Saturday 14 October 2023

Eeshwara Layout Harikatha on 24th Oct 2023

  

ಓಂ ನಮೋ ವೆಂಕಟೇಶಯನಮಃ! 


ಓಂ ನಮೋ ನರಸಿಂಹಯನಮಃ!!


ಓಂ ನಮೋ ಶ್ರೀ ರಾಮಾಯನಮಃ!!!

*******

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.

ಪರಮಾತ್ಮನ ದಶಾವತಾರದ ಇಂದಿನ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದವನ್ನು ಬೇಡುತ್ತೇವೆ. 

 *********

ಇಂದು ವಿಜಯದಶಮಿಯ ಶುಭದಿನ.  ಶ್ರೀ ರಾಮ ರಾವಣನನ್ನು ಕೊಂದು ವಿಜಯ ಸಾಧಿಸಿದ ದಿನ.  ಸಾಕ್ಷಾತ್ ಪಾರ್ವತಿ ಸ್ವರೂಪಳಾದ ಚಾಮುಂಡಿಯು ಮಹಿಷಾಸುರನನ್ನು ಸಂಹಾರ ಮಾಡಿದ ದಿನ.  ಒಟ್ಟಿನಲ್ಲಿ ಅಧರ್ಮದ ಮೇಲೆ ಧರ್ಮ ಗಳಿಸಿದ ವಿಜಯದ ದಿನವೇ ವಿಜಯದಶಮಿಯ ದಿನ.  ತಮಗೆಲ್ಲರಿಗೂ ವಿಜಯದಶಮಿಯ ಶುಭ ಹಾರೈಕೆಗಳು. 

ಈಗ ಸುಪ್ರಸಿದ್ಧ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ಕೇಳೋಣ.  ಈ ಕೀರ್ತನೆಯಲ್ಲಿ ದಶಾವತಾರದ ವರ್ಣನೆ ಇರುವುದನ್ನು ತಾವು ಕಾಣಬಹುದು. 

ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಅತಿಶಯ ಮಹಿಮೆಗಳಲ್ಲಿ ಮೆರೆಯುವಎಲ್ಲರಿಗಾಧರನು ತಾನೇ 

ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಹದಿನೈದನೇ ಶತಮಾನದ ಮಹಾನ್  ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ತಾವೀಗ ಕೇಳಿದಿರಿ. ಅಣ್ಣಮಾಚಾರ್ಯರು ನಮ್ಮ ಪುರಂದರದಾಸರ ಸಮಕಾಲೀನರು, ಅಂದರೆ ಈ ಎರಡು ಮಹಾನುಭಾವರು ಹದಿನೈದನೇ ಶತಮಾನದಲ್ಲಿ ಒಂದೇ ಕಾಲದಲ್ಲಿ ಜೀವಿಸಿದ್ದವರು. 



ತಿರುಪತಿ ಅಧಿಪತಿಯಾದ  ಶ್ರೀ ವೆಂಕಟೇಶ್ವರರ ಮೇಲೆ ಸಹಸ್ರಾರು ಕೀರ್ತನೆಗಳನ್ನು ಅಣ್ಣಮಾಚಾರ್ಯರು ರಚಿಸಿದ್ದಾರೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು ಗಾಯಕಿ  ಭಾರತ ರತ್ನ  ಎಂ.ಎಸ್. ಸುಬ್ಬಲಕ್ಷ್ಮಿಯವರ ಕೋಗಿಲೆ ಕಂಠದಲ್ಲಿ ಅಣ್ಣಮಾಚಾರ್ಯರ ಹಲವು ಕೀರ್ತನೆಗಳನ್ನು ಧ್ವನಿಮುದ್ರಿಸಿ ಪ್ರಕಟಿಸಿದ ಮೇಲೆ ಆ ಮಹಾನ್ ಹರಿದಾಸರ  ಕೀರ್ತನೆಗಳು ಹೆಚ್ಚು ಜನಪ್ರಿಯವಾದವೆಂದರೆ ತಪ್ಪಾಗಲಾರದು. ಅಣ್ಣಮಾಚಾರ್ಯರ ಈ ಕೀರ್ತನೆಯ ಪರಿಚಯ ತಮ್ಮೆಲರಿಗೂ ಇದ್ದೇ ಇದೆ ಅಂತ ಭಾವಿಸ್ತೇನೆ.   


Pallavi   

SreemannArAyaNa SreemannArAyaNa

SreemannArAyaNa nee Sree pAdamE SaraNu ||            

 

Charanam 1         

kamalAsatee mukha kamala kamala hita

kamala priya kamalEkshaNA

kamalAsana hita garuDa gamana Sree

kamala nAbha nee pada kamalamE SaraNu ||  

 

ತೊಂಬತ್ತರ ದಶಕದಲ್ಲಿ ಅಣ್ಣಮಾಚಾರ್ಯರ ಜೀವನಚರಿತ್ರೆಯನ್ನು ಬೆಳ್ಳಿಯ ತೆರೆ ಮೇಲೆ ಸಿನಿಮಾವನ್ನಾಗಿಸಿದಾಗ ಅದು ಸೂಪರ್ ಹಿಟ್ ಆಗಿ ಜಯಭೇರಿ ಬಾರಿಸಿದ್ದು ತಮಗೆ ತಿಳಿದದ್ದೇ. ಆ ಚಿತ್ರದಲ್ಲಿ ಅಳವಡಿಸಿಕೊಂಡಿರುವಂತಹ ಮತ್ತೊಂದು ಅನ್ನಮಾಚಾರ್ಯರ ಕೀರ್ತನೆಯನ್ನೂ ತಾವುಗಳು ಕೇಳಿರಬೋದು. 

ವಿನರೋ ಭಾಗ್ಯಮು ವಿಷ್ಣು ಕಥಾ 

ವೇನುಬಲಮಿದಿವೊ ವಿಷ್ಣು ಕಥಾ 

ವಿನರೋ ಭಾಗ್ಯಮು ವಿಷ್ಣು ಕಥಾ 

ವೇನುಬಲಮಿದಿವೊ ವಿಷ್ಣು ಕಥಾ 


ಚೇರಿ ಯಶೋಧಕು ಶಿಶುವಿತಡು 

ಧಾರುಣಿ ಬ್ರಹ್ಮಕು ತಂದ್ರಿಯುನಿತಡು 

ಚೇರಿ ಯಶೋಧಕು ಶಿಶುವಿತಡು 

ಧಾರುಣಿ ಬ್ರಹ್ಮಕು ತಂದ್ರಿಯುನಿತಡು 

ಚೇರಿ ಯಶೋಧಕು ಶಿಶುವಿತಡು 


ನಾವು ಈ ದಿನಕ್ಕಾಗಿ ಆರಿಸಿಕೊಂಡ ಕೀರ್ತನೆಯಲ್ಲಿ, ಅನ್ನಮಾಚಾರ್ಯು ಹಾಡುತ್ತಿದ್ದಾರೆ......... 

 

ಇವನಿಗಾರು  ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಅತಿಶಯ ಮಹಿಮೆಗಳಲ್ಲಿ ಮೆರೆಯುವಎಲ್ಲರಿಗಾಧರನು ತಾನೇ........ 

ನಾನು ಎಲ್ಲ ದೇವರುಗಳಲ್ಲೂ ಹುಡುಕಿದೆ. ನನಗೆ ಎಲ್ಲೆಲ್ಲೂ ನನ್ನ ಸ್ವಾಮಿ  ಮಾತ್ರ ಕಾಣುತ್ತಿದ್ದಾರೆ. ಅವರ್ಯಾರಪ್ಪಾ ಅಂದ್ರೆ.... 

ಶ್ರೀ ವೆಂಕಟ ಪ್ರಭುವು..... 

ಅತಿಶಯ ಮಹಿಮೆಗಳಲ್ಲಿ ಮೆರೆಯುವಎಲ್ಲರಿಗಾಧರನು ತಾನೇ........ 

ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ವೆಂಕಟೇಶ್ವರರ ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ ಅಂತಾರೆ........ ! ವೆಂಕಟೇಶ್ವರ ಅಂದ್ರೆ ಬರೀ ಕಲ್ಲು ಕಣ್ರೀ ಅಂತಾರೆ.....!! ಸಭಿಕರುಗಳೇ......ಸ್ವಲ್ಪ ವಿಚಾರ ಮಾಡೋಣ. 

ಮೂರು  ವರ್ಷಗಳ ಹಿಂದೆ  ಇಡೀ ಪ್ರಪಂಚವನ್ನೇ ಕೋವಿಡ್ ಮಹಾಮಾರಿ ಕಾಡಿತ್ತು. ಅಮೇರಿಕಾ, ಚೀನಾದಂತ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದ್ವು.  ಆದರೂ ನಮ್ಮ ಭಾರತ ದೇಶ ಮಾತ್ರ ಕೋವಿಡ್ ರೋಗವನ್ನು ಸುಲಭವಾಗೇ  ಗೆದ್ದಿತು. ಏಕಪ್ಪಾ ಅಂದ್ರೆ, ವೆಂಕಟೇಶ್ವರರ ಆಶೀರ್ವಾದ ನಮ್ಮ ದೇಶದ ಮೇಲಿತ್ತು. 

ನಮ್ಮ ನೆರೆ ರಾಷ್ಟ್ರಗಳು ನಮ್ಮ ದೇಶದ ಮೇಲೆ ಸಂಚು ಮಾಡಿ ಕತ್ತಿ  ಮಸೆಯುತ್ತಿರುವುದು ಹೊಸದೇನಲ್ಲ.  ಆದರೂ ನಮ್ಮ ದೇಶ ಸುರಕ್ಷಿತವಾಗಿ ಇದೆ ಅಂದ್ರೆ, ಅದು ವೆಂಕಟೇಶ್ವರರ ರಕ್ಷಾ ಕವಚ ನಮ್ಮ ದೇಶಕ್ಕಿರುವದರಿಂದ ಮಾತ್ರ ಎಂದೇ ನನ್ನ ಭಾವನೆ. 

