Sunday 21 March 2021

World Poetry Day

 

World Poetry Day
21st March
My translation tributes in English and Kannada to two of our great poets. 

ಕವನ ಹುಟ್ಟುವ ಸಮಯ 

ರಚನೆ: ಕೆ.ಎಸ್. ನರಸಿಂಹ ಸ್ವಾಮಿ

***

ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು 

'ಕವನ ಹುಟ್ಟಿತೇ?' ಎಂದು ಕೇಳುತಿದೆ. 

ನಾನೀಗ ತುಟಿಯಂಚಿನಲ್ಲಿ ಹೇಳಿದ್ದಿಷ್ಟೆ:

ಇನ್ನೊಂದು ದಿವಸ ಕಾದರೆ ನಷ್ಟವೆ?


ಅನುಭವದ ಆಯ್ಕೆ ಮುಗಿದಿತ್ತು. ಒದಗಿರಲಿಲ್ಲ 

ತಕ್ಕಂಥ ಮಾತು, ಕಾಯುತ್ತ ನಿಂತೆ. 

ಅಬ್ಬರಗಳನು ದಾಟಿದ ಗಟ್ಟಿ ಪಂಕ್ತಿಗಳ 

ಸಹಜ ಸಂಚಾರಗಳ ಕನಸ ಕಂಡೆ. 


ಆಳದನುಭವವನ್ನು ಮಾತು ಕೈಹಿಡಿದಾಗ 

ಕಾವು ಬೆಳಕಾದಾಗ ಒಂದು ಕವನ 

ನಾನು ಬಯಲಿಗೆ ಬಂದು ನಿಂತಿದ್ದೇನೆ;

ಬರುವುದಿದೆ ಸರಿಯಾದ ವರ್ತಮಾನ 


ಇಂಥ ಅಂಗಡಿಯಲ್ಲಿ ಈ ಮಾತಿಗಿಷ್ಟೆ ಬೆಲೆ 

ಎನ್ನುವುದು ಮೊದಲು ಗೊತ್ತಾಗಲಿಲ್ಲ 

ಒಂದೊಂದು ಮಾತಿಗೊಂದೊಂದು ಇತಿಹಾಸವಿದೆ;

ನಾನು ಬೇರಿನ ತನಕ ಹೋಗಲಿಲ್ಲ 


ಕಾಯುವುದು ಕಷ್ಟವೂ ಅಲ್ಲ, ನಕ್ಷತ್ರಗಳು 

ಆದಿಯಿಂದಲು ಹೀಗೆ ಕಾಯುತ್ತಿವೆ. 

ಕವನ ಹುಟ್ಟುವ ಸಮಯದಲ್ಲಿ 

ನನ್ನಿಂದಲೇ ಆಗಬೇಕಾದ್ದಿಲ್ಲಿ ನೂರಾರಿವೆ. 


ನನ್ನ ತೊಡಕುಗಳನ್ನೇ ಅರಿಯದ ಪರಿಧಾವಿ 

ಧಾವಿಸುತ್ತಿದೆ ನನ್ನ ಶಿಶಿರದೆಡೆಗೆ 

ಅಶರೀರ ಭಾವಕ್ಕೆ ಇಷ್ಟರೂಪವ ತೊಡಿಸಿ 

ಕಳಿಸಿಕೊಡಲಾದೀತೆ ನಾಳೆಯೊಳಗೆ?     

Poem’s Birth Time
***
Will my poem be born?
Asked my peeping eyes.
Can’t you wait for a day more?
Cautioned my lips!
Scanning my experiences was not enough,
right words were eluding.
I dreamt of natural words
bereft of pomp.
Heat paves way for light,
when ideas emerge from within.
I am waiting in open
for the flash of thoughts.
Each word has its price in gold,
but they are never sold.
Each word has its history,
but I don’t know its mystery!
Stars are waiting,
can’t I wait?
Let me accomplish more
before my poem rises in the air.
Notwithstanding my constraints,
my thoughts are running fast!
Let abstracts become concrete,
before my poem takes shape.
(TRANSLATED BY LAKSHMINARAYANA K.)
*********


क़दम मिलाकर चलना होगा।
Poem by A.B.Vajpayee
बाधाएँ आती हैं आएँ, घिरें प्रलय की घोर घटाएँ,
पावों के नीचे अंगारे, सिर पर बरसें यदि ज्वालाएँ,
निज हाथों में हँसते-हँसते, आग लगाकर जलना होगा।
क़दम मिलाकर चलना होगा।
हास्य-रूदन में, तूफ़ानों में, अगर असंख्यक बलिदानों में,
उद्यानों में, वीरानों में, अपमानों में, सम्मानों में,
उन्नत मस्तक, उभरा सीना, पीड़ाओं में पलना होगा।
क़दम मिलाकर चलना होगा।
उजियारे में, अंधकार में, कल कहार में, बीच धार में,
घोर घृणा में, पूत प्यार में, क्षणिक जीत में, दीर्घ हार में,
जीवन के शत-शत आकर्षक, अरमानों को ढलना होगा।
क़दम मिलाकर चलना होगा।
सम्मुख फैला अगर ध्येय पथ, प्रगति चिरंतन कैसा इति अब,
सुस्मित हर्षित कैसा श्रम श्लथ, असफल, सफल समान मनोरथ,
सब कुछ देकर कुछ न मांगते, पावस बनकर ढ़लना होगा।
क़दम मिलाकर चलना होगा।
कुछ काँटों से सज्जित जीवन, प्रखर प्यार से वंचित यौवन,
नीरवता से मुखरित मधुबन, परहित अर्पित अपना तन-मन,
जीवन को शत-शत आहुति में, जलना होगा, गलना होगा।
क़दम मिलाकर चलना होगा।

