲದಿದ್ದರೆ ಹೆದೆ ಏನು ಮಾಡಿತು? 


-ಪಾಂಡುವಿನ ದಿಗ್ವಿಜಯ 

 ತಮ್ಮನಿಗೆ ಅಧಿಕಾರ, ಹಿಮಾಲಯ ತಪ್ಪಲಿಗೆ ಪತ್ನಿಯರೊಂದಿಗೆ ಪಾಂಡು, ಚಿಕಿತ್ಸೆಯ ಆಸೆ 

ಕುಂತಿ - ವಿವಾಹಪೂರ್ವದ ಕರ್ಣ - ಪಾಂಡು ಒಪ್ಪಲಿಲ್ಲ 

ಧೃ ಗೆ ಗಾಂಧಾರಿ ಕೊಟ್ಟು ಮಾಡುವೆ, ಪಾಂಡು ಆತಂಕ 

ಕುಂತಿಗೆ ನಿಯೋಗ - ದೇವಲೋಕದವರ ಆಹ್ವಾನ 

ಧರ್ಮಾಧಿಕಾರಿಯಿಂದ ಧರ್ಮ, ದುರ್ಬಲ 

ಮರುತನಿಂದ ಭೀಮ, ಕುಂತಿಗೆ ಮನಸೋತ ಮಾರುತ, ದೇವಲೋಕದ ಹೆಂಗಸರಿಗೆ ನಿನ್ನ ದಾಸಿಯರಾಗುವ ಯೋಗ್ಯತೆಯೂ ಇಲ್ಲ, ಬಾ ನನ್ನೊಂದಿಗೆ ಆಮಿಷ, ನಿರಾಕರಿಸಿದ ಕುಂತಿ 

ನಿಯೋಗಧರ್ಮ ಪಾಲನೆ, ನಾನು ಹೇಗೆ ಹಾದರಗಿತ್ತಿ? 

ಭೀಮ ಭಾರಿ ಮಗು, ಕುಂತಿಯ ಮಡಿಲೇ ಚಿಕ್ಕದು 


ಸ್ವಯಂ ಇಂದ್ರನೇ ಆಸೆಪಟ್ಟು ಬಂದು ನಿಯೋಗ, ಅರ್ಜುನ ಜನನ 

ಕುಂತಿಗೆ ಇಂದ್ರನಲ್ಲಿ ಆಕರ್ಷಣೆ, ಇಂದ್ರ ಚೆಲುವ, ಚತುರ 


ಗಾಂಧಾರಿಗೆ ಕೂಡ ಮಕ್ಕಳು,  ಆಧಾರ್ ಧರ್ಮನೇ ಹಿರಿಯ (ಎರಡು ತಿಂಗಳಿಗೆ) 


ಮಾದ್ರಿ ಬೇಡಿಕೆ, ಕುಂತಿಯ ಶಿಫಾರಿಸು, ಪಾಂಡು ಒಪ್ಪಿಗೆ 

ದೇವಲೋಕದ ಇಬ್ಬರು ವೈದ್ಯರೊಡನೆ ನಿಯೋಗ, ನಕುಲ ಸಹದೇವರ ಜನನ 


ಪಾಂಡುವಿಗೆ ಪುಂಶಕ್ತಿ ಸ್ವಲ್ಪ ಸ್ವಲ್ಪ 

ಕುಂತಿಯ ಕಣ್ಣ್ ತಪ್ಪಿಸಿ, ಮಾದ್ರಿಯನ್ನು ಕರೆದೊಯ್ಯುತ್ತಿದ್ದ ಪಾಂಡು 

ಒಂದು ದಿನ ಅಚಾತುರ್ಯ, ಪಾಂಡುವಿನ ಸಾವು, ಮಾದ್ರಿ ಸಹಗಮನ 


ನಾಳೆ ಕರ್ಣನ ಭೇಟಿ, ಹೋಗಬೇಕು 


ವಿದುರನ ಆಗಮನ ಮತ್ತೆ - ಕೃಷ್ಣನಿಗೆ ಏನು ಹೇಳಲಿ?  ಹಸ್ತಿನಾವತಿ ಬಿಟ್ಟು ಕದಲುವುದಿಲ್ಲ, 

ಪಾಂಡವರನ್ನು ಬೇಟಿಯಾಗುವುದಿಲ್ಲ, ಯುದ್ಧವಾಗಲಿ, ವಿಜಯಿಗಳಾದ ಮೇಲೆ ಭೇಟಿ - ದಿಟ್ಟ ಉತ್ತರ 

----------------------------------------------------------------------------------------------------------------------


೫) ಭೀಮ - ಪಾಂಡವರಲ್ಲಿ ಶಕ್ತಿವಂತ, ಭೈರಪ್ಪನವರ ಪಾಂಡವ ಪ್ರಮುಖ 


ಯುದ್ಧ ಸನ್ನಿಹಿತ - ಪಾಂಡವರ ಬೀದರ ವಿರಾಟನ ಉಪಪ್ಲಾವ್ಯದಲ್ಲಿ 

ಕೃಷ್ಣ - ಭೀಮರ ಸಂವಾದ, ಬೇಸಿಗೆಯ ಸುಡು ಬಿಸಿಲು - ಭಾರಿ ಕಿಟಕಿಗಳಿಗೆ ಲಾವಂಚದ ಚಾಪೆಗಳು 

ಚಾಪೆಗಳಿಗೆ ಕೊಡಗಳಲ್ಲಿ ನೀರು ಸಿಂಪಡಿಸು - ಭೈರಪ್ಪನವರ ಅಂದಿನ ಕಾಲದ ಐರ್ಕಂಡಿಷನ್ ವಿವರಣೆ 


ಕೃಷ್ಣ - ಭೀಮ ನಿನಗೆ ಹಿಡಂಬ,ಬಕಾಸುರ, ಕಿಮ್ಮೀರ (ತಮ್ಮ) ಅವರುಗಳ ಕಡೆಯವರ ವೈರ 

ಅವರೆಲ್ಲ ದು ಕಡೆಗೆ, ರಾಕ್ಷಸರ ರಾತ್ರಿ ಯುದ್ಧ ತಂತ್ರ -ಅದನ್ನು ಎದುರಿಸಲು ನಿನಗೆ ನಿನ್ನ ಮಾಘ ಘ ನ ಸಹಾಯ ಬೇಕು, ಅವನದು ರಾಕ್ಷಸ ರಕ್ತ - ಹೋಗಿ ಕರಿ - ಸಂಕೋಚಪಡಬೇಡ, ಹಿಡಿಮ್ಬ, ಘ ಮನಸ್ಸು ನನಗೆ ಗೊತ್ತು 

ಭೀಮನ ನೆನಪು - ಕೃಷ್ಣನಿಗೆ ಎಲ್ಲ ಗೊತ್ತು, ಎಲ್ಲರ ಮನಸ್ಸು ಗೊತ್ತು. 

ಖಾಂಡವ ಪ್ರಸ್ತಾವದ ಕಾಡನ್ನು ಕಡಿದು, ಇಂದ್ರಪ್ರಸ್ಥವನ್ನು ಕಟ್ಟುವಾಗ ಅವನ ಸಹಾಯ, ಮಾರ್ಗದರ್ಶನ, ಕ್ರಿಯಾಶೀಲತೆ, ಹೊಸತನ್ನು ಸಾಧಿಸುವ ತವಕ, ಉತ್ಸಾಹ ಕೃಷ್ಣನದ್ದು -

ಬೇರೆ ಪಾತ್ರಗಳ ಅನಿಸಿಕೆಗಳ ಮೂಲಕವೇ ಕೃಷ್ಣನ ಪಾತ್ರವನ್ನು ಕಟ್ಟಿಕೊಡುವ ಭೈ. 


ದ್ರೌ - ಭೀ ಸಂವಾದ, ದ್ರೌಪದಿ ಸ್ವಲ್ಪ ಕಪ್ಪಾದರು ಸುಂದರಿಯೇ , ವಯಸ್ಸು ೫೦. 

ಭೀ - ಐವರಲ್ಲಿ ನನಗೆ ನಿನ್ನಮೇಲೆ ಭರವಸೆ - ರಕ್ಷಣೆ, ಗೌರವ, ಕಾರ್ಯಸಾಧನೆಯಲ್ಲಿ ಎತ್ತಿದ ಕೈ 

ಬಿಚ್ಚು ಮನಸಿನ ಮಾತು ಭೀಮನೊಂದಿಗೆ ಮಾತ್ರ - ನನಗೆ ದು, ದುಷ್ಯ, ಧೃ ವಧೆಯಾಗಬೇಕು 

ಹಿಡಿಮ್ಬೆಯ ಕಡೆ ಹೋರಾಟ ಭೀಮನ ಬಗ್ಗೆ ದ್ರೌ ಆತಂಕ 



ಹಿಡಂಬ ನಾಡು - ಹಸ್ತಿ ದಕ್ಷಿಣಕ್ಕೆ ವಾರಣಾವತ (ಅರಗಿನ ಮನೆ) - ಅದರ ಸಮೀಪವೇ 

ರಸ್ತೆಯಲ್ಲಿ ಭೀಮನ ಸ್ವಾಗತ - ಅರಗಿನ ಮನೆ, ಹಿಡಿಎಂಬ ವನ ಪ್ರವೇಶ, hidimbeya ಪ್ರೇಮ, hidamba ನೊಂದಿಗೆ ಕಾಳಗ, ಹತ್ಯೆ, 