ನಮ್ಮ ನೆರೆ ರಾಷ್ಟ್ರಗಳಲ್ಲಿ ಹಸಿವು, ಅಶಾಂತಿ ತಾಂಡವವಾಡುತ್ತಿರುವಾಗ ನಮ್ಮ ದೇಶದಲ್ಲಿ ಸುಭಿಕ್ಷ, ಶಾಂತಿ, ನೆಮ್ಮದಿ ನೆಲಸಿದೆ ಅಂದ್ರೆ, ಅದು ನಮ್ಮ ತಿರುಪತಿ ಬಾಲಾಜಿಯ ಆಶೀರ್ವಾದದಿಂದಲೇ ಎಂಬುದು ನಮ್ಮೆಲ್ಲರ ಅಚಲವಾದ ನಂಬಿಕೆ. 


ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಅತಿಶಯ ಮಹಿಮೆಗಳಲ್ಲಿ ಮೆರೆಯುವಎಲ್ಲರಿಗಾಧರನು ತಾನೇ 

ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಮತಿಜಾಲದೊಳು ನಾ ದೈವವ ಹುಡುಕಿದ ಮತ್ಸ್ಯಾವತಾರವು ಇವನು

ವೆಂಕಟೇಶ್ವರರಿಗಾಗಿ ಅಣ್ಣಮಾಚಾರ್ಯರು ನೀರಿನಲ್ಲಿ, ಅಂದರೆ ಮಹಾಸಾಗರಗಳಲ್ಲಿ ಹುಡುಕಿದ್ದಾರೆ. ನಮ್ಮ ವೆಂಕಟೇಶ್ವರ ಅಲ್ಲಿ ಅವರಿಗೆ ಮತ್ಸ್ಯಾವತಾರಿಯಾಗಿ ಕಾಣಿಸಿಕೊಂಡಿದ್ದಾನೆ. 

ಅನಾದಿ ಕಾಲದಲ್ಲಿ ಒಮ್ಮೆ ಸಾಗರಗಳಲ್ಲಿ ಮಹಾ ಸುನಾಮಿ ಉಂಟಾಗಿ ಇಡೀ ಭೂಮಂಡಲವೇ ನೀರಿನಲ್ಲಿ ಮುಳುಗಿ ಹೋಗಿತ್ತಂತೆ. ಆಗ ಮಹಾವಿಷ್ಣು, ಅಂದರೇ ನಮ್ಮ ವೆಂಕಟೇಶ್ವರ ಭಾರಿ ಮೀನಿನ ಅವತಾರವೆತ್ತಿ ಮುಳುಗಿದ ಭೂಮಿಯನ್ನು ಮತ್ತು ಜೀವಿಗಳನ್ನು ಎಳದು ತಂದು ರಕ್ಷಿಸಿದ್ದೇ  ಮತ್ಸ್ಯಾವತಾರದ ಕಥೆ. 

ಜೀವಿಗಳ ಸೃಷ್ಟಿ ಮೊದಲು ನೀರಿನಲ್ಲಿ ಆಯ್ತು ಎಂಬುದಕ್ಕೆ ಮತ್ಸ್ಯಾವತಾರದ ಕಥೆಯೇ ಸಾಕ್ಷಿ. ಅಂದ ಹಾಗೆ ತಾವೆಲ್ಲ ಚಾರ್ಲ್ಸ್  ಡಾರ್ವಿನ್ ನ ವಿಕಾಸ ವಾದದ ಬಗ್ಗೆ ಕೇಳಿದ್ದೀರಿ. ಅದು ಬಿಡಿ, ಕೇವಲ ೧೫೦ ವರ್ಷಗಳ ಹಿಂದಿನ ಮಾತು. ಜೀವಿಗಳ ಸೃಷ್ಟಿ ನೀರಿನಲ್ಲಿ ಮೊದಲು ಆಯ್ತು ಎಂಬುದನ್ನ ನಮ್ಮ ಪುರಾಣಗಳಲ್ಲಿ ಸಹಸ್ರ ಸಹಸ್ರ ವರ್ಷಗಳ  ಹಿಂದೇ  ಬರೆದ್ ಇಟ್ಟಿದ್ದಾರೆ ನೋಡಿ.  

ಮತಿಜಲದೊಳು ನಾ ದೈವವ ಹುಡುಕಿದ ಮತ್ಸ್ಯಾವತಾರವು ಇವನು 

ಕಂಡೆ ಪಾತಾಳದಲ್ಲಿ ಶೋಧಿಸಿಆದಿ ಕೂರ್ಮನೀ ವಿಷ್ಣುವು  (ಎರಡು ಬಾರಿ)

ಸ್ವಾಮಿ ವೆಂಕಟೇಶ್ವರರನ್ನು ಹುಡುಕುತ್ತಾ ಈಗ ಅಣ್ಣಮಾಚಾರ್ಯರು ನಮ್ಮನ್ನ  ಈಗ ಪಾತಾಳಕ್ಕೆ ಕರೆದುಕೊಂಡು ಹೋಗ್ತಾ ಇದ್ದಾರೆ.  ನಿಮಗೆಲ್ಲ ಗೊತ್ತು, ಒಮ್ಮೆ ದೇವಾದಿಗಳು ಮತ್ತು ಅಸುರರು ಅಮೃತವನ್ನು ಹುಡುಕುತ್ತಾ ಕ್ಷೀರ  ಸಾಗರವನ್ನೇ ಶೋಧಿಸಿದ್ದರು. ಮಂಧಾರ ಪರ್ವತವನ್ನೇ ಕಡಗೋಲನ್ನಾಗಿಸಿ, ವಾಸುಕಿಯನ್ನೇ ಹಗ್ಗವನ್ನಾಗಿಸಿ ಸಾಗರವನ್ನು ಕಡೆಯಲಾಗಿತ್ತು. ಆಗ ಮಂದಾರ ಪರ್ವತ ಕುಸಿದು ನಿಂತಾಗ, ನಮ್ಮ ವೆಂಕಟೇಶ್ವರರು ದೊಡ್ಡದಾದ ಆಮೆಯ ಅವತಾರವನ್ನೆತ್ತಿ ಮಂದಾರ ಪರ್ವತನ್ನು ಮೇಲೆತ್ತಿದ್ದರು. ಅದೇ ಕೂರ್ಮಾವತಾರದ ಕತೆ. 

ಆಮೆ ನೀರಿನಲ್ಲೂ ಈಜ ಬಹುದು, ಭೂಮಿಯ ಮೇಲು ಓಡಾಡಬಲ್ಲುದು. ಇದು ಜೀವ ವಿಕಾಸದ ಎರಡನೇ ಹಂತ ಎಂಬುದು ಎಷ್ಟು ಸತ್ಯ ನೋಡಿ. 

ಮುಂದೆ ಪರಮಾತ್ಮನದು ವರಾಹಾವತಾರ...... 

ವರಾಹರೂಪಮ್ ದೈವ ವರಿಷ್ಠಮ್ (ಫುಲ್)

ಹಿರಣ್ಯ ಕಷಿಪುವಿನ ತಮ್ಮನಾದ ಹಿರಣ್ಯಾಕ್ಷನು ಅಂದು ಭೂಮಂಡಲವನ್ನೇ ಸಾಗರದೊಳಗೆ ಅಡಗಿಸಿಟ್ಟಾಗ, ನಮ್ಮೆಲ್ಲರನ್ನೂ ರಕ್ಷಿಸಲು ಎತ್ತಿದ ವೆಂಕಟೇಶ್ವರರ ವರಾಹ ರೂಪಕ್ಕೆ, ಇದು ನಮ್ಮಗಳದೊಂದು ನಮಸ್ಕಾರ. 

ಮತ್ತೆ ಅಣ್ಣಮಾಚಾರ್ಯಾರ ಕೃತಿಗೇ ಬರೋಣ.... 

ಇವನಿಗಾರು ಸರಿ,  ದೈವ ಕಾಣೆನು, 

ಎಲ್ಲೆಲ್ಲಿ ಅರಸಲು ಇವನೇ..... 

ಶ್ರೀವೆಂಕಟಪ್ರಭುವು.. 

ಅತಿಶಯ ಮಹಿಮೆಗಳಲ್ಲೀ ಮೆರೆಯುವ, ಎಲ್ಲರಿಗಾಧಾರನು ತಾನೇ... 

ಮತಿಜಲದೊಳು ನಾ ದೈವವ ಹುಡುಕಿದೆ, 

ಮತ್ಸ್ಯಾವತಾರವು ಇವನು.... 

ಕಂಡೆ ಪಾತಾಳದಲ್ಲಿ ಶೋಧಿಸಿ,  ಆದಿ ಕೂರ್ಮನೀ ವಿಷ್ಣುವು...

ದಟ್ಟವಿಯೊಳು ನಾ ತಡಕಿದರೆ ಭೂವರಾಹನನೆ ಕಂಡೆನು.. 

ಬೆಟ್ಟ ಗುಡ್ಡಗಳ ಗುಹೆಯಲಿ ಬೆದಕಿದೆ, ನಾರಸಿಂಹನೇ ಇರುವನು!!

ಅಣ್ಣಮಾಚಾರ್ಯರು ನಮ್ಮನೀಗ ದಟ್ಟಡವಿಯ ಗುಹೆಗೆ ಕರೆದುಕೊಂಡು ಹೋಗಿ ನರಸಿಂಹನ ದರ್ಶನವನ್ನು ಮಾಡಿಸಿದ್ದಾರೆ. ಹಿರಣ್ಯ ಕಷಿಪು ಎಲ್ಲ ವರಗಳನ್ನು ಪಡೆದುಕೊಂಡು ಮಹಾದೈತ್ಯನಾಗಿ, ವಿಷ್ಣುಭಕ್ತರನ್ನ ವಿಧ ವಿಧವಾಗಿ ಕಾಡುತ್ತಿದ್ದ ಕಾಲ ಅದು. ತನ್ನ ಮಗನೆ ಆದ ಬಾಲಕ ಪ್ರಹ್ಲಾದ ಕೂಡ ವಿಷ್ಣುಭಕ್ತನಾದಾಗ, ಮಗನನ್ನೇ ವಿಧ ವಿಧವಾಗಿ ಹಿಂಸಿಸಿದ ಹಿರಣ್ಯ ಕಷಿಪುವನ್ನು ಸಂಹರಿಸಲು ನಮ್ಮ  ವೆಂಕಟೇಶ್ವರ ನರಸಿಂಹನಾಗೆ ಬರಬೇಕಾಯಿತು. ಕೋಪಾಗ್ನಿಯಲ್ಲಿ ಕ್ರೂರನಾದ ನರಸಿಂಹ ತನ್ನ ತೀಕ್ಷ್ಣವಾದ ಉಗುರುಗಳಿಂದ ಹಿರಣ್ಯ ಕಷಿಪುವಿನ ಹೊಟ್ಟೆಯನ್ನು ಬಗೆದು ಸಂಹಾರ ಮಾಡಿದಾಗ, ನರಸಿಂಹನನ್ನು ಸಮಾಧಾನ ಪಡಿಸಲು  ಬಾಲಕ ಪ್ರಹ್ಲಾದನೇ ನರಸಿಂಹನ ಸ್ತುತಿಯನ್ನು ಮಾಡಬೇಕಾಯ್ತು. 

