Tuesday 2 November 2021

 ಸಮಸ್ತ ಬಾಂಧವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 

ಕನ್ನಡ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇನೆ. ದಿನ ನಿತ್ಯದ ಪ್ರಶ್ನೆಗಳ ಉತ್ತರವನ್ನು ನನ್ನ ವಾಟ್ಸಪ್ಪ್ಗೆ (my whatsapp)/fb messengerಗೆ  ನೇರವಾಗಿ ಕಳುಹಿಸಿ. ಗ್ರೂಪ್ನಲ್ಲೇ ಉತ್ತರಿಸಬೇಡಿ. ಪ್ರಶ್ನೆಯ ರಹಸ್ಯವೇ ಇಲ್ಲವಾಗುತ್ತದೆಂಬುದು ಹಲವರ ಅಭಿಪ್ರಾಯ. ಸರಿಯುತ್ತರ ನೀಡಿದ ಪ್ರಥಮರ ಭಾವ ಚಿತ್ರವನ್ನು, ಉತ್ತರದ ಹಿಂದಿನ ಮಹಾವ್ಯಕ್ತಿಯ ಜೊತೆಗೆ ಪ್ರಕಟಿಸಲಾಗುವುದು. 

ಸಿರಿಗನ್ನಡಂ ಗೆಲ್ಗೆ!


೧) ಡಾ. ರಾಜ್ ಕುಮಾರ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವರೆ? ಚರ್ಚಿಸಿ. 

೨) ಕನ್ನಡ ಕಾದಂಬರಿಗಾರ್ತಿ ತ್ರಿವೇಣಿಯವರ ಯಾವ ಕಾದಂಬರಿ ಮೊದಲ ಬಾರಿಗೆ ಚಲನ ಚಿತ್ರವಾಯಿತು?

೩) ಕನ್ನಡ ಚಿತ್ರ ರಂಗ ಮರೆಯಲಾಗದ ' ಎಂ. ವೆಂಕಟ ರಾಜು' ಯಾರು?

ನಿನ್ನೆಯ ಪ್ರಶ್ನೆಯ ಸರಿಯುತ್ತರ 

ಕಲ್ಪನಾ 

ಶಂಕರ್ ನಾಗ್ 

ಅಪ್ಪು 

ವಿಜೇತರು 

ಪಾರ್ವತಿ 

ಮೋಕ್ಷಗುಂಡಂ 


ಕನ್ನಡೋತ್ಸವ - ೨

 ಪ್ರಶ್ನೆಗಳ ಉತ್ತರ 

ನಿನ್ನೆಯ ಪ್ರಶ್ನೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತು, ಉನ್ನತ ಮಟ್ಟದ ಚರ್ಚೆ ನಡೆದಿದೆ. ಧನ್ಯವಾದಗಳು 