hidimbe ಯೊಂದಿಗೆ ಮಾಡುವೆ, ಕುಂತಿ ಸಮ್ಮತಿ 

hidimbeyondigina ಪ್ರಣಯ - ಸಮಬಲ ಜಟ್ಟಿಯೊಂದಿಗಿನ ಕುಸ್ತಿಯಂತೆ 

ದ್ರೌಪದಿಯೊಂದಿಗೆ ಹೋಲಿಕೆ - ದ್ರೌ ನಾಜೂಕು, hidimbeyadu ಬಿಚ್ಚು ಪ್ರಣಯ, ಪ್ರೇಮ 

ದ್ರೌ ಗೆ ಮಾಡಿದ್ದು - ಜಯದ್ರಥ, ಕೀಚಕ ರಿಂದ ರಕ್ಷಣೆ, ಹಿದಿಂಬಿಗೆ ಮಾಡಿದ್ದೂ ಏನೂ ಇಲ್ಲ 

ಜಯದ್ರಥ, ಕೀಚಕರು ಹಿಡಿಎಂಬೆಯನ್ನು ಕೆಣಕಿದ್ದರೆ - ತಲೆ ಬಂಡೆಗೆ ಚಚ್ಚಿ, ವೃಷಣವನ್ನೇ ಹಿಸುಕಿ 


ಘ ಜನನ, ಭಾರಿ ಮಗು 

ಕುಂತಿ ಎಚ್ಚರ, ಮೈಮರೆತ ಭೀಮ, ರಾಜ್ಯಗಳಿಸುವುದು ಮುಖ್ಯ, hidimbe ಯನ್ನು ಮಗುವನ್ನು ತೋರಸಿ 

ಏಕಚಕ್ರನಗರಿಗೆ ಪಯಣ 

ಬಕಾಸುರ ವಧೆ ನೆನಪು ಭೀಮನಿಗೆ 


hidimba ವನ ಬಂದಿತು 

ಮುಂಚೆಯೇ ಸುದ್ದಿ ತಿಳಿದ hidimbe ಯಿಂದ ಘ ನನ್ನ ಸ್ವಾಗತಕ್ಕೆ ಕಳುಹಿಸುವುದು 

ಭೀಮನನ್ನು ಹೆಗಲ ಮೇಲೆ ಹೊತ್ತು ತಂಡ ಘ 

hidimba - ಸಾಲಕಟಂಕಟಿ ಅವಳ ಇನ್ನೊಂದು ಹೆಸರು 

ಭೀ ಗೆ ರಾಕ್ಷಸ ಮುದ್ದು, ನಾಲ್ಕಾರು ಗುದ್ದುಗಳು ಬೇರೆ 

ನನ್ನ ಘ ನ ನೆನಪು ಬರಲಿಲ್ಲವೇ? ೧೨+೧ = ೧೩ ವರ್ಷಗಳಲ್ಲಿ ಏಕೆ ಬರಲಿಲ್ಲ? 

ಎಣ್ಣೆ ಸ್ನಾನ, ಉಪಚಾರ 

ಕಾಮಕಟಂಕಟಿ ಆಗಮನ, ಕಂಕುಳಲ್ಲಿ ಬರ್ಬರಕ, ಮೊಮ್ಮಗನನ್ನು ನೋಡಿ ಸಂತಸ 


hidimbe - ಘ ನನ್ನು ಸಹಾಯಕ್ಕೆ ಬರುವಂತೆ ಕೇಳಿದ್ದು, ಭೈ ಬರೆದಿಲ್ಲ , ನಮ್ಮ ಊಹೆಗೆ ಬಿಟ್ಟರೆ? 

ಭೀಮನ ವೃತ್ತಾಂತ ಮುಗಿಯಿತೆಂದಲ್ಲ, ಮುಂದೆ ಹೇಳುವೆ 

--------------------------------------------------------------------------------------------------------------------


೬) ದ್ರೌಪದಿ  

ಸಬಲ ಸ್ತ್ರೀ,

ಉಪಪ್ಲಾವ್ಯದಲ್ಲಿ ಪಾಂಡವರು 

ಉಪಪಾಂಡವರು ದ್ರೌ ಜೊತೆ 

ಹಿರಿಯ ಪ್ರತಿವಿಂಧ್ಯನಿಗೆ ೨೪, ಮದುವೆಯಿಲ್ಲ 

ಅಲ್ಲೇ ಇದ್ದ ಅಭಿಮನ್ಯುವಿಗಿನ್ನೂ ೧೬, ಮದುವೆಯಾಗಿದೆ, ದ್ರೌ ಬೇಸರ, ಬಿಲ್ಲುವಿದ್ಯದಲ್ಲೂ ಅಭಿ ಏ ಮುಂದು 

ಭೀಮನ ಮೈಕಟ್ಟು ಮಕ್ಕಳಿಗಿಲ್ಲ , ದ್ರೌ ಬೇಸರ 


೨೬ ವರ್ಷಗಳ ಹಿಂದಿನ ನೆನಪು, ಸ್ವಗತ 

ಮತ್ಸ್ಯಯಂತ್ರ ಬೇಧನ, ಅರ್ಜುನ ಗೆದಿದ್ದು, 

ದ್ರೌ ಬಗ್ಗೆ ಕುಂತಿಯ ಮೆಚ್ಚುಗೆ 

ಅರ್ಜುನ ನಾನು ಗೆದ್ದೇ, ಭೀಮ -ನಾನಿಲ್ಲದಿದ್ದರೆ ದ್ರೌ ದು ಪಾಡಾಗುತಿದ್ದಳು - ಧರ್ಮ ನಾನು ಹಿರಿಯ -ನಕುಲ ಸಹದೇವರು ಆಸಕ್ತರು - ತಕರಾರು 

ಕುಂತಿಯ ಅನುಭವ, ಯೋಜನೆ 

ಕುಂತಿಯಿಂದ ದ್ರೌಗೆ ಬ್ರೈನ್ವಾಶ್ - ಮೋಡ - ಭೂಮಿ ಉಪಮೆ 

ಐವರೊಂದಿಗೆ ದಾಂಪತ್ಯ - ನಾಲ್ಕು ದಿನಗಳ ಹಸಿವು ಒಂದೇ ದಿನ ತೀರಿಸುತ್ತಿದ್ದರು - ಮೈಬಾಕತನ 

ಭೈ ಪಡೋತ್ಪತ್ತಿ 

ದ್ರೌ ಸಿಟ್ಟು - ಕುಂತಿಗೇನು ಗೊತ್ತು? ಋತುವಿಲ್ಲ, ಹೆರಿಗೆ ಬಾಣಂತನಗಳಿಲ್ಲ, ಮೊಲೆಯುಣಿಸುವುದಿಲ್ಲ, ಪ್ರತಿನಿತ್ಯ ಕಾಮಕ್ಕೆ ತಯಾರಾಗಿ ನಿಂತಿರುವ  ಗಂಡಸಿನ ಸಮ ಹೆಂಗಸಲ್ಲ 


ಮೊದಮೊದಲು ದ್ರೌ ಗೆ ಅರ್ಜುನನ ಮೇಲೆ ಆಸೆ, ಅವನು ಚೆಲುವ, ಚತುರ 

ಕ್ರಮೇಣ ಭೀಮನ ಮೇಲೆ ಆಸೆ 

ಪ್ರೌಢಳಾಗುವ ತನಕ ಯಾರು ಸರಿ ಎಂದು ಹೆಣ್ಣು ತೀರ್ಮಾನಿಸಲಾರಳು.  ಅಂತಃಕರಣ ಅರ್ಥವಾಗುವುದು ೩೦ರ ನಂತರವೇ. ಸಮಸ್ತರಿಗೂ ಒಂದು ಸಂದೇಶ. 

ಅರ್ಜುನನ ಯಾತ್ರೆ - ಉಲೂಪಿ, chitrangade, ಸುಭದ್ರೆಯೊಂದಿಗೆ ವಿವಾಹ.  ಸುಭದ್ರೆ ಜಾಣೆ. ನನ್ನಂತರ ಮದುವೆ ಬೇಡ, ಷರತ್ತು ವಿಧಿಸಿ ಮದುವೆ.  ಮಗನನ್ನೂ ಪಡೆದಿದ್ದಾಳೆ. ನಾನು ಸೋತೆ, ಕುಂತಿ ನನ್ನ ಪರ ನಿಲ್ಲಲಿಲ್ಲ. 


ಯುದ್ಧಭೂಮಿಯಲ್ಲಿ ದು ಡಂಗುರ. ಧರ್ಮ ನನ್ನ ಕಡೆಗೆ, ನಿಯೋಗ, ಬಹುಪತಿತ್ವ  ಅನಾರ್ಯ. ನನಗೆ ಬೆಂಬಲ ನೀಡಿ. 

ಪ್ರತಿವಿಂಧ್ಯ _ ಅಮ್ಮ - ನಿಜವಾದ ಆರ್ಯಧರ್ಮ ಯಾವುದು?

ಬೇಸತ್ತ ದ್ರೌ - ಜೂಜು, ಕುಡಿತ, ಬೇಟೆ, ಹೆಂಗಸರ ಗೀಳು. ಯುದ್ಧ, ಜೂಜು ನಿರಾಕರಿಸುವಂತಿಲ್ಲ, ಹೀನ ನಿಯಮ. (ಅಂದಿನ ಆರ್ಯವೃತ್ತದ ರಾಜರುಗಳ ಜನಜೀವನದ ಚಿತ್ರಣ). 


ಶ್ರುತಸೋಮ _ ಅಮ್ಮ ನೀನು ನೊಂದೆ ಜೀವಿಸಿದೆ, ನಿನಗೆ ನಿಜವಾದ ಧೈರ್ಯ ಯಾವಾಗ ಬಂತು?

ಸಮಸ್ತ ಹೆಣ್ಣು ಕುಲದ ಪ್ರಶ್ನೆ. 

ಗಂಡಸರ ಸಭ್ಯತೆಯ ಮೇಲೆ ಭರವಸೆ ಯಾವಾಗ ಕುಸಿಯುತೋ, ಆಗ ಬಂತು. (ವಸ್ತ್ರಾಪಹರಣದ ಪ್ರಸಂಗ) 

ಧರ್ಮ ತನ್ನನ್ನೇ ತಾನು ಸೋತಿದ್ದ. ನನ್ನನ್ನು ಪಣಕ್ಕಿಡುವ ಅಧಿಕಾರವಿತ್ತೆ? 