ಶ್ರೀಮತ್ಪಯೋನಿದಿನಿ ಕೇತನ ಚಕ್ರಪಾಣೆ 

ಹರಿಕಥೆ ಅಂದಮೇಲೆ ಒಂದು ಉಪಕಥೆ ಇದ್ದೆ ಇರಬೇಕು.  ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ. 


ಮಹಾ ವಿಷ್ಣುವಿನ ಮುಂದಿನ ಅವತಾರವೇ ವಾಮಾನವತಾರ.  

ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಬಲಿ ಚಕ್ರವರ್ತಿಗೆ ಮೋಕ್ಷವನ್ನು ಕರುಣಿಸಿದವನು ಮಹಾವಿಷ್ಣುವೇ. ಪರಶುರಾಮನಾಗಿ ಅವತರಿಸಿ ರಾಮನಿಗೆ ದರುಶನವನ್ನು ನೀಡಿ ಹರಿಸಿದವನೂ ಮಹಾವಿಷ್ಣುವೇ. 

ತಿಳಿದು ನಭೋಮಂಡಲದೀ ಹುಡುಕಿದೆ,  ತ್ರಿವಿಕ್ರಮಾಕೃತಿ ನಿಂತಿತು..

ಹಲವು ವೀರರನ್ವೇಷಿಸಿ ನೋಡಿದೆ, ಪರಶುರಾಮನೊಬ್ಬನಿರುವನು..

ಶಿವನ ಲಹರಿಯಲಿ ಪಾರ್ವತಿ ಅರಸಿದ ತಾರಕ ಬ್ರಹ್ಮನೇ ರಾಘವನು 

ಈಗ ನಮ್ಮ ಅಣ್ಣಮಾಚಾರ್ಯರು ನಮಗೆ ರಾಮಾವತಾರದ ಪರಿಚಯ ಮಾಡಿಸ್ತಾ ಇದ್ದಾರೆ. ಶ್ರೋತೃಗಳೇ, ರಾಮಾಯಣ ನಡೆದಿದ್ದು ಯಾವಾಗ?  ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

ಪ್ರತಿದಿನ ನಾವೆಲ್ಲ ಈ ರಾಮಸ್ತೋತ್ರವನ್ನ ಜಪ ಮಾಡೇ ಮಾಡ್ತೇವೆ. 

ರಾಮಾಯ ರಾಮಭದ್ರಾಯ 

ರಾಮಚಂದ್ರಾಯ ವೇದಸೇ 

ರಘುನಾಥಾಯ ನಾಥಾಯ 

ಸೀತಾಯ ಪತೆಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದ್ದಂತಹ ಶ್ಲೋಕ. "ರಾಮಾಯ ",  ರಾಮನನ್ನು ಪ್ರೀತಿಯಿಂದ "ರಾಮ" ಅಂತ ಕರೆಯುತ್ತಿದ್ದವರು  ಮಹಾರಾಜಾ ದಶರಥ. ರಾಮಭದ್ರಾ ಅಂತ ರಾಮನನ್ನು ಕರೆಯುತ್ತಿದ್ದವರು ತಾಯಿ ಕೌಸಲ್ಯೆ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನು ಉಂಟು ಮಾಡುವವನು ಎಂದು ಅರ್ಥ.  ರಾಮಚಂದ್ರಾಯ____________,  ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು? ನಿಮಗೆಲ್ಲಾ ಆಶ್ಚರ್ಯವಾಗಬಹುದು, ಅದು ಮಂಥರೆ. ಮಂಥರೆ ಮಗುವಾಗಿದ್ದ ರಾಮನ್ನನ್ನು  ಬಹುವಾಗಿ ಪ್ರೀತಿಸುತ್ತಿದ್ದದ್ದು ಹಲವರಿಗೆ ಗೊತ್ತಿಲ್ಲದ ವಿಷಯವಿರಬಹುದು. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿದಾಗ ರಾಮ ಸಮಾಧಾನಗೊಂಡನಂತೆ. ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಈಗ ಮತ್ತೊಂದು ಉಪಕಥೆ ನನ್ನ ತಂಗಿ ಪ್ರಜ್ಞಾಳಿಂದ. 


"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪೀ ಗರಿಯಾಸಿ"

ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು? ನಿಮಗೆ ಆಶ್ಚರ್ಯವಾಗಬಹುದು, ಈ ಮಾತನ್ನು ಸಾಕ್ಷಾತ್ ಶ್ರೀರಾಮನೇ ಹೇಳಿರುವುದು. ರಾವಣನ ಸಂಹಾರವಾದ ಮೇಲೆ ಲಂಕೆ ರಾಮ-ಲಕ್ಷ್ಮಣರ ಕೈವಶವಾಗುತ್ತದೆ. ವೈಭವಯುಕ್ತವಾದ ಲಂಕೆಯನ್ನು ನೋಡಿ ಬೆರಗಾದ ಲಕ್ಷ್ಮಣ, ರಾಮನನ್ನು ಕೇಳುತ್ತಾನೆ.  "ಅಣ್ಣ..... ನೋಡು ವಜ್ರ ವೈಡೂರ್ಯಗಳಿಂದ ಕೂಡಿದ ಲಂಕೆ ಈಗ ನಮ್ಮ ಕೈವಶವಾಗಿದೆ. ನಮ್ಮ ರಾಜಧಾನಿಯನ್ನು ನಾವು ಅಯೋಧ್ಯೆಯಿಂದ ಲಂಕೆಗೆ ಸ್ಥಳಾಂತರಿಸಿ ನಾವುಗಳು ಎಲ್ಲೇ ಏಕೆ ನೆಲಸಬಾರದು?" ಲಕ್ಷ್ಮನನ್ನೂ ನೋಡಿ ನಸುನಕ್ಕ ರಾಮ ಹೀಗೆ ಹೇಳುತ್ತಾನೆ. 

ಅಪೀ ಸ್ವರ್ಣಮಯೀ ಲಂಕಾ 

ನಮೇ ಲಕ್ಷ್ಮಣ ರೋಚತೇ 

ಜನನಿ ಜನ್ಮಭೂಮಿಶ್ಚ 

ಸ್ವರ್ಗಾದಪಿ ಗರಿಯಾಸಿ 

ಲಕ್ಷ್ಮಣ, ಲಂಕೆ ಎಷ್ಟೇ ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ. ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಜನಿಸಿದ ಜನ್ಮಭೂಮಿಯಾದ ಅಯೋಧ್ಯಾ ನಮಗೆ ಸ್ವರ್ಗಕ್ಕಿಂತ ಮಿಗಿಲಾದುದು." ನಡಿ, ಬೇಗ ಅಯೋಧ್ಯಗೆ ಹೋಗೋಣ' ಎನ್ನುತ್ತಾನೆ. ರಾಮನ ದೇಶಪ್ರೇಮ ಇಂದು ಎಷ್ಟು ಆದರ್ಶಮಯವಾದುದು ಎಂಬುದನ್ನು ಗಮನಿಸಿ. ನಮ್ಮ ಯುವಕರೆಲ್ಲರೂ ರಾಮನ ದೇಶಪ್ರೇಮವನ್ನು ಮೈಗೂಡಿಸಿಕೊಂಡರೆ ನಮ್ಮ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲವೆಂಬುದು ನನ್ನ ಭಾವನೆ. ಅಂತಹ ಮಹಾಮಹಿಮ ಶ್ರೀ ರಾಮನ ಸ್ಮರಣೆಯನ್ನು ಈಗ ಮಾಡೋಣ. 

ಶ್ರೀ ರಾಮಚಂದ್ರ ಕೃಪಾಳು ಭಜಮನಾ...... 


ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ಮತ್ತೊಬ್ಬ ಮಹಾನ್ ದೈವ  ಅಂದರೆ ನಮ್ಮ ಆಂಜನೇಯ. ಆಂಜನೇಯನ ಸ್ಮರಣೆ ಮಾಡದೇ ಇದ್ದರೆ ರಾಮಾಯಣವೇ ಅಪೂರ್ಣ ಎಂಬುದು ನಮ್ಮೆಲ್ಲರ ಭಾವನೆ. ರಾಮನ ಬಂಟ ಹನುಮಂತನಿಲ್ಲದೆ ಹೊಗ್ಗಿದ್ರೆ ಶ್ರೀ ರಾಮ ರಾವಣವನ ಸಂಹಾರವನ್ನ ಮಾಡೋಕೆ ಆಗ್ತಾ ಇರಲಿಲ್ಲ ಎಂಬುದೂ ನಮಗೆಲ್ಲ ಗೊತ್ತು. ಸ್ವಲ್ಪ ನೆನಸಿಕೊಳ್ಳೋಣ.... 