Kannada Translation:
ಜೊತೆ ಜೊತೆ ಸಾಗೋಣ
ವಿಘ್ನಗಳಿರಲಿ, ಪ್ರಳಯವೇ ಬರಲಿ
ಕಾಲಡಿಯಲ್ಲೇ ಕೆಂಡಗಳಿರಲಿ
ಬೆಂಕಿಯ ಮಳೆಯು ತಲೆಯನೆ ಸುಡಲಿ
ಸುಡುಗೆಂಡವನೆ ಕರದಲಿ ಪಿಡಿದು
ನಗುತ ನಡೆಯೋಣ
ಜೊತೆ ಜೊತೆ ಸಾಗೋಣ
ಅಳು-ನಗುಗಳ ಅಲೆಯಲ್ಲಿ
ಬಿರುಗಾಳಿಯ ಸುಳಿಯಲ್ಲಿ
ಎಣಿಕೆಗೆ ಸಿಲುಕದ ಬಲಿದಾನದಲಿ
ಹಸಿರು ಬನದಲಿ, ಬಂಜರು ಮಣ್ಣಲಿ
ಅಪಮಾನದಲಿ, ಬಹುಮಾನದಲಿ
ಉನ್ನತ ಜ್ಞಾನದ ಅಭಿಮಾನದಲಿ
ನೋವ್ಗಳ ನಡುವೆಯೇ ಬಾಳೋಣ
ಜೊತೆ ಜೊತೆ ಸಾಗೋಣ
ಹಗಲಿರಲಿ, ಇರುಳಿರಲಿ
ದಡವಿರಲಿ, ನಡುನೀರಿರಲಿ
ಧಿಕ್ಕಾರವಿರಲಿ, ಜೈಕಾರವಿರಲಿ
ಕಿರುಗೆಲುವಿರಲಿ, ಕಾಡುವ ಸೋಲಿರಲಿ
ನೂರಾರು ಆಶಯಗಳ
ಹೊತ್ತು ನಡೆಯೋಣ
ಜೊತೆ ಜೊತೆ ಸಾಗೋಣ
ತಲಪುವ ದಾರಿ ಕಾಣುತಲಿರಲು
ಚಿರಂತನ ಪ್ರಗತಿಗೆ ಎಣೆಯೆಲ್ಲಿ?
ಸೋಲು-ಗೆಲುವುಗಳ ನಡುವಿನಲಿ
ಶ್ರಮಿಕನ ಮುಖದಲಿ ನಗುವಿರಲಿ
ಎಲ್ಲವ ಕೊಟ್ಟು, ಏನನು ಬೇಡದ
ಜಲಧಾರೆಯಂತೆ ಹರಿಯೋಣ
ಜೊತೆ ಜೊತೆ ಸಾಗೋಣ
ನೀರವ ಮೌನದಿ ಮಡುಗಟ್ಟಿದ ವನ
ವಂಚಿತ ಪ್ರೇಮದ ನೋವುಂಡ ಮನ
ಮುಳ್ಳಿನ ಹಾದಿಯ ನಡುವೆಯೆ ಜೀವನ
ಪರಹಿತಕಾಗೆ ಮೀಸಲು ತನು ಮನ
ಶತ ಶತ ಆಹುತಿಗಳ ನೀಡೋಣ
ಜೊತೆ ಜೊತೆ ಸಾಗೋಣ
(ಭಾವಾನುವಾದ:
ಲಕ್ಷ್ಮೀನಾರಾಯಣ ಕೆ.)








     

8 comments:

  1. Very nice. ಅನುವಾದ ತುಂಬಾ ಚೆನ್ನಾಗಿದೆ. ಬರವಣಿಗೆ ಮುಂದುವರೆಸಿ...

    ReplyDelete
  2. ಎರಡೂ ಅನುವಾದಗಳು ಚೆನ್ನಾಗಿ ಮೂಡಿ ಬಂದಿವೆ. A poem takes birth ಎನ್ನುವ ಶೀರ್ಷಿಕೆ ಹೇಗೆನಿಸುತ್ತದೆ?

    ReplyDelete
  3. ಅನುವಾದಕ್ಕಿಹುದೊಂದು ಅನ್ವರ್ಥನಾಮ
    ಲಕ್ಶ್ಮಿಯ ಮುಂದೊಂದು ನಾರಾಯಣ ನಾಮ

    ಬ್ಯಾಂಕಿನಲಿ ಮುಚ್ಚಿತ್ತು ಈ ಸಾಮರ್ಥ್ಯ
    ಅಲ್ಲವೇ ಎಷ್ಟೊಂದು ವರ್ಷಗಳು ವ್ಯರ್ಥ
    🙏


    trshastri

    ReplyDelete