ಎಲ್ಲರ ಮೌನ. ಭೀಷ್ಮರ ಸಬೂಬು - ತನ್ನನ್ನೇ ತಾನು ಸೋತ ವ್ಯಕ್ತಿಗೆ ಯಾವ ಹಕ್ಕು ಇಲ್ಲ.  ಆದರೂ ಹೆಂಡತಿ ಯಾವಾಗಲು ಗಂಡನ ಅಧೀನ. ಇದು ಧರ್ಮಸೂಕ್ಷ್ಮದ ಪ್ರಶ್ನೆ. 

ದುಶ್ಯಾಸನನಿಂದ ಸೀರೆ ಎಳೆತ. ನನ್ನ ಕಡೆಗೆ ಕೃಷ್ಣ. ಹಸ್ತಿಯನ್ನು ನೆಲಸಮ ಮಾಡಿ, ಮಾವಿನ ತೋಪನ್ನು ಮಾಡಿಯಾನು. 

ಕೃಷ್ಣನ ಭಯಕ್ಕೆ ಹೆದರಿದ ದು, ವಸ್ತ್ರಾಪಹರಣ ನಿಲ್ಲಿಸುವಂತೆ ದುಶ್ಯ್ ಗೆ ಆದೇಶ. 

ಕೃ ಪಾತ್ರದ ಹಿರಿಮೆಯ ರಕ್ಷಣೆ. 

ಭೀಮನ ಗುಡುಗು - ದು, ದುಷ್ಯರ ಹತ್ಯೆ. ದುಶ್ಯನ ಎಡೆಬಗೆದು ರಕ್ತ ಕೂಡಿವೆ. 

ದ್ರೌ ನಿಂದ ಕೇಶ ಶಪಥವಿಲ್ಲ. ದುಶ್ಯ್ ನ ಎದೆ ರಕ್ತದಿಂದ ತೊಳೆವ 



ದ್ರೌ ವಸ್ತ್ರಾಪಹರಣಕ್ಕೆ ತೆರೆ 

ಭೀಮನ ಗುಡುಗು 

ಧೃ, ಗಾಂಧಾರಿ ಎಚ್ಚರ - ದ್ರೌ ನೀನು ನಮ್ಮ ಮನೆಯ ಸೊಸೆ, ಏನು ವರಬೇಕು? ಕೇಳು?

ದ್ರೌ - ನನ್ನ ಮಕ್ಕಳಿಗೆ ದಾಸಪುತ್ರರೆಂಬ ಹಣೆಪಟ್ಟಿ ಬೇಡ. - ಪಾಂಡವರು ವಿಮುಕ್ತ 

ಧೃ - ದ್ರೌ ರಾಜ್ಯವನ್ನು ಕೇಳು , ಬೇಡವೆಂದ ಸ್ವಾಭಿಮಾನಿ ದ್ರೌ. 

ತಾನಾಗಿಯೇ ರಾಜ್ಯವನ್ನು ಹಿಂತಿರುಗಿಸಿದ ಧೃ 

ದು, ಕರ್ಣರ ವ್ಯಂಗ್ಯ - ಒಂದು ಹೆಣ್ಣಿನಿಂದ ಬದುಕುಳಿದರು (ಹೋರಾಟ ಪಾಂಡವರು, ದ್ರೌ ಗೆ ಕೇಳುವಂತೆ)

ಮತ್ತೆ ಜೂಜಿನ ಆಹ್ವಾನ - ತಡೆಯದಾದ ದ್ರೌ 

ಸೋಲು, ೧೨ + ೧ ಶಿಕ್ಷೆ 

ವನವಾಸದ ಆರಂಭದ ದಿನಗಳಲ್ಲಿ ದ್ರೌ ಸ್ವಗತ - ನಿಜವಾದ ಆರ್ಯಧರ್ಮವನ್ನು ತಿಳಿದವನು ಕೃಷ್ಣ ಮಾತ್ರ 

ಕೃ ಆಗಮನ - ಧರ್ಮನಿಗೆ ತರಾಟೆ (ಕೃಷ್ಣನ ಘನತೆಯನ್ನು ಎತ್ತಿಹಿಡಿದ್ದದ್ದು.) 


ಜಯದ್ರಥ - ದುಶ್ಶಲೆ ಗಂಡ, ಪ್ರಾಯದಲ್ಲಿ ದ್ರೌಗಿಂತ ಚಿಕ್ಕವ, ಒಬ್ಬಳೇ ಆಶ್ರಮದಲ್ಲಿ, ಅಪಹರಣ 

ಭೀ ಅರ್ಜುನರಿಂದ ದಂಡನೆ, ಬಂಧನ.  ಅಯ್ಯಯೋ ಇವನು ನಮ್ಮ ಭಾವಕಣರೋ, ಬಿಡುಗಡೆ ಮಾಡಿ 

ಧರ್ಮ. ದ್ರೌ ಬೈಗುಳ, ಬರಿ ಧರ್ಮಗೊಡ್ಡು 


ಕೀಚಕ ಪ್ರಸಂಗ - ಧರ್ಮ - ಅನುಸರಿಸಿಕೊಂಡು ಹೋಗು, ಅಜ್ಞಾತ ಮುಗಿಯಲಿ, ಕೆಚ್ಚಿಲ್ಲದ ಧರ್ಮ . 

ಭೀಮನಿಂದ ರಕ್ಷಣೆ 


ಸಧ್ಯಕ್ಕೆ ದ್ರೌ - ಮುಗಿದಿದೆ. 

----------------------------------------------------------------------------------------------------------------------

ಅರ್ಜುನ 

ಉಪಪ್ಲಾವ್ಯದಲ್ಲಿ ಕೃಷ್ಣ ಪಾಂಡವರೊಡನೆ 

ದು ದ್ವಾರಕೆಗೆ ಹೋದ ಸುದ್ದಿ, ಆತಂಕಗೊಂಡ ಕೃಷ್ಣ ದ್ವಾರಕೆಕಡೆಗೆ 

ಮಾರನೇದಿನ ಎಚ್ಚರಗೊಂಡ ಧರ್ಮ, ಅರ್ಜುನನನ್ನು ಹೋಗುವಂತೆ ಮಾಡಿದ್ದೂ.  (ಹೀಗೇಕೆ?)

ಕೃ ಜೊತೆಯೇ ಹೋಗಬಹುದಿತ್ತಲ್ಲ 

ದ್ವಾರಕೆಗೆ ಹೊರಟವರು ಅರ್ಜುನ, ಸುಭದ್ರೆ, ಸಾರಥಿ ತುಷ್ಟಾ  - ಸಣ್ಣ ಪಾತ್ರ ಕಥೆ ಬೆಳವಣಿಗೆಗೆ 


ಅರ್ಜುನನ ಸ್ವಾಗತ - ಜೂಜುಕೋರನಾದರೂ ಅಣ್ಣ ವಿವೇಕವಂತ. 

ಹಿಮಾಲಯಕ್ಕೆ ಹೋಗು, ಕಿರಾತರ ಯುದ್ಧ ತಂತ್ರ, ಶಾಸ್ತ್ರಗಳನ್ನು ಪಡೆದುಕೋ . 

ಕೀರಾತಾರ್ಜುನೀಯ, ಪಾಶುಪತಾಸ್ತ್ರ ಪ್ರದಾನ ಇಲ್ಲ 


ಹಿಮಾಲಯದ ಕಿರಾತರ ಭೇಟಿಯನಂತರ ದೇವಲೋಕಕ್ಕೆ ಪಯಣ . ನಿಯೋಗ ಪಿತೃಗಳ ಭೇಟಿ. 

ತಂತ್ರ, ಶಸ್ತ್ರ ಅರಸಿಕೂಡ 

ಇಂದ್ರನಂತರದ ಇಂದ್ರ - ಅರ್ಜುನಗೆ ಭವ್ಯ ಸ್ವಾಗತ, ಸನ್ಮಾನ 

ನಿವಾತಕವಚರ ಯುದ್ಧ, ಹತ್ಯೆ ಅರ್ಜುನನಿಂದ 

ಭವ್ಯ ಸಿಂಹಾಸನದ ಮೇಲೆ ಕುಳ್ಳಿರಿಸಿ "ವಿಜಯ"ನೆಂಬ ಬಿರುಧ ಪ್ರದಾನ 

ಊರ್ವಶಿಯೊಡನೆ ಸಂಘದ ಬಳುವಳಿ 

ತಂದೆಯ ಭೋಗದ ವಸ್ತುವಾದ ಊರ್ವಶಿ ಮಾತೃ ಸಮಾನಳು - ಅರ್ಜುನ ನಿರಾಕರಣೆ 

ಊರ್ವಶಿಯಿಂದ ನಂಪುಂಸಕನೆಂಬ ಬೈಗುಳ. (ಶಾಪವಿಲ್ಲ). 


ಸ್ವಾಗತ - ಕೀಚಕ ವಧೆ ಪ್ರಸಂಗ - ಏಕೆ ಬೇಕಿತ್ತು? ಅಜ್ಞಾತದಲ್ಲಿ ಗೊತ್ತಾಗಿದ್ದರೆ..... 

ಭೀಮನಿಗೆ ವಿವೇಕವಿಲ್ಲ.  ದ್ರೌ ಭೀಮನಲ್ಲಿ ಏಕೆ ಹೋದಳು? ಇಬ್ಬರೂ ಸೇರಿ ಧೃ, ಧರ್ಮರನನ್ನೇ ಟೀಕೆ ಮಾಡುತ್ತಾರೆ. "ಧರ್ಮಲಂಡ"ರು.  ಭೈ ವಿಶೇಷ ಪದ ಬಳಕೆ 


ದ್ವಾರಕೆ ಹತ್ತಿರವಾಗುತ್ತಿದೆ - ಸುಭದ್ರೆ - ಬಲರಾಮ ಅಷ್ಟಕಷ್ಟೆ - ನಿಮ್ಮಗಳ ವನವಾಸದ ೧೩ ವರ್ಷ ನಾನು ದ್ವಾರಕೆಯಲ್ಲಿದ್ದಾಗ ಬಲರಾಮ ನನ್ನ ಬಗ್ಗೆ ಯಾವ ಕಾಳಜಿ ತೋರಿಸಲಿಲ್ಲ. ಬಲರಾಮ ದು ಕಡೆಗೆ 


ಅರ್ಜುನ - ಕೃಷ್ಣರ ಭೇಟಿ, ಬಲರಾಮನ ಭೇಟಿಯ ಬಗ್ಗೆ ಭೈ ಉಲ್ಲೇಖ ಮಾಡಿಲ್ಲ.  ನ್ಯೂನ್ಯತೆ?