ವಾನರ ಸೇನೆ ಸೀತೆಯನ್ನು ಹುಡುಕುತ್ತಾ ರಾಮೇಶ್ವರಂ ನ ಸಮುದ್ರ ತೀರದಲ್ಲಿ ಬಂದು ನಿಂತಿರುತ್ತದೆ. ನೂರು ಯೋಜನದಷ್ಟು ದೂರವಿದ್ದ ಲಂಕೆಯನ್ನು ಯಾರು ಹಾರಿ ತಲುಪಬಲ್ಲರು ಎಂಬ ಚರ್ಚೆ ಆಗ್ತಾ ಇರುತ್ತೆ. ಆಗ ನಮ್ಮ ಹನುಮಂತ ಯಾವ ಜಂಬವನ್ನು ಕೊಚ್ಚಿಕೊಳ್ಳದೆ, ಒಂದು ಮೂಲೇಲಿ ಕೂತಿರ್ತಾನೆ. ಆಗ ಹಿರಿಯರಾದ ಜಾಂಬವಂತರು ಹನುಮನ ಹತ್ತಿರ ಬಂದು ಹೇಳ್ತಾರೆ. "ಹನುಮಾ, ನೀನು ಪವನ ಪುತ್ರ…….., ಚಿರಂಜೀವಿ.  ಬಾಲಕನಾಗಿದ್ದಾಗಲೇ ಸೂರ್ಯನನ್ನು ಒಂದು ಹಣ್ಣು ಎಂದು ತಿಳಿದ, ಅದನ್ನು ಪಡೆಯಲು ಆಕಾಶಕ್ಕೆ ಹಾರಿದ್ದ ಧೀರ ನೀನು. ಸೀತಾನ್ವೇಷಣೆಯ ಕಾರ್ಯ ನಿನ್ನಿಂದ ಮಾತ್ರ ಸಾಧ್ಯ" ಎಂದು ಹನುಮಂತನನ್ನು ಹುರಿದುಂಬಿಸುತ್ತಾರೆ. ಉತ್ತೇಜಿತನಾದ ಹನುಮಂತ ಒಂದು ದೊಡ್ಡ ಬೆಟ್ಟದ ಮೇಲೆ ನಿಂತು ತನ್ನ ದೇಹವನ್ನು ಬೃಹದಾಗಿ ಬೆಳಸಿ ಒಮ್ಮೆ ಘರ್ಜಿಸುತ್ತಾನೆ. ಅಲ್ಲಿದ್ದವರಿಗೆಲ್ಲ ಹನುಮಂತನ ವಿಶ್ವರೂಪದ ದರ್ಶನವೇ ಆಯ್ತು ಅಂತಲೇ ಹೇಳ್ಬಹುದು. 

ಘಟಿಕಾಚಲದಿ ನಿಂತ ಶ್ರೀ ಹನುಮಂತ 


ಸೀತಾಮಾತೆಯನ್ನು ಹುಡುಕುವ ಸಲುವಾಗಿ ಗಗನಕ್ಕೆ ನೆಗೆದು ಸಮುದ್ರವನ್ನು ದಾಟುವ ಭರದಲ್ಲಿದ್ದ ಹನುಮಂತನಿಗೆ ಎದುರಾದವಳು ಸುರಸೆ ಎಂಬ ನಾಗಮಾತೆ. ದೇವತೆಗಳು ಅವನನ್ನು ತನಗೆ ಆಹಾರವಾಗಿ ಇತ್ತಿದ್ದಾರೆಂದು ತಿಳಿಸಿ, ತನ್ನ ಬಾಯೊಳಗೆ ಪ್ರವೇಶಮಾಡಲು ಹೇಳುತ್ತಾಳೆ. ಹನುಮಂತನು ಆಕೆಯ ಸವಾಲನ್ನು ಸ್ವೀಕರಿಸಿ ಚಮತ್ಕಾರದಿಂದ ಅವಳ ಬಾಯನ್ನು ಹೊಕ್ಕು ಹೊರಬಂದು ಜಯಶೀಲನಾಗುತ್ತಾನೆ. ತನ್ನ ಆಕಾಶಯಾನವನ್ನು ಮುಂದುವರೆಸುತ್ತಾನೆ.


ಆನಂತರ, ಮತ್ತೊಬ್ಬ ರಕ್ಕಸಿ ಸಿಂಹಿಕೆ ಹನುಮಂತನಿಗೆ ವಿಘ್ನವೊಡ್ಡುತ್ತಾಳೆ. ತನ್ನ ಇರವಿನ ಸುಳಿವೇ ಕೊಡದೆ, ಕುಟಿಲತೆಯಿಂದ ಹನುಮಂತನ ನೆರಳನ್ನು ಕಬಳಿಸಿ ನುಂಗಲು ಹವಣಿಸುತ್ತಾಳೆ.  ಹನುಮಂತ ಆಕೆಯನ್ನು ಸಂಹರಿಸಿ ವಿಜಯಶಾಲಿಯಾಗಿ ಲಂಕೆಯತ್ತ ಮುನ್ನುಗ್ಗುತ್ತಾನೆ.


ಕೊನೆಯಲ್ಲಿ ಅವನು ರಾವಣನಗರಿಯನ್ನು ಪ್ರವೇಶ ಮಾಡುವಾಗ ದ್ವಾರಪಾಲಕಿ ಲಂಕಿಣಿಯನ್ನು ಎದುರಿಸುತ್ತಾನೆ. ತನ್ನನ್ನು ಸೋಲಿಸದೆ ಒಳಗೆ ಪ್ರವೇಶವಿಲ್ಲವೆಂದು ಹೇಳಿ ಆಕೆ ಹನುಮಂತನ ಮೇಲೆ ಆಕ್ರಮಣ ಮಾಡಿದಾಗ, ಅವನು ಆಕೆಗೆ ಸೂಕ್ತವಾಗಿ  ಪ್ರಹಾರಮಾಡಿ ಸೋಲಿಸುತ್ತಾನೆ; ಮತ್ತು ಲಂಕಾಪ್ರವೇಶ ಮಾಡುತ್ತಾನೆ.

ಅಶೋಕವನದಲ್ಲಿದ ಸೀತಾದೇವಿಯನ್ನ ಹನುಮಂತ ಭೇಟಿ ಮಾಡಿ ಅವಳಿಗೆ ಶ್ರೀ ರಾಮ ನೀಡಿದ್ದ ಮುದ್ರೆಯುಂಗುರವನ್ನು ನೀಡಿದಾಗ ಸೀತೆಗೆ ನಂಬಿಕೆ ಬರುತ್ತದೆ. ಸೀತೆಯ ದುಃಖ ನಿವಾರಣೆಯಾಗುತ್ತೆ. ಸೀತೆ ತನ್ನ ಗುರುತಿಗಾಗಿ ರಾಮನಿಗೆ ಕೊಡಲು ತನ್ನ ಚೂಡಾಮಣಿಯನ್ನು ಹನುಮಂತನಿಗೆ ಕೊಡುತ್ತಾಳೆ. 

ಇಷ್ಟಕ್ಕೆ ಸಮಾಧಾನಗೊಳ್ಳದ ಹನುಮಂತ ರಾವಣನ ಸೇನೆಯೊಡನೆ ಏಕಾಂಗಿಯಾಗಿ ಹೋರಾಡಿ ರಾವಣನ ಆಸ್ಥಾನವನ್ನ ತಲಪುತ್ತಾನೆ.  ರಾವಣನ ಆಜ್ಞೆಯ ಮೇರೆಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲಾಗುತ್ತದೆ. ಧೀರನಾದ ಹನುಮಂತನನ್ನು ಬೆಂಕಿ ಏನೂ ಮಾಡುವುದಿಲ್ಲ. ತನ್ನ ಬಾಲಕ್ಕೆ ಹಚ್ಚಿದ್ದ ಬೆಂಕಿಯಿಂದ ಆಂಜನೇಯ ಇಡೀ ಲಂಕಾ ಪಟ್ಟಣವನ್ನೇ ಸುಟ್ಟು  ಬೂದಿ ಮಾಡುತ್ತಾನೆ. ನೋಡಿದ್ರ ಹೇಗಿದೆ ನಮ್ಮ ಹನುಮಂತನ ಪರಾಕ್ರಮ?

ಪವನ ಪುತ್ರ ಹನುಮಾನಾಕಿ........ ಜೈ 

ಅಂಜನಿ ಪುತ್ರ  ಹನುಮಾನಾಕಿ ---------------ಜೈ 

ಶ್ರೀ ರಾಮಧೂತ ಹನುಮಾನಾಕಿ........ ಜೈ 

ಹನುಮಂತನ ಪರಮಭಕ್ತರಲ್ಲಿ ಅಗ್ರಗಣ್ಯರು ಅಂದ್ರೆ ನಮ್ಮ ತುಳಸಿದಾಸರು.  ನಿಮಗೆಲ್ಲಾ ತಿಳಿದಿರುವಂತೆ ತುಳಸಿದಾಸರು "ರಾಮಚರಿತ ಮಾನಸ" ಎಂಬ ಮಹಾನ್ ರಾಮಾಯಣ ಕಾವ್ಯವನ್ನು ಬರೆದ ಮಹಾನ್ ರಾಮಭಕ್ತರು. ರಾಮಚರಿತ ಮಾನಸ "ಅವ್ಧಿ" ಭಾಷೆಯಲ್ಲಿ ಇದೆ.  ಅವ್ಧಿ ಎಂಬುದು ಹಿಂದಿಯ ಒಂದು ಉಪಭಾಷೆ. ಅಯೋಧ್ಯಾ ಪ್ರಾಂತ್ಯದ ಸುತ್ತಾ ಮಾತನಾಡುವ ಭಾಷೆಯೇ ಅವ್ಧಿ ಭಾಷೆ. 

ತುಳಸಿ ದಾಸರು ತಮ್ಮ ಇಡೀ ಜೀವಿತ ಕಾಲವನ್ನು ಕಳೆದದ್ದು ವಾರಾಣಸಿಯಲ್ಲಿ.  ಅವರು ತಮ್ಮ ರಾಮಚರಿತ ಮಾನಸವನ್ನು ರಚಿಸಿದ್ದು ವಾರಣಾಸಿಯಲ್ಲೇ. ಹನುಮಂತನ ಪರಮಭಕ್ತರಾದ ತುಳಸಿದಾಸರಿಗೆ ಸಾಕ್ಷಾತ್ ಹನುಮಂತನೇ ಪ್ರತ್ಯಕ್ಷನಾಗಿ ಆಶೀರ್ವದಿಸಿದ್ದೂ ಅದೇ ವಾರಣಾಸಿಯ ಗಂಗಾ ನದಿಯ ತಟದಲ್ಲೇ.  ಅದೇ ಸ್ಥಳದಲ್ಲೇ ತುಳಸೀದಾಸರೇ ನಿರ್ಮಾಣ ಮಾಡಿದಂತಹ ದೇವಸ್ಥಾನವೇ "ಸಂಕಟ್ ಮೋಚನ ಮಂದಿರ್." ನಿಮ್ಮ ಮುಂದಿನ ಕಾಶೀಯಾತ್ರೆಯ ಸಮಯದಲ್ಲಿ ಸಂಕಟ ಮೋಚನ ಮಂದಿರಕ್ಕೆ ಹೋಗಿ ನಮ್ಮ ಹನುಮಂತನ ಪ್ರಾರ್ಥನೆಯನ್ನು ಮಾಡುವುದನ್ನು ಮರೆಯಬೇಡಿ. 