೧) ೧೯೫೪ರಲ್ಲಿ ತೆರೆ ಕಂಡ ರಾಜ್ ಕುಮಾರ್ ಅಭಿನಯದ ಚಿತ್ರ 'ಬೇಡರ ಕಣ್ಣಪ್ಪ' ಅಭೂತಪೂರ್ವ ಯಶಸ್ಸು ಕಂಡಿದ್ದು ಈಗ ಇತಿಹಾಸ. ಬೇಡರ ಕಣ್ಣಪ್ಪ ಚಿತ್ರ ತೆಲುಗಿನಲ್ಲಿ 'ಶ್ರೀ ಕಾಳಹಸ್ತಿ ಮಹಾತ್ಮೆ' ಎಂಬ ಹೆಸರಿನಲ್ಲಿ, ಹೊಸ ಚಿತ್ರವಾಗಿ ಅದೇ ವರ್ಷ ಮರು ನಿರ್ಮಾಣಗೊಂಡಿತ್ತು. ತೆಲುಗು ಚಿತ್ರದ ನಾಯಕ ನಟರೂ ನಮ್ಮ ರಾಜ್ ಕುಮಾರವರೇ ಆಗಿದ್ದರು. ನಾಯಕಿಯೂ ಸೇರಿದಂತೆ ಬಹುತೇಕ  ಕಲಾವಿದರು ತೆಲುಗಿನವರಾಗಿದ್ದರು. ಚಿತ್ರ ತೆಲುಗಿನಲ್ಲೂ ಜಯಭೇರಿ ಬಾರಿಸಿತ್ತು. ೧೯೫೪ರ ಸಮಯದಲ್ಲಿನ್ನೂ ತೆಲುಗಿನ ಮಹಾ ನಾಯಕರುಗಳಾದ ಎನ್ಟಿಆರ್, ಎಎನ್ನಾರ್ ರವರು  ಗಟ್ಟಿಯಾಗಿ ಬೇರು ಬಿಟ್ಟಿರದಿದ್ದ ಸಮಯ. ಅವರೊಂದಿಗೆ ತೆಲುಗು ಚಿತ್ರ ರಂಗದಲ್ಲೂ ಮಿಂಚುವ ಅವಕಾಶವನ್ನು ರಾಜ್- ರವರು  ತ್ಯಜಿಸಿ, ಕನ್ನಡ ಚಿತ್ರ ರಂಗಕ್ಕೇ ತಮ್ಮನ್ನು ಮೀಸಲಾಗಿರಿಸಿಕೊಂಡಿದ್ದು ಕನ್ನಡಿಗರ ಭಾಗ್ಯ ಎಂದೇ ಹೇಳಬೇಕು. 

೨) ೧೯೬೬ರಲ್ಲೇ, ತ್ರಿವೇಣಿಯವರ ಕಾದಂಬರಿ 'ಬೆಕ್ಕಿನ ಕಣ್ಣು,' ಮಲಯಾಳಂನಲ್ಲಿ, ಪುಟ್ಟಣ್ಣ ಕಣಗಾಲ್ರವರ ನಿರ್ದೇಶನದಲ್ಲೇ ಚಲನ ಚಿತ್ರವಾಗಿ ತೆರೆ ಕಂಡಿತ್ತು. ನಂತರ ಅದೇ ವರ್ಷ ಬೆಳ್ಳಿಮೋಡ ಕನ್ನಡ ಚಿತ್ರವಾಗಿ ತೆರೆ ಕಂಡಿತು. 

೩) 'ಭಕ್ತ ಕನಕದಾಸ, ಸ್ವರ್ಣ ಗೌರಿ, ನಂದಾ ದೀಪ' ಮುಂತಾದ ಚಿತ್ರಗಳಿಗೆ ಸುಮಧುರ ಸಂಗೀತವನ್ನು ನೀಡಿದವರು ಎಂ. ವೆಂಕಟರಾಜು. ಅವರು ಸಂಗೀತ ನಿರ್ದೇಶಕ ಎಂ. ರಂಗರಾವ್ ರವರ ಹಿರಿಯಣ್ಣನವರೂ ಹೌದು.  ಅಂತಹ ಮಹಾನ್ ಸಂಗೀತ ನಿರ್ದೇಶಕರು ಅಕಾಲ ಮೃತ್ಯುವಿಗೆ ತುತ್ತಾದದ್ದು ಕನ್ನಡಿಗರ ದುರ್ದೈವ. 

ಕನ್ನಡೋತ್ಸವ - ೨, ನಿನ್ನೆಯ ವಿಜೇತರು 

ಶ್ರೀ. ವೆಂಕಟಾಚಲ 

NIIT ಸಂಸ್ಥೆಯ ತರಬೇತುದಾರರು 


ಕನ್ನಡೋತ್ಸವ - ೩

ಕೆಳಗಿನ ಚಿತ್ರದಲ್ಲಿರುವ ಮಹಾನ್ ಕನ್ನಡಿಗರನ್ನು ಗುರುತಿಸಿ. 

No comments:

Post a Comment