---------------------------------------------------------------------------------------------------------------------------

ಯಾದವ ಕುಲದ ವೃತ್ತಾಂತ 

ಯುಯುಧಾನಾ (ಸಾತ್ಯಕಿ) ಮುಖಾಂತರ - ಅವನು ಕೃ ಸ್ನೇಹಿತ, ವಾವೆಯಲ್ಲಿ ಚಿಕ್ಕಪ್ಪ ಕೂಡ, ಆದರೂ ವಯಸ್ಸು ೫೦ ಮಾತ್ರ, ಕೃಷ್ಣನಷ್ಟೇ. 


ಕಂಸನಿಂದ ಉಗ್ರಸೇನನ ಬಂಧನ, ಕಂಸನಂ ಧರ್ಬಾರು 

ಕಂಸ ಜರಾಸಂಧನ ಅಳಿಯ ಕೂಡ. ಜರಾಸಂಧ ಮಗಧ ಚಕ್ರವರ್ತಿ, ತನ್ನ ಎರಡು ಹೆಣ್ಣುಮಕ್ಕಳನ್ನು ಕಂಸನಿಗೆ ಕೊಟ್ಟು ವಿವಾಹ. 

ಕಂಸ - ಜರಾಸಂಧ ಜೋಡಿ, ಆಡಳಿತಕ್ಕೆ ಜರಾಸಂಧನ ಸಲಹೆಯ ಮೇಳ ನಿರ್ಭರ. 

ಕಂಸನ ರಾಜ್ಯದಲ್ಲಿ ಜ್ಯೋತಿಷಿಗಳ ಕಾಟ, ತಂಗಿ ದೇವಕಿಯ ಮಗನಿಂದ ನಿನ್ನ ಸಾವು (ಅಶಶರೀರವಾಣಿ ಇಲ್ಲ) 

ದೇವಕಿ - ವಾಸುದೇವರ ಬಂಧನ. ಮಕ್ಕಳುಗಳ ಹತ್ಯೆ. 

ಕೃಷ್ಣ ಹೇಗೋ ಪಾರು, ನಂದಗೋಕುಲಕ್ಕೆ, ಯಶೋದೆ ತಾಯೀ 

ರಾಧಾ ಕೃಷ್ಣರ ಪ್ರಣಯದ ಪ್ರಸ್ತಾಪವಿಲ್ಲ (ಮಾಡ ಬಹುದಿತ್ತು) 

೧೮ ವರ್ಷದ ಕೃಷ್ಣ ಮಥುರೆಗೆ 

ಕಂಸನಿಗೆ ತಿಳಿದಿತ್ತು, ಹತ್ಯೆ ಪ್ರಯತ್ನ್  

ಆನೆಯಿಂದ, ಚಾಣೂರ, ಮುಸ್ತಿಕರಿಂದ - ಕೃ ಯಿಂದ ಹತ್ಯೆ 

ಕಂಸನ ಹತ್ಯೆ, ಉಗ್ರಸೇನ ಮತ್ತೆ ರಾಜ. 


ಕಂಸ ಹತ್ತ್ಯೇ ಸುದ್ದಿ ಜರಾಸಂಧನಿಗೆ - ಮಥುರೆ ಮೇಲೆ ಎರಡು ಬಾರಿ ಆಕ್ರಮಣ, ಕೃಷ್ಣನ ಚಾಕಚಕ್ಯ್ತೆಯಿಂದ ಮಥುರೆ ಪಾರು.  ಮೂರನೇ ಬಾರಿ ಬಾರಿ ಸೈನ್ಯದೊಂದಿಗೆ ಜರಾಸಂಧ - ಕೃಷ್ಣನ ತಂತ್ರ, ಉಪದೇಶ - ಮಥುರೆಯ ಜನಗಳೊಂದಿಗೆ ದೂರದ ದ್ವಾರಕೆಗೆ ವಲಸೆ. 


ಜರಾಸಂಧನ ಹತ್ಯೆಗೆ ಭೀಮನ ಸಹಾಯ. ಮರುಉಪಕಾರಕ್ಕಾಗಿ ಖಂಡವಪ್ರಸ್ಥವನ್ನು ಇಂದ್ರಪ್ರಸ್ತವನ್ನಾಗಿಸಿ ಕೊಟ್ಟ ಕೃಷ್ಣ. 


ಜರಾಸಂಧ ಹತ್ಯೆ ಮಾಡಿರುವ ಭೀಮ.  ಹಾಗಾಗಿ ಯುಯುಧಾನನ ಪ್ರಕಾರ ಯಾದವ್ ಸೈನ್ಯದ ಬೆಂಬಲ ಪಾಂಡವರ ಕಡೆಗೆ. 


ಬಲರಾಮನ ವಿಚಾರ ಬೇರೆ. ದು ಗೆ ಅವನ ಬೆಂಬಲ . ಕೃಷ್ಣನ ಇಚ್ಛೆಗೆ ವಿರುದ್ಧ. ಬಲರಾಮ ಕೃಷ್ಣರ ಸಂಬಂಧ ಎಣ್ಣೆ-ಸೀಗೆಕಾಯಿ. ಸುಭದ್ರೆಯ ವಿಚಾರದಲ್ಲೂ ಬಲರಾಮ ಬೇರೆ. ಎಲ್ಲೆಲೋ ತಿರುಗಾಟ ಕೃಷ್ಣನದ್ದು. ಹೆಂಡತಿಯರ ಸುತ್ತ ಕೃಷ್ಣ. ಅವನ ಮಾತು ಏಕೆ ಕೇಳಬೇಕು?


ನರಕಾಸುರ ವಧೆ (ದ್ವಾರಕೆ ಹತ್ತಿರದ ರಕ್ಕಸ) ಕೃಷ್ಣನಿಂದ.  ಅವನ ೨೪ ಹೆಂಡಿರು ಮತ್ತು ಮಕ್ಕಳು ಅನಾಥೆಯಾರು.  ನಾವುಗಳು ಮದುವೆಯಾಗಬೇಕು, ಕೃಷ್ಣ.  ಒಪ್ಪದ ಯಾದವರು.  ಅವರನ್ನೆಲ್ಲ ಮದುವೆಯಾದ ಕೃಷ್ಣ. ೮ + ೨೪ = ೩೨ ಹೆಂಡಿರು.  ೧೬೦೦೦ ವಲ್ಲ. 

೩೨ ಹೆಂಡಿರನ್ನು ಹೇಗೆ ನಿಭಾಯಿಸಿದ? 

ನರಕನ ಧನ ಆಸ್ತಿಗಳಿಂದ ೨೪ ಹೆಂಡತಿಯರುಗಳಿಗೆ ಮನೆ ಮಠ ಮಾಡಿಕೊಟ್ಟ ಕೃಷ್ಣ.  ಕೃಷ್ಣನಿಲ್ಲದಾಗ ಅವುಗಳನ್ನು ಮಟ್ಟಹಾಕಿಕೊಂಡ ಬಲರಾಮ.  ೨೪ ಹೆಂಡಿರ ಜೀವನ ದುಸ್ತರ. 

ಒಬ್ಬ ಹೆಂಡತಿ (೨೪ರ ಪೈಕಿ), - ನಮ್ಮ ಹತ್ತಿರ ಬರಲು ಕೃಷ್ಣನಿಗೆ ಸಮಯವೆಲ್ಲಿ? ಮೂರುದಿನ ಮಾತ್ರವಿದ್ದ.  ಅಷ್ಟರಲ್ಲೇ ಅಂತಃಕರಣ ತೋರಿಸಿದ.  ಆಗಲೇ ಒಂದು ಮಗುವು ಆಯ್ತು. ಮತ್ತೆ ಬರಲೇ ಇಲ್ಲ, ಪರವಾಗಿಲ್ಲ. 

ಅದೇ ಹೆಂಡತಿಯ ಪೂರ್ವದ ಮಗ ಕೃತು.  ಹಡಗು ಕೆಲಸಗಾರ. 

ಸಣ್ಣಪುಟ್ಟ ಕೆಲಸ ಮಾಡಿ ೨೪ ಹೆಂಡತಿಯರ ಜೀವನ. 

೩೨ ಹೆಂಡಿರ ನಿಭಾವಣೆ ಕಷ್ಟ ಸಾಧ್ಯ. ನೈಜ ವಿವರಣೆ. 