ತುಳಸಿದಾಸರು ರಚನೆ ಮಾಡಿರುವಂತ "ಹನುಮಾನ್ ಚಾಲೀಸಾ" ಎಂಬ ಹನುಮಂತನ ಸ್ತೋತ್ರವನ್ನು ಭಾರತ ದೇಶದ ಎಲ್ಲಾ ಹನುಮಂತನ ಭಕ್ತರು ಪಠಿಸುತ್ತಾರೆ. ಹನುಮಾನ್ ಚಾಲೀಸಾ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುವುದೆಂಬೆದು ನಮ್ಮೆಲ್ಲರ ದೃಢವಾದ ನಂಬಿಕೆ. ಅದಕ್ಕೆ ತುಳಸೀದಾಸರೇ ಸಾಕ್ಷಿ. 

ತುಳಸೀದಾಸರ  ಮಹಿಮೆಗಳನ್ನು ಕೇಳಿದ ಅಂದಿನ ರಾಜನೊಬ್ಬ  ತುಳಸೀದಾಸರನ್ನು ತನ್ನ ಆಸ್ಥಾನಕ್ಕೆ ಬರುವಂತೆ ಆಜ್ಞೆ ಮಾಡಿದನಂತೆ. "ನಾನು ರಾಮಭಕ್ತ ಮಾತ್ರ, ಯಾವ ರಾಜನ  ಆಸ್ಥಾನಕ್ಕೂ ಬರಲಾರೆ" ಎಂದು ರಾಜಾಜ್ಞೆಯನ್ನು ತುಳಸಿದಾಸರು ಧಿಕ್ಕರಿಸಿದರಂತೆ. ಕೋಪಗೊಂಡ ರಾಜ ತುಳಸೀದಾಸರನ್ನು ತನ್ನ ರಾಜಧಾನಿಯಲ್ಲಿ  ಬಂಧಿಸಿಟ್ಟನಂತೆ. ಧೈರ್ಯಗೆಡದ ತುಳಸಿದಾಸರು ಜೈಲಿನಲ್ಲೇ ಹನುಮಾನ್ ಚಾಲೀಸಾ ಸ್ತೋತ್ರವನ್ನು ರಚಿಸಿ, ೪೦ ದಿನಗಳ ಕಾಲ ಪ್ರತಿನಿತ್ಯ ಹನುಮಂತನನ್ನು ಭಜಿಸದರಂತೆ. ೪೦ ದಿನಗಳು ಕಳೆಯುತ್ತಲೇ, ಇಡೀ ರಾಜಧಾನಿಯ  ತುಂಬಾ ಕಪಿಗಳು ಕಾಣಿಸಿಕೊಂಡು ತಮ್ಮ ಹಾವಳಿಯನ್ನು ಶುರುಮಾಡಿಕೊಂಡವಂತೆ. ಕಪಿಗಳ ಕಾಟದಿಂದ ರಾಜನ  ಅರಮನೆಯೇ ತತ್ತರಿಸಿ ಹೋಗಿತ್ತಂತೆ. ಭಕ್ತಮಹಾಶಯರೆ, ಈ ಕಪಿಗಳ ಕಾಟವೇ ಹನುಮಂತನ ಮಹಿಮೆ ಎಂಬುದನ್ನು ನಾನು ನಿಮಗೇನು ಹೇಳಬೇಕಾಗಿಲ್ಲ. 

ಕಪಿಗಳ ಕಾಟದಿಂದ ಪರಿಹಾರದ ಮಾರ್ಗವನ್ನು ತಿಳಿಯಲು ಆ ರಾಜ  ತನ್ನ ಆಸ್ಥಾನದ ಪಂಡಿತರೊಂದಿಗೆ ಸಮಾಲೋಚಿಸಿದಾಗ, ಆಸ್ಥಾನದ ಪಂಡಿತರು ಬಂಧನದಲ್ಲಿದ್ದ ತುಳಸೀದಾಸರ ಕಡೆ ಬೊಟ್ಟು ಮಾಡಿದರಂತೆ. ತನ್ನ ತಪ್ಪಿನ ಅರಿವಾದ ಆ ರಾಜ ತುಳಸೀದಾಸರ ಕ್ಷಮೆ ಕೇಳಿ ಅವರನ್ನು  ಬಂಧಮುಕ್ತರನ್ನಾಗಿಸಿದನಂತೆ. ತುಳಸಿದಾಸರು ಮತ್ತೆ ಹನುಮಂತನನ್ನು ಪ್ರಾರ್ಥಿಸಿದಾಗ ಆ ಪಟ್ಟಣ ಕಪಿಗಳ ಕಾಟದಿಂದ ಮುಕ್ತಿಯನ್ನು ಪಡೆಯಿತಂತೆ. ನೋಡಿದ್ರಾ ನಮ್ಮ ಹನುಮಾನ್ ಚಾಲಿಸದ ಮಹಿಮೆಯನ್ನು. 

ಈಗ ಹನುಮಾನ್ ಚಾಲಿಸದ ಸ್ತೋತ್ರವನ್ನು ಕೇಳೋಣ. 

-----------------------------------------

-------------------------------------------------

 ಹನುಮಾನ್ ಚಾಲಿಸದ ಸ್ತೋತ್ರದಲ್ಲಿ ತುಳಸಿದಾಸರು ತಾವೊಬ್ಬ ಮಹಾನ್ ವಿಜ್ಞಾನಿ ಎಂಬದನ್ನು ಪ್ರಸ್ತುತಪಡಿಸಿದ್ದಾರೆ. ಹೇಗೆ ಅಂತೀರಾ?

ಭೂಮಿಗೂ ಸೂರ್ಯನಿಗೂ ಇರುವ ದೂರ ಎಷ್ಟು ಎಂಬುದರ ನಿಖರವಾದ ಮಾಹಿತಿ ಹನುಮಾನ್ ಚಾಲಿಸದಲ್ಲಿ ಅಡಕವಾಗಿದೆ ಎಂದರೆ ತಮಗೆ ಆಶ್ಚರ್ಯವಾಗಬಹುದು. 

ನಿಮಗೆಲ್ಲಾ ತಿಳಿದಿರುವಂತೆ....... ಬಾಲಕ ಹನುಮಂತ ಒಮ್ಮೆ ಸೂರ್ಯನನ್ನೇ ಹಣ್ಣು ಎಂದು ತಿಳಿದು, ಅವನನ್ನು ಪಡೆಯಲು ಆಕಾಶಕ್ಕೆ ಹಾರಿದ್ದನಂತೆ. ಆ ಘಟನೆಯ ವರ್ಣನೆಯನ್ನು ತುಳಸಿದಾಸರು ತಮ್ಮ ಹನುಮಾನ್ ಚಾಲಿಸದಲ್ಲಿ ಹೀಗೆ ಹಾಡಿದ್ದಾರೆ. 

"ಯುಗ ಸಹಸ್ರ ಯೋಜನಾ ಪರ ಭಾನು 

ಲೀಲ್ಯಾ ತಹಿ ಮಧುರ ಫಲ ಜಾನು"

ಇಲ್ಲೇ ನೋಡಿ ನಮ್ಮ ತುಳಸೀದಾಸರ ವೈಜ್ಞಾನಿಕ ಗುಣಾಕಾರದ ಪರಿಚಯ ನಮಗಾಗುವುದು. ಯುಗ ಎಂದರೆ ನಮ್ಮ ಪುರಾಣಗಳಲ್ಲಿ ೧೨೦೦೦ ವರ್ಷಗಳಷ್ಟು ಎನ್ನುತ್ತಾರೆ. ಅಂದರೆ ಯುಗ ಎಂಬ ಪದ ೧೨೦೦೦ ಸಂಖ್ಯೆಯ ಪ್ರತೀಕ.  ಸಹಸ್ರ ಎಂದರೆ ೧೦೦೦ ಎಂಡಾರ್ಟ. ಯೋಜನಾ ಎಂದಷ್ಟೇ ೮ ಮೈಲಿ ಅಥವಾ ೧೨. ೮  ಕಿಲೋಮೀಟರ್ ಎಂದಾಗತ್ತದೆ. "ಯುಗ ಸಹಸ್ರ ಯೋಜನಾ" ಎಂದರೆ ೧೨೦೦೦ X ೧೦೦೦ X ೧೨. ೮ = ೧೫೩ ದಶಲಕ್ಷ ಅಥವಾ ೧೫೩ ಮಿಲಿಯನ್ ಕಿಲೋಮೀಟರ್ಗಳು. 

ತುಳಸೀದಾಸರನಂತರ ಶತಮಾನಗಳು ಕಳೆದ ಮೇಲೆ ಬಂದಂತಹ ಖಗೋಳ ಶಾಸ್ತ್ರಜ್ಞರು ಸಂಶೋಧನೆ ನಡೆಸಿ ಭೂಮಿಗೂ ಸೂರ್ಯನಿಗೂ ಇರುವ ದೂರ ೧೫೩ ಮಿಲಿಯನ್ ಕಿಲೋಮೀಟರ್ಗಳಷ್ಟೇ ಎಂದು ದೃಢಿಕರಿಸಿದ್ದಾರೆ. 

ತುಳಸೀದಾಸ, ಆರ್ಯಭಟ, ಶುಶ್ರುತ, ಶಾಕುಂತಲ ದೇವಿ ಅಂತಹ ಮಹಾನ್ ವಿಜ್ಞಾನಿ ಪುತ್ರರನ್ನು ಪಡೆದ ನಮ್ಮ ಭಾರತ ದೇಶ ಎಷ್ಟು ಮಹಾನ್ ದೇಶ ಅಲ್ಲವೇ? 

ಪರಮಾತ್ಮನ ಮುಂದಿನ  ಅವತಾರ ಕೃಷ್ಣಾವತಾರ.  