-------------------------------------------------------------------------------------------------------------------------

ಕರ್ಣ 

ಕೊಡದೆ  ದು ಕೆಟ್ಟ 

ಕೊಟ್ಟು ದುರ್ಯೋಧನ ಕೆಟ್ಟ 

ಮುಟ್ಟಿ ಕೀಚಕ ಕೆಟ್ಟ 

ಮುಟ್ಟದೆ ರಾವಣ ಕೆಟ್ಟ 


ಮೂಲಭಾರತದಲ್ಲಿ ಕರ್ಣನದು ಮೇರು ಪಾತ್ರ 

ಕರ್ಣ, ಕರ್ಣನ್, ದಾನಶೂರ ಕರ್ಣ ಮುಂತಾದವು 

ಬಿ.ಅರ. ಪಂತಲು, ಕರ್ಣನ್ - ಉಳ್ಳತಿಲ್ ನಲ್ಲ ಉಳ್ಳಂ 

ಕರ್ಣರಸಾಯಣಮಲ್ತೆ ಭಾರತಮ್? ಪಂಪ 


-ನಾಯಿಯ ಪ್ರತೀಕ, ಉಪಮೆ 

ಸ್ವಾಮಿಭಕ್ತಿ, ನಿಯತ್ತು, ಅಲ್ಪತೃಪ್ತಿ 


ಕೃಷ್ಣ ಸಂಧಾನದ ವೇಳೆ - ಕೃಷ್ಣನಿಂದ ಕರ್ಣನ ಭೇಟಿ 

ಜನ್ಮರಹಸ್ಯವನ್ನು ಹೇಳಿ ಪಾಂಡವರ ಪಕ್ಷಕ್ಕೆ ಆಹ್ವಾನ, ಕರ್ಣನ ನಿರಾಕರಣೆ 


ಕರ್ಣನ ಸ್ವಗತ 

ಭಾರ್ಗವ ಶಿಷ್ಯ 

ಬ್ರಾಹ್ಮಣನಲ್ಲ ಎಂದು ಹೊರಗಟ್ಟಿದ್ದು 


ಬಿಲ್ಲು ಪ್ರದರ್ಶನ 

ಕರ್ಣನ ಆಗಮನ 

ಸೂತಪುತ್ರನೆಂದು ನಿರಾಕರಣೆ 

ದುರ್ಯೋಧನನಿಂದ ಮಾನ್ಯತೆ, ಅಂಗರಾಜ್ಯ ಅಭಿಷೇಕವಿಲ್ಲ 


ಮತ್ಸ್ಯಯೆಂತ್ರ ಬೇಧನದವೇಳೆ ದ್ರೌ ನಿಂದ ಅಪಮಾನ 


ಕುಂತಿ - ಕರ್ಣ ಭೇಟಿ 

ನೀನನ್ನ ಕೃಷ್ಣ ಕಳುಹಿಸಿದನೇ?, ನಾನೇ ಬಂದೆ 

ನೀನು ನನ್ನ ಮೊದಲನೇ ಮಗ 

ನನ್ನ ಹಿರಿತನವನ್ನು ದ್ರೌ ಒಪ್ಪುವಳೇ? 

ಪಾಂಡವರಿಗೆ ಹೇಳಿದ್ದೀಯಾ?

ನೀನು ಹೇಳುವುದಿಲ್ಲ, ಅವರೆಲ್ಲಿ ಯುದ್ಧ ಮಾಡುವುದಿಲ್ಲವೋ ಎಂದು ನಿನಗೆ ಭಯ. 

ಅವರ ಮೇಲೆ ಹಂಬಲ ನಿನಗೆ, ತಾಯ್ತನ ಜನ್ಮಕೊಟ್ಟದ್ದರಿಂದ ಮಾತ್ರ ಬರದು. 

ಹೇಲು ಉಚ್ಚೆ ಬಾಚಿ, ಮೊಲೆಯುಣ್ಣಿಸಿ, ಬೆರಳು ಹಿಡಿದು ನಡೆಸಿ ತಾಯ್ತನ ಬರುವುದು 


ಸಾಕಿಲ್ಲದಿರಬಹುದು, ಜನ್ಮ ನೀಡಿದ್ದು ಕಮ್ಮಿಯೇ? ಇದೋ ನಮಸ್ತೆ. 


ಕುಂತಿಯಿಂದ  ವರಗಳ ತೊಟ್ಟ ಬಣದ ಬೇಡಿಕೆ ಇಲ್ಲ. 

---------------------------------------------------------------------------------------------------------------------

೯) ಭೀಷ್ಮ 

ಯುದ್ಧ ಸನ್ನಿಹಿತವಾಗಿದೆ 

ಮಳೆಗಾಲ ಮುಗಿದಿದೆ, ಚಳಿಗಾಲ ಇನ್ನು ತಡ, ಅನುಕೂಲಕರ ಹವಾಮಾನ, ಹೆಚ್ಚಿನ ರಾಜರ 

ಸೈನಿಕರ ಬೆಂಬಲ ಸಾಧ್ಯ ಎಂದು ಸಿದ್ಧತೆ. 


ಶಲ್ಯನಿಗೆ ಯುದ್ಧದ ಚಪಲ 

೧/೪ ಸೈನ್ಯದೊಂದಿಗೆ ರುಕ್ಮರಥ ಮದ್ರದಲ್ಲಿ 

೩/೪ ಸೈನ್ಯದೊಂದಿಗೆ + ಎರಡು ಮಕ್ಕಳೊಡನೆ ಶಲ್ಯ ಯುದ್ಧಕ್ಕೆ 

ಶಲ್ಯ - ಮಕ್ಕಳು, ಸೈನಿಕರ ರಥ, ಶಸ್ತ್ರಾಸ್ತ್ರಗಳ ರಥ - ಆಹಾರ ಸಾಮಗ್ರಿ - ಹೆಣ್ಣುಗಳು ರಂಜನೆಗೆ -

ವೀರಾವೇಶದಿಂದ ಹೋರಾಡಿ ಒಳ್ಳೆ ಹೆಸರು ತರಲಿ 


ಶಲ್ಯನ ಸೈನ್ಯಕ್ಕೆ ದು ಭಾರಿ ಆತಿಥ್ಯ - ಏರ್ಪಾಡು 

ಶಲ್ಯನಿಗೆ ಸಂತೋಷ, ದು ಎಂದರೆ ಕಾರ್ಯಸಿದ್ಧಿ 


ಶಲ್ಯನ ಮೂಗಿಗೆ ತುಪ್ಪ - ೧೧ ಅಕ್ಷೋಹಿಣಿ ಸೈನ್ಯ ನೋಡೇ ಪಾಂಡವರು ಶರಣಾಗತ -

ಇಂದ್ರಪ್ರಸ್ಥ ಅಳಿಯಂದಿರಾದ ನಕುಲ-ಸಹದೇವರಿಗೆ, ವೈರ ಮೂವರ ಮೇಲೆ ಮಾತ್ರ 


ಪಾಂಡವರಿಗೆ ನೀಡಿದ ಬೆಂಬಲ ಹಿಂಪಾಡು ದು ಕಡೆ ವಾಲಿದ್ದು ಸರಿಯಾಯ್ತು. 


ಹಸ್ತಿ ತಲಪುತ್ತಲೇ ದು ವಿಂದಲೇ ಖುದ್ದು ಭವ್ಯ ಸ್ವಾಗತ 

ನಿಯೋಗ, ವಂಶಕ್ಕೆ ಸೇರಿಲ್ಲ, ಧಾರ್ಮ ನಮ್ಮ ಕಡೆ 


ನೀವೊಬ್ಬರೇ ಮಹಾರಾಜರು, ನೀವೇ ಮಹಾಸೇನಾನಿ ಎಂದು ಪುಸಲಾವಣೆ (ಜಾಣತನ)

ಇಲ್ಲ, ಭೀಷ್ಮರಾಗಲಿ - ಶಲ್ಯ 


ದು - ಶಲ್ಯನಿಗೆ 

ಪಾಂಡವರು ನಮ್ಮನ್ನು ಭ್ರಮೆಗೊಳಿಸಲು ಉಪಪ್ಲಾವ್ಯದಲ್ಲಿ (ವಿರಾಟ)

ಆಕ್ರಮಣ ಕಾಂಪಿಲ್ಯದಿಂದಲೇ (ದ್ರುಪದನೆ ಸರ್ವ ಸೂತ್ರಧಾರಿ)

ದು ಯುದ್ಧ ಜಾಣ್ಮೆ, ತಂತ್ರ - ಉದ್ದಕ್ಕೂ ಭೈ ನಿರೂಪಣೆ 


ಯುದ್ಧ 

ಭಾರಿ ಸೈನಿಕರ ಜಮಾವಣೆ ಎರದೂ ಕಡೆಯಿಂದ 

ಧಾನ್ಯದ ವಸೂಲಿ ಕರದ ರೂಪದಲ್ಲಿ 

ರೈತರಿಂದ ಗುಡಾರದಲ್ಲಿ ಹೂತಿಡುವಿಕೆ - ಬಗೆದು ತೆಗೆದ ಸೈನಿಕರು - ಸಾಗಣೆ 

ಹಳ್ಳಿ ಹೆಂಗಸರ ಮೇಲೆ ಅತ್ಯಾಚಾರ 

ರೋಸಿಹೋದ ಜನ - ಯಾಕಾದ್ರೂ ಯುದ್ಧ?


ಊರ-ತಿಂಡಿ ಕೊಳೆತು ಗಬ್ಬು 

ಹೇಲು ಉಚ್ಚೆ ಗಬ್ಬು - ನೈಜ ಚಿತ್ರಣ 


ಭೀಷ್ಮರಿಗೆ ಮಹಾಸೇನಾನಿ ಪಟ್ಟ 

೧೧ ವಿಭಾಗ ಸೈನ್ಯಕ್ಕೆ - ೧೧ ರಾಜರುಗಳ ನೇತೃತ್ವ - ಶಲ್ಯ ಕೂಡ ಒಂದಕ್ಕೆ 


ಭೀಷ್ಮ - ದ್ರೋಣ ಚರ್ಚೆ 

ಮೊದಲು ಆಕ್ರಮಣ ಬೇಡ - ತಡೆಯುವರು, ಹೊಡೆಯುವರು 

ಮೂಗು ತೂರಿಸಿದ ಕರ್ಣ - ನಾವೇ ಹೊಡೆಯುವರಾಗಬೇಕು 

ದ್ರೋಣರೇ ವಿಚಾರಮಾಡುತ್ತ ಇದ್ದಾರೆ - ನಿನ್ನದೇನಿ ತಲೆಹರಟೆ? (ಭೀಷ್ಮರ ಕುಟುಕು)


ಪಾಂಡವ-ಕೃಷ್ಣರನ್ನು ಕರೆದು ಭೀಷ್ಮರ ಒಪ್ಪಂದ 

ಯುದ್ಧ ನಿಯಮ (ಜೆನೆವ ಕನ್ವೆನ್ಷನ್ ತರ)

ಹಗಲು ಮಾತ್ರ 

ರತಿ-ರತಿ, ಆನೆ-ಆನೆ, ಅಶ್ವ-ಅಶ್ವ 

ಸೆರೆ ಸಿಕ್ಕವರು, ಶರಣು ಬಂದವರು - ಕೊಲ್ಲಬಾರದು 

ಯುದ್ಧ ಕರ್ಮಚಾರಿಗಳು - ಕುದುರೆ ಪಾಲಕರು, ಅಡಿಗೆಯವರು - ಆಕ್ರಮಣ ಬೇಡ, ಕೊಳ್ಳ ಬಾರದು 

ಎಷ್ಟರಮಟ್ಟಿಗೆ ಪಾಲನೆಯಾಯ್ತು? ಈಗ ಏನಾಗುತ್ತಿದೆ? 