ಪುರಂದರದಾಸರು ಕೃಷ್ಣನ ಪರಮಭಕ್ತರು. ಅವರು ಒಮ್ಮೆ ನಮ್ಮ ಬೆಂಗಳೂರು ಸಮೀಪದ ಚನ್ನಪಟ್ಟಣದ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದಿದ್ದರಂತೆ. ಅಪ್ರಮೇಯ ಅನ್ನುವುದು ಶ್ರೀ ಕೃಷ್ಣನ ಮತ್ತೊಂದು ಹೆಸರು.. ನೀವೆಲ್ಲ ನೋಡಿರಬಹುದು. ಅಂಬೆಗಾಲ್ ಕೃಷ್ಣನ ಸುಂದರವಾದ ಮೂರ್ತಿ ಆ ದೇವಸ್ಥಾನದಲ್ಲಿದೆ. ಆ ಅಂಬೆಗಾಲ್ ಕೃಷ್ಣನ ಮೂರ್ತಿಯನ್ನು ನೋಡಿ ಭಕ್ತಿಪರವಶರಾದ ಪುರಂದರದಾಸರು ಆ ದೇವಸ್ತಾನದಲ್ಲೇ ಕುಳಿತು "ಜಗದೋದ್ಧಾರನ ಆಡಿಸದೆಳೆಶೋದೆ" ಎಂಬ ದೇವರನಾಮವನ್ನು ರಚಿಸಿ ಹಾಡಿದರಂತೆ. ಆ ದೇವರನಾಮದಲ್ಲಿ ದಾಸರು "ಅಪ್ರಮೇಯ" ಎಂಬ ಕೃಷ್ಣನ ಹೆಸರನ್ನು ಬಳಸಿರುವುದು ವಿಶೇಷ.  

ಜಗದೋದ್ಧಾರನ ದೇವರನಾಮದ ಮತ್ತೊಂದು ವಿಶೇಷ ಏನಪ್ಪಾ ಎಂದ್ರೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು ತಮ್ಮ ೧೯೬೬ರ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಲು ಆರಿಸಿಕೊಂಡಿದ್ದು ಇದೇ ದೇವರನಾಮವನ್ನೇ. 

ಜಗದೋದ್ಧಾರನ ದೇವರನಾಮ ಕಾಪಿ ರಾಗದ ಕೃತಿ. ಈ ದೇವರನಾಮಕ್ಕೆ ಕಾಪಿ ರಾಗದ ರಾಗಸಂಯೋಜನೆ ಮಾಡಿದವರು ಯಾರು ಗೊತ್ತೇ? ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ....... 

--------------------------------

ಅವರೇ ಬಿ.ಎಸ್. ರಾಜ್ ಅಯಂಗಾರ್.  ಕರ್ನಾಟಕದ ಸುಪ್ರಸಿದ್ದ ಹಾಡುಗಾರರು. ಅವರ ಹಳೆಯ ಗ್ರಾಮಫೋನ್ ರೆಕಾರ್ಡಿನ ಜಗದೋದ್ಧಾರನೆ ದೇವರನಾಮವನ್ನು ತಾವುಗಳು ಈಗಲೂ ಗೂಗ್ಲ್ನಲ್ಲಿ ಹುಡುಕಿ ಕೇಳಬಹುದು. 

ಈಗ ಅಂತಹ ಭಕ್ತಿಭಾವದ ದೇವರನಾಮವನ್ನು ಕೇಳೋಣ. 

ಜಗದ್ದೋಧಾರನ ಆಡಿಸಿದಳೇಶೋದೆ........ 

ಈಗ ಕೃಷ್ಣನ ಬಾಲ ಲೀಲೆಯ ಕಥೆಯೊಂದನ್ನು ನನ್ನ ತಂಗಿ  ಪ್ರಜ್ಞಾ ಹೇಳ್ತಾಳೆ. 


ಶ್ರೀ ರಾಮ ಮರ್ಯಾದಾ ಪುರುಷೋತ್ತಮನಾದರೆ, ಕೃಷ್ಣನನ್ನು ಮೋಹನಾಂಗ ಚತುರೋತ್ತಮ ಎನ್ನಬಹುದು.  

ಕೃಷ್ಣ ತನ್ನ ಮಾವನಾದ ಕಂಸನನ್ನ ಸಂಹಾರ ಮಾಡಿದ್ದೂ ಚತುರ ಬುದ್ಧಿಯಿಂದಲೇ. 

ಕೃಷ್ಣ ಭೀಮನ ಕೈಯಲ್ಲಿ ಜರಾಸಂಧನ ಸಂಹಾರ ಮಾಡಿಸಿದ್ದು ಚತುರತೆಯಿಂದಲೇ. 

ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಜಯವನ್ನು ಗಳಿಸಿಕೊಟ್ಟಿದ್ದೂ ಚತುರತೆಯಿಂದಲೇ. 

ಕೃಷ್ಣನ ಚತುರತೆಯ ವರ್ಣನೆಯನ್ನ ಕನಕದಾಸರು ಸೊಗಸಾಗಿ ಹಾಡಿದ್ದಾರೆ. 

ಈತಾನೀಗ ವಾಸುದೇವನೋ 

 ----------------------------------- ಲೋಕದೊಡೆಯ 

ಈತನೀಗ ವಾಸುದೇವ-------------

ಈ ಸಮಸ್ತ ಲೋಕದೊಡೆಯ 

ದಾಸಗೊಲಿದು ತೇರನೇರಿ ತೇಜಿಪಿಡಿದು ನಡೆಸಿದಾತ 

ಈತಾನೀಗ ವಾಸುದೇವನೋ...... 


ಕ್ರೂರನಾದ ಫಣಿಪ ಬಾಣ 

ತರಣಿಜನು ನಿರೀಕ್ಷಿಸಿ ಆಗ 

ವೀರನೆಜ್ಜೆಯೆಸುಗೆ ಒಪ್ಪುದನು  ಈಕ್ಷಿಸಿ 

ಧಾರಿಣಿಯ ಪದದೊಲೌಕಿ 

ಚರಣಭಜಕ ನರನ ಕಾಯ್ದ 

ಭಾರಕಂಠನಾದ ದೇವ

ಈತ ನೋಡಿರೋ-------------


ಈತನೀಗ ವಾಸುದೇವನೋ........ 

"ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡಿಸಿದಾತ" ಅಂತ ಕನಕದಾಸರು ಕೃಷ್ಣನ್ನು ಹಾಡಿ  ಹೊಗಳಿದ್ದಾರೆ. ಭಕ್ತನಾದ ಅರ್ಜುನನ ರಕ್ಷಣೆಗೆ ನಿಂತು ಅರ್ಜುನನ ಸಾರಥಿಯಾದವನು ಕೃಷ್ಣ.  ಭಕ್ತರಿಗಾಗಿ ಕೃಷ್ಣ ಏನು ಬೇಕಾದರೂ ಮಾಡಬಲ್ಲನು ಎಂಬುದಕ್ಕೆ ಇದು ಸರಿಯಾದ ಉದಾಹರಣೆ.   

ಮಹಾಭಾರತದ ಯುದ್ಧಕ್ಕೆ ರಣರಂಗ ಸಿದ್ದವಾಗಿರುತ್ತದೆ. ಪಾಂಡವರ  ಮತ್ತು ಕೌರವರ ಸೈನ್ಯಗಳು ರಣರಂಗದಲ್ಲಿ ಮುಖಾಮುಖಿಯಾಗಿ ನಿಂತಿರುತ್ತವೆ. ಪಾರ್ಥಸಾರಥಿ ಕೃಷ್ಣ ಅರ್ಜುನನ ರಥವನ್ನು ರಣರಂಗಕ್ಕೆ ತಂದು ನಿಲ್ಲಿಸಿರುತ್ತಾನೆ. ಅದೇಕೋ ಅರ್ಜುನನ ಮನಸ್ಸು ಚಂಚಲಗೊಳ್ಳುತ್ತದೆ.  ಅರ್ಜುನ ಹೇಳುತ್ತಾನೆ. "ಕೃಷ್ಣ ಅಲ್ಲಿ ನೋಡು.  ನಮ್ಮ ವೈರಿಗಳ ಕಡೆ ಇರುವವರೆಲ್ಲಾ ನಮ್ಮ ಅಣ್ಣತಮ್ಮಂದಿರೇ . ನಮ್ಮ ವೈರಿಗಳ ಕಡೆ ಇರುವವರೆಲ್ಲಾ ನಮ್ಮ ಅಜ್ಜ-ತಾತಂದಿರುಗಳೇ.  ನಮ್ಮವರ ವಿರುದ್ಧವೇ ನಾನು ಹೇಗೆ ಹೋರಾಡಲಿ. ನನ್ನ ಕೈಗಳೆಲ್ಲಾ ಸೋಲುತ್ತಿವೆ. ನಾನು ಯುದ್ಧ ಮಾಡಲಾರೆ" ಎನ್ನುತ್ತಾ ತನ್ನ ಬಿಲ್ಲು-ಬಾಣಗಳನ್ನು ತಳಗಿಟ್ಟುಬಿಡುತ್ತಾನೆ. 

ಆಗ ಕೃಷ್ಣ ಶ್ರೀಮದ್ ಭಗವದ್ಗೀತೆಯನ್ನು ಅರ್ಜುನನಿಗೆ ಭೋದಿಸುತ್ತಾನೆ. 

"ಕರ್ಮಣ್ಯೇವಾಧಿಕಾರಸ್ತೆ 

ಮಾ ಫಲೇಷು ಕದಾಚನ" ಎಂಬುದು ಭಗವದ್ಗೀತೆಯ ಸರ್ವೋಚ್ಛ ವಾಣಿ. 

ಕೃಷ್ಣ ಹೇಳುತ್ತಾನೆ "ಅರ್ಜುನ, ಕರ್ಮ, ಅಂದರೆ ಯುದ್ಧ ಮಾಡುವುದು ಮಾತ್ರ ನಿನ್ನ ಕರ್ತವ್ಯ.  ಅದರ ಫಲಗಳ ಚಿಂತೆ ನಿನಗೆ ಬೇಡ."  ಕೃಷ್ಣನ ಈ ವಾಣಿ ನಮಗೂ, ನಿಮಗೂ ಇಂದಿನ ಕಾಲಕ್ಕೂ ಸತ್ಯ. ಸಭಿಕರುಗಳೇ, ಏನಂತೀರಿ?  

ಕೃಷ್ಣನ ವಿಶ್ವರೂಪ ದರ್ಶನವಾದ ಮೇಲೆ ಅರ್ಜುನ ಯುದ್ಧಕ್ಕೆ ಸಿದ್ಧನಾಗುತ್ತಾನೆ. 

ಮಹಾಭಾರತದ ಯುದ್ಧದ ಸನ್ನಿವೇಶದಲ್ಲಿ ಕೃಷ್ಣ ನಡೆಸಿದ ಚಮತ್ಕಾರಗಳ ವರ್ಣನೆಯನ್ನು ಮಾಡುತ್ತಾ ಕನಕದಾಸರು ಹೇಳ್ತಾರೆ....... 