ಭೀಷ್ಮರಿಂದ ಯುದ್ಧದ ಉದ್ದೇಶ ಘೋಷಣೆ 

ನಿಯೋಗ 

ವಂಶಸ್ಥರಲ್ಲ 

ಹಿಂದೆ ಖಂಡವಪ್ರಸ್ಥ ಕೊಟ್ಟಿದೆ ತಪ್ಪು - ದು ಜೂಜಿನ ಮುಖಾಂತರ ವಶ, ವಾಪಸ್ಸು ಇಲ್ಲ 

ಧರ್ಮ ನಮ್ಮ ಕಡೆ 

ಇಲ್ಲ ಎನ್ನುವವರು ಹೋಗಬಹುದು 


ಭೀಷ್ಮರ ಮನಸಿನಲ್ಲೇ ನಿಯೋಗದ ಬಗ್ಗೆ ದ್ವಂದ್ವ 

ಸಂಶಯ ಪರಿಹಾರಕ್ಕೆ ಕೃಷ್ಣದ್ವೈ ಆಶ್ರಮದ ಕಡೆಗೆ 

ದು ಆಕ್ಷೇಪ - ಯುದ್ಧ ಇನ್ನು ಎರಡು ದಿನ ಮಾತ್ರ - ಈಗೇಕೆ? 

ದು ಲೆಕ್ಕಿಸದ ಹೋರಾಟ ಭೀಷ್ಮ 


ಭೀಷ್ಮರ ಸ್ವಗತ 

ಶಂತನು - ಗಂಗೆ - ಹಿಮಾಲಯ ಬುಡಕಟ್ಟಿನ ಹೆಣ್ಣು - ಷರತ್ತಿನ ವಿವಾಹ - ಹುಟ್ಟುವ ಮಕ್ಕಳು ತವರಿನ ಕಡೆಗೆ 

೭ ಮಕ್ಕಳು ತವರಿಗೆ, ೮ನೇಯದಕ್ಕೆ ಆಕ್ಷೇಪ - ಹೊರಟುಹೋದ ಗಂಗೆ 


ಭೀಷ್ಮ ತಾಯಿ ಇಲ್ಲದ ಬೆಳದದ್ದು 

ಶಂತನು - ಸತ್ಯವತಿ - ಭೀಷ್ಮರ ಮಧ್ಯಸ್ಥಿಕೆ - ಷರತ್ತುಗಳು - ಬ್ರಹ್ಮಚರ್ಯ 


ಚಿತ್ರಾನ್ಗದ ಗಂಧರ್ವನಿಂದ ಹತ್ಯೆ, ೧೩ರ ವಿಚಿತ್ರ ವೀರ್ಯ 

ಸತ್ಯವತಿ ಕೋರಿಕೆ - ಭೀಷ್ಮನಿಂದ ಆಡಳಿತ 


ದ್ವೈ ಆಶ್ರಮ ಬಂತು 

ದ್ವೈ - ಭೀಷ್ಮ ನನ್ನ ಹಿರಿಯಣ್ಣ - ೬೦ ವರ್ಷಗಳ ಹಿಂದೆ ನೀನೆ ನನ್ನನ್ನು ಕರೆಸಿ ನಿಯೋಗ ಮಾಡಿಸದೇ - 

ಅಂಬಿಕೆ ಅಂಬಾಲಿಕೆಯರಿಗೆ - ಅಂದಿನ ಪಾಂಡು, ಧೃತರಾಷ್ಟ್ರಾದಿಗಳು ಕುರುವಂಶಕ್ಕೆ ಸೇರಿದರೆ, ಮುಂದಿನ ಪಾಂಡವರ ಬಗ್ಗೆ ಏಕೆ ಸಂಶಯ? 


ಭೀಷ್ಮಾರಿದ್ದಾಗಲೇ ದು ಸೈನಿಕರಿಂದ ದ್ವೈ ಆಶ್ರಮದ ಮೇಲೆ ಆಕ್ರಮಣ 

ಎತ್ತುಗಳು, ಗಾಡಿಗಳು, ಕರೆಯುವ ಹಸುಗಳು, ಧಾನ್ಯಗಳ ವಶ ಮತ್ತು ಸಾಗಣೆ 

ಆಶ್ರಮದ ಅಧಿಕಾರಿಗಳ ಪ್ರಶ್ನೆ - ನಾವು ಯಾವ ರಾಜರಿಂದಲೂ ಸಹಾಯ ಪಡೆದಿಲ್ಲ, ನಮಗೆ ನಾವೇ - ನಮ್ಮ ಮೇಲೆ ಲೂಟಿ ಏಕೆ?

ಭೀಷ್ಮರ ತಡೆಯನ್ನು ಲೆಕ್ಕಿಸದ ಸೈನಿಕರು - ಕಣ್ತಪ್ಪಿಸಿ ಲೂಟಿ 


೧೯೪೩ - ಎರಡನೇ ಮಹಾಯುದ್ಧ - ಚರ್ಚಿಲ್ - ಬಂಗಾಳಕ್ಕೆ ಹೋಗಬೇಕಾದ ಧಾನ್ಯಗಲು ಸೈನಿಕರಿಗೆ - 

ಬಂಗಾಳದಲ್ಲಿ ಭೀಕರ ಕ್ಷಾಮ, ಗ್ರೇಟ್ ಬಂಗಾಳ ಫ್ಯಾಮಿನ್ - ಲಕ್ಷಾಂತರ ಸಾವು 

ಯುಗ ಯುಗ ಕಳೆದರು - ರಾಜರು ರಾಜರೇ - ಯುದ್ಧವೊಂದು ಅವರಿಗೆ ಕ್ರೀಡೆ - ಜನಸಾಮಾನ್ಯರಿಗೆ ಅದು ನರಳಾಟ - (ಇಂದಿನ ಉಕ್ರೇನ್ ವಾರ್, ಇಸ್ರೇಲ್ - ಪ್ಯಾಲೆಸ್ಟೈನ್ ವಾರ್) 

--------------------------------------------------------------------------------------------------------------------------

ದ್ರೋಣ 

ಅಗ್ನಿವೇಶರ ಶಿಷ್ಯ 

ದ್ರುಪದ ಸಹಪಾಠಿ - ಸ್ನೇಹಿತರು 

ದ್ರುಪದ ರಾಜನಾದ 

ದ್ರೋಣ ಭಾರ್ಗವರ ಕಡೆಗೆ 

ಸಾಹಯ ಕೋರಿ ದ್ರುಪದನಲ್ಲಿಗೆ 

ದ್ರುಪದನಿಂದ ಅವಮಾನ 

ದ್ರೋಣರ ಕೋಪ - ಪಣ ತೊಟ್ಟದ್ದು (ಕುಮಾರವ್ಯಾಸನಲ್ಲಿ) 


ದ್ರೋಣರಿಗೆ ಭೀಷ್ಮರ ಆಶ್ರಯ 

ಶಿಷ್ಯರಲ್ಲಿ ಅರ್ಜುನ ಅಪ್ರತಿಮ 

ಗುರುದಕ್ಷಿಣೆ 

ದ್ರುಪದನ ಕೈಕಾಲುಕಟ್ಟಿ ದ್ರೋಣರ ಮಂಚದ ಕಾಲಿಗೆ ಕಟ್ಟು 

೧/೨ ರಾಜ್ಯ ದ್ರೋಣರಿಗೆ , ಬಿಡುಗಡೆ, ೧/೨ ರಾಜ್ಯ ಭೀಷ್ಮರಿಂದ ವಶ 


ದ್ರೋಣರ ಯುದ್ಧ ದು ಕಡೆಯಿಂದ 

ಏಕಲವ್ಯನ ಆಗಮನ, ಅರಣ್ಯದ ಬಳುವಳಿ, ನಮಸ್ಕಾರ 

ಹೆಬ್ಬರಳು ನೋಡಿ ಶಿಷ್ಯನ ಗುರುತು 

ಮೂಲದ ಕಥೆ ಕುಮಾರವ್ಯಾಸನಲ್ಲಿ 

ಭೈ ಮಾರ್ಪಾಡು 

ಭೀಷ್ಮರ ಮೇಲೆ ಹೊಣೆ 

ಕಳಂಕ ನಿವಾರಣೆ 

ಮುರಿದ ಬೆರಳಿಗೆ ಮುಲಾಮು, ನಾಲ್ಕೇ ಬೆರಳ ಬಿಲ್ಲು ವಿದ್ಯೆ 

ಅರ್ಜುನ ಮೇಲಿನ ತಪ್ಪು ತಿಳುವಳಿಕೆ ನಿವಾರಣೆ 

ಏಕಲವ್ಯ ಈಗ ತಟಸ್ಥ 


ದ್ರೋಣರ ಮೇಲಿನ ಹಾಗೆ ದ್ರುಪದನಿಗೆ ಆರಿಲ್ಲ 

ಹಾಗಾಗೇ ಪಾಂಡವರಿಗೆ ಕುಮ್ಮಕ್ಕು - ಯುದ್ಧ ಸಹಾಯ 

ದ್ರುಪದನ ಮಗ ದುಷ್ಟದ್ಯುಮ್ನ ಈಗ ಪಾಂಡವರ ಮಹಾಸೇನಾನಿ 

----------------------------------------------------------------------------------------------------------------------------

೧೧) ಯುದ್ಧ ಭೂಮಿಯತ್ತ ಕಥೆ 

ಭೀಷ್ಮ - ಕರ್ಣರ ತಿಕ್ಕಾಟ - ಧು ಗೆ ತಲೆ ನೋವು 

ಕರ್ಣ, ನೀನು ಅರ್ಧರಾತಿ, ಬೊಗಳೆ ಜಾಸ್ತಿ 

ಭೀಷ್ಮ, ನೀವು ಅರಮನೆ ಸೇರಿದ ಹಾವು - ದು ಗೆ ಒಳಿತಿಲ್ಲ 

ನೀವು ಮಹಾಸೇನಾನಿಯಾಗಿರುವವರಗೆ ನಾನು ಯುದ್ಧ ಮಾಡೇ. ಅಸಹಾಯಕ ದು 

ಸಂಜಯ - ಯುದ್ಧ ವರದಿಗಾರ (ದಿವ್ಯ ಚಕ್ಷುಗಳಿಲ್ಲ)

ಬೇರೆ ಬೇರೆ ಕಡೆಗಳಿಂದ ಸುದ್ದಿ ಸಂಗ್ರಹ - ಸಹಾಯಕ ಬಾತ್ಮಿದಾರರು ಬೇರೆ 

೨-೩ ದಿನಗಳಿಗೊಮ್ಮೆ ಧೃ ಗೆ ವರದಿ 


ಯುದ್ಧ ವಿವರಣೆಯಲ್ಲಿ ವೈಭವೀಕರಣ, ಭೀಷ್ಮರ ವೀರಾವೇಶದ ವರ್ಣನೆ - ಧೃ ಗೆ ಹಿತವಾಗುವಂತೆ 

ಅಧಿಕಾರದಲ್ಲಿರುವವರನ್ನು ಮೆಚ್ಚಿಸುವಂತೆ ಇರಬೇಕು ಸುದ್ದಿ - ತಂದೆಯ ಪಾಠ 


ಭಗವದ್ಗೀತೆಯ ಪ್ರಸಂಗ 

ಅರ್ಜುನನ ದ್ವಂದ - ಶಸ್ತ್ರ ತ್ಯಾಗ 

ಡೇರೆಯಲ್ಲಿ ಕೃಷ್ಣನ ಉಪದೇಶ - ಸುಮಾರು ೨ ಘಂಟೆ ಮಾತ್ರ 

ಭೀಷ್ಮನ ಘೋಷಣೆಯ ಉಲ್ಲೇಖ - ನಿಯೋಗ, ವಂಶಕ್ಕೆ ಸೇರಿಲ್ಲ - ಧರ್ಮ ನಮ್ಮ ಕಡೆ 

ನಮ್ಮ ಕಡೆಯೇ ಧರ್ಮವೆಂದು ಸಾರಲು ಅರ್ಜುನ ಯುದ್ಧ ಮಾಡು 

ನೀನೊಬ್ಬ ಕುಳಿತರೆ, ಭೀಮಾದಿಗಳು ಯುದ್ಧ ಮಾಡೇ ಮಾಡುತ್ತಾರೆ . 


ಧೃ - ಕೃಷ್ಣ ತಂತ್ರಗಾರ ಸೂಳೆಮಗ 


ಧೃ - ದಾಸಿ ಶೌಚಾಲಯ  ಪ್ರಸಂಗ 

ಇಳಿ ವಯಸ್ಸಿನ ಚಪಲ - ದಾಸಿಯರ ಜಾಣ್ಮೆ 


ಭೀಷ್ಮರ ಯುದ್ಧ ಭೀಕರ - ಪಾಂಡವರಿಗೆ ಭಾರಿ ನಷ್ಟ 

ಕೃಷ್ಣನ ತಂತ್ರ - ಶಿಖಂಡಿಯನ್ನು ಮುಂದೆ ಮಾಡಿದ್ದು 

ಯುದ್ಧ ಭೂಮಿ ತೊರೆದ ಭೀಷ್ಮ, ಬಣಗಳ ಹಾಸಿಗೆ ಮೇಲೆ , ನಿರಾಹಾರ - ಸಾವು ಹತ್ತಿರ 


ಧು - ಭೀಷ್ಮ ಭೇಟಿ 

೧೦ ದಿನದ ಯುದ್ಧದಲ್ಲಿ ತಾವು ಮಾಡಿದ್ದೇನು? 

ಶುರುವಿನಲ್ಲಿ ೧೧-೭, ಈಗ ೫-೫

ಭೀಷ್ಮ - ನನ್ನನ್ನು ನೀನು ಸುಮ್ಮನೆ ಮಹಾಸೇನಾನಿ ಮಾಡಲಿಲ್ಲ 

ಅಪಾರ ಸೈನ್ಯ ಬೆಂಬಲ ನನ್ನಿಂದ ಪಡೆದೆ. 

ನಿನ್ನ ಕಡೆಯವರು ಮಗ್ನರಾಗಿ ಹೊರಡುತ್ತಿಲ್ಲ, ಪಾಂಡವರ ಕಡೆ ಹಾಗಿಲ್ಲ 

ಕರ್ಣ ಯುದ್ಧ ತೊರೆದದ್ದು ಏಕೆ? 


ಭೀಷ್ಮ - ಈಗಲೂ ಸಂಧಾನ ಮಾಡಿಸುವೆ 

ದು - ಸಂಧಾನವಾದರೂ ಭೀಷ್ಮನ ರೋಷ ಆರದು. ಸಂಧಿ ಬೇಡ 


ದ್ರೋಣರಿಗೆ ಮಹಾಸೇನಾನಿ ಪಟ್ಟ 

ಧರ್ಮನನ್ನು ಸೆರೆ ಹಿಡಿದುಕೊಡಿ, ಅದಕ್ಕಾಗಿಯೇ ಚಕ್ರವ್ಯೂಹ 

ಅರ್ಜುನನಿಲ್ಲ, ತ್ರಿಗರ್ತದ ಸುಶರ್ಮನ ಜೊತೆ ಯುದ್ಧಕ್ಕೆ ದೂರಕ್ಕೆ 

ಅಭಿಮನ್ಯು ಹೋರಾಟ, ಹಿಂದೆ ಭೀಮಾದಿಗಳು 

ಸಂಚು ಮಾಡಿ ಅಭಿಮನ್ಯುವನ್ನು ಮಾತ್ರ ಒಳಸೇರಿಸಿಕೊಂಡ ಜಯದ್ರಥ 

ಏಕಾಂಗಿ ಹೋರಾಟ, ಯುವ ಕಣ್ಮಣಿ 

ಕರ್ಣನಿಂದ ಮೋಸದ ಹತ್ಯೆ 


ಅಭಿಮನ್ಯು ಸಾವು, ಕುಪಿತ ಅರ್ಜುನ - ನಾಳೆ ಸಾಯಿಂಕಾಲದೊಳಗೆ ಜಯದ್ರಥನ ವಧೆ 

ಇಲ್ಲವಾದರೆ ಅಗ್ನಿಪ್ರವೇಶ 

ಕೃಷ್ಣನ ತಂತ್ರದಿಂದ ಪಾರು - ಪವಾಡವಿಲ್ಲ 


ಧೃಷ್ಟಧುಮ್ನನಿಂದ ದ್ರೋಣರ ಹತ್ಯೆ (ಅಶ್ವಥಮ ಹತಃ ಕುಂಜರ ಇಲ್ಲ) 


ಕರ್ಣ ಮಹಾಸೇನಾನಿ - ಘಟೋದ್ಗಜನ ಹತ್ಯೆ 

ವಲ್ಲದ ಮನಸಿನ ಶಲ್ಯ, ಕರ್ಣನ ಸಾರಥಿ  (ಡುಂಡಿ ಕವಿತೆ)

ಸಾರಥಿಧರ್ಮ ಪಾಲಿಸದ ಶಲ್ಯ, ಕರ್ಣನಿಗೆ ಮೂದಲಿಕೆ, ನೀನ್ಯಾವ ಬಿಲ್ಲುಗಾರ? 

ರಥ ತ್ಯಾಗ 

ರಥ ಹೂತು - ಅಜೂನನಿಂದ ಹತ್ಯೆ 


ಕರ್ಣನ ಶವ ಹುಡುಕಿಕೊಂಡು ಹೋರಾಟ ಕುಂತಿ, ವಿದುರನ ಜೊತೆ, ಅವರ ಸಾರಥಿ ಸಂಜಯ 

ಕುಂತಿ - ಕರ್ಣ ಸತ್ತಮೇಲೆ ಯುದ್ದದಲ್ಲಿ ಆಸಕ್ತಿಯಿಲ್ಲ. ಯಾರನ್ನು ಯಾರು ಕೊಂದಾರೊ ಎಂಬ ಆತಂಕ ಈಗಿಲ್ಲ 

ನನ್ನ ಮಕ್ಕಳು ಗೆಲ್ಲಬಹುದು, ನಾನು ಸೋತೆ 

ಕುಂತಿ - ನಾನು ನೀಡಿದ ತೊಟ್ಟು ರಕ್ತಕ್ಕೆ ಬಿಂದಿಗೆಗಟ್ಟಲೆ ರಕ್ತ ಸುರಿಸಿ ಸತ್ತ ಕರ್ಣ 

ಘಟೋದ್ಗಜನು ಅಷ್ಟೇ. (ಘಟೋದ್ಗಜಗೆ ನಾನು ವಂಚಿಸಿದೆ )


ಸಂಜಯನ ಅತಿ ಉತ್ಸಾಹ 

ಬ್ರೇಕಿಂಗ್ ನ್ಯೂಸ್ ನೀಡಲು ಧಾವಂತ 

ಪಾಂಡವರ ಪಾಳಯಕ್ಕೆ ಸಂಜಯ - ಕಾವಲುಗಾರರಿಂದ ತಡೆ - ಅವರಿಗೆ ವಿಷಯ ತಿಳಿಸಿದ ಸಂಜಯ 

ಮಹಾರಾಣಿ ಕುಂತಿಯ ಬಗ್ಗೆ ಇಲ್ಲದ್ದು ಹೇಳ್ತೀಯ - ಥಳಿತ 


ಶಲ್ಯ ಮಹಾಸೇನಾನಿ, ಧರ್ಮನಿಂದ ಸಾವು 


ದುಶ್ಯಾಸನ ಸಾವು - ಎದೆ ರಕ್ತ ಕುಡಿದ ಭೀಮ 


ಯುದ್ಧ ಭೂಮಿಯಲ್ಲೇ ಅವಿತುಕೊಂಡ ಧು 

ಪಾಂಡವರಿಂದ ಮೂದಲಿಕೆ, ಎಡ್ಡಾ ದು, 

ನಾನು ಒಬ್ಬ 

ನಮ್ಮಲ್ಲಿ ಯಾರೊಬ್ಬರನ್ನು ಆರಿಸಿಕೋ - ಧರ್ಮ 

ಅವಿವೇಕದ ಹೇಳಿಕೆಗೆ ಕೃಷ್ಣನ ಕೋಪ 


ಛಲವಾದಿ ದು ವಿನಿಂದ ಭೀಮನ ಆಯ್ಕೆ 

ಗದಾಯುದ್ಧವಿಲ್ಲ, ಗಾದೆ ಬಿಸಾಟು ಹೋರಾಟ ಭೀಮ? (anticlimax)?