ಧನುಜೆಯಲ್ದನಣ್ಣನಯ್ಯನ-------------(ಈ ನುಡಿಯನ್ನು ಮತ್ತೆ ಹಾಡಬೇಕು---)

ಈ ನುಡಿಯ ಅರ್ಥ ಏನು?

ಮಹಾಭಾರತದ ಯುದ್ಧದಲ್ಲಿ ಕ್ರೂರನಾದಂತಹ ಜಯದ್ರಥ ಅರ್ಜುನನ ಮಗನಾದ ವೀರ ಅಭಿಮನ್ಯುವನ್ನು ಕೊಂದಿರುತ್ತಾನೆ. ಕೋಪಗೊಂಡ ಅರ್ಜುನ ಜಯದ್ರಥನನ್ನು ನಾಳೆ ಸೂರ್ಯಾಸ್ತವಾಗುವುದಕ್ಕೆ ಮುಂಚೆ ಕೊಲ್ಲುವುದಾಗಿಯೂ, ಹಾಗೆ ಮಾಡಲಾಗದಿದ್ದರೆ ತಾನೇ ಅಗ್ನಿಪ್ರವೇಶ ಮಾಡಿ ಸಾಯುವುದಾಗಿ ಶಪಥ ಮಾಡಿರುತ್ತಾನೆ. ಅರ್ಜುನನ ಶಪಥದ ಬಗ್ಗೆ ಕೇಳಿದ ದುರ್ಯೋಧನ ಮಾರನೆಯದಿನ ತನ್ನ ಬಾವನಾದ ಜಯದ್ರಥನನ್ನು ಬಚ್ಚಿಡುತ್ತಾನೆ. ಸಂಜೆಯಾಗಿ ಬಿಟ್ಟರೆ ಅರ್ಜುನನ ಶಪಥಕ್ಕೆ ಭಂಗವುಂಟಾಗಿ ಅವನು ಅಗ್ನಿಪ್ರವೇಶ ಮಾಡಬೇಕಾದ ಅಪಾಯ ಒದಗುತ್ತದೆ ಎಂದು ಯೋಚಿಸಿದ ಕೃಷ್ಣ, ಸಂಜೆಗೆ ಮುನ್ನವೇ ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮುಚ್ಚುತ್ತಾನೆ. ಸಂಜೆಯಾಯಿತೆಂದು ಭ್ರಮೆಗೊಂಡ ದುರ್ಯೋಧನ ತನ್ನ ಭಾವ ಜಯದ್ರಥನೊಂದಿಗೆ ಕೃಷ್ಣಾರ್ಜುನರೆದುರು ಬಂದು ನಿಲ್ಲುತ್ತಾನೆ. "ಅರ್ಜುನ, ಸಂಜೆಯಾಗಿದೆ. ಸಂಜೆಗೆ ಮುಂಚೆ ಜಯದ್ರಥನನ್ನು ನೀನು ಕೊಲ್ಲಲಾಗಲಿಲ್ಲ.  ಕೂಡಲೇ ಅಗ್ನಿಪ್ರವೇಶ ಮಾಡುವಂತವನಾಗು" ಎಂದು ಗಹಗಹಿಸಿ ನಗುತ್ತಾನೆ. ಚತುರ ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಂದ ಸರಿಸಿ, "ಆಗೋ ನೋಡು ಅರ್ಜುನ, ಇನ್ನೂ ಸೂರ್ಯ ಮುಳುಗಿಲ್ಲ. ಬಿಸಿಲು ಗಿಡಮರಗಳ ಮೇಲೆ ಇನ್ನು ಇದೆ. ಕೂಡಲೇ ಜಯದ್ರಥನ ಮೇಲೆ ಬಾಣವನ್ನು ಪ್ರಯೋಗಿಸು" ಎಂದು ಆಜ್ಞಾಪಿಸುತ್ತಾನೆ. ಎಚ್ಚರಗೊಂಡ ಅರ್ಜುನ ಎದುರಿಗೆ ಇದ್ದ ಜಯದ್ರಥನ ಮೇಲೆ ಬಾಣವನ್ನು ಪ್ರಯೋಗಿಸಿ ಅವನನ್ನು ಕೊಂದು  ತನ್ನ ಶಪಥವನ್ನು ಉಳಿಸಿಕೊಳ್ಳುತ್ತಾನೆ. ಈ ಚಮತ್ಕಾರ ಚತುರ ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯವಾಯಿತು ಎಂಬ ವಿಷಯವನ್ನು ಕನಕದಾಸರು ತಮ್ಮ ಹಾಡಿನಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. 

ಕನಕದಾಸರು ಮುಂದೆ ಹೀಗೆ ಹಾಡ್ತಾರೆ. 

ಕ್ರೂರನಾದ ಫಣಿಪಬಾಣ......... (ಈ ನುಡಿಯನ್ನ ಮತ್ತೊಮ್ಮೆ ಹಾಡುವುದು)

ಮಹಾಭಾರತದ ಯುದ್ಧದಲ್ಲಿ ಒಮ್ಮೆ ಕರ್ಣ ಅರ್ಜುನನ ಮೇಲೆ ಸರ್ಪಾಸ್ತ್ರವನ್ನು ಪ್ರಯೋಗಿಸುತ್ತಾನೆ.  ಸರ್ಪಾಸ್ತ್ರವನ್ನು ಎದುರಿಸುವ ತಂತ್ರ ಅರ್ಜುನನಿಗೆ ಗೊತ್ತೇ ಇರೋಲ್ಲ. 

ತೊಟ್ಟ ಬಾಣವನ್ನ ಮಹಾರಥಿ ಕರ್ಣ ಮತ್ತೊಮ್ಮೆ ತೊಡುವುದಿಲ್ಲಾ ಎಂಬುದು ಕೃಷ್ಣನಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ  ಕೃಷ್ಣ  ಚತುರತೆಯಿಂದ ಭೂಮಿಯನ್ನು ತನ್ನಕಾಲಿನ ಹೆಬ್ಬೆಟ್ಟಿನಿಂದ ಒತ್ತುತಾನೆ.  ಭೂಮಿ  ಕುಸಿದು ಅರ್ಜುನನ ರಥ ಸ್ವಲ್ಪ ತಳಗೆ ಹೋಗ್ಬಿಡುತ್ತೆ.  ಅರ್ಜುನನ ಕತ್ತನ್ನು ಕತ್ತರಿಸಬಹುದಾದ ಸರ್ಪಾಸ್ತ್ರ ಅವನ ಕೀರಿಟವನ್ನು ಮಾತ್ರ ಹಾರಿಸಿಕೊಂಡು ಹೋಗ್ಬಿಡುತ್ತೆ.  ಭಕ್ತನಾದ ಅರ್ಜುನ ಬದುಕುಳಿಯುತ್ತಾನೆ. 

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ.......

yadā yadā hi dharmasya glānir bhavati bhārata

 abhyutthānam adharmasya tadātmānaṁ sṛijāmyaham

- paritrāṇāya sādhūnāṁ vināśhāya cha duṣhkṛitām

 dharma-sansthāpanārthāya sambhavāmi yuge yuge

ಯಾವಾಗ ಯಾವಾಗ ಪ್ರಪಂಚದಲ್ಲಿ ಧರ್ಮಕ್ಕೆ ಸಂಕಟ ಬರುತ್ತದೋ, ಅಧರ್ಮ ತಂಡವಾಡುತ್ತದೋ, ಅಂತಹ ಸಮಯದಲೆಲ್ಲ ನಾನು ಭೂಮಿಯ ಮೇಲೆ ಅವತರಿಸುತ್ತೇನೆ. ಧರ್ಮವನ್ನು ಎತ್ತಿ ಹಿಡಿಯುತ್ತೇನೆ ಎಂಬುದು ಶ್ರೀ ಕೃಷ್ಣನ ಸಂದೇಶ. 

ಈಗ ಕೃಷ್ಣನ ಸ್ಮರಣೆಯನ್ನು ಮಾಡೋಣ. 

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ. 

ಬೌಧಾವತರ ಮತ್ತು ಕಲ್ಕ್ಯಾವತಾರಗಳು ದಶಾವತಾರದ ಮುಂದಿನೆರಡು ಅವತಾರಗಳು.

ಸಭಿಕರೆ, ಇಲ್ಲಿಗೆ  ನಮ್ಮ ದಶಾವತಾರದ ಹರಿಕಥೆ ಮುಗಿದಿದೆ. ಒಂದು ಮಾತು. ನಾವು ಇಂದು ಹಾಡಿದ ಅಣ್ಣಮಾಚಾರ್ಯರ ಮತ್ತು ತುಳಸೀದಾಸರ ಕೀರ್ತನೆಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವವರು ವಿದುಷಿ ರಕ್ಷಾ ಮಹೇಂದ್ರರವರು, ಅವರು ನಮ್ಮ ಚಿಕ್ಕಮ್ಮ. 

 ದಶಾವತಾರದ ಕಥೆಯೇನೋ ಮುಗಿಯಿತು. ಹಾಗಂತ ಪರಮಾತ್ಮ ಮುಂದೆ ಅವತರಿಸೇ ಇಲ್ಲ ಅಂತ ಹೇಳಿದರೆ, ಅದು ತಪ್ಪು. ಈಗಲೂ ಪರಮಾತ್ಮ ಯಾವುದೊ ರೂಪದಲ್ಲಿ ಅವತರಿಸಿ ನಮ್ಮನೆಲ್ಲ ಕಾಪಾಡುತ್ತಾ ಇದ್ದಾನೆ ಎಂಬುದು ನಮ್ಮೆಲ್ಲರ ನಂಬಿಕೆ.  ಏಕಪ್ಪಾ ಅಂದ್ರೆ, ಪರಮಾತ್ಮನೇ ಹೇಳಿದ್ದಾನಲ್ಲ "ಧರ್ಮ ಸಂಸ್ಥಾಪನಾರ್ತಾಯ ಸಂಭವಾಮಿ ಯುಗೇ ಯುಗೇ" ಅಂತ. ಅಂತಹ ಮಹಾನ್ ಪರಮಾತ್ಮನಿಗೆ ಈಗ ಮಂಗಳವನ್ನು ಹಾಡೋಣ. 


Pavamaana Suthudu Pattu, Pathara Vinthiya Mulagu 
Sri Ram Rupa Mulugu, Nitya Jaya Mangalam

Prahlad NaraDadhi, Bhaktulu Pogadu Sandhu
Sri Ram Rupa Mulugu, Nitya Jaya Mangalam

Rajeeva Nayana Thyaga, Rajathi Vinudhamaina
Sri Rama-rupa Mulugu, Nitya Jaya Mangalam

                                                                 -೦-೦-೦-೦-೦-೦-೦-೦-




 




start from.......

My humble namaskarams to all of you (folded hands).

I welcome you all to the second part of my harikatha on Dashavatara.

We were looking through Dashavatara of Mahavishnu, as narrated by Saint Annamacharya in one of his ever green kritis.

Start from....(with tala and action in the other hand)

itanikantimari..................and sing all pallavi lines with action.

And then pick up from below part.....

 Chedaraka kondala guhala vedakite srinarasimhudu unnadu

Telisi bhuna bhontharamuna vedakina trivikramakruti nilichinadi (sing throughout with tala and action in the other hand).

Annamacharya says, after searching through caves of valleys, I searched in the NABHOMANDALA, the vast sky (hand action in the form of gradual stretching of hands and looking up) and I again found Lord Venkateswara in the form of the gigantic Trivikrama! (hand action, waving both hands from top to bottom, and looking from top to bottom). When the most popular and generous King Maha Bali (hand action with right fist up)  became all powerful, Lord Vishnu had to incarnate as VAMANA  (one hand action, showing small sign). Little Vamana grew in size to the size of gigantic Trivikrama to contain King Maha Bali, and grant him immortality, by trampling him down to Patala.(show action of trampling down using your right hand).

 now sing following two lines....... (no tala and hand action only)

Telisi bhuna bhontharamuna vedakina trivikramakruti nilichinadi 

ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು 

Paluveerulalo vedakichoochite parasuramudokadainadu

ಹಲವು ವೀರರನ್ನೆಶ್ವಿಸಿ ನೋಡಿದೆಪರಶುರಾಮನೊಬ್ಬನಿರುವನು 

Annamacharya then says that he searched among all great warriors.  Again there, he found Lord Venkateswara in the form of greatest warrior Parashurama (show the action of axe placed on your right shoulder. eyes should indicate the warrior look), who transferred all his powers to Lord Rama. (show hand action of transferring).

now start singing all following three lines with tala and action in one hand.  appropriate expression in eye.............

elisi bhuna bhontharamuna vedakina trivikramakruti nilichinadi 

ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು 

Paluveerulalo vedakichoochite parasuramudokadainadu

ಹಲವು ವೀರರನ್ನೆಶ್ವಿಸಿ ನೋಡಿದೆಪರಶುರಾಮನೊಬ್ಬನಿರುವನು 

Talapuna shivudunu parvati vedakina taraka brahmamu raghavudu

What I can say about Ramayana? (hand action)........which is the greatest epic on this earth.  Ramayana was originally written in sanskrit by Saint Valmiki and subsequently thousands of poets (hand action) have written Ramayana in almost all languages of the world.  Kannada poet Lakshminarayana K, who is my grandfather (show action by touching your heart),  describes Lord Rama.

ವಾಲ್ಮೀಕಿ ರಾಮಾಯಣದ  ಹರಿಕಾರನಾದ 

ಕಬೀರರ ಕಾವ್ಯಾಮೃತಕೆ ತಾ ಧಾರೆಯಾದ 

ತ್ಯಾಗರಾಜರಿಗೆ ಜಗದಾನಂದ ಕಾರಕನಾದ 

ರಾಮಾಯಣ ದರ್ಶನದಿ ಕನ್ನಡದ ಕಂಪಾದ 

ನಮ್ಮ ಭಾವೈಕ್ಯತೆಯ ಗುಪ್ತಗಾಮಿನಿ ಅವನು 

(while reciting above poem, follow hand action as I have done in my video)

Thus Lord Rama is the spirit which binds "we Indians" (hand action touching the heart with both hands) together with the spirit of 'Unity in diversity'. (unity - show by hand action.  Right first up). (you can recite the with hand actions like I have done in the video sent.  You need not byheart this.  You can read from book, like I have read.  Just copy me it is enough.)

And Lord Rama was a great warrior, Maha veera! (show hand action)  He was not only capable of fighting for himself, but could lead a mighty army. (hand action all through).   Vedanta deshikar, the Tamil scholar describes the varlor of lord Rama in his Raghuveeragadhyam!

(Sing raghuveeragadhyam with action upto 'vimochana')

Thus Lord Rama (folded hands) is our role model and we respect him as MARYADAPURUSHOTHAMA, the ultimate gentleman.

Ramayan is also remembered for another great God HANUMAAN (your right hand will go near your right arm, as if you are holding a mace (GADE). glowing eyes and hanuman type of mouth). Even Lord Rama could not have conquered Ravana, but for the heroic acts of Hanumaan. 

We children are carried away by heroic acts of batsman, iron man, spiderman, superman and so on (action for each .......man).  But our real superman is our HANUMAAN (folded hands)! Let's pray Hanuman to bless us with strength and wisdom.

Shankara suvana, Kesari nandan

...........................

....Rama laxmana jaanaki jai bolo.....

(Soorygayathri style)


end of part 3

-0-0-0-0-0-0-0-

Start with 'Talapuna shivudunu parvati vedakina taraka brahmamu raghavudu

ಶಿವನ ಲೇಹರಿಯಲ್ಲಿ ಪಾವತಿ ಅರಸಿದ ತಾರಕ ಬ್ರಹ್ಮನೇ ರಾಘವನು 
Kelakula naavula mandala vedakina krishnudu ramudu nainaru

ಗೋವುಗಳ ಹಿಂಡಾಲಿ ಅರಸಿದರೆ ಬಲರಾಮ ಕೃಷ್ಣರೇ ಇರುವರು 

Itanikante mari daivamu kanamu yekkada vedakina nitade

and go on till 'annitikadaramu taane.......' (sing with tala and action in the other hand)

Annamacharya (Chitike action) now takes us towards Mahavishnu's 8th avatara, the Krishnavatara (flute action). If scholars have described Lord Rama as Maryadapurushothama (folded hands action), I would like to describe Lord Krishna, as CHATURA PURUSHOTHAMA (pointed right hand finger touching your head). I only pray to Lord Kirshna to come again today (show hands as if Krishna comes from heaven), to set right our country and its numerous problems (open your hands with action).

How can we visualise (touch your both eyes and open up arms) Lord Krishna? A God-child? A prankster?, Navaneeta Chora (show holding butter in left hand, and show eating in the right hand)?, a model lover, a divine hero or the universal supreme being (show your eye and hand action as if you have seen his vishwaroopa)!

Oothukaadu Venkata Subba Iyer, a great devotee of Lord Krishna welcomes Him  this way. 

taaLam: aadi
Composer: OotukkaaDu VenkaTasubbaiyyar

pallavi

swaagatam krishNaa caraNaagatam krishNaa
madhuraapuri sadanaa mridu vadanaa madhusoodana iha
(swaagatam)

anupallavi

bOga dapta sulabaa supushpa gandha kalaba
kastoori tilaka mahiba mama kaanta nanda gOpa kandha
(swaagatam)

sadhwini koppa style

https://www.youtube.com/watch?v=KQiYXXwPDYw&ab_channel=SadwiniKoppa

Krishna was not only the loving child of Yashoda (look at your lap, as if child krishna is resting on your lap, hold the child's head and tap (ತಟ್ಟುವುದು) him with the right hand), but he was the loving child of all mothers of nanda gokula. He was not only the lover who charmed Radha (show flute holding action), but he was the lover for 16,000 gopikas.

Now sing the CHARANA OF THE SONG AND COMPLETE IT with tala and hand action.

Lord Krishna also saved the world by killing (hand action) demons like Kamsa. He also helped pandavas to defeat the wicked Duryodhana and establish the rule of 'dharma.' (thumbs up action).

When confused Arjuna, declined to fight, Lord Krishna preached him the BHAGAVADGEETHA and showed him his vishwaroopa (hand to go up and eye action looking up).

Yada yada hi dharmasya glaanirbhavati bhaarat
Abhyutthaanam adharmasya tadaatmaanam srijaamyaham
Paritranaay saadhunaam vinaashaay cha dushkritaam
Dharm sansthaapanaarthaay sambhavaami yuge yuge

https://www.youtube.com/watch?v=LEyy4C50b4Q&ab_channel=VedicBox

Mahabharat style

This message is relevant for all youngster of today like all of us (show hands all round). "Keep doing your duties (point fingers towards the audience), don't be bothered about the results (waving of hands) . I will take care of all of you (protection action with both hands (like you have shown in first part)" Lord Krishna has taught us the way of life.

Now sing 

Kelakula naavula mandala vedakina krishnudu ramudu nainaru

Ponchi asurakanthalalo vedakina buddhavataram bainadu

ಅಸುರ ಸತಿಯರಲಿ ಹುಡುಕಿದರೆಬೌಧಾವತರವು ಇವನೇ 
Minchina kaalamu kadapata vedakina midati kalkyavataramu

ಮಿಂಚಿದ ಕಾಲದಲಿ ಉದಿಸಿದ ಕಲ್ಕ್ಯವತಾರವು ಇವನೇ 
Anchela jeevula lopala vedakina antharyamai merisenu

ಸರ್ವಜೀವಿ ಅಂತರ್ಯವ ಶೋಧಿಸಿದೊರಕಿದ ಜ್ಯೋತಿಯು  ಈತನೇ 
Yenchuka ihamuna paramuna vedakina eethade Sri Venkatavibhudu

ಇಹದಲಿ ಪರದಲಿ ಅರಸಿದರೆ ಇವನೇ ಶ್ರೀ ವೆಂಕಟ ಪ್ರಭುವು 

Itanikante mari daivamu kanamu yekkada vedakina nitade

Whether it is buddhavatara or Kalkyavatara, It is Lord venkateswara everywhere. Let Lord Venkateswara who has appeared on this earth in the form of DASHAVATHARAS, bless us all

Now sing the mangalam.  Ajji has sung and sent the mangalam. Sing the same way. (with action on one hand folding hands towards the end three lines).

-0-0-0-0-0-0-THE END-0-0-0-0-0-0-0-

 

No comments:

Post a Comment