ದು ಹೇಗೆ ಸತ್ತ? ಖಚಿತತೆ ಇಲ್ಲ 


ಅಶ್ವತ್ತಾಮ  - ದು ಸ್ನೇಹಿತ 

ಪಾಂಡವರ ಹತ್ಯೆಗೆ ರಾತ್ರಿ ಸಂಚು 

ತಪ್ಪುಗ್ರಹಿಸಿ ಉಪಪಾಂಡವರ ಹತ್ಯೆ, ಧೃಷ್ಟಧುಮ್ನ ನ ಹತ್ಯೆ ಕೂಡ 


ದ್ರೌಪದಿ ದುಃಖ 

೫ ಮಕ್ಕಳ ಹೆಣೆಗಳನ್ನು ತಬ್ಬಿ ರೋಧನ 

ಕೃಷ್ಣ, ನಾನು ಹತಭಾಗ್ಯೆ 

ಅರ್ಜುನ ಸುಭದ್ರೆಯನ್ನು ತಬ್ಬಿ ಅತ್ತ 

ಭೀಮ ಘ ನ ಶವವನ್ನು ಹೊತ್ತುತಂದ 

ಈಗ ಸಮಾನಾಂತರ ದೂರ , ಪ್ರೇಕ್ಷಕರಂತೆ 

ಐವರೂ ಶೂರರು ನಿಷ್ಕ್ರಿಯೆ - ಅಂದು ಮಾನಹಾನಿ, ಎಂದು ಪ್ರಾಣಹಾನಿ 


ಉಪಪಾಂಡವರು ಹುಟ್ಟಿದು - ಒಟ್ಟು ದಾಂಪತ್ಯದಲ್ಲಿ 

ತಂದೆ ಯಾರೆಂಬ ಖಚಿತತೆ ಇಲ್ಲ, ಎಲ್ಲರನ್ನು ತಂದೆ ಎನ್ನುತ್ತಿದ್ದ ಉಪಪಾಂಡವರು 

mother is truth, ಫಾದರ್ ಐಸ್ ಫಿಕ್ಷನ್ 


ದ್ರೌ ತಬ್ಬಲು ಮುಂದಾದ ಪಾಂಡವರು, ದೂರ ತಳ್ಳಿದ ದ್ರೌ 

ನನ್ನ ಮಕ್ಕಳಿಗೆ ನಾನೇ ಅಂತ್ಯಕ್ರಿಯೆ ಮಾಡುತ್ತೇನೆ. 

ಅಶ್ವಥಮನನ್ನು ಬಂಧಮುಕ್ತ ಮಾಡಿ, ಎಲ್ಲಾದರೂ ಬದುಕಿಕೊಳಲಿ 


ಪಾಂಡವರ ವಿಜಯ ಖಚಿತ 

ಕೃಷ್ಣ ಪಾಂಡವರೊಂದಿಗೆ ಧೃ ಕಡೆಗೆ 

ಭೀಮ ನಮಸ್ಕಾರ ಮಾಡುವಾಗ ಚೂರಿಯಿಂದ ಚುಚ್ಚಲೆತ್ನಿಸಿದ ಧೃ 

ಕೃಷ್ಣನ ಮುಂಜಾಗರೂಕತೆ - ಪಾರು (ಉಕ್ಕಿನ ಭೀಮನ ಪ್ರಸಂಗವಿಲ್ಲ) 

ಧೃ ಕೋಪ 

ರಕ್ಷಣೆ ಮಾಡಿದ್ದು ನಿನ್ನನ್ನು, ನಿನ್ನ ಚೂರಿ ಭೀಮನಿಗೆ ಏನು ಮಾಡುತಿತಿಲ್ಲ, ಅವನು ನಿಮ್ಮನ್ನು ತುಳಿದು ಸಾಯಿಸ್ತಿದ್ದ 


ಕೃಷ್ಣ - ಗಾಂಧಾರಿ - ಕಣ್ಣಿಗೆ ಪಟ್ಟಿ ಏಕೆ?

ಗಾಂಧಾರಿ - ಭೀಷ್ಮ ಗಾಂಧಾರಕ್ಕೆ ಬಂದಿದ್ರು, ಕುರುಡ ಧೃ ವನ್ನು ಮದುವೆಯಾಗಲು ಇಸ್ಟವಿತಿಲ್ಲ 

ಬೇಡವೆಂದರೂ ಕೇಳದ ತಂದೆ, ನೋಡುವುದಿಲ್ಲವೆಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡೆ - ಹಾಗೆ ಮದುವೆಯಾಯಿತು, ಹಸ್ತಿನಾವತಿಗೆ ಬಂದೆ, ಭೀಷ್ಮನಿಂದ ಗುಣಗಾನ, ಪತಿಗೆ ಇಲ್ಲದ ಧೃಷ್ಟಿ ನನಗೆ ಬೇಡ 

ಎಲ್ಲರಿಂದಲೂ ಪ್ರಶಂಸೆ, ವೈಭವೀಕರಣ, ದೇವಿ ದೇವಿ ಎಂದು ಸಂಬೋಧನೆ, ಮೊದಮೊದಲು ಕಸಿವಿಸಿ,

ಆಮೇಲೆ ವ್ಯಾಮೋಹ, ಹೆಮ್ಮೆ 


ಯಾರು ಬಿಚ್ಚು ಎಂದು ಕೇಳಲಿಲ್ಲ 

ಪಟ್ಟಿಯಲ್ಲೇ ನನ್ನ ಪಾವಿತ್ರ್ಯ, ಕುರುಗಳ ಹೆಮ್ಮೆ 


ಪಟ್ಟಿ ಬಿಚ್ಚಿದ ಕೃಷ್ಣ 

ಮಕ್ಕಳ ಶವಗಳನ್ನು ಹುಡುಕಿ ಹೋರಾಟ ಗಾಂಧಾರಿ, ಯಾರ ಶವವು ಸಿಕ್ಕಲಿಲ್ಲ 

(ಶಕುನಿಯು ಸ್ವರ್ಗಕ್ಕೆ ಹೋಗುತ್ತಾನೆಯೇ?)

ಲೋಹದ ಚೂರುಗಳನ್ನು ಆಯುತ್ತಿದ್ದ ಜನತೆ 

ಆಭರಣಗಳನ್ನು ಕೀಳುತ್ತಿದ್ದ ಜನತೆ 

ಗಾಂಧಾರಿ - ನಮ್ಮ ಮನೆಗಳಲ್ಲಿ ಸಾವು, ಅವರುಗಳು ಲೂಟಿಯಲ್ಲಿ 

ಕೃಷ್ಣ - ಅವರ ಮನೆಗಳಲ್ಲೂ ಸಾವಾಗಿದೆ 


ಮುಂದೆ ನಿರೂಪಣೆಯಲ್ಲಿ ಗೊಂದಲ 

ಹಿಡಂಭವನಕ್ಕೆ ಕೃಷಿಭೂಮಿ ಮಾಡಲೆಂದು  ಬೆಂಕಿ, ಹಿಡಿಮ್ಬ್, ಬಾರ್ಬರಿಕ ಸಾವು (ಬಾರ್ಬರಿಕನ ಬೇರೆ ಕಥೆ) 

ಯಾದವೀ ಕಲಹ, ದ್ವಾರಕೆ ಸಮುದ್ರದಲ್ಲಿ ಮುಳುಗೇ 

ಯುದ್ಧಭೂಮಿಯಲ್ಲಿ ಅಭಿಮನ್ಯು ಹೆಂಡತಿ ಉತ್ತರೆಗೆ ಹೆರಿಗೆ ನೋವು - ಸತ್ತುಹುಟ್ಟಿದ ಮಗು 


ಯುದ್ಧದ ಬಸುರಿಯರು - ನಮ್ಮ ಮಕ್ಕಳಿಗೆ ತಂದೆ ಯಾರು? ಗಂಡಂದಿರು ನಮ್ಮನ್ನು ಸೇರಿಸರು 

ನಮ್ಮ ವಂಶಕ್ಕೆ ಕುಡಿಯಿಲ್ಲ - ಕುಂತಿ 

ಇಂತಹ ವಿಪರ್ಯಾಸ?


ಜನಮಾನಸಕ್ಕೆ ಹತ್ತಿರವಾದ ಮಹಾಭಾರತ 

ಭೈ ರವರ ಕಲ್ಪನೆ, ಸಂಶೋಧನೆ, ನೈಜತೆಯ ಕೋನ ಇವುಗಳಿಂದ ಹೊಸಬೆಳಕು, ಅಂತರಾಷ್ಟ್ರಿಯ ಖ್ಯಾತಿ 

-೦-೦-೦-೦-








    

No comments:

Post a Comment